AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೇಟ್ ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ‘ಕಬ್ಬಡ್ಡಿ ಆಟಗಾರ್ತಿ’!

ಹಳ್ಳಿಯ ಹಿನ್ನೆಲೆಯಿಂದ ಬಂದು ಕಠಿಣ ಬಡತನವನ್ನು ಮೆಟ್ಟಿ ನಿಂತ ಪಂಜಾಬ್‌ನ ವೇಟ್‌ಲಿಫ್ಟರ್ ಹರ್ಜಿಂದರ್ ಕೌರ್, 2026ರ ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಕಬಡ್ಡಿ ಅಂಗಳದಿಂದ ವೇಟ್‌ಲಿಫ್ಟಿಂಗ್‌ಗೆ ಬಂದು, 69 ಕೆಜಿ ವಿಭಾಗದಲ್ಲಿ 227 ಕೆಜಿ ಭಾರ ಎತ್ತಿ ಅವರು ಭಾರತಕ್ಕೆ ಹೆಮ್ಮೆ ತಂದಿದ್ದಾರೆ.

ವೇಟ್ ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ 'ಕಬ್ಬಡ್ಡಿ ಆಟಗಾರ್ತಿ'!
Harjinder KaurImage Credit source: CWG
ಝಾಹಿರ್ ಯೂಸುಫ್
|

Updated on: Jul 29, 2026 | 1:50 PM

Share

ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ವೇಟ್‌ಲಿಫ್ಟರ್ ಹರ್ಜಿಂದರ್ ಕೌರ್ ಮಹಿಳೆಯರ 69 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಒಟ್ಟು 227 ಕೆಜಿ (ಸ್ನ್ಯಾಚ್‌ನಲ್ಲಿ 101 ಕೆಜಿ + ಕ್ಲೀನ್ ಅಂಡ್ ಜರ್ಕ್‌ನಲ್ಲಿ 126 ಕೆಜಿ) ಭಾರ ಎತ್ತುವ ಮೂಲಕ ಅವರು ತಮ್ಮ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದ್ದಾರೆ. 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್‌ನಲ್ಲಿ ಕಂಚು ಗೆದ್ದಿದ್ದ ಹರ್ಜಿಂದರ್, ಈ ಬಾರಿ ತಮ್ಮ ಪದಕದ ಬಣ್ಣವನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಬಡ್ಡಿ ಆಟಗಾರ್ತಿಯಾಗಿ ಕ್ರೀಡಾ ಜೀವನ ಆರಂಭಿಸಿ, ಇಂದು ಅಂತರರಾಷ್ಟ್ರೀಯ ಮಟ್ಟದ ವೇಟ್‌ಲಿಫ್ಟರ್ ಆಗಿ ಮಿಂಚುತ್ತಿರುವ ಹರ್ಜಿಂದರ್ ಕೌರ್ ಅವರ ಸ್ಫೂರ್ತಿದಾಯಕ ಹಾದಿಯ ಕಥೆ ಇಲ್ಲಿದೆ:

ಕಬಡ್ಡಿಯಿಂದ ತೋಳ್ಬಲ:

ಹರ್ಜಿಂದರ್ ಕೌರ್ ಮೊದಲು ಶಾಲಾ ದಿನಗಳಲ್ಲಿ ಕಬಡ್ಡಿ ರೈಡರ್ ಆಗಿ ಆಟ ಆರಂಭಿಸಿದ್ದರು. ಅಭ್ಯಾಸಕ್ಕಾಗಿ ಪ್ರತಿದಿನ 5 ಕಿಲೋಮೀಟರ್ ಸೈಕಲ್ ತುಳಿದು ಹೋಗುತ್ತಿದ್ದರು. ಅಲ್ಲದೆ ಕಬ್ಬಡ್ಡಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಕನಸು ಕಟ್ಟಿಕೊಂಡಿದ್ದರು.

2016ರಲ್ಲಿ ಪಟಿಯಾಲದ ಪಂಜಾಬಿ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾಗ, ಅವರ ದೈಹಿಕ ಸಾಮರ್ಥ್ಯವನ್ನು ಗಮನಿಸಿದ ಕೋಚ್ ಪರಮಜೀತ್ ಶರ್ಮಾ ಅವರು ವೇಟ್‌ಲಿಫ್ಟಿಂಗ್ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಇದೇ ಅವರ ಜೀವನದ ತಿರುವಾಗಿ ಪರಿಣಮಿಸಿತು.

ಬಡತನದ ವಿರುದ್ಧ ಗೆದ್ದ ರೈತನ ಮಗಳು!

ಹರ್ಜಿಂದರ್ ಕೌರ್ ಪಂಜಾಬ್‌ನ ನಾಭಾ ಬಳಿಯ ಮೈಹಾಸ್ ಎಂಬ ಸಣ್ಣ ಹಳ್ಳಿಯ ಸಾಧಾರಣ ಕೃಷಿ ಕುಟುಂಬದಿಂದ ಬಂದವರು. ಅವರ ತಂದೆ ಸಾಹಿಬ್ ಸಿಂಗ್ ಕೇವಲ ಕೆಲವೇ ಎಕರೆ ಜಮೀನು ಹೊಂದಿದ್ದರು. ಹೀಗಾಗಿ ಮಗಳ ಕ್ರೀಡಾ ವೆಚ್ಚ ಮತ್ತು ಆಹಾರದ ಅಗತ್ಯಗಳನ್ನು ಪೂರೈಸಲು ಸ್ನೇಹಿತರು ಮತ್ತು ಸಂಬಂಧಿಕರಿಂದ ಸಾಲ ಮಾಡಬೇಕಾಯಿತು.

ಈ ಸಾಲಗಳನ್ನು ತೀರಿಸಲು ಹರ್ಜಿಂದರ್ ಕೌರ್ ಮುಂದಿದದ್ದು ಅಂತರರಾಷ್ಟ್ರೀಯ ಮಟ್ಟದ ಸಾಧನೆಯೊಂದೇ. ಇದಕ್ಕಾಗಿ ಹಗಲಿರಳು ಪರಿಶ್ರಮಿಸಿದರು. ಈ ಪರಿಶ್ರಮದೊಂದಿಗೆ ಕೃಷಿಯಲ್ಲೂ ತೊಡಗಿಸಿಕೊಂಡಿದ್ದರು.

ತೋಳಿನ ಬಲಕ್ಕೆ ‘ಟೋಕಾ’:

ಹರ್ಜಿಂದರ್ ಅವರ ಮಣಿಕಟ್ಟು ಮತ್ತು ಹೆಗಲಿನ ಅಸಾಧಾರಣ ಶಕ್ತಿಯ ಹಿಂದೆ ಹಳ್ಳಿಯ ಕಠಿಣ ಶ್ರಮ ಅಡಗಿದೆ. ಬಾಲ್ಯದಲ್ಲಿ ಅವರು ತಮ್ಮ ಮನೆಯ ಹೆಮ್ಮುಗಳಿಗೆ ಹೊಲದಿಂದ ಹುಲ್ಲು ತಂದು, ದಿನಗಟ್ಟಲೆ ‘ಟೋಕಾ’ (ಕೈಯಿಂದ ತಿರುಗಿಸುವ ಹುಲ್ಲು ಕತ್ತರಿಸುವ ಯಂತ್ರ) ಬಳಸುತ್ತಿದ್ದರು. ಈ ಕಠಿಣ ದೇಸಿ ಶ್ರಮವೇ ಅರಿಯದಂತೆ ಅವರ ತೋಳುಗಳನ್ನು ಬಲಪಡಿಸಿತು, ಇದು ಮುಂದೆ ವೇಟ್‌ಲಿಫ್ಟಿಂಗ್‌ನಲ್ಲಿ ಭಾರೀ ತೂಕ ಎತ್ತಲು ಅವರಿಗೆ ಸಹಕಾರಿಯಾಯಿತು.

ಹೀಗೆ ತೋಳ್ಬಲ ಹೆಚ್ಚಿಸಿಕೊಂಡ ಹರ್ಜಿಂದರ್ ಕೌರ್ ರಾಜ್ಯ ಮಟ್ಟದಲ್ಲಿ ಹೆಸರು ಮಾಡಲಾರಂಭಿಸಿದರು. ಅಲ್ಲಿಂದ ಹಿಂತಿರುಗಿ ನೋಡಿಲ್ಲ ಎಂದೇ ಹೇಳಬಹುದು. ಏಕೆಂದರೆ ಹರ್ಜಿಂದರ್ ಈಗಾಗಲೇ 1 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಹರ್ಜಿಂದರ್ ಅಂತರರಾಷ್ಟ್ರೀಯ ಸಾಧನೆಗಳು:

  • ಕಾಮನ್‌ವೆಲ್ತ್ ಗೇಮ್ಸ್ 2026: 69 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ.
  • ಕಾಮನ್‌ವೆಲ್ತ್ ಗೇಮ್ಸ್ 2022: 71 ಕೆಜಿ ವಿಭಾಗದಲ್ಲಿ ಕಂಚಿನ ಪದಕ.
  • ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ 2025: 69 ಕೆಜಿ ವಿಭಾಗದಲ್ಲಿ ಕಂಚಿನ ಪದಕ.
  • ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ 2026: ಸ್ನ್ಯಾಚ್ ವಿಭಾಗದಲ್ಲಿ ಕಂಚಿನ ಪದಕ.

ಇದನ್ನೂ ಓದಿ: ಏಕದಿನ ವಿಶ್ವಕಪ್​ಗೆ ಪ್ಲೇಯಿಂಗ್ 11 ಹೆಸರಿಸಿದ ವಾಸಿಂ ಜಾಫರ್!

ಬಡತನ, ಸೌಲಭ್ಯಗಳ ಕೊರತೆ ಹಾಗೂ ಸಮಾಜದ ಸವಾಲುಗಳನ್ನು ಮೆಟ್ಟಿ ನಿಂತು ಗ್ಲ್ಯಾಸ್ಗೋದಲ್ಲಿ ದೇಶದ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದ ಹರ್ಜಿಂದರ್ ಕೌರ್ ಅವರ ಸಾಧನೆ ಕೋಟ್ಯಂತರ ಗ್ರಾಮೀಣ ಪ್ರತಿಭೆಗಳಿಗೆ ದೊಡ್ಡ ಸ್ಫೂರ್ತಿಯಾಗಿದೆ.

Follow Us
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ