AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಕಾಶ ಇಲ್ಲದಾಗ 2 ಸಾವಿರ ರೂ. ಕೊಟ್ಟು ಸುಳ್ಳು ಸುದ್ದಿ ಮಾಡಿಸಿದ್ದ ಸಲ್ಮಾನ್​ ಖಾನ್​; ಒಪ್ಪಿಕೊಂಡು ಕಣ್ಣೀರಿಟ್ಟ ನಟ

Salman Khan | IIFA 2022: ಒಂದು ಜೊತೆ ಬಟ್ಟೆ ಕೊಂಡುಕೊಳ್ಳಲು ಕೂಡ ಸಲ್ಮಾನ್​ ಖಾನ್​ ಬಳಿ ಹಣ ಇರಲಿಲ್ಲ. ಆಗ ಸುನೀಲ್​ ಶೆಟ್ಟಿ ಮಾಡಿದ್ದ ಸಹಾಯವನ್ನು ಈಗ ಸಲ್ಲು ನೆನಪಿಸಿಕೊಂಡಿದ್ದಾರೆ.

ಅವಕಾಶ ಇಲ್ಲದಾಗ 2 ಸಾವಿರ ರೂ. ಕೊಟ್ಟು ಸುಳ್ಳು ಸುದ್ದಿ ಮಾಡಿಸಿದ್ದ ಸಲ್ಮಾನ್​ ಖಾನ್​; ಒಪ್ಪಿಕೊಂಡು ಕಣ್ಣೀರಿಟ್ಟ ನಟ
ಸಲ್ಮಾನ್ ಖಾನ್
TV9 Web
| Updated By: ಮದನ್​ ಕುಮಾರ್​|

Updated on: Jun 06, 2022 | 1:28 PM

Share

ಬಾಲಿವುಡ್​ನ ಸ್ಟಾರ್​ ಕಲಾವಿದ ಸಲ್ಮಾನ್​ ಖಾನ್​ (Salman Khan) ಅವರು ಇಂದು ಬಹುಬೇಡಿಕೆಯ ನಟನಾಗಿ ಬೆಳೆದಿದ್ದಾರೆ. ಆದರೆ ಜೀವನದಲ್ಲಿ ಅವರು ಕೂಡ ಏಳು-ಬೀಳುಗಳನ್ನು ಕಂಡಿದ್ದಾರೆ. ಅವಕಾಶ ಇಲ್ಲದೇ ಕೊರಗಿದ್ದಾರೆ. ಕೈಯಲ್ಲಿ ದುಡ್ಡು ಇಲ್ಲದೇ ಕಷ್ಟಪಟ್ಟಿದ್ದಾರೆ. ಸಿನಿಮಾದಲ್ಲಿ ಚಾನ್ಸ್​ ಪಡೆಯಲು ಏನೇನೋ ಸರ್ಕಸ್​ ಮಾಡಿದ್ದಾರೆ. ಆ ಎಲ್ಲ ವಿಚಾರಗಳನ್ನು ಸಲ್ಮಾನ್​ ಖಾನ್​ ಅವರು ಈಗ ಬಾಯಿ ಬಿಟ್ಟಿದ್ದಾರೆ. ಅಬುಧಾಬಿಯಲ್ಲಿ ಐಫಾ ಪ್ರಶಸ್ತಿ ಪ್ರದಾನ (IIFA Awards) ಸಮಾರಂಭ ಅದ್ದೂರಿಯಾಗಿ ನಡೆದಿದೆ. ಈ ಸಮಾರಂಭದಲ್ಲಿ ಸಲ್ಲು ಮಾತನಾಡಿದ್ದಾರೆ. ತಮ್ಮ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡಿರುವ ಅವರು ಕಣ್ಣೀರು ಹಾಕಿದ್ದಾರೆ. ತಮ್ಮ ಜೀವನದಲ್ಲಿ ಸಹಾಯ ಮಾಡಿದ ಎಲ್ಲರನ್ನೂ ಅವರು ಸ್ಮರಿಸಿಕೊಂಡಿದ್ದಾರೆ. ‘ಐಫಾ 2022’ (IIFA 2022) ಕಾರ್ಯಕ್ರಮದ ಈ ವಿಡಿಯೋ ತುಣುಕು ಸಲ್ಮಾನ್​ ಖಾನ್​ ಫ್ಯಾನ್ಸ್​ ಪೇಜ್​ಗಳಲ್ಲಿ ವೈರಲ್​ ಆಗಿದೆ.

1989ರಲ್ಲಿ ‘ಮೈನೇ ಪ್ಯಾರ್​ ಕಿಯಾ’ ಸಿನಿಮಾ ಮೂಲಕ ಸಲ್ಮಾನ್​ ಖಾನ್​ ಹೀರೋ ಆದರು. ಆ ಚಿತ್ರದಲ್ಲಿ ನಟಿ ಭಾಗ್ಯಶ್ರೀ ಅವರು ನಾಯಕಿ ಆಗಿದ್ದರು. ಚಿತ್ರ ಸೂಪರ್​ ಹಿಟ್​ ಆದಾಗ ಅದರ ಎಲ್ಲ ಕ್ರೆಡಿಟ್​ ಭಾಗ್ಯಶ್ರೀಗೆ ನೀಡಲಾಯಿತು. ಆದರೆ ಅವರು ಮದುವೆ ಆಗುವ ಸಲುವಾಗಿ ಚಿತ್ರರಂಗಕ್ಕೆ ವಿದಾಯ ಹೇಳಿದರು. ಆ ಬಳಿಕ 6 ತಿಂಗಳ ಕಾಲ ಸಲ್ಮಾನ್​ ಖಾನ್​ಗೆ ಯಾವುದೇ ಆಫರ್ ಬಂದಿರಲಿಲ್ಲ. ಆ ವಿಚಾರವನ್ನು ಐಫಾ ಸಮಾರಂಭದಲ್ಲಿ ಅವರು ಬಾಯಿ ಬಿಟ್ಟಿದ್ದಾರೆ.

ಇದನ್ನೂ ಓದಿ
Image
‘ನಿಮ್ಮನ್ನೂ ಸಿಧು ಮೂಸೆವಾಲಾ ರೀತಿ ಕೊಲ್ಲುತ್ತೇವೆ’; ಸಲ್ಮಾನ್​ ಖಾನ್ ತಂದೆಗೆ ಕೊಲೆ ಬೆದರಿಕೆ
Image
ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?
Image
‘ಇನ್ಮುಂದೆ ನಾನು ಒಂಟಿ ಅಲ್ಲ’ ಎಂದು ಸಲ್ಮಾನ್​ ಖಾನ್​ ಕಡೆ ಕೈ ತೋರಿಸಿ ಹೇಳಿದ ಕಂಗನಾ; ಫ್ಯಾನ್ಸ್​ ಫುಲ್​ ಖುಷ್​​
Image
ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

ಇದನ್ನೂ ಓದಿ: ಪಾರ್ಟಿಯಲ್ಲಿ ಸಲ್ಮಾನ್​ ಖಾನ್​ ಕಂಡು ಗಂಡನಿಂದಲೇ ಅಂತರ ಕಾಯ್ದುಕೊಂಡ ಐಶ್ವರ್ಯಾ ರೈ?

‘ಆ ಕಷ್ಟದ ಸಂದರ್ಭದಲ್ಲಿ ನಮ್ಮ ತಂದೆಯವರು ನಿರ್ಮಾಪಕ ಜಿ.ಪಿ. ಸಿಪ್ಪಿ ಅವರಿಗೆ 2 ಸಾವಿರ ರೂಪಾಯಿ ನೀಡಿ, ನನ್ನನ್ನು ಒಂದು ಸಿನಿಮಾಗೆ ಆಯ್ಕೆ ಮಾಡಿಕೊಂಡಿರುವುದಾಗಿ ಮ್ಯಾಗಜಿನ್​ನಲ್ಲಿ ಅನೌನ್ಸ್​ ಮಾಡುವಂತೆ ಹೇಳಿದರು. ಜಿ.ಪಿ. ಸಿಪ್ಪಿ ಅವರು ಅನೌನ್ಸ್​ ಮಾಡಿದರು. ಆದರೆ ಸಿನಿಮಾ ಇರಲಿಲ್ಲ. ನಂತರ ರಮೇಶ್​ ತೌರಾನಿ ಅವರು ಸಿಪ್ಪಿಯವರ ಕಚೇರಿಗೆ ಬಂದು 5 ಲಕ್ಷ ರೂಪಾಯಿ ನೀಡಿದರು. ಆ ಹಣದಿಂದ ನನಗೆ ‘ಪತ್ತರ್​ ಕೆ ಫೂಲ್​’ ಸಿನಿಮಾದ ಅವಕಾಶ ಸಿಕ್ಕಿತು’ ಎಂದು ಸಲ್ಮಾನ್​ ಖಾನ್ ಹೇಳಿದ್ದಾರೆ.

ಒಂದು ಜೊತೆ ಬಟ್ಟೆ ಕೊಂಡುಕೊಳ್ಳಲು ಕೂಡ ಸಲ್ಮಾನ್​ ಖಾನ್​ ಬಳಿ ಹಣ ಇರಲಿಲ್ಲ. ಆಗ ಸಹಾಯ ಮಾಡಿದ್ದು ಸುನೀಲ್​ ಶೆಟ್ಟಿ. ಆ ಘಟನೆಯನ್ನು ಕೂಡ ನೆನಪು ಮಾಡಿಕೊಂಡು ಸಲ್ಲು ಎಮೋಷನಲ್​ ಆಗಿದ್ದಾರೆ. ನಂತರ ಸ್ಟಾರ್​ ನಟನಾಗಿ ಬೆಳೆದರೂ ಕೂಡ ಮತ್ತೆ ವೃತ್ತಿಜೀವನ ಇಳಿಮುಖ ಆಗಿತ್ತು. ಆಗ ನಿರ್ಮಾಪಕ ಬೋನಿ ಕಪೂರ್​ ಅವರು ಅವಕಾಶ ನೀಡಿದರು ಎಂಬುದನ್ನು ಕೂಡ ಸಲ್ಮಾನ್​ ಖಾನ್​ ನೆನಪಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಏರೋಸ್ಪೇಸ್ ಯೋಜನೆ ಬಗ್ಗೆ ಸಿಎಂ ಹೇಳಿಕೆ ಗೊಂದಲಮಯ: ವಿಜಯೇಂದ್ರ
ಏರೋಸ್ಪೇಸ್ ಯೋಜನೆ ಬಗ್ಗೆ ಸಿಎಂ ಹೇಳಿಕೆ ಗೊಂದಲಮಯ: ವಿಜಯೇಂದ್ರ
ಮನೆ ಕಟ್ಟಿಸಿಕೊಟ್ಟಿಲ್ಲ: KGF​ ಬಾಬು ಮನೆ ಮುಂದೆ ಜನರ ಪ್ರತಿಭಟನೆ
ಮನೆ ಕಟ್ಟಿಸಿಕೊಟ್ಟಿಲ್ಲ: KGF​ ಬಾಬು ಮನೆ ಮುಂದೆ ಜನರ ಪ್ರತಿಭಟನೆ
ಬೀಗರನ್ನು ಒಮ್ಮೆ ನಂಬಿ ಮೋಸ ಹೋಗಿದ್ದೇನೆ, ಪುನಃ ನಂಬಲಾರೆ: ಕೆಜಿಎಫ್ ಬಾಬು
ಬೀಗರನ್ನು ಒಮ್ಮೆ ನಂಬಿ ಮೋಸ ಹೋಗಿದ್ದೇನೆ, ಪುನಃ ನಂಬಲಾರೆ: ಕೆಜಿಎಫ್ ಬಾಬು