ಚಿರುಗಾಗಿ ಸಂಭಾವನೆ ಪಡೆಯಲು ನಿರಾಕರಿಸಿದ ಸಲ್ಮಾನ್​ ಖಾನ್​; ಫ್ರೀ ಆಗಿ ನಟಿಸಿದ ಸ್ಟಾರ್ ನಟ

ಮಲಯಾಳಂನಲ್ಲಿ ಮೋಹನ್​ ಲಾಲ್​ ನಟನೆಯ ಸೂಪರ್​ ಹಿಟ್​ ಚಿತ್ರ ‘ಲೂಸಿಫರ್​’ ಟಾಲಿವುಡ್​ಗೆ ‘ಗಾಡ್​ ಫಾದರ್​’ ಹೆಸರಿನಲ್ಲಿ ರಿಮೇಕ್​ ಆಗುತ್ತಿದೆ. ಚಿರಂಜೀವಿ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಚಿರುಗಾಗಿ ಸಂಭಾವನೆ ಪಡೆಯಲು ನಿರಾಕರಿಸಿದ ಸಲ್ಮಾನ್​ ಖಾನ್​; ಫ್ರೀ ಆಗಿ ನಟಿಸಿದ ಸ್ಟಾರ್ ನಟ
ಸಲ್ಮಾನ್​ ಖಾನ್
Follow us
| Updated By: ರಾಜೇಶ್ ದುಗ್ಗುಮನೆ

Updated on: Mar 17, 2022 | 6:08 PM

ಸಲ್ಮಾನ್​ ಖಾನ್​ (Salman Khan) ಗೆಳೆತನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಅವರು ಯಾರನ್ನೂ ಅಷ್ಟು ಸುಲಭವಾಗಿ ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಆದರೆ, ಹತ್ತಿರಕ್ಕೆ ಸೇರಿಸಿಕೊಂಡವರು ಇಷ್ಟ ಆದರೆ, ಅವರಿಗೋಸ್ಕರ ಯಾವ ಸಹಾಯ ಮಾಡೋಕೂ ಸಲ್ಲು ರೆಡಿ ಇರುತ್ತಾರೆ. ಈ ಮೊದಲು ಅನೇಕ ಬಾರಿ ಇದು ಸಾಬೀತಾಗಿದೆ. ಸಲ್ಮಾನ್​ ಖಾನ್​ಗೆ ನಾನಾ ಕ್ಷೇತ್ರದಲ್ಲಿ ಗೆಳೆಯರಿದ್ದಾರೆ. ಕನ್ನಡದಲ್ಲಿ ಸುದೀಪ್​, ಬಾಲಿವುಡ್​ನಲ್ಲಿ (Bollywood) ಶಾರುಖ್​ ಖಾನ್​, ಟಾಲಿವುಡ್​ನಲ್ಲಿ ಚಿರಂಜೀವಿ ಜತೆ ಸಲ್ಮಾನ್​ ಒಳ್ಳೆಯ ಗೆಳೆತನ ಇಟ್ಟುಕೊಂಡಿದ್ದಾರೆ. ಚಿರು ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡೋಕೆ ಸಲ್ಮಾನ್ ಖಾನ್ ಒಂದು ರೂಪಾಯಿ ಸಂಭಾವನೆ ಪಡೆದಿಲ್ಲ ಎನ್ನಲಾಗುತ್ತಿದೆ.

ಮಲಯಾಳಂನಲ್ಲಿ ಮೋಹನ್​ ಲಾಲ್​ ನಟನೆಯ ಸೂಪರ್​ ಹಿಟ್​ ಚಿತ್ರ ‘ಲೂಸಿಫರ್​’ ಟಾಲಿವುಡ್​ಗೆ ‘ಗಾಡ್​ ಫಾದರ್​’ ಹೆಸರಿನಲ್ಲಿ ರಿಮೇಕ್​ ಆಗುತ್ತಿದೆ. ಚಿರಂಜೀವಿ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್​ ಭರದಿಂದ ಸಾಗುತ್ತಿದೆ. ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸಲ್ಮಾನ್​ ಖಾನ್​ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ಸಂಭಾವನೆ ಸ್ವೀಕರಿಸುತ್ತಿಲ್ಲ ಎಂದು ವರದಿ ಆಗಿದೆ.

ಮೂಲ ಚಿತ್ರದಲ್ಲಿ ಪ್ರಥ್ವಿರಾಜ್​ ಸುಕುಮಾರನ್​ ಮಾಡಿದ ಪಾತ್ರವನ್ನು ರಿಮೇಕ್​ನಲ್ಲಿ ಸಲ್ಮಾನ್​ ಖಾನ್​ ಮಾಡುತ್ತಿದ್ದಾರೆ. ಹೀರೋ ಕಷ್ಟದಲ್ಲಿದ್ದಾಗ ಬೆಂಬಲವಾಗಿ ನಿಲ್ಲೋ ವ್ಯಕ್ತಿಯಾಗಿ ಸಲ್ಮಾನ್​ ಖಾನ್​ ಪಾತ್ರ ಮೂಡಿ ಬರಲಿದೆ. ಈ ಚಿತ್ರದಲ್ಲಿ ನಟಿಸೋಕೆ ಸಲ್ಲು ಸಖತ್​ ಎಗ್ಸೈಟ್​ ಆಗಿದ್ದಾರೆ. ಅವರನ್ನು ದಕ್ಷಿಣ ಭಾರತದ ಚಿತ್ರದಲ್ಲಿ ನೋಡೋಕೆ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ.

ಸಲ್ಮಾನ್​ ಖಾನ್​ ಪಾತ್ರ 20 ನಿಮಿಷಗಳ ಕಾಲ ತೆರೆಮೇಲೆ ಬರಲಿದೆ. ಈ ಚಿತ್ರದಲ್ಲಿ ನಟಿಸೋಕೆ ಸಲ್ಲುಗೆ 15-20 ಕೋಟಿ ರೂಪಾಯಿ ಸಂಭಾವನೆ ನೀಡಲು ನಿರ್ಮಾಪಕರು ನಿರ್ಧರಿಸಿದ್ದರು. ಸಂಭಾವನೆ ವಿಚಾರ ಕೇಳಿದಾಗ, ‘ಶೂಟಿಂಗ್​ ಬಳಿಕ ಈ ಬಗ್ಗೆ ಮಾತನಾಡೋಣ’ ಎಂದಿದ್ದರು ಸಲ್ಮಾನ್​ ಖಾನ್​. ಚಿತ್ರೀಕರಣ​ ಪೂರ್ಣಗೊಂಡ ನಂತರ ಕೇಳಿದರೆ, ‘ತಾವು ಚಿರಂಜೀವಿಗೋಸ್ಕರ ಸಂಭಾವನೆ ಪಡೆಯುವುದಿಲ್ಲ’ ಎನ್ನುವ ಮಾತನ್ನು ಹೇಳಿದ್ದಾರೆ.

ಚಿರಂಜೀವಿ ಕೂಡ ಸಂಭಾವನೆ ಪಡೆಯುವಂತೆ ಒತ್ತಾಯ ಮಾಡಿದ್ದಾರೆ. ಈ ವೇಳೆ ಸಲ್ಮಾನ್​ ಖಾನ್ ಹೇಳಿದ ಒಂದೇ ಒಂದು ಮಾತಿಗೆ ಚಿರಂಜೀವಿ ಮರುಮಾತನಾಡಿಲ್ಲ ಎನ್ನಲಾಗಿದೆ. ಹಾಗಾದರೆ ಸಲ್ಲು​ ಹೇಳಿದ ಮಾತೇನು? ‘ನನ್ನ ಚಿತ್ರದಲ್ಲಿ ನೀವು ಅತಿಥಿ ಪಾತ್ರ ಮಾಡಿದ್ದರೆ ನೀವು ಹಣ ಮುಟ್ಟುತ್ತಿದ್ದಿರಾ?’ ಎಂದು ಸಲ್ಮಾನ್​ ಖಾನ್​ ಅವರು ಚಿರುಗೆ ಪ್ರಶ್ನೆ ಮಾಡಿದ್ದಾರೆ. ಇದನ್ನು ಕೇಳಿದ ಮೆಗಾಸ್ಟಾರ್​ ಮರುಮಾತನಾಡಿಲ್ಲ.

ಶಾರುಖ್ ಖಾನ್​ ನಟನೆಯ ‘ಪಠಾಣ್​’ ಚಿತ್ರದಲ್ಲೂ ಸಲ್ಮಾನ್​ ಖಾನ್​ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೂ ಅವರು ಹಣ ಪಡೆದಿಲ್ಲ ಎಂದು ಈ ಮೊದಲು ವರದಿ ಆಗಿತ್ತು.

ಇದನ್ನೂ ಓದಿ: ರಾಜಮೌಳಿ ರಿಜೆಕ್ಟ್​ ಮಾಡಿದ್ದ ಸಲ್ಮಾನ್​ ಖಾನ್ ಸಿನಿಮಾ ಸೂಪರ್​ ಹಿಟ್​; ವಿಜಯೇಂದ್ರ ಪ್ರಸಾದ್​ ಪಶ್ಚಾತ್ತಾಪ

ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ