ಸಲ್ಮಾನ್​ ಖಾನ್​ ಜತೆ ಕೆಲಸ ಮಾಡಿದ್ರೆ ಆಗುವ ಲಾಭ-ನಷ್ಟದ ಬಗ್ಗೆ ಬಾಯ್ಬಿಟ್ಟ ಪ್ರೇಯಸಿ ಯೂಲಿಯಾ

Main Chala song: ಯೂಲಿಯಾ ವಂಟೂರ್​ ಓರ್ವ ಗಾಯಕಿಯೂ ಹೌದು. ‘ಮೈ ಚಲಾ’ ಹಾಡಿಗೆ ಅವರು ಧ್ವನಿ ನೀಡಿದ್ದಾರೆ. ಈ ಗೀತೆಯಲ್ಲಿ ಸಲ್ಮಾನ್​ ಖಾನ್​ ಮತ್ತು ಪ್ರಗ್ಯಾ ಜೈಸ್ವಾಲ್​ ಜೋಡಿಯಾಗಿ ನಟಿಸಿದ್ದಾರೆ.

ಸಲ್ಮಾನ್​ ಖಾನ್​ ಜತೆ ಕೆಲಸ ಮಾಡಿದ್ರೆ ಆಗುವ ಲಾಭ-ನಷ್ಟದ ಬಗ್ಗೆ ಬಾಯ್ಬಿಟ್ಟ ಪ್ರೇಯಸಿ ಯೂಲಿಯಾ
‘ಮೈ ಚಲಾ’ ಹಾಡಿನ ಪೋಸ್ಟರ್​
Follow us
| Updated By: ಮದನ್​ ಕುಮಾರ್​

Updated on: Jan 28, 2022 | 11:49 AM

ನಟ ಸಲ್ಮಾನ್​ ಖಾನ್​ಗೆ (Salman Khan) ಈಗ 56 ವರ್ಷ ವಯಸ್ಸು. ಆದ್ರೂ ಇನ್ನೂ ಮದುವೆ ಆಗಿಲ್ಲ. ಸಲ್ಲು ಭಾಯ್​ ಶಾದಿ ಯಾವಾಗ ಎಂಬ ಪ್ರಶ್ನೆ ದಶಕಗಳಿಂದಲೂ ಕೇಳಿಬರುತ್ತಲೇ ಇದೆ. ಆದರೆ ಅದಕ್ಕೆ ಈವರೆಗೆ ಉತ್ತರ ಸಿಕ್ಕಿಲ್ಲ. ಈ ನಡುವೆ ಸಲ್ಮಾನ್​ ಖಾನ್​ ಅವರ ಹೆಸರು ಅನೇಕ ಸುಂದರಿಯರ (Salman Khan Girlfriend) ಜೊತೆಗೆ ತಳುಕು ಹಾಕಿಕೊಳ್ಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ರೊಮೇನಿಯನ್​ ಬೆಡಗಿ ಯೂಲಿಯಾ ವಂಟೂರ್​ (Iulia Vantur) ಜೊತೆ ಸಲ್ಮಾನ್​ ಖಾನ್​ ಒಡನಾಟ ಹೆಚ್ಚಿದೆ. ಅನೇಕ ಸಂದರ್ಭಗಳಲ್ಲಿ ಅವರಿಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಲ್ಮಾನ್​ ಖಾನ್​ ಬಳಗದಲ್ಲಿಯೇ ಯೂಲಿಯಾ ವಂಟೂರ್​ ಅವರು ಜಾಗ ಪಡೆದುಕೊಂಡಿದ್ದಾರೆ. ಸಲ್ಲು ಇದ್ದಲ್ಲಿ ಯೂಲಿಯಾ ಇದ್ದೇ ಇರುತ್ತಾರೆ ಎಂಬ ಮಾತು ಕೇಳಿಬರುತ್ತದೆ. ಈಗ ಈ ಜೋಡಿ ಒಂದು ಹಾಡಿನಲ್ಲಿ ಜೊತೆಯಾಗಿ ಕೆಲಸ ಮಾಡಿದೆ. ಹೀಗೆ ಸಲ್ಮಾನ್​ ಖಾನ್​ ಜೊತೆ ಕೆಲಸ ಮಾಡುವ ಅವಕಾಶ ಎಲ್ಲರಿಗೂ ಸಿಗೋದಿಲ್ಲ. ಒಂದು ವೇಳೆ ಸಿಕ್ಕರೆ ಅದರ ಲಾಭ-ನಷ್ಟಗಳು ಏನು ಎಂಬುದರ ಬಗ್ಗೆ ಯೂಲಿಯಾ ವಂಟೂರ್​ ಮಾತನಾಡಿದ್ದಾರೆ. ‘ಇ ಟೈಮ್ಸ್​’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಯೂಲಿಯಾ ವಂಟೂರ್​ ಓರ್ವ ಗಾಯಕಿಯೂ ಹೌದು. ಗಾಯಕ ಗುರು ರಂಧವಾ ಜೊತೆ ಸೇರಿ ಅವರು ‘ಮೈ ಚಲಾ’ ಹಾಡಿಗೆ ಧ್ವನಿ ನೀಡಿದ್ದಾರೆ. ಈ ಹಾಡಿನಲ್ಲಿ ಸಲ್ಮಾನ್​ ಖಾನ್​ ಮತ್ತು ಪ್ರಗ್ಯಾ ಜೈಸ್ವಾಲ್​ ಅವರು ನಟಿಸಿದ್ದಾರೆ. ಸಲ್ಲು ಜತೆ ಕೆಲಸ ಮಾಡಿದ ಅನುಭವವನ್ನು ಯೂಲಿಯಾ ವಂಟೂರ್​ ಹಂಚಿಕೊಂಡಿದ್ದಾರೆ. ಸಲ್ಮಾನ್​ ಖಾನ್​ ಓರ್ವ ಸೂಪರ್​ ಸ್ಟಾರ್. ಅವರ ಜೊತೆ ಕೆಲಸ ಮಾಡಿದರೆ ಲಾಭವೂ ಇದೆ, ನಷ್ಟವೂ ಇದೆ.

ಸಲ್ಮಾನ್​ ಖಾನ್​ ಜತೆ ಕೆಲಸ ಮಾಡುವವರು ಅವರ ನೆರಳಿನಿಂದ ಹೊರಬಂದು ಸ್ವಂತವಾಗಿ ಗುರುತಿಸಿಕೊಳ್ಳುವುದು ಕಷ್ಟ. ‘ಇದೊಂದು ಅನಾನುಕೂಲ. ನಾವು ಅವರ ನೆರಳಿನಿಂದ ಹೊರಬರಬೇಕು ಎಂದರೆ ತುಂಬಾ ಶ್ರಮಪಡಬೇಕು’ ಎಂದು ಯೂಲಿಯಾ ಹೇಳಿದ್ದಾರೆ. ಸಲ್ಮಾನ್​ ಖಾನ್​ ಅವರಿಗೆ ಚಿತ್ರರಂಗದಲ್ಲಿ ಹಲವು ದಶಕಗಳ ಅನುಭವ ಇದೆ. ಅದರಿಂದ ಅವರ ಜೊತೆಗೆ ಇರುವವರಿಗೆ ಸಹಾಯ ಆಗುತ್ತದೆ. ಆದರೆ ಸ್ವಂತವಾಗಿ ಗುರುತಿಸಿಕೊಳ್ಳಬೇಕು ಎನ್ನುವವರು ತುಂಬ ಕಷ್ಟಪಡಬೇಕು ಎಂಬುದನ್ನು ಯೂಲಿಯಾ ಒಪ್ಪಿಕೊಂಡಿದ್ದಾರೆ.

‘ನಿಮ್ಮನ್ನು ನಾನು ಮುಟ್ಟಬಹುದೇ?’

‘ಮೈ ಚಲಾ’ ಮ್ಯೂಸಿಕ್​ ವಿಡಿಯೋದಲ್ಲಿ ಪ್ರಗ್ಯಾ ಜೈಸ್ವಾಲ್​ ಮತ್ತು ಸಲ್ಮಾನ್​ ಖಾನ್​ ಅವರು ಜೊತೆಯಾಗಿ ನಟಿಸಿದ್ದಾರೆ. ಮೊದಲ ದಿನದ ಶೂಟಿಂಗ್​ ಅನುಭವದ ಬಗ್ಗೆ ಅವರು ಇತ್ತೀಚೆಗೆ ಮಾತನಾಡಿದ್ದರು. ‘ಮೊದಲ ದಿನ ನಾನು ಸಲ್ಮಾನ್​ ಖಾನ್​ ಅವರನ್ನು ಭೇಟಿ ಆದಾಗ ನಾನು ಏನು ಮಾಡಬಹುದು, ಏನು ಮಾಡಬಾರದು ಎಂಬ ಬಗ್ಗೆ ಅರಿವು ನನಗೆ ಇರಲಿಲ್ಲ. ಸಲ್ಮಾನ್​ ಖಾನ್​ ಅವರಂಥ ದೊಡ್ಡ ಸ್ಟಾರ್​ ನಟನನ್ನು ಭೇಟಿಯಾದಾಗ ಅವರಿಗೆ ಕಿರಿಕಿರಿ ಆಗುವಂತೆ ನಾವು ನಡೆದುಕೊಳ್ಳಬಾರದು. ಅಪ್ಪಿತಪ್ಪಿಯೂ ಕೂಡ ಅವರಿಗೆ ಕೋಪ ಬರುವಂತೆ ನಾವು ವರ್ತಿಸಬಾರದು. ಹಾಗಾಗಿ ನಾನು ಹೆಚ್ಚಿನ ಎಚ್ಚರಿಕೆಯಿಂದ ನಡೆದುಕೊಂಡೆ. ನಿಮ್ಮನ್ನು ನಾನು ಮುಟ್ಟಬಹುದೇ ಅಂತ ಮೊದಲ ಬಾರಿಗೆ ಅನುಮತಿ ಕೇಳಿದೆ’ ಎಂದು ಪ್ರಗ್ಯಾ ಜೈಸ್ವಾಲ್​ ಹೇಳಿದ್ದರು.

ಇದನ್ನೂ ಓದಿ:

ಸಲ್ಮಾನ್​ ಖಾನ್​ ಪರ ಲಾಯರ್​ ಶ್ರೀಕಾಂತ್​ ಶಿವಡೆ ಕ್ಯಾನ್ಸರ್​ನಿಂದ ನಿಧನ; ‘ತಕ್ಕ ಶಿಕ್ಷೆ ಸಿಕ್ತು’ ಎಂದ ನೆಟ್ಟಿಗರು

‘ನನ್ನ ಧರ್ಮದ ಬಗ್ಗೆ ಮಾತಾಡ್ಬೇಡಿ’; ಪಕ್ಕದ ಮನೆಯವರಿಗೆ ಎಚ್ಚರಿಕೆ ನೀಡಿ ಕೇಸ್​ ಜಡಿದ ಸಲ್ಮಾನ್​ ಖಾನ್

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ