AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನದಲ್ಲಿ ಅಕ್ಕಪಕ್ಕ ಕುಳಿತ್ಕೊಂಡು ಹೋಗ್ಬೋದು, ಥಿಯೇಟರ್​ನಲ್ಲಿ ಯಾಕೆ ಕೂರೋ ಹಾಗಿಲ್ಲ?; ಗರಂ ಆದ ಬನ್ಸಾಲಿ

Sanjay Leela Bansali: ಕೇವಲ ಚಿತ್ರಮಂದಿರಗಳಿಗೆ ಮಾತ್ರ ಅಅನ್ವಯವಾಗುತ್ತಿರುವ ಕೊರೊನಾ ನಿಯಮಾವಳಿಗಳ ವಿರುದ್ಧ ಸಂಜಯ್ ಲೀಲಾ ಬನ್ಸಾಲಿ ಧ್ವನಿಯೆತ್ತಿದ್ದಾರೆ. ಇದಕ್ಕೆ ತಮ್ಮದೇ ಆದ ವಾದ ಮಂಡಿಸಿದ್ದಾರೆ ಬಾಲಿವುಡ್​ನ ಈ ಹಿಟ್ ನಿರ್ದೇಶಕ.

ವಿಮಾನದಲ್ಲಿ ಅಕ್ಕಪಕ್ಕ ಕುಳಿತ್ಕೊಂಡು ಹೋಗ್ಬೋದು, ಥಿಯೇಟರ್​ನಲ್ಲಿ ಯಾಕೆ ಕೂರೋ ಹಾಗಿಲ್ಲ?; ಗರಂ ಆದ ಬನ್ಸಾಲಿ
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ
Follow us
TV9 Web
| Updated By: shivaprasad.hs

Updated on: Aug 20, 2021 | 4:13 PM

ಬಾಲಿವುಡ್​ನ ಹಿಟ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಚಿತ್ರಮಂದಿರಗಳಿಗೆ ಹೇರಿರುವ ಕೊರೊನಾ ನಿಯಮಗಳು ಅಸಮಾನತೆಯಿಂದ ಕೂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನದಲ್ಲಿ ತೆರಳುವವರೂ ಕೂಡಾ ಅಕ್ಕ ಪಕ್ಕದಲ್ಲಿ ಕುಳಿತುಕೊಳ್ಳಬಹುದು, ಆದರೆ ಚಿತ್ರಮಂದಿರಗಳಲ್ಲಿ ಹಾಗೆ ಕುಳಿತುಕೊಳ್ಳುವಂತಿಲ್ಲ ಎಂಬ ಸರ್ಕಾರದ ನಿರ್ಧಾರಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ‘‘ಅಂಗಡಿಗಳು, ಜಿಮ್​ಗಳು, ಸ್ಟೇಡಿಯಮ್​ಗಳು ಓಪನ್ ಆಗಿರುವಾಗ ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧವೇಕೆ ಎಂಬುದು ಅರ್ಥವಾಗುತ್ತಿಲ್ಲ. ವಿಮಾನಗಳಲ್ಲೂ ಅಕ್ಕಪಕ್ಕ ಕುಳಿತುಕೊಳ್ಳುವಾಗ ಚಿತ್ರಮಂದಿರದಲ್ಲೇನು ಸಮಸ್ಯೆ?’’ ಎಂಬುದು ಬನ್ಸಾಲಿಯವರ ಪ್ರಶ್ನೆ.

ಸದ್ಯ ಮುಂಬೈನಲ್ಲಿ ಯಾವುದೇ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿಲ್ಲ. ಇತರ ರಾಜ್ಯಗಳಲ್ಲಿ 50 ಪ್ರತಿಶತ ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳು ಕಾರ್ಯ ನಿರ್ವಹಿಸುತ್ತಿವೆ. ಚಿತ್ರಮಂದಿರಗಳಲ್ಲಿ ಬೇಕಾದರೆ ಕಠಿಣ ಮುನ್ನೆಚ್ಚರಿಕೆ ಪಾಲಿಸಲಿ. ಆದರೆ ತೆರೆಯದೇ ಇರುವುದು ಎಷ್ಟು ಸರಿ ಎನ್ನುವುದು ಹಿಟ್ ನಿರ್ದೇಶಕನ ಪ್ರಶ್ನೆ. ‘‘ವಿಮಾನ ಪ್ರಯಾಣಗಳಲ್ಲಿ ಅನುಸರಿಸುತ್ತಿರುವಂತೆ ಕೊರೊನಾ ನೆಗೆಟಿವ್ ವರದಿಗಳನ್ನು ಚಿತ್ರಮಂದಿರಕ್ಕೂ ಕಡ್ಡಾಯಗೊಳಿಸಲಿ. ಕೊನೆಯ ಪಕ್ಷ ಕೊರೊನಾ ಕಡಿಮೆಯಾಗುವವರೆಗೆ ಈ ಮಾದರಿ ಅನುಸರಿಸಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಿ. ದಿನಗೂಲಿ ನೌಕರರ ಕಷ್ಟ ನೋಡಿ ಮನಸ್ಸಿಗೆ ಖೇದವಾಗುತ್ತದೆ. ಕೊರೊನಾದಿಂದ ಚಿತ್ರೋದ್ಯಮ ಕುಸಿದಿದೆ. ಅದರ ನಡುವೆ ನಿಯಮಾವಳಿಗಳಿಂದ ಮತ್ತಷ್ಟು ಹಾನಿಯಾಗುವ ಮೊದಲು ಸರ್ಕಾರ ಕ್ರಮ ಕೈಗೊಳ್ಳಲಿ’’ ಎಂದು ಬನ್ಸಾಲಿ ಆಗ್ರಹಿಸಿದ್ದಾರೆಂದು ‘ಬಾಲಿವುಡ್ ಹಂಗಾಮ’ ವರದಿ ಮಾಡಿದೆ.

ಭಾರತ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕರ ಪೈಕಿ ಸಂಜಯ್​ ಲೀಲಾ ಬನ್ಸಾಲಿ ಮುಂಚೂಣಿಯಲ್ಲಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಕಳೆದಿದೆ. 1996ರಲ್ಲಿ ‘ಖಾಮೋಶಿ: ದಿ ಮ್ಯೂಸಿಕಲ್​’ ಸಿನಿಮಾ ತೆರೆಗೆ ಬಂದಿತ್ತು. ಇದು ಅವರ ಮೊದಲ ಸಿನಿಮಾ. ಹಮ್​ ದಿಲ್​ ದೆ ಚುಕೆ ಸನಮ್ (1999), ದೇವದಾಸ್​ (2002), ಬ್ಲ್ಯಾಕ್​​ (2005), ರಾಮ್​ ಲೀಲಾ (2013), ಬಾಜಿರಾವ್​ ಮಸ್ತಾನಿ (2015) ಮತ್ತು ಪದ್ಮಾವತ್​ (2018) ಅಂತಹ ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತಿ ಸಂಜಯ್​ ಲೀಲಾ ಬನ್ಸಾಲಿಗೆ ಇದೆ. ಅವರ ಮುಂದಿನ ಚಿತ್ರ ‘ಗಂಗೂಬಾಯಿ ಕಥೈವಾಡಿ’ ತೆರೆಗೆ ಬರಲು ಸಜ್ಜಾಗಿದೆ. ಸತ್ಯ ಕತೆ ಆಧಾರಿತ ಈ ಚಿತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:

ಆಲಿಯಾ ಭಟ್​, ಸಂಜಯ್​ ಲೀಲಾ ಬನ್ಸಾಲಿಗೆ ಬಾಂಬೇ ಹೈಕೋರ್ಟ್​​ನಿಂದ ಮಧ್ಯಂತರ ರಿಲೀಫ್​

ಸಂಜಯ್​ ಲೀಲಾ ಬನ್ಸಾಲಿ ಚಿತ್ರರಂಗದ ಪಯಣಕ್ಕೆ 25 ವರ್ಷ; ಇಲ್ಲಿದೆ ಅವರ ಸಿನಿ ಜರ್ನಿ ಬಗ್ಗೆ ಮಾಹಿತಿ

(Sanjay Leela Bansali opens up about strict rules on movie theaters)

ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ