ರಣಬೀರ್​ನ ಮದುವೆ ಆಗ್ತೀನಿ ಎಂದಿದ್ದ ಸಾರಾ; ನಟನ ವಿವಾಹದ ಬಳಿಕ ಏನಂದ್ರು?

ತಂದೆ ಸೈಫ್ ಅಲಿ ಖಾನ್ ಜೊತೆ ಸಾರಾ ಅಲಿ ಖಾನ್ ಅವರು ‘ಕಾಫಿ ವಿತ್ ಕರಣ್’ ಶೋಗೆ ಬಂದಿದ್ದರು. ಈ ವೇಳೆ ಯಾರನ್ನು ಮದುವೆ ಆಗ್ತೀರಿ? ಯಾರ ಜೊತೆ ಡೇಟ್ ಮಾಡ್ತೀರಿ ಎಂದು ಕೇಳಲಾಯಿತು. ಈ ವೇಳೆ ಮಾತನಾಡಿದ್ದ ಸಾರಾ ಅವರ ರಣಬೀರ್​ನ ಮದುವೆ ಆಗುವ ಆಸೆ ವ್ಯಕ್ತಪಡಿಸಿದ್ದರು.

ರಣಬೀರ್​ನ ಮದುವೆ ಆಗ್ತೀನಿ ಎಂದಿದ್ದ ಸಾರಾ; ನಟನ ವಿವಾಹದ ಬಳಿಕ ಏನಂದ್ರು?
ಸಾರಾ
Follow us
| Updated By: ರಾಜೇಶ್ ದುಗ್ಗುಮನೆ

Updated on:Oct 05, 2024 | 8:03 AM

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಸದಾ ಚಿಲ್ ಆಗಿ ಇರುತ್ತಾರೆ. ಅವರು ಯಾವಾಗಲೂ ಒಂದಲ್ಲಾ ಒಂದು ರೀತಿಯ ಹೇಳಿಕೆ ನೀಡುತ್ತಾ ಇರುತ್ತಾರೆ. ಬಾಯ್​ಫ್ರೆಂಡ್ ವಿಚಾರಕ್ಕೆ ಆಗಾಗ ಸುದ್ದಿ ಆಗುತ್ತಾರೆ. ಬಾಲಿವುಡ್​ನಲ್ಲಿ ಅನೇಕರ ಜೊತೆ ಅವರು ಸುತ್ತಾಡಿದ್ದಾರೆ. ಅವರಿಗೆ ರಣಬೀರ್ ಕಪೂರ್ ಜೊತೆ ವಿವಾಹ ಆಗಬೇಕೆಂದಿತ್ತು. ಆದರೆ, ಈ ಆಸೆಯನ್ನು ಆಲಿಯಾ ಭಟ್ ಅವರು ಹಾಳು ಮಾಡಿದರು.

ತಂದೆ ಸೈಫ್ ಅಲಿ ಖಾನ್ ಜೊತೆ ಸಾರಾ ಅಲಿ ಖಾನ್ ಅವರು ‘ಕಾಫಿ ವಿತ್ ಕರಣ್’ ಶೋಗೆ ಬಂದಿದ್ದರು. ಈ ವೇಳೆ ಯಾರನ್ನು ಮದುವೆ ಆಗ್ತೀರಿ? ಯಾರ ಜೊತೆ ಡೇಟ್ ಮಾಡ್ತೀರಿ ಎಂದು ಕೇಳಲಾಯಿತು. ಈ ವೇಳೆ ಮಾತನಾಡಿದ್ದ ಸಾರಾ ಅವರು, ‘ನಾನು ರಣಬೀರ್ ಕಪೂರ್ ಜೊತೆ ಮದುವೆ ಆಗುತ್ತೇನೆ, ಕಾರ್ತಿಕ್ ಆರ್ಯನ್ ಜೊತೆ ಡೇಟ್ ಮಾಡುತ್ತೇನೆ’ ಎಂದಿದ್ದರು. ಅವರು ಹೇಳಿದಂತೆ ಕಾರ್ತಿಕ್ ಜೊತೆ ಸುತ್ತಾಡಿದ್ದರು. ಆದರೆ, ರಣಬೀರ್​ನ ಮದುವೆ ಆಗಲು ಸಾಧ್ಯವಾಗಿಲ್ಲ.

ರಣಬೀರ್ ಹಾಗೂ ಆಲಿಯಾ ಪ್ರೀತಿ ವಿಚಾರ ರಿವೀಲ್ ಆದ ಬಳಿಕ ಸಾರಾ ನಿರ್ಧಾರ ಬದಲಿಸಿದ್ದರು. ‘ನಾನು ರಣಬೀರ್​ನ ಮದುವೆ ಆಗಬೇಕು ಎಂದು ಹೇಳಿದ್ದೆ. ಆದರೆ, ಈಗ ಹಾಗಿಲ್ಲ’ ಎಂದು ಅವರು ಹೇಳಿದ್ದರು. ‘ಹಾಗಾದರೆ ಆಲಿಯಾ ಜೊತೆಗಿನ ಫ್ರೆಂಡಿಶಿಪ್?’ ಈ ವಿಚಾರವಾಗಿ ಮಾತನಾಡಿದ್ದ ಸಾರಾ, ‘ಆಲಿಯಾ ಜೊತೆಗಿನ ಫ್ರೆಂಡ್​ಶಿಪ್ ಹಾಗೆಯೇ ಇರುತ್ತದೆ’ ಎಂದಿದ್ದರು.

ಸಾರಾ ಅಲಿ ಖಾನ್ ಅವರು ಈ ಮೊದಲು ಕಾರ್ತಿಕ್ ಆರ್ಯನ್ ಜೊತೆ ಡೇಟ್ ಮಾಡಿ ಸುದ್ದಿ ಆಗಿದ್ದರು. ನಂತರ ಇವರ ಬ್ರೇಕಪ್ ಆಯಿತು. ಸುಶಾಂತ್ ಸಿಂಗ್ ಜೊತೆಯೂ ಸಾರಾ ಅಲಿ ಖಾನ್ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಈ ಮೊದಲು ಹರಿದಾಡಿತ್ತು. ಆದರೆ ಇದನ್ನು ಅವರು ಒಪ್ಪಿಕೊಂಡಿಲ್ಲ.

ಇದನ್ನೂ ಓದಿ: ಸಾರಾ ಅಲಿ ಖಾನ್​ ಯಾರನ್ನು ಮದುವೆ ಆಗ್ಬೇಕು? ಫ್ಯಾನ್ಸ್​ಗೆ ಇದೆ ಒಂದು ಆಸೆ

ಸಾರಾ ಅಲಿ ಖಾನ್​ಗೆ ಇತ್ತೀಚೆಗೆ ಯಾವುದೇ ದೊಡ್ಡ ಯಶಸ್ಸು ಸಿಕ್ಕಿಲ್ಲ. ಆ ಬಗ್ಗೆ ಅವರಿಗೆ ಬೇಸರ ಇದೆ. ಅವರು ಬ್ಯಾಕ್​ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ. ಅವರ ಬಾಯ್​ಫ್ರೆಂಡ್ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:02 am, Sat, 5 October 24

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ