ಅಕ್ಷಯ್ ಕುಮಾರ್ ನನ್ನ ಕೊಲ್ಲಲು ಯತ್ನಿಸಿದ್ದ, ನನ್ನ ಬಂಧನಕ್ಕೆ ಅವನೇ ಕಾರಣ: ಕೆಆರ್​ಕೆ ಆರೋಪ

Akshay Kumar: ನಟ ಅಕ್ಷಯ್ ಕುಮಾರ್ ವಿರುದ್ಧ ನಾಲಗೆ ಹರಿಬಿಟ್ಟಿದ್ದಾರೆ ವಿವಾದಿತ ಸಿನಿಮಾ ವಿಮರ್ಶಕ ಕೆಆರ್​ಕೆ.

ಅಕ್ಷಯ್ ಕುಮಾರ್ ನನ್ನ ಕೊಲ್ಲಲು ಯತ್ನಿಸಿದ್ದ, ನನ್ನ ಬಂಧನಕ್ಕೆ ಅವನೇ ಕಾರಣ: ಕೆಆರ್​ಕೆ ಆರೋಪ
ಅಕ್ಕಿ-ಕೆಆರ್​ಕೆ
Follow us
|

Updated on: Jun 09, 2023 | 10:26 PM

ತನ್ನನ್ನು ತಾನು ಸಿನಿಮಾ ವಿಮರ್ಶಕನೆಂದು (Movie Critic), ಸಿನಿಮಾ ವ್ಯವಹಾರ ವಿಶ್ಲೇಷಕನೆಂದೂ, ಸಿನಿಮಾ ಪತ್ರಕರ್ತನೆಂದು ಕರೆದುಕೊಳ್ಳುವ ವಿವಾದಾತ್ಮಕ ವ್ಯಕ್ತಿತ್ವದ ಕೆಆರ್​ಕೆ (KRK) ಮತ್ತೆ ತಮ್ಮ ನಾಲಗೆ ಹರಿಬಿಟ್ಟಿದ್ದಾರೆ. ಈ ಹಿಂದೆ ಬಾಲಿವುಡ್​ನ (Bollywood) ಹಲವರ ಮೇಲೆ ತೋಚಿದಂತೆ ಆರೋಪಗಳನ್ನು ಮಾಡಿ, ಆರ್​ಆರ್​ಆರ್, ಕೆಜಿಎಫ್ 2 ಇನ್ನೂ ಹಲವು ಸಿನಿಮಾಗಳಿಗೆ ತೀರ ಕಳಪೆ ಸಿನಿಮಾ ವಿಮರ್ಶೆ ನೀಡಿದ್ದ ಕೆಆರ್​ಕೆ ಕಣ್ಣು ಇದೀಗ ಬಾಲಿವುಡ್​ನ ಸ್ಟಾರ್ ನಟ ಅಕ್ಷಯ್ ಕುಮಾರ್ ಮೇಲೆ ಬಿದ್ದಿದೆ. ಅಕ್ಷಯ್ ವಿರುದ್ಧ ಸರಣಿ ಆರೋಪಗಳನ್ನು ಕೆಆರ್​ಕೆ ಮಾಡಿದ್ದಾರೆ.

ಅಕ್ಷಯ್ ಕುಮಾರ್ ಕುರಿತು ಟ್ವೀಟ್ ಮಾಡಿರುವ ಕೆಆರ್​ಕೆ, ”ಅಕ್ಷಯ್ ಕುಮಾರ್ ಹೊರತುಪಡಿಸಿ ಬಾಲಿವುಡ್​ನಲ್ಲಿ ನನಗೆ ಹಲವರೊಟ್ಟಿಗೆ ಒಳ್ಳೆಯ ಸಂಬಂಧ ಇದೆ. ನನ್ನನ್ನು ಕೊಲ್ಲುವಂತೆ ಅಕ್ಷಯ್ ಕುಮಾರ್ ಸುಫಾರಿ ಕೊಟ್ಟಿದ್ದ. ನನ್ನ ಬಂಧನಕ್ಕೆ ಸಹ ಅಕ್ಷಯ್ ಕುಮಾರ್ ಕಾರಣ. ಜೈಲಿನಲ್ಲೇ ನನ್ನನ್ನು ಕೊಲ್ಲುವಂತೆ ಸುಫಾರಿ ನೀಡಿದ್ದ. ಅದಾದ ಬಳಿಕ ಪೊಲೀಸ್ ಠಾಣೆಯಲ್ಲಿ ಸಹ ನನ್ನನ್ನು ಕೊಲ್ಲಲು ಸುಫಾರಿ ನೀಡಿದ್ದ. ಆದರೆ ದೇವರ ದಯದಿಂದ ನಾನು ಜೈಲಿನಿಂದ ಸುರಕ್ಷಿತವಾಗಿ ಹೊರಬಂದೆ. ನಾನು ಅಕಾಲಿಕವಾಗಿ ಮರಣ ಹೊಂದಿದರೆ ಅದಕ್ಕೆ ಅಕ್ಷಯ್ ಕುಮಾರ್ ಹೊಣೆ, ಸಲ್ಮಾನ್, ಶಾರುಖ್​ಗೂ ನನ್ನ ಸಾವಿಗೂ ಸಂಬಂಧವಿರುವುದಿಲ್ಲ” ಎಂದಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ ”ಅಕ್ಷಯ್ ಕುಮಾರ್ ಪ್ರಕಾರ ನಾನು ಆತನನ್ನು ಕೆನಡಾ ಕುಮಾರ್ ಎಂದು ಕರೆಯಬಾರದಂತೆ. ನಾನೇಕೆ ಆತನನ್ನು ಕೆನಡಿಯನ್ ಎಂದು ಕರೆಯಬಾರದು. ಆತ ಕೆನಡಾದ ಪ್ರಜೆ ಹಾಗಿದ್ದಮೇಲೆ ಆತನನ್ನು ಕೆನಡಾ ಕುಮಾರ್ ಎಂದೇ ಕರೆಯುತ್ತೇನೆ” ಎಂದಿದ್ದಾರೆ. ಇನ್ನೂ ಕೆಲವು ಟ್ವೀಟ್​ಗಳನ್ನು ಅಕ್ಷಯ್ ಕುಮಾರ್ ಬಗ್ಗೆ ಮಾಡಿರುವ ಕೆಆರ್​ಕೆ ಅಕ್ಷಯ್​ಕುಮಾರ್ ಅವರ ಸಾಲು-ಸಾಲು ಫ್ಲಾಪ್ ಸಿನಿಮಾಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ.

ಅಕ್ಷಯ್ ಕುಮಾರ್ ನಟನೆಯ ಕೊನೆಯ ಹತ್ತು ಸಿನಿಮಾಗಳು 500 ಕೋಟಿ ರುಪಾಯಿ ಸಹ ಗಳಿಕೆ ಮಾಡಿಲ್ಲ. ಆದರೆ ಅದೇ ಹತ್ತು ಸಿನಿಮಾಗಳಿಗೆ ಅಕ್ಷಯ್ ಕುಮಾರ್ 1000 ಕೋಟಿಗೂ ಹೆಚ್ಚು ಹಣವನ್ನು ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ ಎಂದಿದ್ದಾರೆ. ಅಕ್ಷಯ್ ಕುಮಾರ್ ಇಂದಾಗಿ ಹಲವು ನಿರ್ಮಾಪಕರು ಬೀದಿಗೆ ಬಂದಿದ್ದಾರೆ ಎಂದಿದ್ದಾರೆ ಕೆಆರ್​ಕೆ. ಜೊತೆಗೆ ಅಕ್ಷಯ್ ನಟನೆಯ ಹೊಸ ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗುತ್ತಿದ್ದು, ಅದೇ ದಿನ ಚಿರಂಜೀವಿ ಸಿನಿಮಾ ಸಹ ಬಿಡುಗಡೆ ಆಗುತ್ತಿದ್ದು, ಆ ಸಿನಿಮಾ ಸಹ ಫ್ಲಾಪ್ ಆಗಲಿದೆ ಎಂದಿದ್ದಾರೆ.

ಅಕ್ಷಯ್ ಕುಮಾರ್ ಸತತ ಸೋಲಿನ ಸುಳಿಯಲ್ಲಿರುವುದಂತೂ ನಿಜವೇ. ಅವರ ನಟನೆಯ ಹತ್ತು ಸಿನಿಮಾಗಳು ಸೋಲು ಕಂಡಿವೆ. ಹಾಕಿದ ಬಂಡವಾಳ ಸಹ ವಾಪಸ್ಸಾಗಿಲ್ಲ. ಹಾಗಿದ್ದರೂ ಸಹ ಸಿನಿಮಾಗಳ ಮೇಲೆ ಸಿನಿಮಾಗಳನ್ನು ಅಕ್ಷಯ್ ಕುಮಾರ್ ಮಾಡುತ್ತಿದ್ದಾರೆ. ಪ್ರತಿ ಸಿನಿಮಾಕ್ಕೆ ನೂರು ಕೋಟಿಗೂ ಹೆಚ್ಚು ಸಂಭಾವನೆ ಸಹ ಪಡೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ