AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಖ್ಯಾತಿ ಮಕ್ಕಳ ಜೀವನವನ್ನೇ ಹಾಳು ಮಾಡಬಹುದು’; ಹಲವು ವರ್ಷಗಳ ಹಿಂದೆಯೇ ಆತಂಕ ಹೊರಹಾಕಿದ್ದ ಶಾರುಖ್

ಸಾಮಾನ್ಯ ವ್ಯಕ್ತಿ ಡ್ರಗ್​ ಕೇಸ್​ನಲ್ಲಿ ಸಿಕ್ಕಿ ಬಿದ್ದಿದ್ದರೆ ಮಾಧ್ಯಮಗಳಲ್ಲಿ ಈ ಕೇಸ್​ ಸ್ವಲ್ಪವೂ ಹೈಲೈಟ್​ ಆಗುತ್ತಿರಲಿಲ್ಲ. ಶಾರುಖ್​ ಮಗ ಎಂಬ ಕಾರಣಕ್ಕೆ ಪ್ರತಿ ವಿಚಾರವೂ ಮುನ್ನೆಲೆಗೆ ಬರುತ್ತಿದೆ.

‘ನನ್ನ ಖ್ಯಾತಿ ಮಕ್ಕಳ ಜೀವನವನ್ನೇ ಹಾಳು ಮಾಡಬಹುದು’; ಹಲವು ವರ್ಷಗಳ ಹಿಂದೆಯೇ ಆತಂಕ ಹೊರಹಾಕಿದ್ದ ಶಾರುಖ್
ಶಾರುಖ್​ ಕುಟುಂಬ
TV9 Web
| Edited By: |

Updated on: Oct 22, 2021 | 7:09 PM

Share

ಆರ್ಯನ್​ ಖಾನ್​ ಅವರು ಕ್ರೂಸ್​ ಶಿಪ್​ನಲ್ಲಿ ಡ್ರಗ್ಸ್​ ಪಾರ್ಟಿ ಮಾಡುತ್ತಾ ಸಿಕ್ಕಿ ಬಿದ್ದಿದ್ದಾರೆ. ಅವರ ಪ್ರಕರಣ ಇಷ್ಟೊಂದು ಹೈಲೈಟ್​ ಆಗೋಕೆ ಕಾರಣ ಶಾರುಖ್​ ಖಾನ್​. ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​ಗೆ ದೊಡ್ಡ ಅಭಿಮಾನಿ ಬಳಗವಿದೆ. ಅವರು ದೊಡ್ಡ ಸೆಲೆಬ್ರಿಟಿ. ಈ ಕಾರಣಕ್ಕೆ ಆರ್ಯನ್​ ಖಾನ್​ ಪ್ರಕರಣ ಇಷ್ಟೊಂದು ಹೈಪ್​ ಪಡೆದುಕೊಂಡಿದೆ. ಮಾಧ್ಯಮಗಳಲ್ಲಿ ಇಡೀ ದಿನ ಈ ಪ್ರಕರಣ ಹೈಲೈಟ್​ ಆಗುತ್ತಿದೆ. ಈ ಬಗ್ಗೆ ಶಾರುಖ್​ ಖಾನ್​ ಹಲವು ವರ್ಷಗಳ ಹಿಂದೆಯೇ ಆತಂಕ ಹೊರ ಹಾಕಿದ್ದರು.

ಸಾಮಾನ್ಯ ವ್ಯಕ್ತಿ ಡ್ರಗ್​ ಕೇಸ್​ನಲ್ಲಿ ಸಿಕ್ಕಿ ಬಿದ್ದಿದ್ದರೆ ಮಾಧ್ಯಮಗಳಲ್ಲಿ ಈ ಕೇಸ್​ ಸ್ವಲ್ಪವೂ ಹೈಲೈಟ್​ ಆಗುತ್ತಿರಲಿಲ್ಲ. ಶಾರುಖ್​ ಮಗ ಎಂಬ ಕಾರಣಕ್ಕೆ ಪ್ರತಿ ವಿಚಾರವೂ ಮುನ್ನೆಲೆಗೆ ಬರುತ್ತಿದೆ. ಇದರ ಜತೆಗೆ ಸಾಕಷ್ಟು ಸೆಲೆಬ್ರಿಟಿಗಳಿಗೆ ಕಂಟಕ ಎದುರಾಗಿದೆ. ನಟಿ ಅನನ್ಯಾ ಪಾಂಡೆ ಸೇರಿ ಅನೇಕರನ್ನು ವಿಚಾರಣೆ ನಡೆಸಲಾಗುತ್ತಿದೆ. ತಮ್ಮ ಖ್ಯಾತಿಯಿಂದ ಮಕ್ಕಳ ಬದುಕು ಹಾಳಾಗಬಹುದು ಎಂಬ ಆತಂಕ ಶಾರುಖ್​ಗೆ ಮೊದಲಿನಿಂದಲೂ ಇತ್ತು.

‘ರಸ್ತೆಯ ಮೇಲೆ ಕಾರು ವೇಗವಾಗಿ ಬರುತ್ತಿರುವಾಗ ಅಲ್ಲಿ ನನ್ನ ಗೆಳೆಯ ನಿಂತಿದ್ದರೆ ನಾನು ಅವನನ್ನು ತಳ್ಳಿ ರಕ್ಷಿಸೋಕೆ ಪ್ರಯತ್ನಿಸುತ್ತೇನೆ. ನನ್ನ ಕುಟುಂಬದ ಸದಸ್ಯರು ನಿಂತಿದ್ದರೆ, ಅವರನ್ನು ಕೂಡ ರಕ್ಷಿಸುತ್ತೇನೆ. ಇದರ ಜತೆಗೆ ಯಾವುದೇ ಗಾಯಗಳು ಆಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇನೆ. ಒಂದೊಮ್ಮೆ ನನ್ನ ಮಕ್ಕಳು ಆ ಸ್ಥಾನದಲ್ಲಿದ್ದರೆ ನಾನೇ ಕಾರಿಗೆ ಅಡ್ಡಲಾಗಿ ನನ್ನ ಮಕ್ಕಳನ್ನು ಉಳಿಸುತ್ತೆನೆ’ ಎಂದು ಶಾರುಖ್​ ಈ ವಿಡಿಯೋದಲ್ಲಿ ಮಾತು ಆರಂಭಿಸಿದ್ದರು.

‘ನನ್ನ ಖ್ಯಾತಿಯಿಂದ ಮಕ್ಕಳಿಗೆ ತೊಂದರೆ ಉಂಟಾಗಬಹುದು. ಅದು ನನಗಿರುವ ದೊಡ್ಡ ಭಯ. ಅವರು ನನ್ನ ಖ್ಯಾತಿಯಿಂದ ಆಚೆಗೆ ಬೆಳೆಯುತ್ತಾರೆ ಎನ್ನುವ ನಂಬಿಕೆ ಇದೆ. ನನ್ನ ಖ್ಯಾತಿ ಅವರ ಜೀವನವನ್ನು ಹಾಳು ಮಾಡಬಹುದು’ ಎಂದು ಶಾರುಖ್​ ಆತಂಕ ಹೊರ ಹಾಕಿದ್ದರು.

ಇದನ್ನೂ ಓದಿ: Ananya Pandey: ಆರ್ಯನ್ ಖಾನ್ ಬಂಧನ ಪ್ರಕರಣ; ಎನ್​ಸಿಬಿ ವಿಚಾರಣೆ ವೇಳೆ ಭಯಗೊಂಡು ಕಣ್ಣೀರಿಟ್ಟಿದ್ದ ಅನನ್ಯಾ ಪಾಂಡೆ

ಆರ್ಯನ್​ ಖಾನ್​ಗೆ ಡ್ರಗ್​ ಸಪ್ಲೈ ಮಾಡಿದ್ದು ಅನನ್ಯಾ ಪಾಂಡೆ? ವಾಟ್ಸಾಪ್ ಚಾಟ್​​​ನಿಂದ ಹೊರ ಬಿತ್ತು ರಹಸ್ಯ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?