AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಗೆ ಮಿಸ್ಕ್ಯಾರೇಜ್ ಆದಾಗ ವಿಮಾನ ನಿಲ್ದಾಣದಲ್ಲಿ ಓಡೋಡಿ ಬಂದಿದ್ದ ಶಾರುಖ್​ಗೆ ಆಗಿತ್ತು ವಿಚಿತ್ರ ಅನುಭವ

Shah Rukh Khan: ಶಾರುಖ್ ಖಾನ್ ಪತ್ನಿ ಗೌರಿ ಖಾನ್​ಗೆ ಮಿಸ್ ಕ್ಯಾರಿಯೇಜ್ ಆಗಿ ಶಾರುಖ್, ಆತಂಕದಲ್ಲಿ ನ್ಯೂಯಾರ್ಕ್​ನಿಂದ ಭಾರತಕ್ಕೆ ಬರುವಾಗ ನಡೆದ ಘಟನೆಯೊಂದನ್ನು ಅವರು ನೆನಪು ಮಾಡಿಕೊಂಡಿದ್ದಾರೆ.

ಪತ್ನಿಗೆ ಮಿಸ್ಕ್ಯಾರೇಜ್ ಆದಾಗ ವಿಮಾನ ನಿಲ್ದಾಣದಲ್ಲಿ ಓಡೋಡಿ ಬಂದಿದ್ದ ಶಾರುಖ್​ಗೆ ಆಗಿತ್ತು ವಿಚಿತ್ರ ಅನುಭವ
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 13, 2024 | 4:06 PM

Share

ಶಾರುಖ್ ಖಾನ್ ಅವರು ತಮ್ಮ ಜೀವನದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದವರು. ಅವರು ಬಾಲಿವುಡ್ನಲ್ಲಿ ಇದ್ದು ಹಲವು ದಶಕ ಕಳೆದಿದೆ. ಅವರು ತಮ್ಮ ಜೀವನದಲ್ಲಿ ನಡೆದ ಹಲವು ಅನುಭವಗಳ ಬಗ್ಗೆ ಮಾತನಾಡಿದ್ದರು. ಅವರಿಗೆ ವಿಮಾನ ನಿಲ್ದಾಣದಲ್ಲಿ ಒಂದು ವಿಚಿತ್ರ ಅನುಭವ ಆಗಿತ್ತು. ಆ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಹಾಗಾದರೆ ಅದು ಏನು ಆ ಅನುಭವ? ಇಲ್ಲಿದೆ ವಿವರ.

ಅದು ‘ಪರದೇಶ್’ ಚಿತ್ರದ ಶೂಟಿಂಗ್ ಸಮಯ. ಅಂದರೆ 1996ರ ಸಂದರ್ಭ ಇರಬಹುದು. ಶಾರುಖ್ ಖಾನ್ ಅವರು ನ್ಯೂಯಾರ್ಕ್ನಲ್ಲಿ ಇದ್ದರು. ಅವರು ಆಗ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದರು. ಗೌರಿ ಖಾನ್ ಪ್ರೆಗ್ನೆಂಟ್ ಆಗಿದ್ದರು. ಮಗು ಆಗುವ ಖುಷಿಯಲ್ಲಿ ಇದ್ದ ಶಾರುಖ್ಗೆ ಶಾಕಿಂಗ್ ಸುದ್ದಿ ಒಂದು ಬಂದಿತ್ತು. ‘ಗೌರಿ ಖಾನ್​ಗೆ ಮಿಸ್ ಕ್ಯಾರೇಜ್ ಆಗಿದೆ’ ಎಂದು ಸುದ್ದಿ ಬಂದಿತ್ತು. ಈ ಸುದ್ದಿ ಕೇಳಿ ಶಾರುಖ್ ಖಾನ್ ನ್ಯೂಯಾರ್ಕ್ ವಿಮಾನ ನಿಲ್ದಾಣದಿಂದ ಭಾರತಕ್ಕೆ ಬರುವವರಿದ್ದರು.

‘ಪರದೇಶ್ ಸಿನಿಮಾ ಶೂಟ್ ಮಾಡುತ್ತಿದ್ದೆ. ಇದಕ್ಕೆ ನ್ಯೂಯಾರ್ಕ್​​ನಲ್ಲಿದ್ದೆ. ಲಾಸ್ ಎಂಜಲೀಸ್​ನಿಂದ ನ್ಯೂಯಾರ್ಕ್ ಬಂದೆ. ನಾನು ಬ್ಯಾಗ್ ಹಿಡಿದುಕೊಂಡು ನಿಲ್ದಾಣದಲ್ಲಿ ಓಡುತ್ತಿದ್ದೆ. ಆಗ ಮಹಿಳೆ ಒಬ್ಬರು ಬಂದು ಆಟೋಗ್ರಾಫ್ ಎಂದು ಕೂಗಿದರು. ನಾನು ನನ್ನದೇ ಚಿಂತೆಯಲ್ಲಿ ಇದ್ದೆ. ನಾನು ಕಷ್ಟಪಟ್ಟು ಚೆಕ್ಇನ್ ಆದೆ. ಅಲ್ಲಿಯೂ ಮಹಿಳೆ ಬಂದಳು. ನಾನು ನಿಮ್ಮ ದೊಡ್ಡ ಅಭಿಮಾನಿ ಎಂದಳು’ ಎಂದು ಘಟನೆ ವಿವರಿಸಿದ್ದಾರೆ ಶಾರುಖ್.

ಇದನ್ನೂ ಓದಿ: ‘ಸ್ತ್ರೀ 2’ ನಿರ್ದೇಶಕನ ಹಿಂದೆ ಬಿದ್ದ ಶಾರುಖ್ ಖಾನ್? ಅಡ್ವೆಂಚರ್ ಸಿನಿಮಾಗೆ ಸಹಿ

ಆ ಬಳಿಕ ನಡೆದಿದ್ದು ಮಾತ್ರ ಸಖತ್ ಫನ್ನಿ ಆಗಿತ್ತು. ಏಕೆಂದರೆ ಮಹಿಳೆ ಬರುತ್ತಿದ್ದಂತೆ ಶಾರುಖ್ ಎಂದು ಕೂಗೋ ಬದಲು, ‘ಅಕ್ಷಯ್ ಐ ಲವ್ಯೂ’ ಎಂದರು. ಆಗ ಶಾರುಖ್ ಖಾನ್​ಗೆ ಇದು ಕನ್ಫ್ಯೂಸ್ ಆಗಿ ಹೇಳಿದ್ದು ಅನ್ನೋದು ಸ್ಪಷ್ಟವಾಗಿತ್ತು. ಶಾರುಖ್ ಖಾನ್ ಅವರನ್ನು ಅಕ್ಷಯ್ ಎಂದು ಭಾವಿಸಿದ್ದರು ಆ ಮಹಿಳೆ.

ಶಾರುಖ್ ಖಾನ್ ಅವರು ಕಳೆದ ವರ್ಷ ಬ್ಯಾಕ್ ಟು ಬ್ಯಾಕ್ ಮೂರು ಹಿಟ್ ನೀಡಿದ್ದರು. ಈಗ ಅವರು ಕೆಲವು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಈ ಪೈಕಿ ‘ಕಿಂಗ್’ ಮೊದಲಾದ ಸಿನಿಮಾಗಳು ಪ್ರಮುಖವಾಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಡಿಸಿಎಂಗಳ ಆಯ್ಕೆಯೇ ಈಗ ಕಾಂಗ್ರೆಸ್​​ ಹೈಕಮಾಂಡ್​​ಗೆ ದೊಡ್ಡ ಸವಾಲು!
ಡಿಸಿಎಂಗಳ ಆಯ್ಕೆಯೇ ಈಗ ಕಾಂಗ್ರೆಸ್​​ ಹೈಕಮಾಂಡ್​​ಗೆ ದೊಡ್ಡ ಸವಾಲು!