AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್​ ಮನೆ ಎದುರು ನಿಂತ ಅಭಿಮಾನಿಗಳು; ಬಾಲ್ಕನಿಯಿಂದ ಮೊಬೈಲ್​ ಎಸೆದ ಕಿಂಗ್​ ಖಾನ್​

ಈವರೆಗೂ ಶಾರುಖ್​ ಖಾನ್​ ಓಟಿಟಿ ಪ್ರವೇಶಿಸಿಲ್ಲ. ಇತ್ತ ಅವರ ಸಿನಿಮಾಗಳು ಕೂಡ ಬಾಕ್ಸ್​ಆಫೀಸ್​ನಲ್ಲಿ ಗೆಲ್ಲುತ್ತಿಲ್ಲ. ಹಾಗಾಗಿ ಅವರನ್ನು ಓಟಿಟಿಗೆ ಕರೆದುಕೊಂಡು ಬರಲು ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಸಂಸ್ಥೆ ಪ್ಲ್ಯಾನ್​ ಮಾಡಿದೆ.

ಶಾರುಖ್​ ಮನೆ ಎದುರು ನಿಂತ ಅಭಿಮಾನಿಗಳು; ಬಾಲ್ಕನಿಯಿಂದ ಮೊಬೈಲ್​ ಎಸೆದ ಕಿಂಗ್​ ಖಾನ್​
ಶಾರುಖ್​ ಮನೆ ಎದುರು ನಿಂತ ಅಭಿಮಾನಿಗಳು; ಬಾಲ್ಕನಿಯಿಂದ ಮೊಬೈಲ್​ ಎಸೆದ ಕಿಂಗ್​ ಖಾನ್​
TV9 Web
| Edited By: |

Updated on: Sep 22, 2021 | 5:25 PM

Share

ಶಾರುಖ್​ ಖಾನ್​ ಇತ್ತೀಚೆಗೆ ನಟಿಸಿದ ಸಾಕಷ್ಟು ಸಿನಿಮಾಗಳು ಪ್ಲಾಪ್​ ಆಗಿವೆ. ಹೀಗಾಗಿ, ನಟನೆಯಿಂದ ಅವರು ಬ್ರೇಕ್​ ತೆಗೆದುಕೊಂಡಿದ್ದರು. 2018ರ ಈಚೆಗೆ ಅವರ ಯಾವುದೇ ಸಿನಿಮಾ ತೆರೆಕಂಡಿಲ್ಲ. ಆದರೆ, ಶಾರುಖ್​ ಖಾನ್​ ಬೇಡಿಕೆ ಮಾತ್ರ ಕೊಂಚವೂ ಕುಗ್ಗಿಲ್ಲ. ಅವರು ನಟಿಸುತ್ತಾರೆ ಎಂದರೆ 100 ಕೋಟಿ ಕೊಟ್ಟು ಕಿಂಗ್​ ಖಾನ್​ ಕಾಲ್​ಶೀಟ್​ ಪಡೆಯೋಕೆ ನಿರ್ಮಾಪಕರು ಈಗಲೂ ರೆಡಿ ಇದ್ದಾರೆ. ಈ ಮಧ್ಯೆ ಶಾರುಖ್​ ಮನೆ ಎದುರು ಅಭಿಮಾನಿಗಳು ನೆರೆದಿದ್ದಾರೆ. ಆಗ ಶಾರುಖ್​ ಬಾಲ್ಕನಿಯಿಂದ ಮೊಬೈಲ್​ ಎಸೆದಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್​ ಆಗಿದೆ.

ಹಾಗಾದರೆ, ಶಾರುಖ್​ ಮೊಬೈಲ್​ ಎಸೆದಿದ್ದೇಕೆ? ಇದಕ್ಕೆ ಉತ್ತರ ಡಿಸ್ನಿ + ಹಾಟ್​ಸ್ಟಾರ್​ ಜಾಹೀರಾತು. ಶಾರುಖ್ ಖಾನ್​ ಬಾಲ್ಕನಿಯಲ್ಲಿ ನಿಂತು ಅವರ ಪಿಎ (ಜಾಹೀರಾತಿನಲ್ಲಿ ರಾಜೇಶ್​ ಜೈಸ್ ಪಿಎ ಪಾತ್ರ ಮಾಡಿದ್ದಾರೆ​) ಜತೆ ಮಾತನಾಡುತ್ತಿರುವುದು ವಿಡಿಯೋದಲ್ಲಿದೆ. ಈ ವೇಳೆ ಡಿಸ್ನಿಯಿಂದ ಕರೆ ಬಂತೇ ಎಂದು ಶಾರುಖ್​ ಪಿಎಯನ್ನು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಇಲ್ಲ ಎನ್ನುವ ಉತ್ತರ ಬರುತ್ತದೆ. ಸಿಟ್ಟಾಗುವ ಶಾರುಖ್​ ಮೊಬೈಲ್​ ಎಸೆಯುತ್ತಾರೆ. ಮತ್ತೊಂದು ಜಾಹೀರಾತಿನಲ್ಲಿ ‘ನಿಮ್ಮೊಬ್ಬರನ್ನು ಬಿಟ್ಟು ಉಳಿದೆಲ್ಲ ಸ್ಟಾರ್​ಗಳ ಸಿನಿಮಾ ಹಾಟ್​ಸ್ಟಾರ್​ನಲ್ಲಿದೆ’ ಎನ್ನುತ್ತಾರೆ ಶಾರುಖ್​ ಪಿಎ. ಈ ವಿಡಿಯೋ ಸಾಕಷ್ಟು ಕುತೂಹಲ ಮೂಡಿಸಿದೆ.

ಈವರೆಗೂ ಶಾರುಖ್​ ಖಾನ್​ ಓಟಿಟಿ ಪ್ರವೇಶಿಸಿಲ್ಲ. ಇತ್ತ ಅವರ ಸಿನಿಮಾಗಳು ಕೂಡ ಬಾಕ್ಸ್​ಆಫೀಸ್​ನಲ್ಲಿ ಗೆಲ್ಲುತ್ತಿಲ್ಲ. ಹಾಗಾಗಿ ಅವರನ್ನು ಓಟಿಟಿಗೆ ಕರೆದುಕೊಂಡು ಬರಲು ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಸಂಸ್ಥೆ ಪ್ಲ್ಯಾನ್​ ಮಾಡಿದೆ. ಅದಕ್ಕೆ ಶಾರುಖ್​ ಕೂಡ ಒಪ್ಪಿದ್ದು, ಜಾಹೀರಾತುಗಳ ಮೂಲಕ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ. ಅದಕ್ಕೆ ಇತ್ತೀಚೆಗೆ ಸಲ್ಮಾನ್​ ಖಾನ್​ ಕೂಡ ಕೈ ಜೋಡಿಸಿದ್ದರು. ಜಾಹೀರಾತನ್ನು ಶೇರ್​ ಮಾಡಿಕೊಂಡಿರುವ ಅವರು, ‘ಶಾರುಖ್​ ಖಾನ್​ಗೆ ಸ್ವಾಗತ ಮಾಡುವುದಿಲ್ಲವೇ?’ ಎಂದು ಒಂದೇ ಒಂದು ವಾಕ್ಯ ಕ್ಯಾಪ್ಷನ್​ ನೀಡಿದ್ದರು.

ಈ ಜಾಹೀರಾತುಗಳನ್ನು ನೋಡಿದ ಅಭಿಮಾನಿಗಳಿಗೂ ಸಾಕಾಗಿದೆ. ದಯವಿಟ್ಟು ಸಿನಿಮಾ ಘೋಷಣೆ ಮಾಡಿ ಎಂದು ಅಭಿಮಾನಿಗಳು ಕೋರುತ್ತಿದ್ದಾರೆ. ಶಾರುಖ್​ ಸದ್ಯ ‘ಪಠಾಣ್​’ ಹಾಗೂ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳ ಶೂಟಿಂಗ್​ ಆರಂಭಗೊಂಡಿದೆ. ಆದರೆ, ಸಿನಿಮಾ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ಇದನ್ನೂ ಓದಿ: ಸಲ್ಮಾನ್​ ಖಾನ್​ ಮಾಡಿದ 30 ಸೆಕೆಂಡ್​ ಕೆಲಸಕ್ಕೆ 50 ಲಕ್ಷ ರೂ. ಸಂಬಳ; ಸಲ್ಲು ಬರೆದಿದ್ದು ಒಂದೇ ವಾಕ್ಯ 

ಶಾರುಖ್ ಖಾನ್ ಹಂಚಿಕೊಂಡ ಗಣೇಶ ಚತುರ್ಥಿಯ ಕುರಿತ ಪೋಸ್ಟ್​ಗೆ ಕಿಡಿ ಕಾರಿದ ಕೆಲ ನೆಟ್ಟಿಗರು; ಕಾರಣವೇನು?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್