ಶಿಲ್ಪಾ ಶೆಟ್ಟಿ ಮಗಳ ಜತೆ ಕಾರು ಏರಲು ಮುಂದಾದ ಅಭಿಮಾನಿ; ಫ್ಯಾನ್ ವರ್ತನೆ ನೋಡಿ ನಟಿ ಶಾಕ್

ಶಿಲ್ಪಾಗೆ ಫ್ಯಾನ್ಸ್ ಕಂಡರೆ ಖುಷಿ ಇದೆ. ಅವರು ಫ್ಯಾನ್ಸ್ ಜತೆ ಉತ್ತಮ ರಿಲೇಶನ್​ಶಿಪ್ ಹೊಂದಿದ್ದಾರೆ. ಅದೇ ರೀತಿ ಅಭಿಮಾನಿಗಳ ಜತೆ ಶಿಲ್ಪಾ ಮಾತನಾಡಿದ್ದಾರೆ. ಆದರೆ, ಓರ್ವ ಅಭಿಮಾನಿ ದುರ್ವರ್ತನೆ ತೋರಿದ್ದಾನೆ.

ಶಿಲ್ಪಾ ಶೆಟ್ಟಿ ಮಗಳ ಜತೆ ಕಾರು ಏರಲು ಮುಂದಾದ ಅಭಿಮಾನಿ; ಫ್ಯಾನ್ ವರ್ತನೆ ನೋಡಿ ನಟಿ ಶಾಕ್
ಶಿಲ್ಪಾ ಶೆಟ್ಟಿ-ಸಮಿಷಾ
Follow us
| Updated By: ರಾಜೇಶ್ ದುಗ್ಗುಮನೆ

Updated on: Apr 17, 2022 | 11:51 AM

ಸೆಲೆಬ್ರಿಟಿಗಳನ್ನು ಕಂಡರೆ ಸಾಕು ಅಭಿಮಾನಿಗಳು ತಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಸೆಲ್ಫೀ ತೆಗೆದುಕೊಳ್ಳಬೇಕು, ಅವರನ್ನು ಮಾತನಾಡಿಸಬೇಕು ಎಂದು ನಾನಾ ರೀತಿಯ ಸಾಹಸಕ್ಕೆ ಮುಂದಾಗುತ್ತಾರೆ. ಫ್ಯಾನ್ಸ್​ ತೋರುವ ವರ್ತನೆ ಸೆಲೆಬ್ರಿಟಿಗಳ ಆಕ್ರೋಶಕ್ಕೆ ಕಾರಣವಾಗಿದ್ದುಂಟು. ಸಲ್ಮಾನ್ ಖಾನ್ (Salman Khan), ಜಾನ್​ ಅಬ್ರಾಹಂ ಫ್ಯಾನ್ಸ್ ವಿರುದ್ಧ ಅಸಮಾಧಾನಗೊಂಡ ವಿಡಿಯೋಗಳು ಈ ಮೊದಲು ವೈರಲ್ ಆದ ಉದಾಹರಣೆ ಇದೆ. ಶಿಲ್ಪಾ ಶೆಟ್ಟಿಗೂ (Shilpa Shetty) ಇದೇ ರೀತಿಯ ಅನುಭವ ಆಗಿದೆ. ಅವರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಸ್ಮೃತಿ ಖನ್ನಾ ಅವರ ಮಗಳು ಅನ್ಯಕಾ ಅವಳ ಬರ್ತ್​ಡೇ ಸೆಲಬ್ರೇಷನ್​ಗೆ ತೆರಳಿದ್ದರು ಶಿಲ್ಪಾ ಶೆಟ್ಟಿ. ಇದಕ್ಕೆ ಮಗಳು ಸಮಿಷಾಳನ್ನೂ ಕರೆದುಕೊಂಡು ಬಂದಿದ್ದರು. ಪಾರ್ಟಿ ನಡೆದ ಪ್ರದೇಶದಿಂದ ಕಾರು ಇರುವ ಕಡೆಗೆ ಶಿಲ್ಪಾ ನಡೆದು ಬರುತ್ತಿದ್ದರು. ಆಗ ಪಾಪರಾಜಿಗಳು ಶಿಲ್ಪಾಗೆ ವಿಶ್ ಮಾಡಿದರು. ಈ ವೇಳೆ ಶಿಲ್ಪಾ ಮಗಳ ಜತೆ ಪೋಸ್​ ನೀಡಿದ್ದಾರೆ. ಇದಾದ ಬಳಿಕ ಅಲ್ಲಿಯೇ ಇದ್ದ ಅಭಿಮಾನಿಗಳು ಶಿಲ್ಪಾ ಅವರನ್ನು ಮಾತನಾಡಿಸಿದ್ದಾರೆ.

ಶಿಲ್ಪಾಗೆ ಫ್ಯಾನ್ಸ್ ಕಂಡರೆ ಖುಷಿ ಇದೆ. ಅವರು ಫ್ಯಾನ್ಸ್ ಜತೆ ಉತ್ತಮ ರಿಲೇಶನ್​ಶಿಪ್ ಹೊಂದಿದ್ದಾರೆ. ಅದೇ ರೀತಿ ಅಭಿಮಾನಿಗಳ ಜತೆ ಶಿಲ್ಪಾ ಮಾತನಾಡಿದ್ದಾರೆ. ಆದರೆ, ಓರ್ವ ಅಭಿಮಾನಿ ದುರ್ವರ್ತನೆ ತೋರಿದ್ದಾನೆ. ಶಿಲ್ಪಾ ಹಾಗೂ ಅವರ ಮಗಳು ಕಾರು ಏರುತ್ತಿದ್ದರು. ಅವರ ಜತೆಯೇ ಈತನೂ ಕಾರು ಏರಲು ಪ್ರಯತ್ನಿಸಿದ್ದಾನೆ. ಇದನ್ನು ಕಂಡ ಶಿಲ್ಪಾ ಒಂದು ಕ್ಷಣ ಶಾಕ್ ಆಗಿದ್ದಾರೆ. ‘ಏನು ಮಾಡುತ್ತಿದ್ದೀಯಾ’? ಎಂದು ಶಿಲ್ಪಾ ಪ್ರಶ್ನೆ ಮಾಡಿದ್ದಾರೆ. ಆ ಬಳಿಕ ಅಭಿಮಾನಿ ಕಾರಿನಿಂದ ದೂರ ನಡೆದಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಶಿಲ್ಪಾ ಅವರಿಗೆ ಕಳೆದ ವರ್ಷ ತೀವ್ರ ಮುಜುಗರದ ಪರಿಸ್ಥಿತಿ ಉಂಟಾಗಿತ್ತು. ಪತಿ ರಾಜ್​ ಕುಂದ್ರಾ ಅವರು ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಸಿಲುಕಿದ್ದರು. ಇದಾದ ಬಳಿಕ ಅವರು ಪತಿಗೆ ವಿಚ್ಛೇದನ ನೀಡುತ್ತಾರೆ ಎಂದು ವರದಿ ಆಗಿತ್ತು. ಆದರೆ, ಅದು ಸುಳ್ಳಾಗಿದೆ. ಅವರು ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ರಿಯಾಲಿಟಿ ಶೋಗಳಿಗೆ ಅವರು ಜಡ್ಜ್​ ಆಗಿದ್ದಾರೆ.

ಇದನ್ನೂ ಓದಿ: Shilpa Shetty: ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ ಶಿಲ್ಪಾ ಶೆಟ್ಟಿ; ವೈರಲ್ ಆಯ್ತು ಚಿತ್ರಗಳು

ನಿರ್ದೇಶಕನಿಗೆ ಗಾಜಿನ ಬಾಟಲಿಯಲ್ಲಿ ಹೊಡೆದ ಶಿಲ್ಪಾ ಶೆಟ್ಟಿ; ಅಡ್ಡ ಬಂದ ಗಾಯಕನಿಗೂ ಬಿತ್ತು ಏಟು

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ