AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೂ ಅಂತೀಯಾ ಮಾವ..’ ಹಾಡಿನ ಮ್ಯೂಸಿಕ್​ ಡೈರೆಕ್ಟರ್ ಮೇಲೆ ಕಣ್ಣು ಹಾಕಿದ ಸಲ್ಮಾನ್​ ಖಾನ್​; ಕಾರಣ ಏನು?

Salman Khan | Devi Sri Prasad: ಸತತ ಸೋಲಿನಿಂದ ಬೇಸರಗೊಂಡಿರುವ ಸಲ್ಮಾನ್​ ಖಾನ್​ ಅವರು ಒಂದು ಗೆಲುವಿಗಾಗಿ ಇಷ್ಟೆಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಈಗ ಅವರು ದೇವಿ ಶ್ರೀ ಪ್ರಸಾದ್​ ಜೊತೆ ಕೈ ಜೋಡಿಸಿದ್ದಾರೆ.

‘ಹೂ ಅಂತೀಯಾ ಮಾವ..’ ಹಾಡಿನ ಮ್ಯೂಸಿಕ್​ ಡೈರೆಕ್ಟರ್ ಮೇಲೆ ಕಣ್ಣು ಹಾಕಿದ ಸಲ್ಮಾನ್​ ಖಾನ್​; ಕಾರಣ ಏನು?
ದೇವಿ ಶ್ರೀ ಪ್ರಸಾದ್, ಸಲ್ಮಾನ್ ಖಾನ್
TV9 Web
| Edited By: |

Updated on: Apr 17, 2022 | 10:12 AM

Share

ನಿಜಕ್ಕೂ ಬಾಲಿವುಡ್​ ಮಂದಿಗೆ ಈಗ ಚಿಂತೆ ಶುರುವಾಗಿದೆ. ಒಂದು ಕಾಲದಲ್ಲಿ ಬಾಕ್ಸ್​ ಆಫೀಸ್​ನಲ್ಲಿ ಆಳ್ವಿಕೆ ಮಾಡುತ್ತಿದ್ದ ಘಟಾನುಘಟಿ ಸ್ಟಾರ್​ ಹೀರೋಗಳೆಲ್ಲ ಈಗ ಸೈಲೆಂಟ್​ ಆಗಿದ್ದಾರೆ. ಆಮಿರ್​ ಖಾನ್​, ಸಲ್ಮಾನ್​ ಖಾನ್​ (Salman Khan), ಶಾರುಖ್​ ಖಾನ್​, ಜಾನ್​ ಅಬ್ರಾಹಂ ಮುಂತಾದವರು ಗೆಲುವಿಗಾಗಿ ಪರಿತಪಿಸುತ್ತಿದ್ದಾರೆ. ಶಾರುಖ್​ ಖಾನ್​ ಬ್ಯಾಕ್​ ಟು ಬ್ಯಾಕ್​ ಸೋಲು ಕಂಡಿದ್ದಾರೆ. ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲು ಸಲ್ಮಾನ್​ ಖಾನ್​ ಸಿನಿಮಾಗಳು ಕೂಡ ಕಷ್ಟಪಡುತ್ತಿವೆ. ಈ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಸಿನಿಮಾಗಳು ಬಾಲಿವುಡ್​ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿವೆ. ಹಿಂದಿ ಚಿತ್ರರಂಗದ ಸ್ಟಾರ್​ ನಟರು ಸೌತ್​ ಹೀರೋಗಳ ಎದುರು ಮಂಕಾಗಿದ್ದಾರೆ. ಈಗ ಹೇಗಾದರೂ ಮಾಡಿ ಒಂದು ಗೆಲುವು ಪಡೆಯಬೇಕು ಎಂಬ ಕಾರಣದಿಂದ ಸಲ್ಮಾನ್​ ಖಾನ್​ ಬಗೆಬಗೆಯ ಪ್ಲ್ಯಾನ್​ ಮಾಡುತ್ತಿದ್ದಾರೆ. ಅವರ ಮುಂದಿನ ಸಿನಿಮಾ ‘ಕಭಿ ಈದ್​ ಕಭಿ ದಿವಾಲಿ’ (Kabhi Eid Kabhi Diwali) ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಮ್ಯೂಸಿಕ್​ ಡೈರೆಕ್ಟರ್​ ದೇವಿ ಶ್ರೀ ಪ್ರಸಾದ್​ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಕೂಡ ಸಲ್ಮಾನ್​ ಖಾನ್​ ಮತ್ತು ದೇವಿ ಶ್ರೀ ಪ್ರಸಾದ್​ (Devi Sri Prasad) ಅವರ ಕಾಂಬಿನೇಷನ್​ನಲ್ಲಿ ಮೂಡಿಬಂದಿದ್ದ ಗೀತೆಗಳು ಹಿಟ್​ ಆಗಿದ್ದವು. ಈಗ ಅದೇ ಸೂತ್ರವನ್ನು ಮತ್ತೆ ಫಾಲೋ ಮಾಡಲಾಗುತ್ತಿದೆ.

ಅನೇಕ ಸೂಪರ್​ ಹಿಟ್​ ಗೀತೆಗಳನ್ನು ದೇವಿ ಶ್ರೀ ಪ್ರಸಾದ್ ನೀಡಿದ್ದಾರೆ. ಕಳೆದ ವರ್ಷ ರಿಲೀಸ್​ ಆದ ‘ಪುಷ್ಪ’ ಚಿತ್ರಕ್ಕೆ ಸಂಗೀತ ನೀಡಿದ್ದ ಅವರು ‘ಹೂ ಅಂತೀಯಾ ಮಾವ.. ಊಹೂ ಅಂತೀಯ ಮಾವ..’ ಹಾಡಿನ ಮೂಲಕ ಗುಂಗು ಹತ್ತಿಸಿದ್ದರು. ಚಿತ್ರಮಂದಿರದಲ್ಲಿ ಅಭಿಮಾನಿಗಳು ಈ ಗೀತೆಗೆ ಹುಚ್ಚೆದ್ದು ಕಣಿದಿದ್ದರು. ‘ಪುಷ್ಪ’ ಸಿನಿಮಾದ ಗೆಲುವಿಗೆ ಈ ಸಾಂಗ್​ ಕೂಡ ಕಾರಣ ಎಂದರೆ ತಪ್ಪಿಲ್ಲ. ಈಗ ಅವರನ್ನು ತಮ್ಮ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದಾರೆ ಸಲ್ಮಾನ್​ ಖಾನ್​. ಆ ಮೂಲಕವಾದರೂ ಗೆಲುವು ಪಡೆಯಬೇಕು ಎಂಬುದು ಸಲ್ಲು ಲೆಕ್ಕಾಚಾರ.

ಸಲ್ಮಾನ್​ ಖಾನ್​ ನಟಿಸಿದ್ದ ‘ರೆಡಿ’ ಸಿನಿಮಾದ ‘ಡಿಂಕ ಚಿಕಾ..’ ಹಾಡಿಗೆ ದೇವಿ ಶ್ರೀ ಪ್ರಸಾದ್​ ಸಂಗೀತ ನೀಡಿದ್ದರು. ಆ ಗೀತೆ ಕೂಡ ಸೂಪರ್​ ಹಿಟ್​ ಆಗಿತ್ತು. ‘ರಾಧೆ: ಯುವರ್​ ಮೋಸ್ಟ್​ ವಾಂಡೆಟ್​ ಭಾಯ್​’ ಚಿತ್ರದಲ್ಲಿನ ‘ಸೀಟಿ ಮಾರ್​..’ ಹಾಡು ಮೂಡಿಬಂದಿದ್ದು ಕೂಡ ದೇವಿ ಶ್ರೀ ಪ್ರಸಾದ್​ ಅವರ ಬತ್ತಳಿಕೆಯಿಂದ. ಈಗ ಮತ್ತೊಮ್ಮೆ ಅಂಥದ್ದೇ ಮ್ಯಾಜಿಕ್​ ಮಾಡಲು ಅವರನ್ನು ‘ಕಭಿ ಈದ್​ ಕಭಿ ದಿವಾಲಿ’ ಚಿತ್ರತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಚಿತ್ರಕ್ಕೆ ಶೀಘ್ರವೇ ಶೂಟಿಂಗ್​ ಆರಂಭ ಆಗಲಿದೆ. ಡಿ.30ರಂದು ತೆರೆಕಾಣಿಸುವ ಗುರಿ ಇಟ್ಟುಕೊಳ್ಳಲಾಗಿದೆ.

‘ಪುಷ್ಪ’ ಸಿನಿಮಾ ತೆರೆಕಂಡ ಬಳಿಕ ಇಡೀ ದೇಶದಲ್ಲಿ ದೇವಿ ಶ್ರೀ ಪ್ರಸಾದ್​ ಅವರು ಸೆನ್ಸೇಷನ್​ ಸೃಷ್ಟಿ ಮಾಡಿದ್ದಾರೆ. ಆ ಚಿತ್ರದ ಎಲ್ಲ ಹಾಡುಗಳು ಕೂಡ ಧೂಳೆಬ್ಬಿಸಿದವು. ‘ಶ್ರೀವಲ್ಲಿ..’, ‘ಏ ಬಿಡ್ಡ..’, ‘ಉ ಅಂಟಾವಾ ಮಾವ ಊಊ ಅಂಟಾವಾ ಮಾವ..’ ಹಾಡುಗಳು ಮಾಡಿದ ಮೋಡಿ ಅಷ್ಟಿಷ್ಟಲ್ಲ. ‘ಪುಷ್ಪ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದ ವೇಳೆ ದೇವಿ ಶ್ರೀ ಪ್ರಸಾದ್​ ಅವರು ಐಟಂ ಸಾಂಗ್​ಗಳನ್ನು ಭಕ್ತಿಗೀತೆಗೆ ಹೋಲಿಸಿದ್ದರು. ಅವರ ಆ ಹೇಳಿಕೆಯಿಂದ ವಿವಾದ ಸೃಷ್ಟಿ ಆಗಿತ್ತು. ಕೆಲವರು ಅವರ ವಿರುದ್ಧ ದೂರು ದಾಖಲಿಸಿದ್ದು ಕೂಡ ವರದಿ ಆಗಿತ್ತು. ಆದರೆ ಹಾಡುಗಳು ಜನಮನ ಗೆದ್ದ ಬಳಿಕ ಆ ವಿವಾದ ತಣ್ಣಗಾಯಿತು.

ಇದನ್ನೂ ಓದಿ:

ಸೌದಿ ಮಿನಿಸ್ಟರ್​ ಜೊತೆ ಶಾರುಖ್​, ಸಲ್ಮಾನ್​​, ಅಕ್ಷಯ್​ ಕುಮಾರ್​ ಪೋಸ್; ಏನಿದು ಸಮಾಚಾರ?

‘ಸಲ್ಮಾನ್​ ಖಾನ್​ಗೆ ತಂಗಿ ಆಗಲು ಯಾರಿಗೂ ಇಷ್ಟವಿಲ್ಲ’; ತೆರೆ ಹಿಂದಿನ ಸತ್ಯ ತೆರೆದಿಟ್ಟ ನಟಿ ಸ್ವರಾ ಭಾಸ್ಕರ್​

ಸಿಎಂ ಅನುಮತಿ ಪಡೆದೇ ದೆಹಲಿಗೆ: ಡಿಕೆಶಿ ಖಡಕ್ ಮಾತಿನ ಮರ್ಮಾವೇನು?
ಸಿಎಂ ಅನುಮತಿ ಪಡೆದೇ ದೆಹಲಿಗೆ: ಡಿಕೆಶಿ ಖಡಕ್ ಮಾತಿನ ಮರ್ಮಾವೇನು?
ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್
ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್
ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ
ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ
ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ
ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ
3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ
3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ
SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ