AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆರಿಗೆ ವಂಚಿಸಲು ಸುಳ್ಳು ಲೆಕ್ಕ ನೀಡಿದ ಸೋನಂ ಕಪೂರ್​ ಪತಿ ಆನಂದ್​ ಅಹುಜಾ; ಬಹಿರಂಗವಾಗಿ ಮಾನ ಹರಾಜು

ಇತ್ತೀಚೆಗೆ ಸೋನಂ ಕಪೂರ್​ ಅವರು ಹಿಜಾಬ್​ ಕುರಿತಾಗಿ ವಿವಾದ ಮಾಡಿಕೊಂಡಿದ್ದರು. ಈಗ ಅವರ ಪತಿ ಆನಂದ್​ ಅಹುಜಾ ತೆರಿಗೆ ವಂಚನೆ ಆರೋಪ ಎದುರಿಸುವಂತಾಗಿದೆ.

ತೆರಿಗೆ ವಂಚಿಸಲು ಸುಳ್ಳು ಲೆಕ್ಕ ನೀಡಿದ ಸೋನಂ ಕಪೂರ್​ ಪತಿ ಆನಂದ್​ ಅಹುಜಾ; ಬಹಿರಂಗವಾಗಿ ಮಾನ ಹರಾಜು
ಸೋನಮ್​ ಕಪೂರ್​, ಆನಂದ್​ ಅಹುಜಾ
TV9 Web
| Updated By: ಮದನ್​ ಕುಮಾರ್​|

Updated on: Feb 13, 2022 | 3:34 PM

Share

ಸೆಲೆಬ್ರಿಟಿಗಳು ಒಂದಿಲ್ಲೊಂದು ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುತ್ತಲೇ ಇರುತ್ತಾರೆ. ನಟಿ ಸೋನಂ ಕಪೂರ್ (Sonam Kapoor) ಅವರು ಇತ್ತೀಚೆಗೆ ಹಿಜಾಬ್​ ವಿಚಾರದಲ್ಲಿ ತಲೆ ಹಾಕುವ ಮೂಲಕ ಅನೇಕರ ಆಕ್ರೋಶಕ್ಕೆ ಕಾರಣ ಆಗಿದ್ದರು. ಈಗ ಅವರ ಪತಿ ಆನಂದ್​ ಅಹುಜಾ ಅವರು ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ಉದ್ಯಮಿ ಆಗಿರುವ ಆನಂದ್​ ಅಹುಜಾ (Anand Ahuja) ಅವರು ಖಾಸಗಿ ಕಂಪನಿಯೊಂದನ್ನು ಎದುರುಹಾಕಿಕೊಂಡಿದ್ದಾರೆ. ಆ ಕಂಪನಿಯ ಸೇವೆಯಲ್ಲಿ ಕೊಂಚ ವ್ಯತ್ಯಯ ಆಗಿತ್ತು. ಅದನ್ನೇ ನೆಪವಾಗಿ ಇಟ್ಟುಕೊಂಡು ಅವರು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಎಗರಾಡಿದ್ದರು. ಈ ವಿಚಾರದಲ್ಲಿ ಸೋನಂ ಕಪೂರ್​ ಕೂಡ ಎಂಟ್ರಿ ನೀಡಿ, ಆ ಕಂಪನಿಯನ್ನು ಮನಬಂದಂತೆ ಟೀಕಿಸಿದ್ದರು. ಆದರೆ ಈ ಘಟನೆಯ ಕ್ಲೈಮ್ಯಾಕ್ಸ್​ನಲ್ಲಿ ಎಲ್ಲವೂ ಉಲ್ಟಾಪಲ್ಟಾ ಆಗಿಬಿಟ್ಟಿದೆ. ಆನಂದ್​ ಅಹುಜಾ ಅವರ ತಪ್ಪನ್ನು ಕಂಡು ಹಿಡಿಯುವ ಮೂಲಕ ಸಾರ್ವಜನಿಕವಾಗಿ ಅವರ ಮಾನವನ್ನು ಹರಾಜು ಹಾಕಲಾಗಿದೆ. ತೆರಿಗೆ ವಂಚಿಸಲು (Tax Evasion) ಆನಂದ್​ ಅಹುಜಾ ಮಾಡಿದ ಹುನ್ನಾರ ಏನು ಎಂಬುದನ್ನು ಆ ಕಂಪನಿ ಬಹಿರಂಗಪಡಿಸಿದೆ. ಇದು ಸೋನಂ ಕಪೂರ್​ಗೆ ಮುಜುಗರ ತರುವಂತಹ ಸಂಗತಿ ಆಗಿದೆ. ಈ ಕುರಿತಂತೆ ಅಭಿಮಾನಿಗಳ ವಲಯದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ.

ಆನಂದ್​ ಅವರು ವಿದೇಶದಿಂದ ಕೆಲವು ವಸ್ತುಗಳನ್ನು ತರಿಸಬೇಕಿತ್ತು. ಅದು ಸೂಕ್ತ ಸಮಯದಲ್ಲಿ ತಲುಪಿಲ್ಲ. ಆ ಕಾರಣಕ್ಕಾಗಿ ಅವರು ಖಾಸಗಿ ಶಿಪ್ಪಿಂಗ್​ ಕಂಪನಿಯನ್ನು ತರಾಟೆಗೆ ತೆಗೆದುಕೊಂಡರು. ಸೋಶಿಯಲ್​ ಮೀಡಿಯಾದಲ್ಲಿ ಆ ಕಂಪನಿ ಕುರಿತು ಖಾರದ ಮಾತುಗಳಲ್ಲಿ ಪೋಸ್ಟ್​ ಮಾಡಿದ್ದರು. ದಯವಿಟ್ಟು ಇಮೇಲ್​ ಅಥವಾ ಕಸ್ಟಮರ್​ ಕೇರ್​ ನಂಬರ್​ ಮೂಲಕ ಸಂಪರ್ಕಿಸಿ ಎಂದು ಕಂಪನಿಯವರು ಮನವಿ ಮಾಡಿಕೊಂಡರು. ಹಾಗಿದ್ದರೂ ಕೂಡ ಸೋನಂ ಮತ್ತು ಆನಂದ್​ ಅಹುಜಾ ಉದ್ಧಟತನ ಮುಂದುವರಿಸಿದರು. ಆ ಕುರಿತಂತೆ ಕೆಲವು ಪತ್ರಿಕೆಗಳಲ್ಲಿ ವರದಿ ಕೂಡ ಪ್ರಕಟ ಆಯಿತು.

ಪರಿಸ್ಥಿತಿ ಇಷ್ಟೆಲ್ಲ ಕೈ ಮೀರಿದ ಮೇಲೆ ಆ ಶಿಪ್ಪಿಂಗ್ ಕಂಪನಿಯವರು ಸೂಕ್ತವಾಗಿ ಪರಿಶೀಲನೆ ನಡೆಸಿದ್ದಾರೆ. ಅಂತಿಮವಾಗಿ ಆನಂದ್​ ಅಹುಜಾ ಅವರ ಸರಕುಗಳನ್ನು ಸರಿಯಾದ ಸಮಯಕ್ಕೆ ಯಾಕೆ ತಲುಪಿಸಲಾಗಿಲ್ಲ ಎಂಬುದು ತಿಳಿದುಬಂದಿದೆ. ತೆರಿಗೆ ವಂಚಿಸುವ ಸಲುವಾಗಿ ಆನಂದ್​ ಅಹುಜಾ ಅವರು ತಪ್ಪು ಲೆಕ್ಕ ನೀಡಿದ್ದಾರೆ. ಅದೇ ಕಾರಣದಿಂದ ಇಷ್ಟೆಲ್ಲ ವಿಳಂಬ ಆಗಿದೆ ಎಂಬುದನ್ನು ಆ ಕಂಪನಿಯವರು ಜಗಜ್ಜಾಹೀರು ಮಾಡಿದ್ದಾರೆ. ಒಟ್ಟಾರೆ ಈ ಪ್ರಕರಣದಿಂದ ಸೋನಂ ಕಪೂರ್​ ಮತ್ತು ಆನಂದ್​ ಅಹುಜಾ ಅವರಿಗೆ ಮುಖಭಂಗ ಆದಂತಾಗಿದೆ.

ಇತ್ತೀಚೆಗೆ ಸೋನಂ ಕಪೂರ್​ ಅವರು ಹಿಜಾಬ್​ ಕುರಿತಾಗಿ ವಿವಾದ ಮಾಡಿಕೊಂಡಿದ್ದರು. ಸಿಖ್​ ಧರ್ಮದವರು ಪೇಟ ಧರಿಸುವುದು ಸಂಪ್ರದಾಯ. ‘ಇದಕ್ಕೆ ಅವಕಾಶ ಇದೆ ಎಂದಾದರೆ, ಹಿಜಾಬ್​ ಧರಿಸಲು ಯಾಕೆ ಅವಕಾಶ ಇಲ್ಲ’ ಎಂಬ ಅರ್ಥದಲ್ಲಿ ಸೋನಮ್​ ಕಪೂರ್​ ಅವರು ಪ್ರಶ್ನೆ ಮಾಡಿದ್ದರು. ಇದಕ್ಕೆ ಸಿಖ್​ ಧರ್ಮದವರಿಂದ ಕಟು ಟೀಕೆ ಕೇಳಿಬಂದಿದೆ. ಈ ಎರಡರ ನಡುವೆ ಹೋಲಿಕೆ ಸರಿಯಲ್ಲ ಎಂದು ಅನೇಕರು ಗುಡುಗಿದ್ದಾರೆ.

ಇದನ್ನೂ ಓದಿ:

‘ನನಗೆ ಈ ಟಾಯ್ಲೆಟ್​ನ ಗೀಳು ಹತ್ತಿದೆ ಎಂದ ಸೋನಮ್​ ಕಪೂರ್’​; ವಿಡಿಯೋ ವೈರಲ್

ಹೊಸ ಸಿನಿಮಾ ಕೆಲಸ ಆರಂಭಿಸಿದ ಕಾಜೋಲ್​; ನಿರ್ದೇಶಕಿ ರೇವತಿ ಜೊತೆ ಕೈ ಜೋಡಿಸಿದ ನಟಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ