AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಫರ್​​ ಕಳೆದುಕೊಂಡಾಗ ಸ್ಟಾರ್​ ಮಕ್ಕಳು ಅಳುವುದಿಲ್ಲ’; ಬಾಲಿವುಡ್​ನಲ್ಲಿರುವ ಹೊರಗಿನವರನ್ನು ಟೀಕಿಸಿದ ಸೋನಾಕ್ಷಿ ಸಿನ್ಹಾ

ಸ್ಟಾರ್​ ನಟರ ಮಕ್ಕಳು ಹಾಗೂ ಹೊರಗಿನವರು ಎನ್ನುವ ಎರಡು ಕ್ಯಾಟೆಗಿರಿಯಲ್ಲಿ ಬಾಲಿವುಡ್​ಅನ್ನು ವಿಂಗಡಿಸಲಾಗುತ್ತದೆ. ಸ್ಟಾರ್​ ನಟರಿಂದ ನಮ್ಮ ಆಫರ್​ ಕೈ ತಪ್ಪಿತು ಎಂದು ಹೊರಗಿನವರು ಅನೇಕ ಬಾರಿ ಹೆಳಿಕೊಂಡಿದ್ದಾರೆ.

‘ಆಫರ್​​ ಕಳೆದುಕೊಂಡಾಗ ಸ್ಟಾರ್​ ಮಕ್ಕಳು ಅಳುವುದಿಲ್ಲ’; ಬಾಲಿವುಡ್​ನಲ್ಲಿರುವ ಹೊರಗಿನವರನ್ನು ಟೀಕಿಸಿದ ಸೋನಾಕ್ಷಿ ಸಿನ್ಹಾ
ಸೋನಾಕ್ಷಿ ಸಿನ್ಹಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Sep 29, 2021 | 9:35 PM

Share

ಬಾಲಿವುಡ್​ನಲ್ಲಿ ಸೋನಾಕ್ಷಿ ಸಿನ್ಹಾ ಬೇಡಿಕೆ ಕಳೆದುಕೊಂಡಿದ್ದಾರೆ. ಅವರಿಗೆ ಈಗ ಮೊದಲಿನಷ್ಟು ಬೇಡಿಕೆ ಉಳಿದಿಲ್ಲ. ಈ ವಿಚಾರದ ಬಗ್ಗೆ ಅವರಿಗೆ ಬೇಸರವಿದೆ. ಸ್ಟಾರ್​ ಕಿಡ್​ ಆದ ಹೊರತಾಗಿಯೂ ಸೋನಾಕ್ಷಿಗೆ ಆಫರ್​ಗಳು ಬರುತ್ತಿಲ್ಲ. ಈ ಬಗ್ಗೆ ಅವರು ಬೇಸರ ಹೊರ ಹಾಕಿದ್ದಾರೆ. ಅಲ್ಲದೆ, ಬಾಲಿವುಡ್​ನಲ್ಲಿ ಹೊರಗಿನವರನ್ನು ಪರೋಕ್ಷವಾಗಿ ಟೀಕಿಸಿದ್ದು, ನಮಗೂ ಆಫರ್​ಗಳು ಕೈತಪ್ಪುತ್ತವೆ ಎಂದು ಅವರು ಹೇಳಿಕೊಂಡಿದ್ದಾರೆ.

ಸ್ಟಾರ್​ ನಟರ ಮಕ್ಕಳು ಹಾಗೂ ಹೊರಗಿನವರು ಎನ್ನುವ ಎರಡು ವರ್ಗದಲ್ಲಿ  ಬಾಲಿವುಡ್​ಅನ್ನು ವಿಂಗಡಿಸಲಾಗುತ್ತದೆ. ಸ್ಟಾರ್​ ನಟರಿಂದ ನಮ್ಮ ಆಫರ್​ ಕೈ ತಪ್ಪಿತು ಎಂದು ಹೊರಗಿನವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಸುಶಾಂತ್​ ಸಿಂಗ್​ಗೆ ಸಿನಿಮಾಆಫರ್​ಗಳು ತಪ್ಪಿ ಹೋಗುವುದಕ್ಕೆ ಸಾಕಷ್ಟು ಸ್ಟಾರ್​​ ನಿರ್ದೇಶಕರ ಕೈವಾಡ ಇತ್ತು ಎನ್ನುವ ಆರೋಪ ಇದೆ. ಹೀಗಿರುವಾಗಲೇ ಸೋನಾಕ್ಷಿ ಈ ಬಗ್ಗೆ ಮಾತನಾಡಿದ್ದಾರೆ.

‘ನಮಗೆ ಬಂದ ಸಿನಿಮಾ ಬೇರೆಯವರ ಕೈ ಸೇರುವುದು ಸರ್ವೇ ಸಾಮಾನ್ಯ. ಈ ವಿಚಾರದಲ್ಲಿ ಸ್ಟಾರ್​ ಕಿಡ್​ಗಳನ್ನು ಎಳೆದು ತರುವ ಅವಶ್ಯಕತೆಯೇ ಇಲ್ಲ. ಸ್ಟಾರ್​ ನಟರ ಮಕ್ಕಳೂ ಸಿನಿಮಾ ಆಫರ್​ ಕಳೆದುಕೊಂಡ ಉದಾಹರಣೆ ಇದೆ. ಆದರೆ, ಅವರು ಹೋಗಿ ಎಲ್ಲರ ಎದುರು ಅತ್ತಿಲ್ಲ. ಈ ರೀತಿ ಎಲ್ಲರಿಗೂ ಆಗುತ್ತದೆ. ಇದು ಜೀವನ. ಅದನ್ನು ಎದುರಿಸಿ’ ಎಂದು ಸೋನಾಕ್ಷಿ ಕಿವಿಮಾತು ಹೇಳಿದ್ದಾರೆ.

ನಟ ಶತ್ರುಘ್ನ ಸಿನ್ಹಾ ಹಾಗೂ ಪೂನಮ್​ ಸಿನ್ಹಾ ಮಗಳು ಸೋನಾಕ್ಷಿ. ಸಲ್ಮಾನ್​ ಖಾನ್​ ನಟನೆಯ ದಬಾಂಗ್​ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರಿಗೆ ಸಾಲುಸಾಲು ಚಿತ್ರಗಳು ಸಿಕ್ಕವು. ಆದರೆ, ಇತ್ತೀಚೆಗೆ ಅವರು ನಟಿಸಿದ ಸಿನಿಮಾಗಳು ಫ್ಲಾಪ್​ ಆಗುತ್ತಿವೆ. ಹೀಗಾಗಿ, ನಿರ್ಮಾಪಕರು ಅವರ ಮನೆಯ ಕದ ತಟ್ಟುತ್ತಿಲ್ಲ. ಇತ್ತೀಚೆಗೆ ತೆರೆಕಂಡ ಅವರ ನಟನೆಯ, ‘ಭುಜ್​: ದಿ ಪ್ರೈಡ್​ ಆಫ್​ ಇಂಡಿಯಾ’ ಸಿನಿಮಾ ವಿಮರ್ಶೆಯಲ್ಲಿ ಸೋತಿದೆ. ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಸಾಲುಸಾಲು ಸಿನಿಮಾಗಳು ಫ್ಲಾಪ್​ ಆಗುತ್ತಿರುವುದಕ್ಕೆ ವೃತ್ತಿ ಜೀವನಕ್ಕೆ ಹಿನ್ನಡೆ ಆಗುತ್ತಿದೆ.

ಇದನ್ನೂ ಓದಿ: ಬಾಲಯ್ಯನ ಜೊತೆ ನಟಿಸ್ತಿಲ್ವಂತೆ ಸೋನಾಕ್ಷಿ, ಹೊಸ ಸಿನಿಮಾ ಬಗ್ಗೆ ಶೀಘ್ರವೇ ಕೊಡ್ತಾರಂತೆ ಸುದ್ದಿ

ಪ್ರಾಣಿಪ್ರಿಯರೇ ಸೋನಾಕ್ಷಿ ಸಿನ್ಹಾಳ ‘ಗಬ್ರು’ ನೋಡಿದ್ದೀರಾ?

Published On - 6:59 pm, Wed, 29 September 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!