AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಂ ಕಪೂರ್​ಗೆ ಗಿಫ್ಟ್ ಆಗಿ ಸಿಗಲಿದೆ 231 ಕೋಟಿ ರೂ. ಬೆಲೆಯ ಅಪಾರ್ಟ್​ಮೆಂಟ್

2018ರಲ್ಲಿ ಸೋನಂ ಹಾಗೂ ಆನಂದ್ ಅಹೂಜಾ ವಿವಾಹ ಆದರು. 2022ರಲ್ಲಿ ಸೋನಂಗೆ ಗಂಡು ಮಗು ಜನಿಸಿತು. ಈತನಿಗೆ ವಾಯು ಎಂದು ಹೆಸರು ಇಡಲಾಗಿದೆ. ಈ ದಂಪತಿ ಸಮಯ ಸಿಕ್ಕಾಗ ಲಂಡನ್​ನಿಂದ ಮುಂಬೈಗೆ ಬರುತ್ತಾ ಇರುತ್ತಾರೆ.  ಈಗ ಅವರಿಗೆ ದೊಡ್ಡ ಗಿಫ್ಟ್ ಸಿಗುತ್ತಿದೆ.

ಸೋನಂ ಕಪೂರ್​ಗೆ ಗಿಫ್ಟ್ ಆಗಿ ಸಿಗಲಿದೆ 231 ಕೋಟಿ ರೂ. ಬೆಲೆಯ ಅಪಾರ್ಟ್​ಮೆಂಟ್
ಆನಂದ್-ಸೋನಂ
ರಾಜೇಶ್ ದುಗ್ಗುಮನೆ
|

Updated on: Sep 14, 2024 | 6:52 AM

Share

ಸೋನಂ ಕಪೂರ್ ಅವರು ಹಾಯಾಗಿ ಸಂಸಾರ ನಡೆಸಿಕೊಂಡಿದ್ದಾರೆ. ಅವರು ಉದ್ಯಮಿ ಆನಂದ್ ಅಹೂಜಾ ಅವರನ್ನು ವರಿಸಿದ್ದು, ಲಂಡನ್​ನಲ್ಲಿ ಸೆಟಲ್ ಆಗಿದ್ದಾರೆ. ಬಾಲಿವುಡ್​ನಲ್ಲಿ ಅಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ. ಅವರ ಮಾವ ಈಗ ಲಂಡನ್​ನ ನೋಟಿಂಗ್ ಹಿಲ್​ ಜಿಲ್ಲೆಯಲ್ಲಿ ಪ್ರಾಪರ್ಟಿ ಖರೀದಿ ಮಾಡಿದ್ದಾರೆ. ಇದು ಎಂಟಸ್ತಿನ ಕಟ್ಟಡ ಆಗಿದ್ದು, ಇದರ ಬೆಲೆ ಬರೋಬ್ಬರಿ 231.47 ಕೋಟಿ ರೂಪಾಯಿ. ಇಂಗ್ಲೆಂಡ್​ನಲ್ಲಿ ನಡೆದ ದೊಡ್ಡ ಡೀಲ್​ಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗಿದೆ. ಮಗ ಹಾಗೂ ಸೊಸೆಗೆ ಇದನ್ನು ಉಡುಗೊರೆಯಾಗಿ ನೀಡುವ ಆಲೋಚನೆಯಲ್ಲಿ ಅವರಿದ್ದಾರಂತೆ.

ಚಾರಿಟೆಬಲ್ ಆರ್ಗನೈಸೇಷನ್​ನವರು ಈ ಕಟ್ಟಡವನ್ನು ಹೊಂದಿದ್ದರು. ಇದು ಪ್ರಮುಖ ಜಾಗದಲ್ಲಿ ಇತ್ತು. ಇದನ್ನು ಖರೀದಿ ಮಾಡಿ ಮಗ ಆನಂದ್ ಹಾಗೂ ಸೊಸೆ ಸೋನಂ ಕಪೂರ್​ಗೆ ಬಿಟ್ಟುಕೊಡಬೇಕು ಎನ್ನುವ ಆಲೋಚನೆ ಅವರಿಗೆ ಬಂದಿದೆ. ಇದು ಲಕ್ಷುರಿ ಅಪಾರ್ಟ್​ಮೆಂಟ್ ಆಗಿ ಬದಲಾಗಲಿದೆ.

2018ರಲ್ಲಿ ಸೋನಂ ಹಾಗೂ ಆನಂದ್ ಅಹೂಜಾ ವಿವಾಹ ಆದರು. 2022ರಲ್ಲಿ ಸೋನಂಗೆ ಗಂಡು ಮಗು ಜನಿಸಿತು. ಈತನಿಗೆ ವಾಯು ಎಂದು ಹೆಸರು ಇಡಲಾಗಿದೆ. ಈ ದಂಪತಿ ಸಮಯ ಸಿಕ್ಕಾಗ ಲಂಡನ್​ನಿಂದ ಮುಂಬೈಗೆ ಬರುತ್ತಾ ಇರುತ್ತಾರೆ.

ಸೋನಂ ಕಪೂರ್ ಅವರು ಲಂಡನ್​ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಈ ಮೊದಲು ಅವರು ಈ ಮನೆಯ ಟೂರ್​ನ ಫ್ಯಾನ್ಸ್​ಗೆ ನೀಡಿದ್ದರು. ಈಗ ಅವರ ಮಾವ ಖರೀದಿಸಿರೋ ಹೊಸ ಮನೆ ಯಾವ ರೀತಿಯಲ್ಲಿ ಇದೆ ಎನ್ನುವ ಕುತೂಹಲ ಫ್ಯಾನ್ಸ್​ನ ಕಾಡಿದೆ. ಇದನ್ನು ಅವರು ಮುಂದಿನ ದಿನಗಳಲ್ಲಿ ತೋರಿಸಬಹುದು.

ಇದನ್ನೂ ಓದಿ: ಬಟ್ಟೆಗಳಿಗಾಗಿ ವರ್ಷಕ್ಕೆ ಎಷ್ಟು ಕೋಟಿ ಖರ್ಚು ಮಾಡುತ್ತಾರೆ ನಟಿ ಸೋನಂ ಕಪೂರ್

ಸೋನಂ ಕಪೂರ್ ಹಾಗೂ ಆನಂದ್ ಅಹೂಜಾ ಅವರು ಮುಂಬೈನಲ್ಲಿ ದುಬಾರಿ ಮನೆ ಹೊಂದಿದ್ದಾರೆ. ಈ ಮನೆಯಲ್ಲಿ ಸಾಕಷ್ಟು ಆರ್ಟ್​ವರ್ಕ್​ಗಳನ್ನು ಸೋನಂ ಕಲೆಕ್ಟ್​ ಮಾಡಿದ್ದಾರೆ. ಅವರು ಬೇರೆ ಬೇರೆ ಕಡೆ ತೆರಳಿದಾಗ ಒಂದಷ್ಟು ವಿಚಾರಗಳನ್ನು ಕಲೆ ಹಾಕಿ ತಂದಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!