AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಂ ಕಪೂರ್​ಗೆ ಗಿಫ್ಟ್ ಆಗಿ ಸಿಗಲಿದೆ 231 ಕೋಟಿ ರೂ. ಬೆಲೆಯ ಅಪಾರ್ಟ್​ಮೆಂಟ್

2018ರಲ್ಲಿ ಸೋನಂ ಹಾಗೂ ಆನಂದ್ ಅಹೂಜಾ ವಿವಾಹ ಆದರು. 2022ರಲ್ಲಿ ಸೋನಂಗೆ ಗಂಡು ಮಗು ಜನಿಸಿತು. ಈತನಿಗೆ ವಾಯು ಎಂದು ಹೆಸರು ಇಡಲಾಗಿದೆ. ಈ ದಂಪತಿ ಸಮಯ ಸಿಕ್ಕಾಗ ಲಂಡನ್​ನಿಂದ ಮುಂಬೈಗೆ ಬರುತ್ತಾ ಇರುತ್ತಾರೆ.  ಈಗ ಅವರಿಗೆ ದೊಡ್ಡ ಗಿಫ್ಟ್ ಸಿಗುತ್ತಿದೆ.

ಸೋನಂ ಕಪೂರ್​ಗೆ ಗಿಫ್ಟ್ ಆಗಿ ಸಿಗಲಿದೆ 231 ಕೋಟಿ ರೂ. ಬೆಲೆಯ ಅಪಾರ್ಟ್​ಮೆಂಟ್
ಆನಂದ್-ಸೋನಂ
ರಾಜೇಶ್ ದುಗ್ಗುಮನೆ
|

Updated on: Sep 14, 2024 | 6:52 AM

Share

ಸೋನಂ ಕಪೂರ್ ಅವರು ಹಾಯಾಗಿ ಸಂಸಾರ ನಡೆಸಿಕೊಂಡಿದ್ದಾರೆ. ಅವರು ಉದ್ಯಮಿ ಆನಂದ್ ಅಹೂಜಾ ಅವರನ್ನು ವರಿಸಿದ್ದು, ಲಂಡನ್​ನಲ್ಲಿ ಸೆಟಲ್ ಆಗಿದ್ದಾರೆ. ಬಾಲಿವುಡ್​ನಲ್ಲಿ ಅಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ. ಅವರ ಮಾವ ಈಗ ಲಂಡನ್​ನ ನೋಟಿಂಗ್ ಹಿಲ್​ ಜಿಲ್ಲೆಯಲ್ಲಿ ಪ್ರಾಪರ್ಟಿ ಖರೀದಿ ಮಾಡಿದ್ದಾರೆ. ಇದು ಎಂಟಸ್ತಿನ ಕಟ್ಟಡ ಆಗಿದ್ದು, ಇದರ ಬೆಲೆ ಬರೋಬ್ಬರಿ 231.47 ಕೋಟಿ ರೂಪಾಯಿ. ಇಂಗ್ಲೆಂಡ್​ನಲ್ಲಿ ನಡೆದ ದೊಡ್ಡ ಡೀಲ್​ಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗಿದೆ. ಮಗ ಹಾಗೂ ಸೊಸೆಗೆ ಇದನ್ನು ಉಡುಗೊರೆಯಾಗಿ ನೀಡುವ ಆಲೋಚನೆಯಲ್ಲಿ ಅವರಿದ್ದಾರಂತೆ.

ಚಾರಿಟೆಬಲ್ ಆರ್ಗನೈಸೇಷನ್​ನವರು ಈ ಕಟ್ಟಡವನ್ನು ಹೊಂದಿದ್ದರು. ಇದು ಪ್ರಮುಖ ಜಾಗದಲ್ಲಿ ಇತ್ತು. ಇದನ್ನು ಖರೀದಿ ಮಾಡಿ ಮಗ ಆನಂದ್ ಹಾಗೂ ಸೊಸೆ ಸೋನಂ ಕಪೂರ್​ಗೆ ಬಿಟ್ಟುಕೊಡಬೇಕು ಎನ್ನುವ ಆಲೋಚನೆ ಅವರಿಗೆ ಬಂದಿದೆ. ಇದು ಲಕ್ಷುರಿ ಅಪಾರ್ಟ್​ಮೆಂಟ್ ಆಗಿ ಬದಲಾಗಲಿದೆ.

2018ರಲ್ಲಿ ಸೋನಂ ಹಾಗೂ ಆನಂದ್ ಅಹೂಜಾ ವಿವಾಹ ಆದರು. 2022ರಲ್ಲಿ ಸೋನಂಗೆ ಗಂಡು ಮಗು ಜನಿಸಿತು. ಈತನಿಗೆ ವಾಯು ಎಂದು ಹೆಸರು ಇಡಲಾಗಿದೆ. ಈ ದಂಪತಿ ಸಮಯ ಸಿಕ್ಕಾಗ ಲಂಡನ್​ನಿಂದ ಮುಂಬೈಗೆ ಬರುತ್ತಾ ಇರುತ್ತಾರೆ.

ಸೋನಂ ಕಪೂರ್ ಅವರು ಲಂಡನ್​ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಈ ಮೊದಲು ಅವರು ಈ ಮನೆಯ ಟೂರ್​ನ ಫ್ಯಾನ್ಸ್​ಗೆ ನೀಡಿದ್ದರು. ಈಗ ಅವರ ಮಾವ ಖರೀದಿಸಿರೋ ಹೊಸ ಮನೆ ಯಾವ ರೀತಿಯಲ್ಲಿ ಇದೆ ಎನ್ನುವ ಕುತೂಹಲ ಫ್ಯಾನ್ಸ್​ನ ಕಾಡಿದೆ. ಇದನ್ನು ಅವರು ಮುಂದಿನ ದಿನಗಳಲ್ಲಿ ತೋರಿಸಬಹುದು.

ಇದನ್ನೂ ಓದಿ: ಬಟ್ಟೆಗಳಿಗಾಗಿ ವರ್ಷಕ್ಕೆ ಎಷ್ಟು ಕೋಟಿ ಖರ್ಚು ಮಾಡುತ್ತಾರೆ ನಟಿ ಸೋನಂ ಕಪೂರ್

ಸೋನಂ ಕಪೂರ್ ಹಾಗೂ ಆನಂದ್ ಅಹೂಜಾ ಅವರು ಮುಂಬೈನಲ್ಲಿ ದುಬಾರಿ ಮನೆ ಹೊಂದಿದ್ದಾರೆ. ಈ ಮನೆಯಲ್ಲಿ ಸಾಕಷ್ಟು ಆರ್ಟ್​ವರ್ಕ್​ಗಳನ್ನು ಸೋನಂ ಕಲೆಕ್ಟ್​ ಮಾಡಿದ್ದಾರೆ. ಅವರು ಬೇರೆ ಬೇರೆ ಕಡೆ ತೆರಳಿದಾಗ ಒಂದಷ್ಟು ವಿಚಾರಗಳನ್ನು ಕಲೆ ಹಾಕಿ ತಂದಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ
ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ
ದೇವೇಗೌಡರ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ: ಆಸ್ಪತ್ರೆಗೆ ಧಾವಿಸಿದ HDK
ದೇವೇಗೌಡರ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ: ಆಸ್ಪತ್ರೆಗೆ ಧಾವಿಸಿದ HDK
SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ
SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ
ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಹೈಕಮಾಂಡ್​​ ಮಣೆ?
ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಹೈಕಮಾಂಡ್​​ ಮಣೆ?
ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ
ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ
ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ
ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ