AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಂ ಕಪೂರ್​ಗೆ ಗಿಫ್ಟ್ ಆಗಿ ಸಿಗಲಿದೆ 231 ಕೋಟಿ ರೂ. ಬೆಲೆಯ ಅಪಾರ್ಟ್​ಮೆಂಟ್

2018ರಲ್ಲಿ ಸೋನಂ ಹಾಗೂ ಆನಂದ್ ಅಹೂಜಾ ವಿವಾಹ ಆದರು. 2022ರಲ್ಲಿ ಸೋನಂಗೆ ಗಂಡು ಮಗು ಜನಿಸಿತು. ಈತನಿಗೆ ವಾಯು ಎಂದು ಹೆಸರು ಇಡಲಾಗಿದೆ. ಈ ದಂಪತಿ ಸಮಯ ಸಿಕ್ಕಾಗ ಲಂಡನ್​ನಿಂದ ಮುಂಬೈಗೆ ಬರುತ್ತಾ ಇರುತ್ತಾರೆ.  ಈಗ ಅವರಿಗೆ ದೊಡ್ಡ ಗಿಫ್ಟ್ ಸಿಗುತ್ತಿದೆ.

ಸೋನಂ ಕಪೂರ್​ಗೆ ಗಿಫ್ಟ್ ಆಗಿ ಸಿಗಲಿದೆ 231 ಕೋಟಿ ರೂ. ಬೆಲೆಯ ಅಪಾರ್ಟ್​ಮೆಂಟ್
ಆನಂದ್-ಸೋನಂ
ರಾಜೇಶ್ ದುಗ್ಗುಮನೆ
|

Updated on: Sep 14, 2024 | 6:52 AM

Share

ಸೋನಂ ಕಪೂರ್ ಅವರು ಹಾಯಾಗಿ ಸಂಸಾರ ನಡೆಸಿಕೊಂಡಿದ್ದಾರೆ. ಅವರು ಉದ್ಯಮಿ ಆನಂದ್ ಅಹೂಜಾ ಅವರನ್ನು ವರಿಸಿದ್ದು, ಲಂಡನ್​ನಲ್ಲಿ ಸೆಟಲ್ ಆಗಿದ್ದಾರೆ. ಬಾಲಿವುಡ್​ನಲ್ಲಿ ಅಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ. ಅವರ ಮಾವ ಈಗ ಲಂಡನ್​ನ ನೋಟಿಂಗ್ ಹಿಲ್​ ಜಿಲ್ಲೆಯಲ್ಲಿ ಪ್ರಾಪರ್ಟಿ ಖರೀದಿ ಮಾಡಿದ್ದಾರೆ. ಇದು ಎಂಟಸ್ತಿನ ಕಟ್ಟಡ ಆಗಿದ್ದು, ಇದರ ಬೆಲೆ ಬರೋಬ್ಬರಿ 231.47 ಕೋಟಿ ರೂಪಾಯಿ. ಇಂಗ್ಲೆಂಡ್​ನಲ್ಲಿ ನಡೆದ ದೊಡ್ಡ ಡೀಲ್​ಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗಿದೆ. ಮಗ ಹಾಗೂ ಸೊಸೆಗೆ ಇದನ್ನು ಉಡುಗೊರೆಯಾಗಿ ನೀಡುವ ಆಲೋಚನೆಯಲ್ಲಿ ಅವರಿದ್ದಾರಂತೆ.

ಚಾರಿಟೆಬಲ್ ಆರ್ಗನೈಸೇಷನ್​ನವರು ಈ ಕಟ್ಟಡವನ್ನು ಹೊಂದಿದ್ದರು. ಇದು ಪ್ರಮುಖ ಜಾಗದಲ್ಲಿ ಇತ್ತು. ಇದನ್ನು ಖರೀದಿ ಮಾಡಿ ಮಗ ಆನಂದ್ ಹಾಗೂ ಸೊಸೆ ಸೋನಂ ಕಪೂರ್​ಗೆ ಬಿಟ್ಟುಕೊಡಬೇಕು ಎನ್ನುವ ಆಲೋಚನೆ ಅವರಿಗೆ ಬಂದಿದೆ. ಇದು ಲಕ್ಷುರಿ ಅಪಾರ್ಟ್​ಮೆಂಟ್ ಆಗಿ ಬದಲಾಗಲಿದೆ.

2018ರಲ್ಲಿ ಸೋನಂ ಹಾಗೂ ಆನಂದ್ ಅಹೂಜಾ ವಿವಾಹ ಆದರು. 2022ರಲ್ಲಿ ಸೋನಂಗೆ ಗಂಡು ಮಗು ಜನಿಸಿತು. ಈತನಿಗೆ ವಾಯು ಎಂದು ಹೆಸರು ಇಡಲಾಗಿದೆ. ಈ ದಂಪತಿ ಸಮಯ ಸಿಕ್ಕಾಗ ಲಂಡನ್​ನಿಂದ ಮುಂಬೈಗೆ ಬರುತ್ತಾ ಇರುತ್ತಾರೆ.

ಸೋನಂ ಕಪೂರ್ ಅವರು ಲಂಡನ್​ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಈ ಮೊದಲು ಅವರು ಈ ಮನೆಯ ಟೂರ್​ನ ಫ್ಯಾನ್ಸ್​ಗೆ ನೀಡಿದ್ದರು. ಈಗ ಅವರ ಮಾವ ಖರೀದಿಸಿರೋ ಹೊಸ ಮನೆ ಯಾವ ರೀತಿಯಲ್ಲಿ ಇದೆ ಎನ್ನುವ ಕುತೂಹಲ ಫ್ಯಾನ್ಸ್​ನ ಕಾಡಿದೆ. ಇದನ್ನು ಅವರು ಮುಂದಿನ ದಿನಗಳಲ್ಲಿ ತೋರಿಸಬಹುದು.

ಇದನ್ನೂ ಓದಿ: ಬಟ್ಟೆಗಳಿಗಾಗಿ ವರ್ಷಕ್ಕೆ ಎಷ್ಟು ಕೋಟಿ ಖರ್ಚು ಮಾಡುತ್ತಾರೆ ನಟಿ ಸೋನಂ ಕಪೂರ್

ಸೋನಂ ಕಪೂರ್ ಹಾಗೂ ಆನಂದ್ ಅಹೂಜಾ ಅವರು ಮುಂಬೈನಲ್ಲಿ ದುಬಾರಿ ಮನೆ ಹೊಂದಿದ್ದಾರೆ. ಈ ಮನೆಯಲ್ಲಿ ಸಾಕಷ್ಟು ಆರ್ಟ್​ವರ್ಕ್​ಗಳನ್ನು ಸೋನಂ ಕಲೆಕ್ಟ್​ ಮಾಡಿದ್ದಾರೆ. ಅವರು ಬೇರೆ ಬೇರೆ ಕಡೆ ತೆರಳಿದಾಗ ಒಂದಷ್ಟು ವಿಚಾರಗಳನ್ನು ಕಲೆ ಹಾಕಿ ತಂದಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ