AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕ್ಸ್​​ ಆಫೀಸ್​ನಲ್ಲಿ ಲಾಟರಿ ಹೊಡೆದ ಅಕ್ಷಯ್​ ಕುಮಾರ್​; ಗಳಿಕೆಯಲ್ಲಿ ‘ಸೂರ್ಯವಂಶಿ’ ಕಮಾಲ್​

ನವೆಂಬರ್​ 5ರಂದು ‘ಸೂರ್ಯವಂಶಿ’ ತೆರೆಗೆ ಬಂದಿತ್ತು. ಈ ಚಿತ್ರಕ್ಕೆ ವಿಮರ್ಶಕರಿಂದ ಮೆಚ್ಚುಗೆ ಕೇಳಿ ಬಂತು. ಪ್ರೇಕ್ಷಕರು ಕೂಡ ಸಿನಿಮಾ ಇಷ್ಟಪಟ್ಟರು. ಪರಿಣಾಮ ‘ಸೂರ್ಯವಂಶಿ’ ಬಾಕ್ಸ್​ ಆಫೀಸ್​ ಕಲೆಕ್ಷನ್​ ಹೆಚ್ಚುತ್ತಿದೆ.

ಬಾಕ್ಸ್​​ ಆಫೀಸ್​ನಲ್ಲಿ ಲಾಟರಿ ಹೊಡೆದ ಅಕ್ಷಯ್​ ಕುಮಾರ್​; ಗಳಿಕೆಯಲ್ಲಿ ‘ಸೂರ್ಯವಂಶಿ’ ಕಮಾಲ್​
‘ಸೂರ್ಯವಂಶಿ’ ಸಿನಿಮಾ ಪೋಸ್ಟರ್​
TV9 Web
| Edited By: |

Updated on: Nov 14, 2021 | 1:42 PM

Share

ಅಕ್ಷಯ್​ ಕುಮಾರ್​ (Akshay Kumar) ಸಾಲುಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರೆ. ಒಪ್ಪಿಕೊಂಡ ವೇಗದಲ್ಲೇ ಅವರು ಒಪ್ಪಿಕೊಂಡ ಕೆಲಸ ಪೂರ್ಣಗೊಳಿಸುತ್ತಾರೆ. ಅವರ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಕಮಾಲ್​ ಮಾಡುತ್ತವೆ. ಈ ಕಾರಣಕ್ಕೆ ನಿರ್ಮಾಪಕರು ಕೂಡ ಅಕ್ಕಿ ಜತೆ ಕೆಲಸ ಮಾಡೋಕೆ ಅಂಜುವುದಿಲ್ಲ. ಆದರೆ, ಅವರ ನಟನೆಯ ‘ಬೆಲ್​ ಬಾಟಮ್​’ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸೋತಿತ್ತು. ಉತ್ತಮ ವಿಮರ್ಶೆ ಸಿಕ್ಕ ಹೊರತಾಗಿಯೂ ಸಿನಿಮಾ ಸೋತಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಈ ಕಾರಣಕ್ಕೆ ಬಾಲಿವುಡ್​ ಮಂದಿ ಸಿನಿಮಾ ರಿಲೀಸ್​ ಮಾಡೋಕೆ ಹಿಂದೇಟು ಹಾಕಿದ್ದರು. ಈ ಸಮಯದಲ್ಲೇ ಅಕ್ಷಯ್​ ಕುಮಾರ್​ ನಟನೆಯ ಮತ್ತೊಂದು ಚಿತ್ರ ತೆರೆಗೆ ಬಂದು ಕಮಾಲ್​ ಮಾಡಿದೆ. ದೀಪಾವಳಿ ನಿಮಿತ್ತ ತೆರೆಗೆ ಬಂದ ‘ಸೂರ್ಯವಂಶಿ’ ಸಿನಿಮಾ (Sooryavanshi Movie) ಒಳ್ಳೆಯ ಗಳಿಕೆ ಮಾಡುತ್ತಿದೆ. 

ನವೆಂಬರ್​ 5ರಂದು ‘ಸೂರ್ಯವಂಶಿ’ ತೆರೆಗೆ ಬಂದಿತ್ತು. ಈ ಚಿತ್ರಕ್ಕೆ ವಿಮರ್ಶಕರಿಂದ ಮೆಚ್ಚುಗೆ ಕೇಳಿ ಬಂತು. ಪ್ರೇಕ್ಷಕರು ಕೂಡ ಸಿನಿಮಾ ಇಷ್ಟಪಟ್ಟರು. ಪರಿಣಾಮ ‘ಸೂರ್ಯವಂಶಿ’ ಬಾಕ್ಸ್​ ಆಫೀಸ್​ ಕಲೆಕ್ಷನ್​ ಹೆಚ್ಚುತ್ತಿದೆ. ಶನಿವಾರ (ನವೆಂಬರ್​ 13) ಈ ಸಿನಿಮಾ 10.50 ಕೋಟಿ ಗಳಿಸಿದೆ. ಈ ಮೂಲಕ ಚಿತ್ರದ ಬಾಕ್ಸ್​ ಆಫೀಸ್​ ಗಳಿಕೆ 138 ಕೋಟಿ ಆಗಿದೆ. ಇಂದು (ನವೆಂಬರ್​ 14) ಭಾನುವಾರ ಆಗಿರುವುದರಿಂದ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚಬಹುದು. ಈ ಮೂಲಕ ಚಿತ್ರ ಅನಾಯಾಸವಾಗಿ 150 ಕೋಟಿ ರೂಪಾಯಿ ಗಳಿಕೆ ಮಾಡಲಿದೆ.

ಸಾಕಷ್ಟು ಚಿತ್ರ ತಂಡಗಳು ರಿಲೀಸ್​ ಮಾಡೋಕೆ ಹಿಂದೇಟು ಹಾಕುತ್ತಿದ್ದವು. ಇನ್ನೂ ಕೆಲ ಸಿನಿಮಾಗಳು ನೇರವಾಗಿ ಒಟಿಟಿ ಮೊರೆ ಹೋಗಿದ್ದವು. ಈಗ ‘ಸೂರ್ಯವಂಶಿ’ ಬಾಕ್ಸ್​ ಆಫೀಸ್​ ಗಳಿಕೆ ನೋಡಿ ಎಲ್ಲರಿಗೂ ಹೊಸ ಹುರುಪು ಸಿಕ್ಕಿದೆ. ಈ ಮೂಲಕ ಸಿನಿಮಾವನ್ನು ನೇರವಾಗಿ ಚಿತ್ರಮಂದಿರದಲ್ಲೇ ರಿಲೀಸ್​ ಮಾಡುವ ನಿರ್ಧಾರಕ್ಕೆ ಬರುತ್ತಿದ್ದಾರೆ. ಅಕ್ಷಯ್​ ಕುಮಾರ್​ ಚಿತ್ರ ರಿಲೀಸ್​ ಆದ ದಿನವೇ ಲೀಕ್​ ಆಗಿತ್ತು. ಕೆಲ ಆನ್​ಲೈನ್​ ತಾಣಗಳಲ್ಲಿ ಸಿನಿಮಾದ ಪ್ರತಿ ಹರಿದಾಡಿತ್ತು. ಆದಾಗ್ಯೂ, ಗಳಿಕೆಯಲ್ಲಿ ಕೊಂಚವೂ ಕುಗ್ಗಿಲ್ಲ. ಇದು ಚಿತ್ರತಂಡದ ಸಂತಸವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಮಂಕಾಗಿದ್ದ ಚಿತ್ರಮಂದಿರಗಳ ವಹಿವಾಟಿಗೆ ಮರುಜೀವ ನೀಡಿದ ಅಣ್ಣಾಥೆ, ಸೂರ್ಯವಂಶಿ, ಎಟರ್ನಲ್ಸ್​

ಬಾಕ್ಸಾಫೀಸ್ ಲೂಟಿ‌ ಮಾಡುತ್ತಿರುವ ಸೂರ್ಯವಂಶಿ ಚಿತ್ರಕ್ಕೆ ಅಕ್ಷಯ್, ಕತ್ರಿನಾ ಪಡೆದ ಸಂಭಾವನೆ ಇಷ್ಟೊಂದಾ?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್