AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ಬಾರಿ ಅಕ್ಷಯ್​ ಕುಮಾರ್​ ಕೆನ್ನೆಗೆ ಬಾರಿಸಿದ ಕತ್ರಿನಾ ಕೈಫ್​; ಇದನ್ನೆಲ್ಲ ಅಕ್ಕಿ ಸಹಿಸಿಕೊಂಡಿದ್ದೇಕೆ?

‘ನನ್ನ ಕೆನ್ನೆಗೆ ಗಟ್ಟಿಯಾಗಿ ಬಾರಿಸಿ’ ಎಂದು ಅಕ್ಷಯ್​ ಕುಮಾರ್​ ಕೂಗಿದಾಗ ಕತ್ರಿನಾ ಕೈಫ್​ ಜೋರಾಗಿ ಹೊಡೆದೇಬಿಟ್ಟಿದ್ದರು! ಆಗ ಸೆಟ್​ನಲ್ಲಿ ಇದ್ದವರೆಲ್ಲ ತಬ್ಬಿಬ್ಬಾಗಿ ನೋಡುತ್ತಿದ್ದರು.

2 ಬಾರಿ ಅಕ್ಷಯ್​ ಕುಮಾರ್​ ಕೆನ್ನೆಗೆ ಬಾರಿಸಿದ ಕತ್ರಿನಾ ಕೈಫ್​; ಇದನ್ನೆಲ್ಲ ಅಕ್ಕಿ ಸಹಿಸಿಕೊಂಡಿದ್ದೇಕೆ?
Follow us
TV9 Web
| Updated By: ಮದನ್​ ಕುಮಾರ್​

Updated on: Nov 05, 2021 | 8:16 AM

ನಟ ಅಕ್ಷಯ್​ ಕುಮಾರ್​ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರ ಬಗ್ಗೆ ಕಾಳಜಿ ತೋರಿಸಲು ಹಲವು ಮಂದಿ ಇದ್ದಾರೆ. ಜನ ಜಂಗುಳಿ ಇರುವಾಗ ಯಾರೂ ಅವರನ್ನು ಟಚ್​ ಮಾಡದಂತೆ ನೋಡಕೊಳ್ಳಲು ಬಾಡಿ ಗಾರ್ಡ್ಸ್​ ಇದ್ದಾರೆ. ಒಂದು ವೇಳೆ ಅಕ್ಷಯ್​ ಕುಮಾರ್​ ಮೇಲೆ ಯಾರಾದರೂ ಕೈ ಮಾಡಿದರೆ ಅವರ ಕಥೆ ಮುಗಿಯಿತು ಎಂದೇ ಅರ್ಥ. ಆದರೆ ಕತ್ರಿನಾ ಕೈಫ್​ ಅವರು ಎರಡು ಬಾರಿ ಅಕ್ಷಯ್​ ಕುಮಾರ್​ ಕೆನ್ನೆಗೆ ಬಾರಿಸಿದ್ದಾರೆ. ಹಾಗಿದ್ದರೂ ಕೂಡ ಅವರ ಮೇಲೆ ಅಕ್ಕಿ ಸಿಟ್ಟಾಗಿಲ್ಲ. ಎಲ್ಲವನ್ನೂ ಸಹಿಸಿಕೊಂಡು ಅವರು ಸುಮ್ಮನಾಗಿದ್ದಾರೆ!

ಸಿಂಗ್​ ಈಸ್​ ಕಿಂಗ್​, ನಮಸ್ತೆ ಲಂಡನ್​, ತೀಸ್​ ಮಾರ್​ ಖಾನ್, ವೆಲ್​ಕಮ್​​ ಮುಂತಾದ ಸಿನಿಮಾಗಳಲ್ಲಿ ಅಕ್ಷಯ್​ ಕುಮಾರ್​ ಮತ್ತು ಕತ್ರಿನಾ ಕೈಫ್​ ಜೊತೆಯಾಗಿ ನಟಿಸಿದ್ದಾರೆ. ಈಗ ಅವರು ‘ಸೂರ್ಯವಂಶಿ’ ಸಿನಿಮಾದಲ್ಲಿ ಮತ್ತೆ ಜೋಡಿಯಾಗಿದ್ದಾರೆ. ಈ ಚಿತ್ರ ಇಂದು (ನ.5) ವಿಶ್ವಾದ್ಯಂತ ಬಿಡುಗಡೆ ಆಗಿದೆ. ‘ಸೂರ್ಯವಂಶಿ’ ಶೂಟಿಂಗ್​ ವೇಳೆ ಅಕ್ಕಿ ಕೆನ್ನೆಗೆ ಕತ್ರಿನಾ ಬಾರಿಸಿದ್ದಾರೆ. ಚಿತ್ರೀಕರಣದಲ್ಲಿ ಕೆನ್ನೆಗೆ ಹೊಡೆಯುವ ದೃಶ್ಯ ಇದ್ದರೆ, ಯಾರೂ ಕೂಡ ನಿಜವಾಗಿಯೂ ಹೊಡೆಯುವುದಿಲ್ಲ. ಕೇವಲ ಹೊಡೆದಂತೆ ನಟಿಸುತ್ತಾರೆ. ಆದರೆ ಕತ್ರಿನಾ ನಿಜವಾಗಿಯೂ ಹೊಡೆದಿದ್ದಾರೆ.

‘ಸೂರ್ಯವಂಶಿ’ ಚಿತ್ರದಲ್ಲಿ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಅಕ್ಷಯ್​ ಕುಮಾರ್​ ನಟಿಸಿದ್ದು, ಅವರ ಪತ್ನಿ ಪಾತ್ರದಲ್ಲಿ ಕತ್ರಿನಾ ಕೈಫ್​ ಕಾಣಿಸಿಕೊಂಡಿದ್ದಾರೆ. ‘ಕೆನ್ನೆಗೆ ಹೊಡೆಯುವ ದೃಶ್ಯದಲ್ಲಿ ನಾನು ರೀಟೇಕ್​ ತೆಗೆದುಕೊಳ್ಳಲಿಲ್ಲ. ಅಕ್ಷಯ್​ ಕುಮಾರ್​ ಕೆನ್ನೆಗೆ ಒಂದೇ ಟೇಕ್​ನಲ್ಲಿ ಬಾರಿಸಿದೆ’ ಎಂದು ಕತ್ರಿನಾ ಹೇಳಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಅಕ್ಷಯ್​ಕುಮಾರ್​ ವಿವರಿಸಿದ್ದಾರೆ. ‘ಹೊಡೆದಂತೆ ನಟಿಸಿದಾಗ ಕೆನ್ನೆ ಮತ್ತು ಕೈ ನಡುವೆ ಗ್ಯಾಪ್​ ಕಾಣಿಸುತ್ತದೆ. ಆ ಗ್ಯಾಪ್​ ತುಂಬಲು ಇವರು ನನಗೆ ನಿಜವಾಗಿಯೂ ಹೊಡೆದರು’ ಎಂದು ಅಕ್ಕಿ ಹೇಳಿದ್ದಾರೆ. ಸಿನಿಮಾದ ದೃಶ್ಯಗಳು ನೈಜವಾಗಿ ಮೂಡಿಬರಬೇಕು ಎಂಬುದು ಅಕ್ಷಯ್​ ಕುಮಾರ್​ ಅವರ ಮುಖ್ಯ ಉದ್ದೇಶ. ಹಾಗಾಗಿ ಅವರು ಈ ಹೊಡೆತವನ್ನು ಸಹಿಸಿಕೊಂಡರು.

ಈ ಹಿಂದೆ ‘ವೆಲ್​ಕಮ್​’ ಸಿನಿಮಾದ ಸಂದರ್ಭದಲ್ಲೂ ಹೀಗೆಯೇ ಆಗಿತ್ತು. ಕೆನ್ನೆಗೆ ಹೊಡೆಯಬೇಕಾದ ದೃಶ್ಯದ ಶೂಟಿಂಗ್​ ವೇಳೆ ಕತ್ರಿನಾ ತುಂಬ ಅಂಜಿಕೊಳ್ಳುತ್ತಿದ್ದರು. ಅದರಿಂದ ಚಿತ್ರೀಕರಣ ತಡವಾಗುತ್ತಿತ್ತು. ಲೇಟ್​ ಆಗುತ್ತಿದ್ದರಿಂದ ಅಕ್ಕಿ ಕೂಡ ರೋಸಿ ಹೋಗಿದ್ದರು. ‘ನನ್ನ ಕೆನ್ನೆಗೆ ಗಟ್ಟಿಯಾಗಿ ಬಾರಿಸಿ’ ಎಂದು ಅವರು ಕೂಗಿದಾಗ ಅನಿವಾರ್ಯವಾಗಿ ಕತ್ರಿನಾ ಜೋರಾಗಿ ಹೊಡೆದೇಬಿಟ್ಟಿದ್ದರು! ಆಗ ಇಡೀ ಸೆಟ್​ನಲ್ಲಿ ಇದ್ದವರೆಲ್ಲ ತಬ್ಬಿಬ್ಬಾಗಿ ನೋಡುತ್ತಿದ್ದರು. ಹೀಗೆ ‘ವೆಲ್​ಕಮ್​’ ಮತ್ತು ‘ಸೂರ್ಯವಂಶಿ’ ಸಿನಿಮಾದಲ್ಲಿ ಎರಡು ಬಾರಿ ಅಕ್ಕಿ ಕೆನ್ನೆಗೆ ಬಾರಿಸಿದ್ದಾರೆ ಕತ್ರಿನಾ ಕೈಫ್​.

ಇದನ್ನೂ ಓದಿ:

Sooryavanshi: ಅಕ್ಷಯ್​ ಕುಮಾರ್​ ಫ್ಯಾನ್ಸ್​ ‘ಸೂರ್ಯವಂಶಿ’ ಸಿನಿಮಾ ಯಾಕೆ ನೋಡಬೇಕು? ಇಲ್ಲಿವೆ 5 ಕಾರಣಗಳು

ಅಕ್ಷಯ್​ ಕುಮಾರ್​ಗೂ ಆಗಿತ್ತು ಲೈಂಗಿಕ ಕಿರುಕುಳ; ಲಿಫ್ಟ್​ನಲ್ಲಿ ನಡೆದ ಕರಾಳ ಘಟನೆ ಬಗ್ಗೆ ಅಕ್ಕಿ ಮಾತು

ಪತ್ನಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡು ರೈಲಿಗೆ ಬೆಂಕಿ ಹಚ್ಚಿದ ವ್ಯಕ್ತಿ
ಪತ್ನಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡು ರೈಲಿಗೆ ಬೆಂಕಿ ಹಚ್ಚಿದ ವ್ಯಕ್ತಿ
ರಾಜಣ್ಣ ಹೇಳಿದ್ದೊಂದು, ಮಾಧ್ಯಮಗಳು ಅರ್ಥಮಾಡಿಕೊಂಡಿದ್ದು ಮತ್ತೊಂದು: ಸಿಎಂ
ರಾಜಣ್ಣ ಹೇಳಿದ್ದೊಂದು, ಮಾಧ್ಯಮಗಳು ಅರ್ಥಮಾಡಿಕೊಂಡಿದ್ದು ಮತ್ತೊಂದು: ಸಿಎಂ
ಸಚಿವರಾದ ಮಹದೇವಪ್ಪ ಮತ್ತು ಶಿವರಾಜ್ ತಂಗಡಿಗಿಯಿಂದಲೂ ಮಾಲಾರ್ಪಣೆ
ಸಚಿವರಾದ ಮಹದೇವಪ್ಪ ಮತ್ತು ಶಿವರಾಜ್ ತಂಗಡಿಗಿಯಿಂದಲೂ ಮಾಲಾರ್ಪಣೆ
ಬದಲಾಗಲಿದೆ ಕರ್ನಾಟಕ ಪೊಲೀಸ್ ಟೋಪಿ! ನೆರೆರಾಜ್ಯಗಳ ಪೊಲೀಸ್ ಕ್ಯಾಪ್ ಪರಿಶೀಲನೆ
ಬದಲಾಗಲಿದೆ ಕರ್ನಾಟಕ ಪೊಲೀಸ್ ಟೋಪಿ! ನೆರೆರಾಜ್ಯಗಳ ಪೊಲೀಸ್ ಕ್ಯಾಪ್ ಪರಿಶೀಲನೆ
ಕೆಂಪೇಗೌಡ ಜಯಂತಿಯಂದು ಇಲ್ಲಿನ ಪ್ರತಿಮೆಗೆ ಮಾಲಾರ್ಪಣೆ: ಶಿವಕುಮಾರ್
ಕೆಂಪೇಗೌಡ ಜಯಂತಿಯಂದು ಇಲ್ಲಿನ ಪ್ರತಿಮೆಗೆ ಮಾಲಾರ್ಪಣೆ: ಶಿವಕುಮಾರ್
ಸೆಪ್ಟೆಂಬರ್ ಕ್ರಾಂತಿ ಬಗ್ಗೆ ರಾಜಣ್ಣಗೆ ಸುಳಿವು ಇರಬಹುದು: ಪರಮೇಶ್ವರ್
ಸೆಪ್ಟೆಂಬರ್ ಕ್ರಾಂತಿ ಬಗ್ಗೆ ರಾಜಣ್ಣಗೆ ಸುಳಿವು ಇರಬಹುದು: ಪರಮೇಶ್ವರ್
ವಿಐಪಿಗಳೆಂದು ಹೇಳಿಕೊಂಡು ಯಾರ‍್ಯಾರೋ ದೇವಿಯ ದರ್ಶನಕ್ಕೆ ನುಗ್ಗುತ್ತಿದ್ದಾರೆ
ವಿಐಪಿಗಳೆಂದು ಹೇಳಿಕೊಂಡು ಯಾರ‍್ಯಾರೋ ದೇವಿಯ ದರ್ಶನಕ್ಕೆ ನುಗ್ಗುತ್ತಿದ್ದಾರೆ
ರಥಯಾತ್ರೆಯಲ್ಲಿ ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಓಡಿದ ಆನೆ
ರಥಯಾತ್ರೆಯಲ್ಲಿ ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಓಡಿದ ಆನೆ
ಕೊಲೆ ಪಾತಕಿಯನ್ನು ಹಿಡಿಯಲು ಪೊಲೀಸ್ ಅಧಿಕಾರಿ ಮಾಡಿದ ಸಾಹಸ ನೋಡಿ
ಕೊಲೆ ಪಾತಕಿಯನ್ನು ಹಿಡಿಯಲು ಪೊಲೀಸ್ ಅಧಿಕಾರಿ ಮಾಡಿದ ಸಾಹಸ ನೋಡಿ
ಗಣ್ಯರ ಜೊತೆ ಹಿಂಬಾಲಕರು ಬೇಡವೆಂದು ವಿನಂತಿಸಿಕೊಳ್ಳಲಾಗಿದೆ: ಸೀಮಾ ಲಾಟ್ಕರ್
ಗಣ್ಯರ ಜೊತೆ ಹಿಂಬಾಲಕರು ಬೇಡವೆಂದು ವಿನಂತಿಸಿಕೊಳ್ಳಲಾಗಿದೆ: ಸೀಮಾ ಲಾಟ್ಕರ್