AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ಬಾರಿ ಅಕ್ಷಯ್​ ಕುಮಾರ್​ ಕೆನ್ನೆಗೆ ಬಾರಿಸಿದ ಕತ್ರಿನಾ ಕೈಫ್​; ಇದನ್ನೆಲ್ಲ ಅಕ್ಕಿ ಸಹಿಸಿಕೊಂಡಿದ್ದೇಕೆ?

‘ನನ್ನ ಕೆನ್ನೆಗೆ ಗಟ್ಟಿಯಾಗಿ ಬಾರಿಸಿ’ ಎಂದು ಅಕ್ಷಯ್​ ಕುಮಾರ್​ ಕೂಗಿದಾಗ ಕತ್ರಿನಾ ಕೈಫ್​ ಜೋರಾಗಿ ಹೊಡೆದೇಬಿಟ್ಟಿದ್ದರು! ಆಗ ಸೆಟ್​ನಲ್ಲಿ ಇದ್ದವರೆಲ್ಲ ತಬ್ಬಿಬ್ಬಾಗಿ ನೋಡುತ್ತಿದ್ದರು.

2 ಬಾರಿ ಅಕ್ಷಯ್​ ಕುಮಾರ್​ ಕೆನ್ನೆಗೆ ಬಾರಿಸಿದ ಕತ್ರಿನಾ ಕೈಫ್​; ಇದನ್ನೆಲ್ಲ ಅಕ್ಕಿ ಸಹಿಸಿಕೊಂಡಿದ್ದೇಕೆ?
TV9 Web
| Edited By: |

Updated on: Nov 05, 2021 | 8:16 AM

Share

ನಟ ಅಕ್ಷಯ್​ ಕುಮಾರ್​ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರ ಬಗ್ಗೆ ಕಾಳಜಿ ತೋರಿಸಲು ಹಲವು ಮಂದಿ ಇದ್ದಾರೆ. ಜನ ಜಂಗುಳಿ ಇರುವಾಗ ಯಾರೂ ಅವರನ್ನು ಟಚ್​ ಮಾಡದಂತೆ ನೋಡಕೊಳ್ಳಲು ಬಾಡಿ ಗಾರ್ಡ್ಸ್​ ಇದ್ದಾರೆ. ಒಂದು ವೇಳೆ ಅಕ್ಷಯ್​ ಕುಮಾರ್​ ಮೇಲೆ ಯಾರಾದರೂ ಕೈ ಮಾಡಿದರೆ ಅವರ ಕಥೆ ಮುಗಿಯಿತು ಎಂದೇ ಅರ್ಥ. ಆದರೆ ಕತ್ರಿನಾ ಕೈಫ್​ ಅವರು ಎರಡು ಬಾರಿ ಅಕ್ಷಯ್​ ಕುಮಾರ್​ ಕೆನ್ನೆಗೆ ಬಾರಿಸಿದ್ದಾರೆ. ಹಾಗಿದ್ದರೂ ಕೂಡ ಅವರ ಮೇಲೆ ಅಕ್ಕಿ ಸಿಟ್ಟಾಗಿಲ್ಲ. ಎಲ್ಲವನ್ನೂ ಸಹಿಸಿಕೊಂಡು ಅವರು ಸುಮ್ಮನಾಗಿದ್ದಾರೆ!

ಸಿಂಗ್​ ಈಸ್​ ಕಿಂಗ್​, ನಮಸ್ತೆ ಲಂಡನ್​, ತೀಸ್​ ಮಾರ್​ ಖಾನ್, ವೆಲ್​ಕಮ್​​ ಮುಂತಾದ ಸಿನಿಮಾಗಳಲ್ಲಿ ಅಕ್ಷಯ್​ ಕುಮಾರ್​ ಮತ್ತು ಕತ್ರಿನಾ ಕೈಫ್​ ಜೊತೆಯಾಗಿ ನಟಿಸಿದ್ದಾರೆ. ಈಗ ಅವರು ‘ಸೂರ್ಯವಂಶಿ’ ಸಿನಿಮಾದಲ್ಲಿ ಮತ್ತೆ ಜೋಡಿಯಾಗಿದ್ದಾರೆ. ಈ ಚಿತ್ರ ಇಂದು (ನ.5) ವಿಶ್ವಾದ್ಯಂತ ಬಿಡುಗಡೆ ಆಗಿದೆ. ‘ಸೂರ್ಯವಂಶಿ’ ಶೂಟಿಂಗ್​ ವೇಳೆ ಅಕ್ಕಿ ಕೆನ್ನೆಗೆ ಕತ್ರಿನಾ ಬಾರಿಸಿದ್ದಾರೆ. ಚಿತ್ರೀಕರಣದಲ್ಲಿ ಕೆನ್ನೆಗೆ ಹೊಡೆಯುವ ದೃಶ್ಯ ಇದ್ದರೆ, ಯಾರೂ ಕೂಡ ನಿಜವಾಗಿಯೂ ಹೊಡೆಯುವುದಿಲ್ಲ. ಕೇವಲ ಹೊಡೆದಂತೆ ನಟಿಸುತ್ತಾರೆ. ಆದರೆ ಕತ್ರಿನಾ ನಿಜವಾಗಿಯೂ ಹೊಡೆದಿದ್ದಾರೆ.

‘ಸೂರ್ಯವಂಶಿ’ ಚಿತ್ರದಲ್ಲಿ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಅಕ್ಷಯ್​ ಕುಮಾರ್​ ನಟಿಸಿದ್ದು, ಅವರ ಪತ್ನಿ ಪಾತ್ರದಲ್ಲಿ ಕತ್ರಿನಾ ಕೈಫ್​ ಕಾಣಿಸಿಕೊಂಡಿದ್ದಾರೆ. ‘ಕೆನ್ನೆಗೆ ಹೊಡೆಯುವ ದೃಶ್ಯದಲ್ಲಿ ನಾನು ರೀಟೇಕ್​ ತೆಗೆದುಕೊಳ್ಳಲಿಲ್ಲ. ಅಕ್ಷಯ್​ ಕುಮಾರ್​ ಕೆನ್ನೆಗೆ ಒಂದೇ ಟೇಕ್​ನಲ್ಲಿ ಬಾರಿಸಿದೆ’ ಎಂದು ಕತ್ರಿನಾ ಹೇಳಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಅಕ್ಷಯ್​ಕುಮಾರ್​ ವಿವರಿಸಿದ್ದಾರೆ. ‘ಹೊಡೆದಂತೆ ನಟಿಸಿದಾಗ ಕೆನ್ನೆ ಮತ್ತು ಕೈ ನಡುವೆ ಗ್ಯಾಪ್​ ಕಾಣಿಸುತ್ತದೆ. ಆ ಗ್ಯಾಪ್​ ತುಂಬಲು ಇವರು ನನಗೆ ನಿಜವಾಗಿಯೂ ಹೊಡೆದರು’ ಎಂದು ಅಕ್ಕಿ ಹೇಳಿದ್ದಾರೆ. ಸಿನಿಮಾದ ದೃಶ್ಯಗಳು ನೈಜವಾಗಿ ಮೂಡಿಬರಬೇಕು ಎಂಬುದು ಅಕ್ಷಯ್​ ಕುಮಾರ್​ ಅವರ ಮುಖ್ಯ ಉದ್ದೇಶ. ಹಾಗಾಗಿ ಅವರು ಈ ಹೊಡೆತವನ್ನು ಸಹಿಸಿಕೊಂಡರು.

ಈ ಹಿಂದೆ ‘ವೆಲ್​ಕಮ್​’ ಸಿನಿಮಾದ ಸಂದರ್ಭದಲ್ಲೂ ಹೀಗೆಯೇ ಆಗಿತ್ತು. ಕೆನ್ನೆಗೆ ಹೊಡೆಯಬೇಕಾದ ದೃಶ್ಯದ ಶೂಟಿಂಗ್​ ವೇಳೆ ಕತ್ರಿನಾ ತುಂಬ ಅಂಜಿಕೊಳ್ಳುತ್ತಿದ್ದರು. ಅದರಿಂದ ಚಿತ್ರೀಕರಣ ತಡವಾಗುತ್ತಿತ್ತು. ಲೇಟ್​ ಆಗುತ್ತಿದ್ದರಿಂದ ಅಕ್ಕಿ ಕೂಡ ರೋಸಿ ಹೋಗಿದ್ದರು. ‘ನನ್ನ ಕೆನ್ನೆಗೆ ಗಟ್ಟಿಯಾಗಿ ಬಾರಿಸಿ’ ಎಂದು ಅವರು ಕೂಗಿದಾಗ ಅನಿವಾರ್ಯವಾಗಿ ಕತ್ರಿನಾ ಜೋರಾಗಿ ಹೊಡೆದೇಬಿಟ್ಟಿದ್ದರು! ಆಗ ಇಡೀ ಸೆಟ್​ನಲ್ಲಿ ಇದ್ದವರೆಲ್ಲ ತಬ್ಬಿಬ್ಬಾಗಿ ನೋಡುತ್ತಿದ್ದರು. ಹೀಗೆ ‘ವೆಲ್​ಕಮ್​’ ಮತ್ತು ‘ಸೂರ್ಯವಂಶಿ’ ಸಿನಿಮಾದಲ್ಲಿ ಎರಡು ಬಾರಿ ಅಕ್ಕಿ ಕೆನ್ನೆಗೆ ಬಾರಿಸಿದ್ದಾರೆ ಕತ್ರಿನಾ ಕೈಫ್​.

ಇದನ್ನೂ ಓದಿ:

Sooryavanshi: ಅಕ್ಷಯ್​ ಕುಮಾರ್​ ಫ್ಯಾನ್ಸ್​ ‘ಸೂರ್ಯವಂಶಿ’ ಸಿನಿಮಾ ಯಾಕೆ ನೋಡಬೇಕು? ಇಲ್ಲಿವೆ 5 ಕಾರಣಗಳು

ಅಕ್ಷಯ್​ ಕುಮಾರ್​ಗೂ ಆಗಿತ್ತು ಲೈಂಗಿಕ ಕಿರುಕುಳ; ಲಿಫ್ಟ್​ನಲ್ಲಿ ನಡೆದ ಕರಾಳ ಘಟನೆ ಬಗ್ಗೆ ಅಕ್ಕಿ ಮಾತು

ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು