AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರೋಟೀನ್​​ಗಾಗಿ ನನ್ನ ಪತಿ ಕದ್ದು ಎದೆಹಾಲು ಕುಡಿದಿದ್ದ’; ವಿಲಕ್ಷಣ ವಿಚಾರ ಬಿಚ್ಚಿಟ್ಟ ಬಾಲಿವುಡ್​ ನಟನ ಪತ್ನಿ

2008ರಲ್ಲಿ ಲೇಖಕಿ ಹಾಗೂ ಫಿಲ್ಮ್​​ಮೇಕರ್​ ತಾಹೀರಾ ಕಶ್ಯಪ್​ ಅವರನ್ನು 2008ರಲ್ಲಿ ಆಯುಷ್ಮಾನ್​ ಖುರಾನಾ ವರಿಸಿದ್ದರು. ಈ ದಂಪತಿಗೆ ಮೊದಲು ಜನಿಸಿದ್ದು ಗಂಡುಮಗು.

‘ಪ್ರೋಟೀನ್​​ಗಾಗಿ ನನ್ನ ಪತಿ ಕದ್ದು ಎದೆಹಾಲು ಕುಡಿದಿದ್ದ’; ವಿಲಕ್ಷಣ ವಿಚಾರ ಬಿಚ್ಚಿಟ್ಟ ಬಾಲಿವುಡ್​ ನಟನ ಪತ್ನಿ
ತಾಹೀರಾ ಕಶ್ಯಪ್​
TV9 Web
| Edited By: |

Updated on: Nov 04, 2021 | 9:47 PM

Share

ಚಿತ್ರರಂಗದಲ್ಲಿ ಗುರುತಿಸಿಕೊಂಡ ಸಾಕಷ್ಟು ನಟ-ನಟಿಯರು ವಿಚಿತ್ರ ಗುಣಗಳನ್ನು ಹೊಂದಿರುತ್ತಾರೆ. ಈ ಬಗ್ಗೆ ಅವರು ಹೊರ ಜಗತ್ತಿಗೆ ಹೇಳಿಕೊಳ್ಳೋಕೆ ಇಷ್ಟಪಡುವುದಿಲ್ಲ. ಅಭಿಮಾನಿಗಳು ಏನು ಭಾವಿಸಿಬಿಡುತ್ತಾರೇನೋ ಎನ್ನುವ ಭಯ ಅವರನ್ನು ಕಾಡುತ್ತದೆ. ಆದರೆ, ಕೆಲ ವಿಚಾರಗಳು ಅವರ ಕುಟುಂಬದವರಿಂದ ಹೊರ ಬರುತ್ತದೆ. ಈಗ ಬಾಲಿವುಡ್​ ಖ್ಯಾತ ನಟ ಆಯುಷ್ಮಾನ್​ ಮಾಡಿದ ಒಂದು ಕಿತಾಪತಿ ಕೆಲಸದ ಬಗ್ಗೆ ಅವರ ಪತ್ನಿ ಹೇಳಿಕೊಂಡಿದ್ದಾರೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್​ ನಿಜಕ್ಕೂ ಶಾಕ್​ ಆಗಿದ್ದಾರೆ. ಹಾಗಾದರೆ, ಏನದು ಆ ವಿಚಾರ? ಎದೆ ಹಾಲು ಕದ್ದು ಕುಡಿದಿದ್ದು!

2008ರಲ್ಲಿ ಲೇಖಕಿ ಹಾಗೂ ಫಿಲ್ಮ್​​ಮೇಕರ್​ ತಾಹೀರಾ ಕಶ್ಯಪ್​ ಅವರನ್ನು 2008ರಲ್ಲಿ ಆಯುಷ್ಮಾನ್​ ಖುರಾನಾ ವರಿಸಿದ್ದರು. ಈ ದಂಪತಿಗೆ ಮೊದಲು ಜನಿಸಿದ್ದು ಗಂಡುಮಗು. ಈ ಬಗ್ಗೆ ತಾಹೀರಾ ‘ದಿ 7 ಸಿನ್ಸ್​ ಆಫ್​ ಬೀಯಿಂಗ್​ ಮದರ್​’ ಪುಸ್ತಕ ಬರೆದಿದ್ದು, ತಾಯ್ತನದ ಆನಂದವನ್ನು ಅವರು ವಿವರಿಸಿದ್ದಾರೆ. ಇದರ ಜತೆಗೆ ಅಚ್ಚರಿ ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ.

ಮೊದಲ ಮಗುವಿಗೆ ಈ ದಂಪತಿ ವೀರಜ್​ವೀರ್​ ಎಂದು ನಾಮಕರಣ ಮಾಡಿದ್ದಾರೆ. ಮಗು ಜನಿಸಿದ ಒಂಭತ್ತು ತಿಂಗಳಿಗೆ ಚಿಕ್ಕ ಹನಿಮೂನ್​ಗೆ ಬ್ಯಾಂಕಾಕ್​ಗೆ ತೆರಳಿದ್ದರು. ಮಗುವಿಗಾಗಿ ಅವರು ಬಾಟಲಿಯಲ್ಲಿ ಎದೆಹಾಲು ಶೇಖರಿಸಿಟ್ಟಿದ್ದರು. ಆದರೆ, ಬಾಟಲಿಯಲ್ಲಿ ತುಂಬಿಸಿಟ್ಟ ಎದೆಹಾಲು ಖಾಲಿ ಆಗಿತ್ತು. ಇದು ಅವರಲ್ಲಿ ಅಚ್ಚರಿ ಮೂಡಿಸಿತ್ತು.

‘ನನ್ನ ಹುಡುಗ (ಆಯುಷ್ಮಾನ್​) ಬೆಡ್​ರೂಮ್​ನಲ್ಲಿ ರಿಲ್ಯಾಕ್ಸ್ ಮಾಡುತ್ತಿದ್ದ. ಅವನ ಕೈಯಲ್ಲಿ ಪ್ರೋಟೀನ್​ ಶೇಖ್​ ಇತ್ತು. ನಾನು ಬಾಟಲಿಯಲ್ಲಿ ಇಟ್ಟ ಎದೆಹಾಲು ಕಾಣೆಯಾದ ಬಗ್ಗೆ ಆತನಲ್ಲಿ ಕೇಳಿದೆ. ಆಯುಷ್ಮಾನ್ ತಾನು ಕುಡಿದು ಖಾಲಿ ಮಾಡಿರುವುದಾಗಿ ಹೇಳಿದ. ಅಷ್ಟೇ ಅಲ್ಲ, ಇದು ಒಳ್ಳೆಯ ಪ್ರೋಟೀನ್​ ಶೇಖ್​ ಎಂದ. ನಾನು ಅಯ್ಯೋ ಎಂದು ತಲೆಮೇಲೆ ಕೈಹೊತ್ತು ಕೂತೆ’ ಎಂದು ತಾಹೀರಾ ವಿವರಿಸಿದ್ದಾರೆ.

ಇದನ್ನೂ ಓದಿ: ‘ಸಿನಿಮಾಗೆ ರೆಸ್ಪಾನ್ಸ್ ಬರ್ತಿಲ್ಲ, ಭವಿಷ್ಯ ಇಲ್ಲಿಗೆ ಕೊನೆಯಾದ ಹಾಗೆ ಅನಿಸುತ್ತಿದೆ’; ‘ಭಜರಂಗಿ 2’ ಖಳನ ಕಣ್ಣೀರು

ಅನನ್ಯಾ ಪಾಂಡೆ ನಟನೆಯ ಸಿನಿಮಾಗಳನ್ನು ನೋಡುವ ಆಸಕ್ತಿ ಉಳಿದಿಲ್ಲ; ಕುಟುಕಿದ ಬಾಲಿವುಡ್​ ನಟಿ 

Follow Us
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ