AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Me Too: ನಿರ್ಮಾಪಕನಿಂದ ಲೈಂಗಿಕ ಕಿರುಕುಳ, ದೂರು ನೀಡಿದ ನಟಿ

ಸಿನಿಮಾ ನಟಿ ಸ್ವಸ್ತಿಕಾ, ನಿರ್ಮಾಪಕ ಸಂದೀಪ್ ಎಂಬುವರ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ. ನಟಿಯ ಚಿತ್ರಗಳನ್ನು ಅಸಭ್ಯವಾಗಿ ತಿದ್ದಿ ಹಂಚಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Me Too: ನಿರ್ಮಾಪಕನಿಂದ ಲೈಂಗಿಕ ಕಿರುಕುಳ, ದೂರು ನೀಡಿದ ನಟಿ
ಸ್ವಸ್ತಿಕಾ ಮುಖರ್ಜಿ
ಮಂಜುನಾಥ ಸಿ.
|

Updated on: Apr 05, 2023 | 9:32 PM

Share

ಮೀ ಟೂ (Me Too) ಅಭಿಯಾನದಿಂದ ಚಿತ್ರರಂಗದಲ್ಲಿ (Movie Industry) ನಡೆಯುತ್ತಿದ್ದ, ನಡೆದಿದ್ದ ಹಲವು ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದವು. ಹಾಗಿದ್ದರೂ ಸಹ ಈ ಪ್ರಕರಣಗಳು ಕಡಿಮೆಯಾದಂತಿಲ್ಲ. ಆಗೊಮ್ಮೆ ಈಗೊಮ್ಮೆ ನಟಿಯರು ದೌರ್ಜನ್ಯಕ್ಕೆ ಕಿರುಕುಳಕ್ಕೆ ಒಳಗಾಗುತ್ತಲೇ ಇದ್ದಾರೆ. ಇದೀಗ ಬೆಂಗಾಲಿ (Bengali) ನಟಿಯೊಬ್ಬರು ನಿರ್ಮಾಪಕನೊಬ್ಬನಿಂದ ಲೈಂಗಿಕ ಕಿರುಕುಳಕ್ಕೆ ಈಡಾಗಿದ್ದು, ದೂರು ದಾಖಲಿಸಿದ್ದಾರೆ.

ಬೆಂಗಾಲಿ ನಟಿ ಸ್ವಸ್ತಿಕಾ ಮುಖರ್ಜಿ, ನಿರ್ಮಾಪಕ ಸಂದೀಪ್ ಸರ್ಕಾರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ದೆಹಲಿ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ಸ್ವಸ್ತಿಕಾ ಮುಖರ್ಜಿ, ಬೆಂಗಾಳಿ ಚಿತ್ರರಂಗದ ಜನಪ್ರಿಯ ನಟಿಯರಲ್ಲೊಬ್ಬರಾಗಿದ್ದು, ಇತ್ತೀಚೆಗಷ್ಟೆ ಅವರು ಶಿಬ್ತುರ್ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಇದೇ ಸಿನಿಮಾದ ಸಹ ನಿರ್ಮಾಪಕ ಆಗಿರುವ ಸಂದೀಪ್ ಸರ್ಕಾರ್, ಇ ಮೇಲ್ ಮೂಲಕ ತಮಗೆ ಬೆದರಿಕೆ ಹಾಕುವ ಜೊತೆಗೆ ಲೈಂಗಿಕವಾಗಿ ಸಹಕರಿಸುವಂತೆ ಕೋರಿದ್ದಾರೆ ಎಂದು ಸ್ವಸ್ತಿಕಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂದೀಪ್ ಸರ್ಕಾರ್ ಬಳಿ ತಾವು ಈ ವರೆಗೆ ಒಮ್ಮೆಯೂ ಮಾತನಾಡಿಲ್ಲ, ನಮ್ಮೊಟ್ಟಿಗೆ ಶಿಬ್ತುರ್ ಸಿನಿಮಾದ ಮತ್ತೊಬ್ಬ ಸಹ ನಿರ್ಮಾಪಕ ಅಜಂತಾ ಸಿನ್ಹಾ ರಾಯ್ ಅವರೇ ಸಂಪರ್ಕ ಮಾಡುತ್ತಿದ್ದರು. ಆದರೆ ಸಿನಿಮಾದ ಶೂಟಿಂಗ್ ಎಲ್ಲ ಮುಗಿದ ಮೇಲೆ ಒಮ್ಮೆಲೆ ಹಠಾತ್ ಆಗಿ ಸಂದೀಪ್ ಸರ್ಕಾರ್ ಕಡೆಯಿಂದ ಇ-ಮೇಲ್​ಗಳು ಬರಲು ಪ್ರಾರಂಭವಾದವು. ನಾನು ಅಮೆರಿಕದ ನಿವಾಸಿಯಾಗಿದ್ದು, ನೀನು ನನ್ನೊಟ್ಟಿಗೆ ‘ಸಹಕರಿಸದಿದ್ದರೆ’ ನಿನಗೆ ಅಮೆರಿಕ ವೀಸಾ ದೊರೆಯದಂತೆ ಮಾಡುತ್ತೇನೆ, ನನಗೆ ಪೊಲೀಸ್ ಆಯುಕ್ತರು ಗೊತ್ತು, ಸ್ಟೇಷನ್​ಗೆ ಅಲೆಯುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದಿದ್ದಾರೆ ನಟಿ ಸ್ವಸ್ತಿಕಾ.

ನನಗೆ ಸಂದೀಪ್ ಸರ್ಕಾರ್ ಯಾರೆಂಬುದು ಸಹ ಗೊತ್ತಿಲ್ಲ. ನಾನು ನನ್ನ ಪಾಡಿಗೆ ಸಿನಿಮಾ ಶೂಟಿಂಗ್ ಡಬ್ಬಿಂಗ್ ಮುಗಿಸಿದೆ. ಸಿನಿಮಾದ ಪ್ರಚಾರಕ್ಕೆ ಹೋಗುವ ಇಚ್ಛೆ ನನಗಿತ್ತು, ಆದರೆ ಸಿನಿಮಾದ ಬಿಡುಗಡೆ ದಿನಾಂಕವನ್ನು ನನಗೆ ಹೇಳದೇ ಮುಂದೂಡಿದರು. ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದೂ ನನಗೆ ಗೊತ್ತಾಗಲಿಲ್ಲ. ಆದರೂ ಅದನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ಅದಾದ ಬಳಿಕ ನನ್ನ ಡೇಟ್ಸ್ ಲಾಕ್ ಆಗಿರುವ ಬಗ್ಗೆ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಮಾಹಿತಿ ನೀಡಿ ನನ್ನ ಕೆಲಸಗಳಲ್ಲಿ ನಾನು ತೊಡಗಿಕೊಂಡೆ” ಎಂದಿದ್ದಾರೆ ನಟಿ ಸ್ವಸ್ತಿಕಾ.

ಇದನ್ನೂ ಓದಿ: Ravi Kishan: ಮೀಟೂ ಅನುಭವ ಬಿಚ್ಚಿಟ್ಟ ನಟ, ಸಂಸದ ರವಿಕಿಶನ್

ಈ ವೇಳೆ ಸ್ವಸ್ತಿಕಾರ ಮ್ಯಾನೇಜರ್​ಗೂ ಬೆದರಿಕೆ ಇ-ಮೇಲ್ ಬಂದಿದ್ದು, ಸಂದೀಪ್​ನ ಗೆಳೆಯ ಎಂದು ಹೇಳಿಕೊಂಡ ರವೀಶ್ ಶರ್ಮಾ ಎಂಬ ವ್ಯಕ್ತಿಯೊಬ್ಬ, ತಾನು ಅಪ್ರತಿಮ ಕಂಪ್ಯೂಟರ್ ಹ್ಯಾಕರ್ ಆಗಿದ್ದ್ದು, ಸ್ವಸ್ತಿಕಾರ ಚಿತ್ರಗಳನ್ನು ಎಡಿಟ್ ಮಾಡಿ ವೆಬ್​ಸೈಟ್​ಗಳಲ್ಲಿ ಹಂಚಿಕೊಳ್ಳುವ ಬೆದರಿಕೆ ಹಾಕಿದ್ದಾಗಿ ಹೇಳಿದ್ದಾನೆ. ಸಂದೀಪ್ ಸಹ ರವೀಶ್ ಶರ್ಮಾ ತಮ್ಮ ಗೆಳೆಯ ಎಂದು ಒಪ್ಪಿಕೊಂಡಿದ್ದಾರೆಂದು ಸ್ವಸ್ತಿಕಾ ಹೇಳಿದ್ದಾರೆ. ಇದರ ನಡುವೆ ತಮ್ಮ ಕೆಲವು ಎಡಿಟೆಡ್ ನಗ್ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೇ ಕಾರಣಕ್ಕೆ ತಾವು ದೆಹಲಿ ಪೊಲೀಸರ ಬಳಿ ಲೈಂಗಿಕ ಕಿರುಕುಳದ ದೂರು ದಾಖಲಿಸಿರುವುದಾಗಿ ಹೇಳಿದ್ದಾರೆ. ದೂರು ನೀಡುವ ಮುನ್ನ ಶಿಬ್ತುರ್ ಸಿನಿಮಾದ ನಿರ್ದೇಶಕರ ಬಳಿ ಚರ್ಚೆ ಮಾಡಿರುವುದಾಗಿಯೂ ನಟಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್