AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟನೆ ಇಷ್ಟವಿಲ್ಲದೆ ಸೂಪರ್​ ಸ್ಟಾರ್​ ಆದ್ರು, ರಾಜಕೀಯ ಇಷ್ಟ ಇಲ್ಲದೇ ಸಿಎಂ ಆದ್ರು: ಜಯಲಲಿತಾ ರೋಚಕ ಕಥೆ

ಜಯಲಲಿತಾ ಅವರ ಸಿನಿಮಾ ಜರ್ನಿ ಮತ್ತು ರಾಜಕೀಯದ ಬದುಕಿನಲ್ಲಿ ಅನೇಕ ರೋಚಕ ತಿರುವುಗಳಿವೆ. ಆದೆಲ್ಲವನ್ನೂ ‘ತಲೈವಿ’ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ನಟನೆ ಇಷ್ಟವಿಲ್ಲದೆ ಸೂಪರ್​ ಸ್ಟಾರ್​ ಆದ್ರು, ರಾಜಕೀಯ ಇಷ್ಟ ಇಲ್ಲದೇ ಸಿಎಂ ಆದ್ರು: ಜಯಲಲಿತಾ ರೋಚಕ ಕಥೆ
ನಟನೆ ಇಷ್ಟವಿಲ್ಲದೆ ಸೂಪರ್​ ಸ್ಟಾರ್​ ಆದ್ರು, ರಾಜಕೀಯ ಇಷ್ಟ ಇಲ್ಲದೇ ಸಿಎಂ ಆದ್ರು: ಜಯಲಲಿತಾ ರೋಚಕ ಕಥೆ
TV9 Web
| Edited By: |

Updated on: Sep 09, 2021 | 2:06 PM

Share

ಭಾರತೀಯ ರಾಜಕಾರಣದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲದಂತಹ ವ್ಯಕ್ತಿತ್ವ ಜಯಲಲಿತಾ ಅವರದ್ದು. ಪುರುಷ ಪ್ರಧಾನ ವ್ಯವಸ್ಥೆಗೆ ಸೆಡ್ಡುಹೊಡೆದ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗುವ ಮಟ್ಟಕ್ಕೆ ಬೆಳೆದು ನಿಂತರು. ರಾಜಕೀಯಕ್ಕೆ ಕಾಲಿಡುವುದಕ್ಕೂ ಮನ್ನ ನೂರಾರು ಸಿನಿಮಾಗಳಲ್ಲಿ ನಟಿಸಿ ಸೂಪರ್​ ಸ್ಟಾರ್​ ಆಗಿದ್ದರು. ಅಂಥ ಸಾಧಕಿಯ ಬದುಕಿನ ಕಥೆ ಈಗ ‘ತಲೈವಿ’ ಸಿನಿಮಾ ರೂಪದಲ್ಲಿ ಬರುತ್ತಿದೆ. ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್​ ನಟಿಸಿದ್ದಾರೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಸೆ.10ರಂದು ‘ತಲೈವಿ’ ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ಜಯಲಲಿತಾ ಅವರ ಬದುಕಿನ ಕೆಲವು ರೋಚಕ ವಿಚಾರಗಳನ್ನು ಮೆಲುಕು ಹಾಕಲಾಗುತ್ತಿದೆ.

ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಜಯಲಲಿತಾ ಅವರು ಕೆಲವು ಅಚ್ಚರಿ ಮಾಹಿತಿಗಳನ್ನು ಹಂಚಿಕೊಂಡಿದ್ದರು. 125ಕ್ಕೂ ಅಧಿಕ ಸಿನಿಮಾಗಳಲ್ಲಿ ಜಯಲಲಿತಾ ನಟಿಸಿದ್ದರು. ಅಚ್ಚರಿ ಎಂದರೆ ಅವರಿಗೆ ಚಿತ್ರರಂಗಕ್ಕೆ ಬರಲು ಇಷ್ಟವೇ ಇರಲಿಲ್ಲ! ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಅನಿವಾರ್ಯವಾಗಿ ಅವರು ಕೇವಲ 16ನೇ ವಯಸ್ಸಿನಲ್ಲಿ ನಟಿ ಆಗಬೇಕಾಯಿತು.

‘ನನಗೆ ಸಿನಿಮಾದಲ್ಲಿ ಆಸಕ್ತಿಯೇ ಇರಲಿಲ್ಲ. ನಾನು ನಾಚಿಕೆ ಸ್ವಭಾವದ ವ್ಯಕ್ತಿ ಆಗಿದ್ದೆ’ ಎನ್ನುವ ಜಯಲಲಿತಾ ನಂಬರ್​ ಒನ್​ ನಟಿಯಾಗಿ ಮಿಂಚಿದ್ದು ಇತಿಹಾಸ. ಬಳಿಕ ಅವರು ಕಾಲಿಟ್ಟಿದ್ದು ರಾಜಕೀಯಕ್ಕೆ. ಅದು ಕೂಡ ಅನಿವಾರ್ಯ ಕಾರಣದಿಂದ. ‘ಒಮ್ಮೆ ಒಂದು ನಿರ್ಧಾರ ತೆಗೆದುಕೊಂಡ ಮೇಲೆ ಅದಕ್ಕೆ ಸಂಪೂರ್ಣ ಶ್ರಮ ಹಾಕಬೇಕು. ನನಗೆ ಶಾಸ್ತ್ರೀಯ ನೃತ್ಯ ಇಷ್ಟ ಇರಲಿಲ್ಲ. ಆದರೂ ನಾನು ದೇಶದ ಅತ್ಯುತ್ತಮ ಡಾನ್ಸರ್​ಗಳಲ್ಲಿ ಒಬ್ಬಳಾದೆ. ಸಿನಿಮಾವನ್ನು ನಾನು ದ್ವೇಷಿಸುತ್ತಿದ್ದೆ. ಆದರೆ ನಾನೇ ನಂಬರ್​ ಒನ್​ ನಟಿ ಆದೆ. ನಾನು ಹೀಗೆ ಹೇಳಬಾರದು. ಆದ್ರೂ.. ನನಗೆ ರಾಜಕೀಯ ಇಷ್ಟ ಇಲ್ಲ. ಆದರೆ ಜನರು ನನ್ನನ್ನು ಯಶಸ್ವಿ ರಾಜಕಾರಣಿ ಎನ್ನುತ್ತಾರೆ. ನನಗೆ ಇದು ಅಚ್ಚರಿ ಆಗುತ್ತದೆ’ ಎಂದು ಸಂದರ್ಶನದಲ್ಲಿ ಜಯಲಲಿತಾ ಹೇಳಿದ್ದರು.

ಒಟ್ಟಿನಲ್ಲಿ ಅವರ ಸಿನಿಮಾ ಜರ್ನಿ ಮತ್ತು ರಾಜಕೀಯದ ಬದುಕಿನಲ್ಲಿ ಅನೇಕ ರೋಚಕ ತಿರುವುಗಳಿವೆ. ಆದೆಲ್ಲವನ್ನೂ ‘ತಲೈವಿ’ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಸೆ.10ರಂದು ಬಿಡುಗಡೆ ಆಗುತ್ತಿರುವ ಈ ಚಿತ್ರಕ್ಕೆ ಎ.ಎಲ್. ವಿಜಯ್​ ನಿರ್ದೇಶನ ಮಾಡಿದ್ದಾರೆ. ಅರವಿಂದ್ ಸ್ವಾಮಿ, ನಾಸರ್​, ಭಾಗ್ಯಶ್ರೀ, ಸಮುದ್ರಖಣಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನೈಟ್​ ಕರ್ಫ್ಯೂ ಮತ್ತು ಥಿಯೇಟರ್​ನಲ್ಲಿ ಶೇ.50ರಷ್ಟು ನಿರ್ಬಂಧದ ನಡುವೆಯೂ ‘ತಲೈವಿ’ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ:

‘ನಿರ್ದೇಶಕರು ತಪ್ಪು ಮಾಡಿದರು ಎಂದು ನನಗನಿಸಿತು’; ‘ತಲೈವಿ’ ಬಗ್ಗೆ ಕಂಗನಾ ರಣಾವತ್​ ಅಚ್ಚರಿಯ ಹೇಳಿಕೆ

‘ಸಲ್ಮಾನ್ ಖಾನ್, ವಿಜಯ್​ ಚಿತ್ರಗಳಿಗೆ ಅನ್ವಯವಾಗದ ನಿಯಮಗಳು ನಮಗೇಕೆ?’; ಐನಾಕ್ಸ್, ಪಿವಿಆರ್ ವಿರುದ್ಧ ಕಂಗನಾ ಕಿಡಿ

Follow Us
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ