AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಷ್ಕಾ ಮೊದಲ ಭೇಟಿ ಹೇಗಿತ್ತು? ಸಂದರ್ಭ ಸಹಿತ ವಿವರಿಸಿದ ವಿರಾಟ್​ ಕೊಹ್ಲಿ

ವಮಿಕಾ ಜನಿಸಿದ್ದು ವಿರಾಟ್​ ಕುಟುಂಬಕ್ಕೆ ಖುಷಿ ತಂದಿದೆ. ಆದರೆ, ಇದನ್ನು ನೋಡೋಕೆ ಅವರ ತಂದೆ ಇಲ್ಲ ಎನ್ನುವ ವಿಚಾರ ಬೇಸರ ತರಿಸಿದೆ.

ಅನುಷ್ಕಾ ಮೊದಲ ಭೇಟಿ ಹೇಗಿತ್ತು? ಸಂದರ್ಭ ಸಹಿತ ವಿವರಿಸಿದ ವಿರಾಟ್​ ಕೊಹ್ಲಿ
ವಿರಾಟ್, ಅನುಷ್ಕಾ
TV9 Web
| Edited By: |

Updated on: Aug 04, 2021 | 7:23 PM

Share

ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಮದುವೆ ಆಗಿ ಅನೇಕ ವರ್ಷ ಕಳೆದಿದೆ. ಹಲವು ವರ್ಷಗಳ ಕಾಲ ಡೇಟಿಂಗ್​ ನಡೆಸುತ್ತಿದ್ದ ಈ ಜೋಡಿ 2017ರಲ್ಲಿ ಮದುವೆ ಆಗಿತ್ತು. ಈ ವರ್ಷದ ಆರಂಭದಲ್ಲಿ ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ವಿರಾಟ್​ ಅನುಷ್ಕಾ ಮೊದಲ ಭೇಟಿ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗಾದರೆ, ಇಬ್ಬರೂ ಮೊದಲು ಭೇಟಿ ಆಗಿದ್ದು ಎಲ್ಲಿ? ಹೇಗಿತ್ತು ಆ ಭೇಟಿ ಎನ್ನುವ ಬಗ್ಗೆ ವಿರಾಟ್​ ವಿವರಿಸಿದ್ದಾರೆ.

ವಿರಾಟ್​ ಅವರು ಅನುಷ್ಕಾ ಅವರನ್ನು ಮೊದಲ ಬಾರಿ ಭೇಟಿ ಮಾಡಿದ್ದು 2013ರಲ್ಲಿ. ಈ ಬಗ್ಗೆ ಮಾತನಾಡಿರುವ ವಿರಾಟ್​, ‘ನಾನು ಸೆಟ್​ನಲ್ಲಿ ಅನುಷ್ಕಾ ಅವರನ್ನು ಭೇಟಿ ಮಾಡಿದ್ದೆ. ಆಗ ತುಂಬಾನೇ ನರ್ವಸ್​ ಆಗಿದ್ದೆ. ಹೀಗಾಗಿ, ಒಂದು ಜೋಕ್​ ಹೇಳಿದೆ. ನನಗೆ ಏನು ಮಾಡಬೇಕು ಎಂಬುದೇ ಗೊತ್ತಿರಲಿಲ್ಲ. ಈ ಕಾರಣಕ್ಕೆ ನಾನು ಜೋಕ್​ ಹೇಳಿದೆ. ಅನುಷ್ಕಾ ತುಂಬಾನೇ ಎತ್ತರವಾಗಿ ಕಾಣುತ್ತಿದ್ದರು. ಹೀಲ್ಸ್​ ಹಾಕಿಕೊಂಡಿದ್ದರು. ಅವರು ತುಂಬಾನೇ ಕಾನ್ಫಿಡೆಂಟ್​ ಆಗಿದ್ದರು’ ಎಂದು ವಿರಾಟ್​ ಮೊದಲ ಭೇಟಿ ಅನುಭವ ಹಂಚಿಕೊಂಡಿದ್ದಾರೆ.

ವಮಿಕಾ ಜನಿಸಿದ್ದು ವಿರಾಟ್​ ಕುಟುಂಬಕ್ಕೆ ಖುಷಿ ತಂದಿದೆ. ಆದರೆ, ಇದನ್ನು ನೋಡೋಕೆ ಅವರ ತಂದೆ ಇಲ್ಲ ಎನ್ನುವ ವಿಚಾರ ಬೇಸರ ತರಿಸಿದೆ. ಈ ಬಗ್ಗೆ ಮಾತನಾಡಿರುವ ವಿರಾಟ್​, ‘ನಾನು ಕ್ರಿಕೆಟ್​ ಆಡುವುದನ್ನು ನೋಡುವುದಕ್ಕೂ ನನ್ನ ತಂದೆ ಇಲ್ಲ. ಈಗ ನನ್ನ ಮಗಳನ್ನು ನೋಡೋಕು ನನ್ನ ತಂದೆ ಇಲ್ಲ. ನನ್ನ ಅಮ್ಮನ ಮುಖದಲ್ಲಿ ಎಲ್ಲಾ ಖುಷಿಯನ್ನು ಕಾಣುತ್ತಿದ್ದೇನೆ’ ಎಂದಿದ್ದಾರೆ ಕೊಹ್ಲಿ.

ವಿರಾಟ್​ ಹಾಗೂ ಅನುಷ್ಕಾ 2017ರಲ್ಲಿ ದೂರದ ಇಟಲಿಗೆ ತೆರಳಿ ಮದುವೆ ಆಗಿದ್ದರು. ಜನವರಿಯಲ್ಲಿ ಜನಿಸಿದ ಮಗಳಿಗೆ ಈ ಜೋಡಿ ವಮಿಕಾ ಎಂದು ಹೆಸರಿಟ್ಟಿದ್ದರು. ವಮಿಕಾ ಮುಖವನ್ನು ಅನುಷ್ಕಾ ಹಾಗೂ ವಿರಾಟ್​ ಅಭಿಮಾನಿಗಳಿಗೆ ತೋರಿಸಿಲ್ಲ. ಸದ್ಯ, ಇಂಗ್ಲೆಂಡ್​ನಲ್ಲಿ ಆಂಗ್ಲರ ವಿರುದ್ಧ ಪಂದ್ಯ ನಡೆಯುತ್ತಿದೆ. ಈ ಕಾರಣಕ್ಕೆ ಟೀಂ ಇಂಡಿಯಾ ಅಲ್ಲಿಗೆ ತೆರಳಿದೆ. ಅನುಷ್ಕಾ ಕೂಡ ಅಲ್ಲಿಯೇ ಇದ್ದಾರೆ.

ಇದನ್ನೂ ಓದಿ: ಸ್ಟೋಕ್ಸ್ ಅವರಂತೆ ಬೇರೆ ಆಟಗಾರರು ಸಹ ಬಯೊ-ಬಬಲ್ ಬದುಕಿನಿಂದ ಬೇಸತ್ತು ಕ್ರಿಕೆಟ್​ನಿಂದ ಬ್ರೇಕ್ ತೆಗೆದುಕೊಳ್ಳಬಹುದು: ವಿರಾಟ್ ಕೊಹ್ಲಿ

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ