AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಪ್​ ಸೀನ್​ ವಿಚಾರಕ್ಕೆ ಇಡೀ ಚಿತ್ರತಂಡದ ವಿರೋಧ ಕಟ್ಟಿಕೊಂಡಿದ್ದ ಜಯಾ ಬಚ್ಚನ್; ನಂತರ ಏನಾಯ್ತು?

ಜಯಾ ಬಚ್ಚನ್​ ತೀರ್ಮಾನದಿಂದ ನಿರ್ದೇಶಕರು ಗರಂ ಆದರು. ನಟಿಯ ವಿರುದ್ಧ ಕಲಾವಿದರ ಸಂಘಕ್ಕೆ ದೂರು ನೀಡುವುದಾಗಿಯೂ ನಿರ್ಮಾಪಕರು ಪಟ್ಟು ಹಿಡಿದಿದ್ದರು.

ರೇಪ್​ ಸೀನ್​ ವಿಚಾರಕ್ಕೆ ಇಡೀ ಚಿತ್ರತಂಡದ ವಿರೋಧ ಕಟ್ಟಿಕೊಂಡಿದ್ದ ಜಯಾ ಬಚ್ಚನ್; ನಂತರ ಏನಾಯ್ತು?
‘ಏಕ್​ ನಝರ್​’ ಪೋಸ್ಟರ್​
ಮದನ್​ ಕುಮಾರ್​
|

Updated on:Apr 10, 2023 | 3:19 PM

Share

​ಭಾರತೀಯ ಚಿತ್ರರಂಗದ ಖ್ಯಾತ ನಟಿ ಜಯಾ ಬಚ್ಚನ್ (Jaya Bachchan)​ ಅವರಿಗೆ ಏಪ್ರಿಲ್​ 9ರಂದು ಜನ್ಮದಿನದ ಸಂಭ್ರಮ. ಆ ಪ್ರಯುಕ್ತ ಅಭಿಮಾನಿಗಳು ನಟಿಯ ಹಳೇ ದಿನಗಳನ್ನು ಮೆಲುಕು ಹಾಕಿದ್ದಾರೆ. ಮದುವೆಗೂ ಮುನ್ನ ಅಮಿತಾಭ್​ ಬಚ್ಚನ್​ (Amitabh Bachchan) ಮತ್ತು ಜಯಾ ಅವರು ‘ಏಕ್​ ನಝರ್​’ (Ek Nazar) ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಆ ಸಿನಿಮಾದ ಕಥೆಯಲ್ಲಿ ಖಳನಾಯಕನು ಜಯಾ ಅವರ ಬಟ್ಟೆ ಹರಿದು, ಅತ್ಯಾಚ್ಯಾರ ಮಾಡುವಂತಹ ಸನ್ನಿವೇಶ ಇತ್ತು. ಆದರೆ ಬಟ್ಟೆ ಹರಿದುಕೊಂಡು ನಟಿಸಲು ಜಯಾ ಒಪ್ಪಲೇ ಇಲ್ಲ. ಈ ಘಟನೆಯಿಂದಾಗಿ ಅವರು ಇಡೀ ಚಿತ್ರತಂಡದ ವಿರೋಧ ಕಟ್ಟಿಕೊಳ್ಳಬೇಕಾಯಿತು. ಅಮಿತಾಭ್​ ಬಚ್ಚನ್​ ಅವರು ಸಂಧಾನಕ್ಕೆ ನಿಂತರೂ ಕೂಡ ಜಯಾ ಅದಕ್ಕೆಲ್ಲ ಒಪ್ಪಲೇ ಇಲ್ಲ. ಆ ಘಟನೆಯನ್ನು ಈ ಹಿಂದಿನ ಸಂದರ್ಶನವೊಂದರಲ್ಲಿ ಜಯಾ ಬಚ್ಚನ್​ ಅವರು ಹೇಳಿಕೊಂಡಿದ್ದರು.

ಜಯಾ ಬಚ್ಚನ್​ ಅವರದ್ದು ನೇರ ಮತ್ತು ನಿಷ್ಠುರವಾದ ವ್ಯಕ್ತಿತ್ವ. ತಮ್ಮ ನಿಲುವುಗಳ ವಿಚಾರದಲ್ಲಿ ಅವರು ಎಂದಿಗೂ ರಾಜಿ ಆಗುವವರಲ್ಲ. ಅದು 1972 ಸಮಯ. ‘ಏಕ್​ ನಜರ್​’ ಶೂಟಿಂಗ್​ ನಡೆಯುತ್ತಿದ್ದಾಗ ಅತ್ಯಾಚಾರದ ಸನ್ನಿವೇಶದಲ್ಲಿ ಬಟ್ಟೆ ಹರಿದುಕೊಂಡು ನಟಿಸಲು ಜಯಾ ನಿರಾಕರಿಸಿದರು. ಅದು ನಿರ್ದೇಶಕರ ಮತ್ತು ನಿರ್ಮಾಪಕರ ಕೋಪಕ್ಕೆ ಕಾರಣ ಆಯಿತು. ಜಯಾ ವಿರುದ್ಧ ಕಲಾವಿದರ ಸಂಘಕ್ಕೆ ದೂರು ನೀಡುವುದಾಗಿಯೂ ನಿರ್ಮಾಪಕರು ಪಟ್ಟು ಹಿಡಿದಿದ್ದರು. ಆಗಲೂ ಜಯಾ ಬಚ್ಚನ್​ ಅವರು ರಾಜಿ ಆಗಲೇ ಇಲ್ಲ.

ಇದನ್ನೂ ಓದಿ: ‘ಕೌನ್ ಬನೇಗಾ ಕರೋಡ್​ಪತಿ’ ಕಾರ್ಯಕ್ರಮಕ್ಕೆ ಜಯಾ ಬಚ್ಚನ್ ಎಂಟ್ರಿ; ಕಣ್ಣೀರು ಹಾಕಿದ ಅಮಿತಾಭ್  

ಇದನ್ನೂ ಓದಿ
Image
ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್​?; ಸಿದ್ಧವಾಗುತ್ತಿದೆ ಮಿನಿ ಸಿನಿ ಸೀರಿಸ್​
Image
ಅಮಿತಾಭ್​ ಬಚ್ಚನ್​ ಸಿನಿಮಾಗೆ ತಡೆಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್​
Image
79ರ ಪ್ರಾಯದ ಅಮಿತಾಭ್​ ಆರೋಗ್ಯದ ಬಗ್ಗೆ ಮೂಡಿದೆ ಆತಂಕ; ಒಂದೇ ಟ್ವೀಟ್​ನಿಂದ ಗಾಬರಿಗೊಳಿಸಿದ ಬಿಗ್​ ಬಿ
Image
ಅಮಿತಾಭ್​ ಬಚ್ಚನ್​ ವ್ಯಕ್ತಿತ್ವ ಎಂಥದ್ದು? ಇಂಚಿಂಚು ವಿವರಿಸಿದ ರಶ್ಮಿಕಾ ಮಂದಣ್ಣ

ಈ ಜಟಾಪಟಿಯಿಂದಾಗಿ ಎರಡು ದಿನಗಳ ಕಾಲ ಶೂಟಿಂಗ್​ ನಿಂತಿತು. ಚಿತ್ರದ ನಾಯಕ ಅಮಿತಾಭ ಬಚ್ಚನ್​ ಅವರು ಆಗ ಮಾತುಕತೆಗೆ ಮುಂದಾದರು. ‘ಸ್ಕ್ರಿಪ್ಟ್​ನಲ್ಲಿ ಸನ್ನಿವೇಶ ಮತ್ತು ಪಾತ್ರವನ್ನು ಆ ರೀತಿ ಬರೆಯಲಾಗಿದೆ ಎಂದಮೇಲೆ ನೀವು ಹಾಗೆ ನಟಿಸಲೇಬೇಕಲ್ಲವೇ’ ಎಂದು ಅಮಿತಾಭ್​ ಬಚ್ಚನ್​ ಅವರು ಪ್ರಶ್ನಿಸಿದರು. ಆದರೂ ಕೂಡ ಜಯಾ ಒಪ್ಪಲೇ ಇಲ್ಲ.

ಇದನ್ನೂ ಓದಿ: ಮಾಸ್ಕ್​ ತೆಗೆಯಬೇಕು ಎಂದು ಜಯಾ ಬಚ್ಚನ್​ಗೆ ಒತ್ತಾಯ ಮಾಡಿದ ಕಾಜೋಲ್​; ನೆಟ್ಟಿಗರ​ ಪ್ರತಿಕ್ರಿಯೆ ಏನು?

ಎಕ್ಸ್​ಪೋಸ್​ ಮಾಡುವಂತಹ ಸನ್ನಿವೇಶಗಳಿಗೂ ಜಯಾ ಅವರು ನೋ ಎನ್ನುತ್ತಿದ್ದರು. ತಾವು ಮಧ್ಯಮ ವರ್ಗದಿಂದ ಬಂದಿದ್ದರಿಂದಲೇ ಈ ಮನಸ್ಥಿತಿ ರೂಢಿ ಆಗಿರಬಹುದು ಎಂದು ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ‘ಏಕ್​ ನಝರ್​’ ಸಿನಿಮಾ ಬಳಿಕ 1973ರಲ್ಲಿ ಜಯಾ ಮತ್ತು ಅಮಿತಾಭ್​ ಬಚ್ಚನ್​ ಅವರು ‘ಝಂಜೀರ್​’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದರು. ಅದೇ ವರ್ಷ ಜೂನ್​ 3ರಂದು ಅವರಿಬ್ಬರು ಹಸೆಮಣೆ ಏರಿದರು. 50ಕ್ಕೂ ಅಧಿಕ ಸಿನಿಮಾಗಳಲ್ಲಿ ಜಯಾ ಬಚ್ಚನ್​ ಅವರು ನಟಿಸಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:19 pm, Mon, 10 April 23

ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
‘ಕೊತ್ತಲವಾಡಿ’ ಬಜೆಟ್ ಎಷ್ಟು? ಕಾಟನ್ ಸೀರೆ ಉದಾಹರಣೆ ಕೊಟ್ಟ ಯಶ್ ತಾಯಿ
‘ಕೊತ್ತಲವಾಡಿ’ ಬಜೆಟ್ ಎಷ್ಟು? ಕಾಟನ್ ಸೀರೆ ಉದಾಹರಣೆ ಕೊಟ್ಟ ಯಶ್ ತಾಯಿ