AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ ಜಿಂಟಾ ಮುಂದೆ ಸೈಫ್​ ಅಲಿ ಖಾನ್​ ಸ್ಟಂಟ್​ ಎಡವಟ್ಟು​; ಸತ್ತು ಹೋಗ್ತಾರೆ ಅಂತ ಭಾವಿಸಿದ್ದ ನಟಿ

ಶೂಟಿಂಗ್​ ಬಿಡುವಿನಲ್ಲಿ ಪ್ರೀತಿ ಜಿಂಟಾ ಎದುರು ಬೈಕ್ ಸ್ಟಂಟ್​ ಮಾಡಲು ಸೈಫ್ ಅಲಿ ಖಾನ್​​ ಮುಂದಾಗಿದ್ದರು. ನಂತರ ನಡೆದಿದ್ದು ಅಪಾಯಕಾರಿ ಘಟನೆ.

ಪ್ರೀತಿ ಜಿಂಟಾ ಮುಂದೆ ಸೈಫ್​ ಅಲಿ ಖಾನ್​ ಸ್ಟಂಟ್​ ಎಡವಟ್ಟು​; ಸತ್ತು ಹೋಗ್ತಾರೆ ಅಂತ ಭಾವಿಸಿದ್ದ ನಟಿ
ಪ್ರೀತಿ ಜಿಂಟಾ, ಸೈಫ್ ಅಲಿ ಖಾನ್
TV9 Web
| Edited By: |

Updated on:Mar 12, 2022 | 11:10 AM

Share

ಸೈಫ್​ ಅಲಿ ಖಾನ್​ (Saif Ali Khan) ಅವರು ಪ್ರೀತಿ ಜಿಂಟಾ ಜೊತೆ ಆತ್ಮೀಯ ಒಡನಾಟ ಹೊಂದಿದ್ದಾರೆ. ಅನೇಕ ಸಿನಿಮಾಗಳಲ್ಲಿ ಇವರಿಬ್ಬರು ಜೊತೆಯಾಗಿ ಕೆಲಸ ಮಾಡಿದ್ದಾರೆ. ‘ದಿಲ್​ ಚಾಹ್ತಾ ಹೈ’, ‘ಕ್ಯಾ ಕೆಹ್ನಾ’, ‘ಕಲ್​ ಹೋ ನಾ ಹೋ’ ಸಿನಿಮಾಗಳಲ್ಲಿ ಇಬ್ಬರ ನಟನೆಯನ್ನು ಅಭಿಮಾನಿಗಳು ಮೆಚ್ಚಿಕೊಂಡರು. ಅದು ತೆರೆ ಮೇಲಿನ ಕಹಾನಿ. ಆದರೆ ತೆರೆ ಹಿಂದೆ ನಡೆದ ಘಟನೆಗಳ ಬಗ್ಗೆ ಕೆಲವರಿಗೆ ಗೊತ್ತಿಲ್ಲ. ಅಂಥ ಒಂದು ಘಟನೆ ಚಿತ್ರೀಕರಣದ ಸಮಯದಲ್ಲಿ ನಡೆದಿತ್ತು. ‘ಕ್ಯಾ ಕೆಹ್ನಾ’ (Kya Kehna) ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ ನಡೆದ ಸಂಗತಿ ಬಗ್ಗೆ ನಂತರದ ದಿನಗಳಲ್ಲಿ ಸ್ವತಃ ಸೈಫ್​ ಅಲಿ ಖಾನ್​ ಬಾಯಿ ಬಿಟ್ಟಿದ್ದರು. ಪ್ರೀತಿ ಜಿಂಟಾ (Preity Zinta) ಅವರನ್ನು ಇಂಪ್ರೆಸ್​ ಮಾಡಲು ಹೋಗಿ ಸೈಫ್​ ದೊಡ್ಡ ಎಡವಟ್ಟು ಮಾಡಿಕೊಂಡಿದ್ದರು. ಅವರಿಗೆ ಗಂಭೀರ ಗಾಯಗಳಾಗಿದ್ದವು. ತಲೆಗೆ ಹೊಲಿಗೆ ಹಾಕಲಾಗಿತ್ತು. ಈ ಹಿಂದೆ ‘ಕಾಫಿ ವಿಥ್​ ಕರಣ್​’ ಶೋನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಸೈಫ್​ ಅವರು ಈ ಘಟನೆಯನ್ನು ನೆನಪಿಸಿಕೊಂಡಿದ್ದರು.

ಸೈಫ್​ ಅಲಿ ಖಾನ್​ ಅವರು ಬೈಕ್​ ಸ್ಟಂಟ್​ ಮಾಡುವುದರಲ್ಲಿ ನಿಪುಣರಾಗಿದ್ದರು. ಆ ಕೌಶಲವನ್ನೇ ಇಟ್ಟುಕೊಂಡು ಪ್ರೀತಿ ಜಿಂಟಾ ಅವರನ್ನು ಇಂಪ್ರೆಸ್​ ಮಾಡಬೇಕು ಎಂಬುದು ಸೈಫ್​ ಉದ್ದೇಶ ಆಗಿತ್ತು. ಶೂಟಿಂಗ್​ ಬಿಡುವಿನಲ್ಲಿ ಪ್ರೀತಿ ಜಿಂಟಾ ಎದುರು ಬೈಕ್ ಸ್ಟಂಟ್​ ಮಾಡಲು ಸೈಫ್​ ಮುಂದಾದರು. ನಂತರ ನಡೆದಿದ್ದು ಅಪಾಯಕಾರಿ ಘಟನೆ.

‘ನಾನು ಪ್ರೀತಿ ಜಿಂಟಾ ಅವರನ್ನು ಇಂಪ್ರೆಸ್​ ಮಾಡಬೇಕು ಅಂತ ನಿರ್ಧರಿಸಿದೆ. ಮೊದಲ ಬಾರಿ ಓಕೆ, ಏನೂ ತೊಂದರೆ ಆಗಲಿಲ್ಲ. ಹಾಗಾಗಿ ಇನ್ನಷ್ಟು ಜೋಶ್​ ಬಂತು. ಎರಡನೇ ಬಾರಿ ಬೈಕ್​ ಸ್ಟಂಟ್​ ಮಾಡಲು ಹೋದೆ. ನನ್ನ ಬೈಕ್​ ಸ್ಕಿಡ್​ ಆಗಿ ನಾನು ಹಾರಿ ಬಿದ್ದೆ. ಅಲ್ಲೊಂದು ಕಲ್ಲು ಬಂಡೆ ಇತ್ತು. ಅಂದಾಜು 30 ಬಾರಿ ಪಲ್ಟಿ ಹೊಡೆದ ಬಳಿಕ ಆ ಬಂಡೆಗೆ ಹೋಗಿ ಗುದ್ದಿದೆ. ನನಗೆ ಗಾಯ ಆಗಿ ರಕ್ತ ಸುರಿಯಲು ಶುರುವಾಯಿತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರು. ಹಲವು ಹೊಲಿಗೆ ಹಾಕಿದರು’ ಎಂದು ಸೈಫ್​ ವಿವರಿಸಿದ್ದರು. ಆ ಘಟನೆಯಲ್ಲಿ ಸೈಫ್​ ಗಂಭೀರವಾಗಿ ಗಾಯಗೊಂಡಿದ್ದು ನೋಡಿ ಅವರು ಸತ್ತೇ ಹೋದ್ರು ಅಂತ ಪ್ರೀತಿ ಜಿಂಟಾ ಭಾವಿಸಿದ್ದರಂತೆ. ಆದರೆ ಅದೃಷ್ಟವಶಾತ್​ ಸೈಫ್​ ಪ್ರಾಣಕ್ಕೆ ಏನೂ ಅಪಾಯ ಆಗಲಿಲ್ಲ.

1993ರಿಂದಲೂ ಸೈಫ್​ ಅಲಿ ಖಾನ್​ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 1991ರಲ್ಲಿ ನಟಿ ಅಮೃತಾ ಸಿಂಗ್ ಜೊತೆ ಅವರ ಮೊದಲ ಮದುವೆ ನೆರವೇರಿತು. ಸೈಫ್​ ಅಲಿ ಖಾನ್​ ಅವರು ಪ್ರೀತಿ ಜಿಂಟಾ ಅವರನ್ನು ಇಂಪ್ರೆಸ್​ ಮಾಡಲು ಹೋಗಿ ಪೆಟ್ಟು ಮಾಡಿಕೊಂಡಿದ್ದು 1999ರ ಸಮಯದಲ್ಲಿ. ಮೊದಲ ಪತ್ನಿ ಅಮೃತಾಗೆ 2004ರಲ್ಲಿ ಸೈಫ್​ ವಿಚ್ಛೇದನ ನೀಡಿದರು. ಆ ದಂಪತಿಗೆ ಇಬ್ಬರು ಮಕ್ಕಳು. ಮಗಳು ಸಾರಾ ಆಲಿ ಖಾನ್​ ಈಗಾಗಲೇ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಪುತ್ರ ಇಬ್ರಾಹಿಂ ಅಲಿ ಖಾನ್​ ಕೂಡ ಚಿತ್ರರಂಗಕ್ಕೆ ಎಂಟ್ರಿ ನೀಡಲು ಕಾಯುತ್ತಿದ್ದಾರೆ.

2012ರಲ್ಲಿ ನಟಿ ಕರೀನಾ ಕಪೂರ್​ ಖಾನ್​ ಜೊತೆ ಸೈಫ್​ ಅಲಿ ಖಾನ್​ ಎರಡನೇ ಮದುವೆ ಆದರು. ಈ ಜೋಡಿಗೆ ತೈಮೂರ್​ ಅಲಿ ಖಾನ್​ ಮತ್ತು ಜೇಹ್​ ಅಲಿ ಖಾನ್​ ಎಂಬಿಬ್ಬರು ಗಂಡು ಮಕ್ಕಳು ಇದ್ದಾರೆ. ಸದ್ಯ ಹಲವು ಸಿನಿಮಾಗಳಲ್ಲಿ ಸೈಫ್​ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ:

ಸೈಫ್​ ಅಲಿ ಖಾನ್​ ಪುತ್ರ ಇಬ್ರಾಹಿಂ ಜತೆ ಪಲಕ್​ ತಿವಾರಿ ಡೇಟಿಂಗ್​; ಕ್ಯಾಮೆರಾ ಕಂಡ ತಕ್ಷಣ ಮುಖ ಮುಚ್ಚಿಕೊಂಡ ನಟಿ

6ನೇ ಕ್ಲಾಸ್​ ಪರೀಕ್ಷೆಯಲ್ಲಿ ಸೈಫ್​-ಕರೀನಾ ಪುತ್ರನ ಬಗ್ಗೆ ಪ್ರಶ್ನೆ! ಇಲ್ಲಿದೆ ಪ್ರಶ್ನೆ ಪತ್ರಿಕೆಯ ವೈರಲ್​ ಫೋಟೋ

Published On - 9:15 am, Sat, 12 March 22

Follow Us
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್