AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರೋಬೋ’ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಲಿಲ್ಲ ಏಕೆ?

Shah Rukh Khan: ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲಾಗಿರುವ ಸಿನಿಮಾಗಳಲ್ಲಿ ಒಂದು ರಜನೀಕಾಂತ್ ನಟನೆಯ ‘ರೋಬೋ’ ಆದರೆ ಆ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಬೇಕಿತ್ತು. ಶಾರುಖ್ ಖಾನ್ ಜೊತೆ ಚಿತ್ರೀಕರಣ ಆರಂಭವಾಗುವ ಕೆಲ ದಿನಗಳ ಮುಂಚೆ ಸಿನಿಮಾ ನಿಂತು ಹೋಯ್ತು. ಕಾರಣವೇನು?

‘ರೋಬೋ’ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಲಿಲ್ಲ ಏಕೆ?
ಮಂಜುನಾಥ ಸಿ.
|

Updated on: Nov 20, 2024 | 11:57 AM

Share

ಇಂದು ಭಾರತೀಯ ಸಿನಿಮಾಗಳು, ವಿಶೇಷವಾಗಿ ದಕ್ಷಿಣ ಭಾರತದ ಸಿನಿಮಾಗಳು ವಿಶ್ವಮಟ್ಟದಲ್ಲಿ ಮಿಂಚುತ್ತಿವೆ. ಪ್ರತಿ ಸಿನಿಮಾಕ್ಕೂ ನೂರಾರು ಕೋಟಿ ಬಂಡವಾಳ ಹೂಡಲಾಗುತ್ತಿದೆ. ಅತ್ಯುತ್ತಮ ವಿಎಫ್​ಎಕ್ಸ್, ಗ್ರಾಫಿಕ್ಸ್​ಗಳನ್ನು ಬಳಸಲಾಗುತ್ತಿದೆ. ವಿದೇಶಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಇಂದಿಗೆ 15 ವರ್ಷಗಳ ಮುಂಚೆಯೇ ಇದನ್ನೆಲ್ಲ ಮಾಡಿದ್ದರು ತಮಿಳಿನ ಸ್ಟಾರ್ ನಿರ್ದೇಶಕ ಶಂಕರ್. 2010 ರಲ್ಲಿ ಬಿಡುಗಡೆ ಆದ ರಜನೀಕಾಂತ್ ನಟನೆಯ ‘ರೊಬೊ’ ಸಿನಿಮಾ ಆಗಿನ ಕಾಲಕ್ಕೆ ಅತ್ಯುತ್ತಮ ಗುಣಮಟ್ಟದ ವಿಎಫ್​ಎಕ್ಸ್​ ಹೊಂದಿತ್ತು. ಆಗ ಸಿನಿಮಾ ಕ್ಷೇತ್ರದಲ್ಲಿ ಲಭ್ಯವಿದ್ದ ಎಲ್ಲ ಹೊಸ ತಂತ್ರಜ್ಞಾನವನ್ನು ಬಳಸಲಾಗಿತ್ತು. 100 ಕೋಟಿಗೂ ಹೆಚ್ಚಿನ ಬಜೆಟ್ ಅನ್ನು ಆ ಸಿನಿಮಾಕ್ಕೆ ಹಾಕಲಾಗಿತ್ತು. ಸಿನಿಮಾ ಬ್ಲಾಕ್ ಬಸ್ಟರ್ ಸಹ ಆಯ್ತು. ಆದರೆ ಆ ಸಿನಿಮಾದಲ್ಲಿ ಅಸಲಿಗೆ ನಟಿಸಬೇಕಿದ್ದು ರಜನೀಕಾಂತ್ ಅಲ್ಲ ಬದಲಿಗೆ ಶಾರುಖ್ ಖಾನ್.

‘ರೋಬೋ’ ಸಿನಿಮಾದ ರೋಬೊ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಬೇಕು ಎಂಬುದು ಶಂಕರ್ ಆಸೆಯಾಗಿತ್ತು. ಶಾರುಖ್ ಖಾನ್​ಗೆ ಸಹ ಸಿನಿಮಾದ ಕತೆ, ಮೇಕಿಂಗ್​ ಯೋಜನೆಗಳು ಬಹಳ ಇಷ್ಟವಾಗಿಬಿಟ್ಟಿದ್ದವು. ಆ ಸಿನಿಮಾವನ್ನು ತಾವೇ ನಿರ್ಮಾಣವೂ ಮಾಡುವುದಾಗಿ ಹೇಳಿದ್ದರು. ಸಿನಿಮಾದ ಪ್ರೀ ಪ್ರೊಡಕ್ಷನ್ ಸಹ ಆರಂಭವಾಗಿದ್ದವು. ಸಿನಿಮಾದ ನಾಯಕಿಯ ಡೇಟ್ಸ್ ಸಹ ತೆಗೆದುಕೊಳ್ಳಲಾಗಿತ್ತು. ಆದರೆ ಅದಾದ ಬಳಿಕ ಸಿನಿಮಾದಿಂದ ಶಾರುಖ್ ಖಾನ್ ಹೊರಬೇಕಾಯ್ತು.

ಈ ಬಗ್ಗೆ ಈ ಹಿಂದೆಯೇ ಮಾತನಾಡಿರುವ ಶಾರುಖ್ ಖಾನ್, ‘ನಾನು ಆ ಸಿನಿಮಾದ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದೆವು. ನಾನು ಹಾಗೂ ಶಂಕರ್ ಸಾಕಷ್ಟು ಚರ್ಚೆ ಮಾಡಿದ್ದೆವು. ಆ ಸಿನಿಮಾಕ್ಕೆ ನಾವು ಪ್ರಿಯಾಂಕಾ ಚೋಪ್ರಾ ಅವರ ಡೇಟ್ಸ್ ಪಡೆದುಕೊಂಡಿದ್ದೆವು. ‘ಫ್ಯಾಷನ್’ ಸಿನಿಮಾವನ್ನು ಬಿಟ್ಟು ಪ್ರಿಯಾಂಕಾ ಚೋಪ್ರಾ ನಾಲ್ಕು ತಿಂಗಳ ಡೇಟ್ಸ್ ನಮಗೆ ಕೊಟ್ಟಿದ್ದರು. ಆದರೆ ಅಂತಿಮವಾಗಿ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಬಂದು ಸಿನಿಮಾ ಕೈಬಿಡಬೇಕಾಯ್ತು’ ಎಂದಿದ್ದಾರೆ ಶಾರುಖ್ ಖಾನ್.

ಇದನ್ನೂ ಓದಿ:Shah Rukh Khan: ನಟ ಶಾರುಖ್ ಖಾನ್​ಗೆ ಕೊಲೆ ಬೆದರಿಕೆಯೊಡ್ಡಿದ್ದ ವಕೀಲನ ಬಂಧನ

‘ಶಂಕರ್ ಅವರ ಸಿನಿಮಾ ಮೇಕಿಂಗ್ ಪ್ರಕ್ರಿಯೆ ಭಿನ್ನವಾಗಿತ್ತು. ಅವರು ‘ರೋಬೊ’ ಸಿನಿಮಾ ಮಾಡಲು ಎರಡು ವರ್ಷದ ಸಮಯ ಕೇಳಿದರು. ನಾನು ಅಷ್ಟು ಸಾಧ್ಯವಿಲ್ಲ ಎಂದೆ. ನನಗೆ ಒಂದೇ ಸ್ಟ್ರೆಚ್​ನಲ್ಲಿ ಸಿನಿಮಾ ಮುಗಿಸಿಕೊಡಿ ಎಂದು ಕೇಳಿದೆ. ಅವರು, ಇದು ಹೊಸ ರೀತಿಯ ಸಿನಿಮಾ ಸಾಕಷ್ಟು ಬದಲಾವಣೆ ಮಾಡುತ್ತಲೇ ಇರಬೇಕಾಗುತ್ತದೆ. ರೀ ಶೂಟ್​ಗಳು ಸಹ ಇರುತ್ತವೆ ಒಂದೇ ಸ್ಟ್ರೆಚ್​ನಲ್ಲಿ ಮುಗಿಸಿಕೊಡಲು ಸಾಧ್ಯವಾಗುವುದೇ ಇಲ್ಲ ಎಂದರು. ಆದರೆ ಒಬ್ಬ ನಿರ್ಮಾಪಕನಾಗಿ ನನಗೆ ಅದು ಸಾಧ್ಯವಿರಲಿಲ್ಲ. ಇತರೆ ನಟರ ಎರಡು ವರ್ಷದ ಡೇಟ್ಸ್​ಗಳನ್ನು ಹೇಗೆ ತಾನೆ ಕೇಳುವುದು, ಹಾಗಾಗಿ ನಾನು ಹಾಗೂ ಶಂಕರ್ ಇಬ್ಬರೂ ಒಪ್ಪಿ ಆ ಸಿನಿಮಾದಿಂದ ದೂರಾದೆವು’ ಎಂದಿದ್ದಾರೆ ಶಾರುಖ್ ಖಾನ್.

‘ರೋಬೋ ಒಂದು ಅದ್ಭುತವಾದ ಸಿನಿಮಾ. ರಜನೀಕಾಂತ್ ಅವರಿಗೆ ಅದ್ಭುತವಾಗಿ ಆ ಸಿನಿಮಾ ಸೂಟ್ ಆಗಿದೆ. ಒಂದೊಮ್ಮೆ ನಾನು ಮಾಡಿದ್ದಿದ್ದರೆ ಅಷ್ಟು ಚೆನ್ನಾಗಿ ಬರುತ್ತಿತ್ತೊ ಇಲ್ಲವೊ ಗೊತ್ತಿಲ್ಲ. ಆ ಸಿನಿಮಾ ಯಾರು ಮಾಡಬೇಕಿತ್ತು, ಅವರಿಗೇ ಅದು ಸಿಕ್ಕಿದೆ. ನಾನು ಹಾಗೂ ಶಂಕರ್ ಸಹ ಗೆಳೆಯರಾಗಿಯೇ ಉಳಿದಿದ್ದೀವಿ. ಯಾವುದೇ ಮುನಿಸು ಇಲ್ಲದೆ ನಾವು ಆ ಸಿನಿಮಾದಿಂದ ದೂರಾದೆವು. ಮುಂದೆ ಮತ್ತೆಂದಾದರೂ ಕೆಲಸ ಮಾಡೋಣ ಎಂದುಕೊಂಡು ನಾವು ಪರಸ್ಪರ ಬೈ ಹೇಳಿದ್ದೆವು’ ಎಂದಿದ್ದರು ಶಾರುಖ್ ಖಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ