ಯಶ್​ ಹಿಂದಿ ಪ್ರಾಜೆಕ್ಟ್​ ಬಗ್ಗೆ ಇನ್ನೊಂದು ವಿಷಯ ಬಹಿರಂಗ; ರಾವಣನ ಎಂಟ್ರಿ ಯಾವಾಗ?

|

Updated on: Apr 03, 2024 | 5:28 PM

ಏಪ್ರಿಲ್​ 2ರಂದು ನಿರ್ಮಾಪಕರ ಜನ್ಮದಿನವಾದ್ದರಿಂದ ಆ ದಿನವೇ ಸಿನಿಮಾದ ಶೂಟಿಂಗ್​ ಪ್ರಾರಂಭ ಮಾಡಬೇಕು ಎಂಬ ಆಸೆ ಅವರದ್ದಾಗಿತ್ತು. ಆದ್ದರಿಂದ ಸಣ್ಣ ಸನ್ನಿವೇಶದ ಮೂಲಕ ಅವರು ಶೂಟಿಂಗ್​ ಆರಂಭ ಮಾಡಿದರು. ಆದರೆ ಆ ಸೀನ್​ಗಳಲ್ಲಿ ಕೇವಲ ಬಾಲನಟರಷ್ಟೇ ಭಾಗಿ ಆಗಿದ್ದರು. ಯಶ್​ ಅವರು ಚಿತ್ರೀಕರಣದ ಸೆಟ್​ನತ್ತ ಸುಳಿಯಲಿಲ್ಲ.

ಯಶ್​ ಹಿಂದಿ ಪ್ರಾಜೆಕ್ಟ್​ ಬಗ್ಗೆ ಇನ್ನೊಂದು ವಿಷಯ ಬಹಿರಂಗ; ರಾವಣನ ಎಂಟ್ರಿ ಯಾವಾಗ?
ಯಶ್​
Follow us on

ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮಿಂಚುತ್ತಿರುವ ನಟ ‘ರಾಕಿಂಗ್​ ಸ್ಟಾರ್​’ ಯಶ್​ (Yash) ಅವರಿಗೆ ಸಖತ್​ ಬೇಡಿಕೆ ಇದೆ. ಅವರ ಕಾಲ್​ಶೀಟ್​ ಪಡೆಯಲು ಬಾಲಿವುಡ್​ ಮಂದಿ ಕಾದಿದ್ದಾರೆ. ಸದ್ಯಕ್ಕೆ ಯಶ್​ ಅವರು ‘ಟಾಕ್ಸಿಕ್​’ (Toxic) ಸಿನಿಮಾದ ಮೇಲೆ ಸಂಪೂರ್ಣ ಗಮನ ಹರಿಸುತ್ತಿದ್ದಾರೆ. ಈ ನಡುವೆ ಹಿಂದಿಯ ‘ರಾಮಾಯಣ’ (Ramayana) ಸಿನಿಮಾದಲ್ಲಿ ಯಶ್​ ನಟಿಸುತ್ತಾರೆ ಎಂಬ ಸುದ್ದಿ ಜೋರಾಗಿದೆ. ಆ ಬಗ್ಗೆ ಇನ್ನೊಂದು ಗಾಸಿಪ್​ ಕೇಳಿಬಂದಿದೆ. ಈ ಸಿನಿಮಾ ಮೂರು ಪಾರ್ಟ್​ಗಳಲ್ಲಿ ಮೂಡಿಬರಲಿದ್ದು, ಮೊದಲ ಪಾರ್ಟ್​ನಲ್ಲಿ ಯಶ್​ ನಟಿಸುವುದಿಲ್ಲ ಎನ್ನಲಾಗಿದೆ! ಈಗಾಗಲೇ ಈ ಸಿನಿಮಾದ ಶೂಟಿಂಗ್​ ಶುರುವಾಗಿದೆ.

ಏಪ್ರಿಲ್​ 2ರಂದು ನಿರ್ಮಾಪಕ ನಮಿತ್​ ಮಲ್ಹೋತ್ರಾ ಅವರ ಜನ್ಮದಿನ. ಆ ವಿಶೇಷ ದಿನದಂದೇ ರಾಮಾಯಣ ಸಿನಿಮಾದ ಶೂಟಿಂಗ್​ ಆರಂಭಿಸಬೇಕು ಎಂಬ ಆಸೆ ಅವರದ್ದಾಗಿತ್ತು. ಹಾಗಾಗಿ ಅವರು ಚಿಕ್ಕ ದೃಶ್ಯದ ಮೂಲಕ ಏ.2ರಂದು ಚಿತ್ರೀಕರಣ ಪ್ರಾರಂಭ ಮಾಡಿದರು. ಆದರೆ ಈ ದೃಶ್ಯಗಳಲ್ಲಿ ಕೇವಲ ಬಾಲನಟರು ಮಾತ್ರ ಭಾಗಿ ಆಗಿದ್ದರು ಎನ್ನಲಾಗಿದೆ. ಯಶ್​, ರಣಬೀರ್​ ಕಪೂರ್​, ಸಾಯಿ ಪಲ್ಲವಿ ಅವರು ಶೂಟಿಂಗ್​ ಸೆಟ್​ನತ್ತ ಸುಳಿಯಲಿಲ್ಲ.

ಇದನ್ನೂ ಓದಿ: ಹೊಸ ಸಿನಿಮಾದಲ್ಲಿ ಯಶ್​ಗೆ ಜೋಡಿ ಆಗ್ತಾರಾ 52 ವರ್ಷದ ನಟಿ ಸಾಕ್ಷಿ ತನ್ವರ್​?

ಈ ಸಿನಿಮಾದಲ್ಲಿ ರಣಬೀರ್ ಕಪೂರ್​ ಅವರು ರಾಮನ ಪಾತ್ರ ಮಾಡಲಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ಅಭಿನಯಿಸುತ್ತಾರೆ ಎನ್ನಲಾಗಿದೆ. ಅದೇ ರೀತಿ, ರಾಮಾಯಣದ ಇನ್ನೊಂದು ಪ್ರಮುಖ ಪಾತ್ರವಾದ ರಾವಣನಾಗಿ ಯಶ್​ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಆಗಿದೆ. ಅಚ್ಚರಿ ಏನೆಂದರೆ ಮೂರು​ ಪಾರ್ಟ್​ಗಳ ಈ ಸಿನಿಮಾದಲ್ಲಿ ರಾವಣನ ಎಂಟ್ರಿ ಆಗುವುದು 2ನೇ ಪಾರ್ಟ್​ನಲ್ಲಿ ಎನ್ನಲಾಗಿದೆ.

ಇದನ್ನೂ ಓದಿ: ಪದೇ ಪದೇ ಪ್ರಶ್ನೆ ಕೇಳಿದವರಿಗೆ ಯಶ್​ ಉತ್ತರ; ಝಲಕ್ ತೋರಿಸಿದ ರಾಕಿ ಭಾಯ್​

‘ಬಾಲಿವುಡ್​ ಹಂಗಾಮಾ’ ವರದಿ ಪ್ರಕಾರ, ಮೊದಲ ಪಾರ್ಟ್​​ನಲ್ಲಿ ರಾವಣನ ಪಾತ್ರ ಇರುವುದಿಲ್ಲ. ಹಾಗಾಗಿ ಯಶ್​ ಅವರು ಮೊದಲ ಪಾರ್ಟ್​ನ ಶೂಟಿಂಗ್​ನಲ್ಲಿ ಪಾಲ್ಗೊಳ್ಳುವುದಿಲ್ಲ. ಅಲ್ಲಿಯ ತನಕ ಅವರು ‘ಟಾಕ್ಸಿಕ್​’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರಲಿದ್ದಾರೆ. ‘ಟಾಕ್ಸಿಕ್​’ ಕೆಲಸಗಳು ಮುಗಿದ ನಂತರವಷ್ಟೇ ಅವರು ‘ರಾಮಾಯಣ’ ಶೂಟಿಂಗ್​ ಸೆಟ್​ಗೆ ಎಂಟ್ರಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ನಿತೇಶ್​ ತಿವಾರಿ ಅವರು ರಾಮಾಯಣ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ರಣಬೀರ್​ ಕಪೂರ್​ ಅವರು ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.