AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಮದುವೆ ಆದ್ಮೇಲೆ ಮೋಸ ಮಾಡಲ್ಲ; ಮನಸಿನ ಮಾತು ಬಿಚ್ಚಿಟ್ಟ ವೈಷ್ಣವಿ

ಮೊದಲ ಇನ್ನಿಂಗ್ಸ್​ನಲ್ಲಿ ಮದುವೆ ವಿಚಾರ ಮಾತನಾಡಿದ್ದಕ್ಕೆ ವೈಷ್ಣವಿ ತಾಯಿ ಸಿಟ್ಟಾಗಿದ್ದರು. ಈ ಕಾರಣಕ್ಕೆ ವೈಷ್ಣವಿ ಮದುವೆ ವಿಚಾರದಲ್ಲಿ ಸುಮ್ಮನಿದ್ದಾರೆ. ಆ ಬಗ್ಗೆ ಅವರು ಹೆಚ್ಚು ಮಾತನಾಡುತ್ತಿಲ್ಲ.

ನಾನು ಮದುವೆ ಆದ್ಮೇಲೆ ಮೋಸ ಮಾಡಲ್ಲ; ಮನಸಿನ ಮಾತು ಬಿಚ್ಚಿಟ್ಟ ವೈಷ್ಣವಿ
ಚಕ್ರವರ್ತಿ ಚಂದ್ರಚೂಡ್​, ವೈಷ್ಣವಿ
TV9 Web
| Updated By: ಮದನ್​ ಕುಮಾರ್​|

Updated on: Jul 06, 2021 | 3:20 PM

Share

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ರ ಮೊದಲ ಇನ್ನಿಂಗ್ಸ್​ನಲ್ಲಿ ವೈಷ್ಣವಿ ನಿತ್ಯ ಒಮ್ಮೆಯಾದರೂ ಮದುವೆ ವಿಚಾರ ಮಾತನಾಡುತ್ತಿದ್ದರು. ಅವರು ಹೈಲೈಟ್​ ಆಗೋಕೆ ಇದು ಕೂಡ ಪ್ರಮುಖ ಕಾರಣವಾಗಿತ್ತು. ಪರಿಣಾಮ ಅವರಿಗೆ ಸಾಕಷ್ಟು ಮದುವೆ ಪ್ರಪೋಸಲ್​ಗಳು ಬಂದವು. ಆದರೆ, ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಅವರು ಮದುವೆ ಬಗ್ಗೆ ಮಾತನಾಡಿದ್ದು ತುಂಬಾನೇ ಕಡಿಮೆ. ಆದರೆ, ಈಗ ಅವರ ಬಾಯಿಂದ ಮತ್ತೆ ಮದುವೆ ವಿಚಾರ ಬಂದಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಮದುವೆ ವಿಚಾರ ಮಾತನಾಡಿದ್ದಕ್ಕೆ ವೈಷ್ಣವಿ ತಾಯಿ ಸಿಟ್ಟಾಗಿದ್ದರು. ಕುಟುಂಬದವರಿಗೆ ಜವಾಬ್ದಾರಿ ಇಲ್ಲ ಎಂದು ಜನರು ಭಾವಿಸುತ್ತಾರೆ ಎಂಬುದಾಗಿ ವೈಷ್ಣವಿ ತಾಯಿ ಹೇಳಿದ್ದರು. ಈ ಕಾರಣಕ್ಕೆ ವೈಷ್ಣವಿ ಮದುವೆ ವಿಚಾರದಲ್ಲಿ ಸುಮ್ಮನಿದ್ದಾರೆ. ಆ ಬಗ್ಗೆ ಅವರು ಹೆಚ್ಚು ಮಾತನಾಡುತ್ತಿಲ್ಲ.

ಈಗ ಬಿಗ್​ ಬಾಸ್​ ಮನೆಯಲ್ಲಿ ವೈಷ್ಣವಿ ಮದುವೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಚಕ್ರವರ್ತಿ ಚಂದ್ರಚೂಡ್​ ಅವರು ವೈಷ್ಣವಿ ಮದುವೆ ವಿಚಾರ ತೆಗೆದಿದ್ದಾರೆ. ‘ನಿಮ್ಮಲ್ಲೊಂದು ದೈವಿಕ ಶಕ್ತಿ ಇದೆ. ಯಾಕೆ ಕೌಂಟುಬಿಕ ಜಂಜಾಟಕ್ಕೆ ಬೀಳುತ್ತಿದ್ದೀರೋ ಗೊತ್ತಿಲ್ಲ. ಈಗಲೂ ದೊಡ್ಡವನಾಗಿ ಹೇಳ್ತಾ ಇದೀನಿ. ಮದುವೆ ಆಗಬೇಡಿ’ ಎಂದು ವೈಷ್ಣವಿಗೆ ಚಕ್ರವರ್ತಿ ಕಿವಿಮಾತು ಹೇಳಿದರು.

‘ಜೀವನ ಅಂದಮೇಲೆ ಎಲ್ಲವನ್ನೂ ನೋಡಬೇಕು. ನಾನು ಸಾಯುವಾಗ ಜೀವನದಲ್ಲಿ ಯಾವುದನ್ನೂ ಮಿಸ್ ಮಾಡಿಕೊಂಡೆ ಎಂದು ನನಗೆ ಅನ್ನಿಸಬಾರದು. ಹೀಗಾಗಿ ಮದುವೆ ಆಗಬೇಕು’ ಎಂದು ವೈಷ್ಣವಿ ತಮ್ಮ ವಾದ ಮುಂದಿಟ್ಟರು.

ವೈಷ್ಣವಿ ಮದುವೆ ಆದಮೇಲೆ ಹುಡುಗನಿಗೆ ಮೋಸ ಮಾಡುವುದಿಲ್ಲ ಎಂದಿದ್ದಾರೆ. ‘ನಾನು ವಿವಾಹ ಅಂತ ಆದ್ಮೇಲೆ ಚೀಟ್​ ಮಾಡುವುದಿಲ್ಲ. ಅವನ ಜೀವನ ಚೆನ್ನಾಗಿರಬೇಕು’ ಎಂದು ವೈಷ್ಣವಿ ತಮ್ಮ ಮನದಾಳದ ಮಾತನ್ನು ಹೇಳಿದರು. ಹಾಗಾದರೆ ಮನೆಯಲ್ಲಿ ಗಂಡು ನೋಡ್ತಾ ಇದಾರಾ ಎನ್ನುವ ಪ್ರಶ್ನೆಯನ್ನು ಚಕ್ರವರ್ತಿ ಕೇಳಿದರು. ‘ಯಾಕೆ ಸರ್​ ನನ್ನ ಬಾಯಿಂದ ಏನೇನೋ ಬರ್ಸ್ತೀರಾ? ನಾನು ಇನ್ನು ಆ ಬಗ್ಗೆ ಮಾತನಾಡುವುದಿಲ್ಲ’ ಎಂದು ವೈಷ್ಣವಿ ಶಪಥ ಮಾಡಿದರು.

ಇದನ್ನೂ ಓದಿ:

‘ಮಂಜು ವಿನ್ನರ್​, ವೈಷ್ಣವಿ ರನ್ನರ್​ ಅಪ್​’; ಬಿಗ್​ ಬಾಸ್​ ಸ್ಪರ್ಧಿ ನುಡಿದ್ರು ಭವಿಷ್ಯ

‘ಅಗ್ನಿಸಾಕ್ಷಿ’ ಶೂಟಿಂಗ್ ವೇಳೆ ವೈಷ್ಣವಿ ಕೈಯಲ್ಲಿ ಯಾವಾಗಲೂ ಇರ್ತಿತ್ತು ರೇಷ್ಮೆ ಸೀರೆ; ಸುದೀಪ್ ಬಿಚ್ಚಿಟ್ಟ ಅಚ್ಚರಿಯ ವಿಚಾರ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!