AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರರಂಗದಲ್ಲಿಲ್ಲ ಚಾನ್ಸ್​​, ಆಲ್ಕೋಹಾಲ್​ ಮಾರಾಟ ಆರಂಭಿಸಿದ ಖ್ಯಾತ ಕಾಮಿಡಿಯನ್​; ಫೋಟೋ ವೈರಲ್

‘ಪವರ್​’ ಸೇರಿ ಕೆಲ ತೆಲುಗು ಸಿನಿಮಾಗಳಲ್ಲಿ ರಘು ನಟಿಸಿದ್ದರು. ಆದರೆ, ಚಿತ್ರರಂಗ ಅವರ ಕೈ ಹಿಡಿಯಲೇ ಇಲ್ಲ. ಎರಡು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಇದ್ದ ಹೊರತಾಗಿಯೂ ಅವರಿಗೆ ಬೇರೂರೋಕೆ ಸಾಧ್ಯವಾಗಿಲ್ಲ.

ಚಿತ್ರರಂಗದಲ್ಲಿಲ್ಲ ಚಾನ್ಸ್​​, ಆಲ್ಕೋಹಾಲ್​ ಮಾರಾಟ ಆರಂಭಿಸಿದ ಖ್ಯಾತ ಕಾಮಿಡಿಯನ್​; ಫೋಟೋ ವೈರಲ್
ರಘು
TV9 Web
| Edited By: |

Updated on:Dec 02, 2021 | 6:31 PM

Share

ಚಿತ್ರರಂಗಕ್ಕೆ ಬರುವ ಸಾಕಷ್ಟು ಜನರು ನಾನಾ ಕನಸುಗಳನ್ನು ಕಂಡಿರುತ್ತಾರೆ. ನಟನೆ ಜತೆಗೆ ಇಲ್ಲಿ ಅದೃಷ್ಟವೂ ಮುಖ್ಯ. ಕೆಲವರು ದೊಡ್ಡ ಸ್ಟಾರ್​ಗಳಾಗಿ ಬೆಳೆದರೆ, ಇನ್ನೂ ಕೆಲವರು ಹೇಳ ಹೆಸರಿಲ್ಲದೆ ಹೋಗಿದ್ದಾರೆ. ಅವಕಾಶ ಸಿಗದೆ, ನಟಿಸಿದ ಸಿನಿಮಾ ರಿಲೀಸ್​ ಆಗದೆ ತೊಂದರೆಗೆ ಸಿಲುಕಿದ ಸಾಕಷ್ಟು ಕಲಾವಿದರಿದ್ದಾರೆ. ತೆಲುಗಿನ ಖ್ಯಾತ ಹಾಸ್ಯ ನಟ ರಘು ಕರುಮಂಚಿಗೂ ಈಗ ಇದೇ ಪರಿಸ್ಥಿತಿ ಎದುರಾಗಿದೆ. ಕೊವಿಡ್​ನಿಂದ ಕಳೆದ ಎರಡು ವರ್ಷಗಳಲ್ಲಿ ಸರಿಯಾದ ಬೆಳೆ ತೆಗೆಯೋಕೆ ಆಗುತ್ತಿಲ್ಲ. ಸಿನಿಮಾ ಕೆಲಸಗಳು ಅರ್ಧಕ್ಕೆ ನಿಂತಿವೆ. ಈ ಕಾರಣಕ್ಕೆ ಮದ್ಯ ಮಾರಾಟಕ್ಕೆ ಇಳಿದಿದ್ದಾರೆ.

‘ಪವರ್​’ ಸೇರಿ ಕೆಲ ತೆಲುಗು ಸಿನಿಮಾಗಳಲ್ಲಿ ರಘು ನಟಿಸಿದ್ದರು. ಆದರೆ, ಚಿತ್ರರಂಗ ಅವರ ಕೈ ಹಿಡಿಯಲೇ ಇಲ್ಲ. ಎರಡು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಇದ್ದ ಹೊರತಾಗಿಯೂ ಅವರಿಗೆ ಬೇರೂರೋಕೆ ಸಾಧ್ಯವಾಗಿಲ್ಲ. ಹೇಳಿಕೊಳ್ಳುವಂತಹ ಪಾತ್ರಗಳೂ ಸಿಕ್ಕಿಲ್ಲ. ಕೊವಿಡ್​ ಸಂದರ್ಭದಲ್ಲಿ ಸಂಪೂರ್ಣವಾಗಿ ನಿರುದ್ಯೋಗಿ ಆದರು. ಹೀಗಾಗಿ, ಜೀವನಕ್ಕೆ ಬೇರೆ ದಾರಿ ನೋಡಿಕೊಳ್ಳುವುದು ಅವರಿಗೆ ಅನಿವಾರ್ಯ ಆಯಿತು. ಹೀಗಾಗಿ, ಆರ್ಗ್ಯಾನಿಕ್​ ಕೃಷಿ ಆರಂಭಿಸಿದರು. ನಂತರ ಜಮೀನನ್ನು ಲೀಸ್​ಗೆ ತೆಗೆದುಕೊಂಡು ಕೃಷಿ ಮಾಡಿದರು. ಇದು ಅವರ ಕೈ ಹಿಡಿದಿದೆ.

ಈಗ ಅವರ ಗೆಳೆಯರ ಜತೆ ಸೇರಿ ರಘು ಲಿಕ್ಕರ್​ ಶಾಪ್ ಆರಂಭಿಸಿದ್ದಾರೆ. ನಲ್ಗೊಂದಾ ಜಿಲ್ಲೆಯಲ್ಲಿ ಅವರು ಈ ಶಾಪ್​ ನಡೆಸುತ್ತಿದ್ದಾರೆ. ಡಿಸೆಂಬರ್​ 1ರಂದು ಈ ಅಂಗಡಿ ಉದ್ಘಾಟನೆ ಆಗಿದೆ. ಶಾಪ್​ನಲ್ಲಿ ಅವರು ಮದ್ಯ ನೀಡುತ್ತಿರುವ ಫೋಟೋ ವೈರಲ್​ ಆಗಿದೆ. ಇದಾದ ನಂತರವಾದರೂ ಅವರಿಗೆ ಸಿನಿಮಾದಲ್ಲಿ ಆಫರ್​ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕಳೆದ ಎರಡು ವರ್ಷಗಳಲ್ಲಿ ಚಿತ್ರರಂಗದ ಸಾಕಷ್ಟು ಜನರ ಬದುಕು ದುಸ್ಥಿತಿ ತಲುಪಿದೆ. ಸಹಾಯ ಮಾಡುವಂತೆ ಸಾಕಷ್ಟು ಕಲಾವಿದರು ಈ ಮೊದಲು ಕೋರಿದ್ದಿದೆ. ಈ ವೇಳೆ ದೊಡ್ಡ ಸೆಲೆಬ್ರಿಟಿಗಳು ಸಹಾಯ ಮಾಡಿದ್ದರು. ಈಗ ರಘು ಕೂಡ ಚಿತ್ರರಂಗದಲ್ಲಿ ಯಶಸ್ಸು ಕಾಣದೆ ಬೇರೆ ದಾರಿ ಹಿಡಿದಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದು ಅನೇಕರು ಕೋರುತ್ತಿದ್ದಾರೆ.

ಇದನ್ನೂ ಓದಿ: ಆಹಾರಕ್ಕಿಂತಲೂ ನನಗೆ ಸೆಕ್ಸ್​ ಮುಖ್ಯ ಎಂದು ಹೇಳಿದ್ದ ಸಮಂತಾ; ವಿಡಿಯೋ ವೈರಲ್​

Published On - 6:21 pm, Thu, 2 December 21

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ