AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

100 ಕೋಟಿ ಗಳಿಕೆ, ಆದರೂ ಸಿನಿಮಾಕ್ಕೆ ವಿರೋಧ, ಅಂಥದ್ದೇನಿದೆ ‘ಮಾರ್ಕೊ’ನಲ್ಲಿ

Marco Movie: ಸಿನಿಮಾ ಒಂದು ಬಾಕ್ಸ್ ಆಫೀಸ್​ನಲ್ಲಿ ಭಾರಿ ದೊಡ್ಡ ಕಲೆಕ್ಷನ್ ಮಾಡುತ್ತಿದೆ. ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ. ಹಾಗಿದ್ದರೂ ಸಹ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿರುವುದು ಮಾತ್ರವೇ ಅಲ್ಲದೆ ಸಿನಿಮಾ ಅನ್ನು ನಿಷೇಧ ಮಾಡಬೇಕು ಎಂಬ ಕೂಗು ಸಹ ಕೇಳಿ ಬರುತ್ತಿದೆ. ಅಂಥಹದ್ದೇನಿದೆ ಆ ಸಿನಿಮಾದಲ್ಲಿ?

100 ಕೋಟಿ ಗಳಿಕೆ, ಆದರೂ ಸಿನಿಮಾಕ್ಕೆ ವಿರೋಧ, ಅಂಥದ್ದೇನಿದೆ ‘ಮಾರ್ಕೊ’ನಲ್ಲಿ
Marco Movie
ಮಂಜುನಾಥ ಸಿ.
|

Updated on: Jan 08, 2025 | 1:31 PM

Share

ಸಿನಿಮಾ ಒಂದು ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ ಎಂದರೆ ಅದು ಜನಕ್ಕೆ ಇಷ್ಟವಾಗಿದೆ ಎಂದೇ ಅರ್ಥ. ಆದರೆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭಾರಿ ಯಶಸ್ಸು ಗಳಿಸಿದ ಮೇಲೂ ಸಹ ಸಿನಿಮಾ ಬಗ್ಗೆ ತೀವ್ರ ವಿರೋಧ, ಸಿನಿಮಾ ನಿಷೇಧಕ್ಕೆ ಒತ್ತಾಯಗಳು ಕೇಳಿ ಬರುತ್ತಿವೆ. ಭಾರತದಲ್ಲೇ ಅತ್ಯುತ್ತಮ ಚಿತ್ರರಂಗ ಎಂದು ಹೆಸರು ಗಳಿಸಿರುವ ಮಲಯಾಳಂ ಚಿತ್ರರಂಗದಿಂದ ಹೊರಬಂದಿರುವ ಸಿನಿಮಾ ಒಂದರ ಮೇಲೆ ಈಗ ನಿಷೇಧಕ್ಕೆ ಬೇಡಿಕೆಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಸಿನಿಮಾದ ಹೆಸರು ‘ಮಾರ್ಕೊ’.

ಡಿಸೆಂಬರ್ 20 ರಂದು ಬಿಡುಗಡೆ ಆದ ‘ಮಾರ್ಕೊ’ ಸಿನಿಮಾ ಇದೀಗ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಹಿಂದಿ ಭಾಗದಲ್ಲಂತೂ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಹಿಂದಿ ಭಾಗದಲ್ಲಿ ಅತಿ ಹೆಚ್ಚು ಹಣ ದೋಚಿದ ಮಲಯಾಳಂ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇಷ್ಟಾದರೂ ಸಿನಿಮಾದ ಬಗ್ಗೆ ಸ್ವತಃ ಕೇರಳ ಮಾತ್ರವಲ್ಲದೆ ಹಲವು ಕಡೆ ವಿರೋಧ ಕೇಳಿ ಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಸಿನಿಮಾದಲ್ಲಿರುವ ಅತಿಯಾದ ಹಿಂಸೆ.

‘ಮಾರ್ಕೊ’ ಸಿನಿಮಾದಲ್ಲಿ ಹಿಂಸೆಯ ಹೊರತಾಗಿ ಇನ್ನೇನೂ ಇಲ್ಲ. ಹೀರೋ, ವಿಲನ್ ಪೈಪೋಟಿಗೆ ಬಿದ್ಧಂತೆ ಕ್ರೂರವಾಗಿ ವರ್ತಿಸುತ್ತಾರೆ. ಸಿನಿಮಾಕ್ಕೆ ಹಲವು ಕಟ್​ಗಳ ಬಳಿಕ ಸಿಬಿಎಫ್​ಸಿ ‘ಎ’ ಸರ್ಟಿಫಿಕೇಟ್ ನೀಡಿದೆ. ಹಾಗಿದ್ದರೂ ಸಹ ಈ ಸಿನಿಮಾದಲ್ಲಿ ಹಿಂಸೆ ತಾಂಡವವಾಡುತ್ತಿದೆ. ಸಿನಿಮಾದಲ್ಲಿ ಸಾಧ್ಯವಾದಷ್ಟು ಕ್ರೂರವಾಗಿಯೇ ಎಲ್ಲ ಫೈಟ್​ಗಳನ್ನು ತೋರಿಸಲಾಗಿದೆ. ನಾಯಿಯನ್ನು ಅದರ ಬಾಯಿ ಹಿಡಿದು ಹರಿದು ಕೊಲ್ಲುವ ದೃಶ್ಯ, ವೃದ್ಧೆಯೊಬ್ಬಳ ಕಣ್ಣನ್ನು ಕೀಳುವ ದೃಶ್ಯ, ಗರ್ಭಿಣಿಯೊಬ್ಬಳನ್ನು ದಾರುಣವಾಗಿ ಹೊಟ್ಟೆಗೆ ಹೊಡೆದು ಕೊಲ್ಲುವ ದೃಶ್ಯ, ಬೃಣವನ್ನು ಕೈಯಲ್ಲಿ ಹಿಡಿದು ಸಂಭ್ರಮಿಸುವುದು ಇಂಥಹಾ ಅತಿಯಾದ ಕ್ರೌರ್ಯ ತುಂಬಿದ ಹಲವಾರು ದೃಶ್ಯಗಳು ‘ಮಾರ್ಕೊ’ ಸಿನಿಮಾದಲ್ಲಿದೆ. ಇದೇ ಕಾರಣಕ್ಕೆ ಈ ಸಿನಿಮಾ ಅನ್ನು ನಿಷೇಧಿಸಬೇಕು ಎಂದು ಕೆಲವರು ದನಿ ಎತ್ತಿದ್ದಾರೆ.

ಇದನ್ನೂ ಓದಿ:ರಾಜ್ ಬಿ ಶೆಟ್ಟಿಯ ಮತ್ತೊಂದು ಮಲಯಾಳಂ ಸಿನಿಮಾ ಬಿಡುಗಡೆಗೆ ರೆಡಿ

‘ಅನಿಮಲ್’ ಸಿನಿಮಾವನ್ನು ಸಹ ಅದರ ಹಿಂಸೆಯ ವೈಭವೀಕರಣ ಮತ್ತು ಹಳಿ ತಪ್ಪಿದ ಮಾರಲ್ ಕಾರಣಕ್ಕೆ ಟೀಕಿಸಲಾಗಿತ್ತು. ಆದರೆ ‘ಮಾರ್ಕೊ’ ಸಿನಿಮಾದ ಮುಂದೆ ‘ಅನಿಮಲ್’ ಏನೂ ಅಲ್ಲ ಎಂಬಂತಿದೆ. ಸಿನಿಮಾದಲ್ಲಿರುವ ಬಹುತೇಕ ದೃಶ್ಯಗಳಲ್ಲಿ ರಕ್ತವಿದೆ. ಸಿನಿಮಾದ ನಿರ್ದೇಶಕ ಹನೀಫ್ ಅದೇನಿ ಅಂತೂ ಎಷ್ಟು ಕ್ರೂರವಾಗಿ ಪಾತ್ರಗಳನ್ನು ಕೊಲ್ಲಬಹುದು ಎಂದು ಪ್ರಯೋಗ ಮಾಡಿ ಪ್ರತಿ ಪಾತ್ರವನ್ನ ಹಿಂದಿನದ್ದಕ್ಕಿಂತಲೂ ಭೀಕರವಾಗಿ, ಕ್ರೂರವಾಗಿ ಕೊಲ್ಲಿಸಿದ್ದಾರೆ.

‘ಮಾರ್ಕೊ’ ಸಿನಿಮಾದಲ್ಲಿ ನಟಿಸಿರುವ ಕೆಲವರೇ ಸಿನಿಮಾದಲ್ಲಿ ತೋರಿಸಲಾಗಿರುವ ದೃಶ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿರುವ ಕಬಿರ್ ದುಹಾನ್, ‘ಆ ಸಿನಿಮಾದ ಚಿತ್ರೀಕರಣ ಮಾಡಿದ ಮೇಲೆ ಆರು ದೇವಸ್ಥಾನಕ್ಕೆ ಹೋದೆ. ನನ್ನ ಮಾನಸಿಕ ನೆಮ್ಮದಿಯೇ ಹಾಳಾಗಿತ್ತು’ ಎಂದಿದ್ದಾರೆ. ‘ಮಾರ್ಕೊ’ ಸಿನಿಮಾ ಪ್ರದರ್ಶಿಸುವಾಗ ತೆರೆಯ ಮೇಲೆ ಹಿಂಸೆ ನೋಡಲಾಗದೆ ಕೆಲ ಮಹಿಳೆಯರು ವಾಂತಿ ಮಾಡಿಕೊಂಡಿದ್ದಾಗಿಯೂ ವರದಿ ಆಗಿವೆ. ಒಟ್ಟಾರೆ ಅತ್ಯಂತ ಕ್ರೂರ ಸಿನಿಮಾ ‘ಮಾರ್ಕೊ’ ಬಾಕ್ಸ್ ಆಫೀಸ್​ನಲ್ಲಿ ಮಾತ್ರ ಒಳ್ಳೆಯ ಕಲೆಕ್ಷನ್ ಮಾಡುತ್ತಿದ್ದು, 100 ಕೋಟಿಗೂ ಹೆಚ್ಚು ಹಣ ಬಾಚಿಕೊಂಡಿದೆ. ಜನರ ಅಭಿರುಚಿ ಬದಲಾಗುತ್ತಿರುವುದಕ್ಕೆ ಇದು ಬಹಳ ಒಳ್ಳೆಯ ಉದಾಹರಣೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!