Sign In

By signing in or creating an account, you agree with Associated Broadcasting Company's Terms & Conditions and Privacy Policy.

100 ಕೋಟಿ ಗಳಿಕೆ, ಆದರೂ ಸಿನಿಮಾಕ್ಕೆ ವಿರೋಧ, ಅಂಥದ್ದೇನಿದೆ ‘ಮಾರ್ಕೊ’ನಲ್ಲಿ

Marco Movie: ಸಿನಿಮಾ ಒಂದು ಬಾಕ್ಸ್ ಆಫೀಸ್​ನಲ್ಲಿ ಭಾರಿ ದೊಡ್ಡ ಕಲೆಕ್ಷನ್ ಮಾಡುತ್ತಿದೆ. ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ. ಹಾಗಿದ್ದರೂ ಸಹ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿರುವುದು ಮಾತ್ರವೇ ಅಲ್ಲದೆ ಸಿನಿಮಾ ಅನ್ನು ನಿಷೇಧ ಮಾಡಬೇಕು ಎಂಬ ಕೂಗು ಸಹ ಕೇಳಿ ಬರುತ್ತಿದೆ. ಅಂಥಹದ್ದೇನಿದೆ ಆ ಸಿನಿಮಾದಲ್ಲಿ?

100 ಕೋಟಿ ಗಳಿಕೆ, ಆದರೂ ಸಿನಿಮಾಕ್ಕೆ ವಿರೋಧ, ಅಂಥದ್ದೇನಿದೆ ‘ಮಾರ್ಕೊ’ನಲ್ಲಿ
Marco Movie
Follow us
ಮಂಜುನಾಥ ಸಿ.
|

Updated on: Jan 08, 2025 | 1:31 PM

ಸಿನಿಮಾ ಒಂದು ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ ಎಂದರೆ ಅದು ಜನಕ್ಕೆ ಇಷ್ಟವಾಗಿದೆ ಎಂದೇ ಅರ್ಥ. ಆದರೆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭಾರಿ ಯಶಸ್ಸು ಗಳಿಸಿದ ಮೇಲೂ ಸಹ ಸಿನಿಮಾ ಬಗ್ಗೆ ತೀವ್ರ ವಿರೋಧ, ಸಿನಿಮಾ ನಿಷೇಧಕ್ಕೆ ಒತ್ತಾಯಗಳು ಕೇಳಿ ಬರುತ್ತಿವೆ. ಭಾರತದಲ್ಲೇ ಅತ್ಯುತ್ತಮ ಚಿತ್ರರಂಗ ಎಂದು ಹೆಸರು ಗಳಿಸಿರುವ ಮಲಯಾಳಂ ಚಿತ್ರರಂಗದಿಂದ ಹೊರಬಂದಿರುವ ಸಿನಿಮಾ ಒಂದರ ಮೇಲೆ ಈಗ ನಿಷೇಧಕ್ಕೆ ಬೇಡಿಕೆಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಸಿನಿಮಾದ ಹೆಸರು ‘ಮಾರ್ಕೊ’.

ಡಿಸೆಂಬರ್ 20 ರಂದು ಬಿಡುಗಡೆ ಆದ ‘ಮಾರ್ಕೊ’ ಸಿನಿಮಾ ಇದೀಗ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಹಿಂದಿ ಭಾಗದಲ್ಲಂತೂ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಹಿಂದಿ ಭಾಗದಲ್ಲಿ ಅತಿ ಹೆಚ್ಚು ಹಣ ದೋಚಿದ ಮಲಯಾಳಂ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇಷ್ಟಾದರೂ ಸಿನಿಮಾದ ಬಗ್ಗೆ ಸ್ವತಃ ಕೇರಳ ಮಾತ್ರವಲ್ಲದೆ ಹಲವು ಕಡೆ ವಿರೋಧ ಕೇಳಿ ಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಸಿನಿಮಾದಲ್ಲಿರುವ ಅತಿಯಾದ ಹಿಂಸೆ.

‘ಮಾರ್ಕೊ’ ಸಿನಿಮಾದಲ್ಲಿ ಹಿಂಸೆಯ ಹೊರತಾಗಿ ಇನ್ನೇನೂ ಇಲ್ಲ. ಹೀರೋ, ವಿಲನ್ ಪೈಪೋಟಿಗೆ ಬಿದ್ಧಂತೆ ಕ್ರೂರವಾಗಿ ವರ್ತಿಸುತ್ತಾರೆ. ಸಿನಿಮಾಕ್ಕೆ ಹಲವು ಕಟ್​ಗಳ ಬಳಿಕ ಸಿಬಿಎಫ್​ಸಿ ‘ಎ’ ಸರ್ಟಿಫಿಕೇಟ್ ನೀಡಿದೆ. ಹಾಗಿದ್ದರೂ ಸಹ ಈ ಸಿನಿಮಾದಲ್ಲಿ ಹಿಂಸೆ ತಾಂಡವವಾಡುತ್ತಿದೆ. ಸಿನಿಮಾದಲ್ಲಿ ಸಾಧ್ಯವಾದಷ್ಟು ಕ್ರೂರವಾಗಿಯೇ ಎಲ್ಲ ಫೈಟ್​ಗಳನ್ನು ತೋರಿಸಲಾಗಿದೆ. ನಾಯಿಯನ್ನು ಅದರ ಬಾಯಿ ಹಿಡಿದು ಹರಿದು ಕೊಲ್ಲುವ ದೃಶ್ಯ, ವೃದ್ಧೆಯೊಬ್ಬಳ ಕಣ್ಣನ್ನು ಕೀಳುವ ದೃಶ್ಯ, ಗರ್ಭಿಣಿಯೊಬ್ಬಳನ್ನು ದಾರುಣವಾಗಿ ಹೊಟ್ಟೆಗೆ ಹೊಡೆದು ಕೊಲ್ಲುವ ದೃಶ್ಯ, ಬೃಣವನ್ನು ಕೈಯಲ್ಲಿ ಹಿಡಿದು ಸಂಭ್ರಮಿಸುವುದು ಇಂಥಹಾ ಅತಿಯಾದ ಕ್ರೌರ್ಯ ತುಂಬಿದ ಹಲವಾರು ದೃಶ್ಯಗಳು ‘ಮಾರ್ಕೊ’ ಸಿನಿಮಾದಲ್ಲಿದೆ. ಇದೇ ಕಾರಣಕ್ಕೆ ಈ ಸಿನಿಮಾ ಅನ್ನು ನಿಷೇಧಿಸಬೇಕು ಎಂದು ಕೆಲವರು ದನಿ ಎತ್ತಿದ್ದಾರೆ.

ಇದನ್ನೂ ಓದಿ:ರಾಜ್ ಬಿ ಶೆಟ್ಟಿಯ ಮತ್ತೊಂದು ಮಲಯಾಳಂ ಸಿನಿಮಾ ಬಿಡುಗಡೆಗೆ ರೆಡಿ

‘ಅನಿಮಲ್’ ಸಿನಿಮಾವನ್ನು ಸಹ ಅದರ ಹಿಂಸೆಯ ವೈಭವೀಕರಣ ಮತ್ತು ಹಳಿ ತಪ್ಪಿದ ಮಾರಲ್ ಕಾರಣಕ್ಕೆ ಟೀಕಿಸಲಾಗಿತ್ತು. ಆದರೆ ‘ಮಾರ್ಕೊ’ ಸಿನಿಮಾದ ಮುಂದೆ ‘ಅನಿಮಲ್’ ಏನೂ ಅಲ್ಲ ಎಂಬಂತಿದೆ. ಸಿನಿಮಾದಲ್ಲಿರುವ ಬಹುತೇಕ ದೃಶ್ಯಗಳಲ್ಲಿ ರಕ್ತವಿದೆ. ಸಿನಿಮಾದ ನಿರ್ದೇಶಕ ಹನೀಫ್ ಅದೇನಿ ಅಂತೂ ಎಷ್ಟು ಕ್ರೂರವಾಗಿ ಪಾತ್ರಗಳನ್ನು ಕೊಲ್ಲಬಹುದು ಎಂದು ಪ್ರಯೋಗ ಮಾಡಿ ಪ್ರತಿ ಪಾತ್ರವನ್ನ ಹಿಂದಿನದ್ದಕ್ಕಿಂತಲೂ ಭೀಕರವಾಗಿ, ಕ್ರೂರವಾಗಿ ಕೊಲ್ಲಿಸಿದ್ದಾರೆ.

‘ಮಾರ್ಕೊ’ ಸಿನಿಮಾದಲ್ಲಿ ನಟಿಸಿರುವ ಕೆಲವರೇ ಸಿನಿಮಾದಲ್ಲಿ ತೋರಿಸಲಾಗಿರುವ ದೃಶ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿರುವ ಕಬಿರ್ ದುಹಾನ್, ‘ಆ ಸಿನಿಮಾದ ಚಿತ್ರೀಕರಣ ಮಾಡಿದ ಮೇಲೆ ಆರು ದೇವಸ್ಥಾನಕ್ಕೆ ಹೋದೆ. ನನ್ನ ಮಾನಸಿಕ ನೆಮ್ಮದಿಯೇ ಹಾಳಾಗಿತ್ತು’ ಎಂದಿದ್ದಾರೆ. ‘ಮಾರ್ಕೊ’ ಸಿನಿಮಾ ಪ್ರದರ್ಶಿಸುವಾಗ ತೆರೆಯ ಮೇಲೆ ಹಿಂಸೆ ನೋಡಲಾಗದೆ ಕೆಲ ಮಹಿಳೆಯರು ವಾಂತಿ ಮಾಡಿಕೊಂಡಿದ್ದಾಗಿಯೂ ವರದಿ ಆಗಿವೆ. ಒಟ್ಟಾರೆ ಅತ್ಯಂತ ಕ್ರೂರ ಸಿನಿಮಾ ‘ಮಾರ್ಕೊ’ ಬಾಕ್ಸ್ ಆಫೀಸ್​ನಲ್ಲಿ ಮಾತ್ರ ಒಳ್ಳೆಯ ಕಲೆಕ್ಷನ್ ಮಾಡುತ್ತಿದ್ದು, 100 ಕೋಟಿಗೂ ಹೆಚ್ಚು ಹಣ ಬಾಚಿಕೊಂಡಿದೆ. ಜನರ ಅಭಿರುಚಿ ಬದಲಾಗುತ್ತಿರುವುದಕ್ಕೆ ಇದು ಬಹಳ ಒಳ್ಳೆಯ ಉದಾಹರಣೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?