AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನಿಗೆ ಹಿಮಾಲಯದ ಜೊತೆ ನಂಟು ಬೆಳೆದಿದ್ದು ಹೇಗೆ? ಹೃಷಿಕೇಶದಲ್ಲಿರುವ ಕನ್ನಡಿಗ ಹೇಳಿದ ಕಥೆ

ರಜನಿಕಾಂತ್ ಹಿಮಾಲಯಕ್ಕೆ ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ, ಕೊವಿಡ್ ಕಾರಣದಿಂದ ಕಳೆದ ನಾಲ್ಕು ವರ್ಷಗಳಲ್ಲಿ ಅವರಿಗೆ ಅಲ್ಲಿಗೆ ತೆರಳೋಕೆ ಸಾಧ್ಯವಾಗಿಲ್ಲ. ‘ಜೈಲರ್’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಅವರು ಹೃಷಿಕೇಶಕ್ಕೆ ಭೇಟಿಕೊಟ್ಟಿದ್ದಾರೆ.

ರಜನಿಗೆ ಹಿಮಾಲಯದ ಜೊತೆ ನಂಟು ಬೆಳೆದಿದ್ದು ಹೇಗೆ? ಹೃಷಿಕೇಶದಲ್ಲಿರುವ ಕನ್ನಡಿಗ ಹೇಳಿದ ಕಥೆ
ರಜನಿ
ರಾಜೇಶ್ ದುಗ್ಗುಮನೆ
|

Updated on:Aug 12, 2023 | 2:55 PM

Share

ನಟ ರಜನಿಕಾಂತ್ (Rajanikanth) ಅವರು ಆಗಾಗ ಹಿಮಾಲಯಕ್ಕೆ ಭೇಟಿ ನೀಡುತ್ತಾರೆ. ಸಿನಿಮಾ ರಿಲೀಸ್ ಇದ್ದರೆ ಅವರು ಇಲ್ಲಿಗೆ ಭೇಟಿ ನೀಡೋದು ಖಚಿತ. ಅವರು ಮನಶಾಂತಿ ಹುಡುಕಿ ಹಿಮಾಲಯಕ್ಕೆ ಭೇಟಿ ನೀಡುತ್ತಾರೆ ಎಂಬುದು ಅನೇಕರಿಗೆ ಗೊತ್ತಿರುವ ವಿಚಾರ. ಆದರೆ, ಮೊದಲ ಬಾರಿ ಅವರು ಹಿಮಾಲಯಕ್ಕೆ ತೆರಳಿದ್ದು ಯಾವಾಗ? ನಂತರ ಹಿಮಾಲಯದ ಜೊತೆ ನಂಟು ಬೆಳೆದಿದ್ದು ಹೇಗೆ ಎಂಬಿತ್ಯಾದಿ ವಿಚಾರಗಳ ಕುರಿತು ಹೃಷಿಕೇಶದಲ್ಲಿರುವ (Hrishikesha) ಕನ್ನಡಿಗರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ರಜನಿಕಾಂತ್ ಹಿಮಾಲಯಕ್ಕೆ ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ, ಕೊವಿಡ್ ಕಾರಣದಿಂದ ಕಳೆದ ನಾಲ್ಕು ವರ್ಷಗಳಲ್ಲಿ ಅವರಿಗೆ ಅಲ್ಲಿಗೆ ತೆರಳೋಕೆ ಸಾಧ್ಯವಾಗಿರಲಿಲ್ಲ. ‘ಜೈಲರ್’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಅವರು ಹೃಷಿಕೇಶಕ್ಕೆ ಭೇಟಿಕೊಟ್ಟಿದ್ದಾರೆ. ರಜನಿಕಾಂತ್ ಅವರ ಆಧ್ಯಾತ್ಮ ಗುರುಗಳ ಸಾಲಿನಲ್ಲಿ ಸ್ವಾಮಿ ದಯಾನಂದ ಸರಸ್ವತಿ ಸ್ವಾಮೀಜಿ ಕೂಡ ಒಬ್ಬರು.

1992-93ರ ಸಂದರ್ಭದಲ್ಲಿ ಸ್ವಾಮಿ ದಯಾನಂದ ಸರಸ್ವತಿ ಸ್ವಾಮೀಜಿ ಅವರನ್ನು ರಜನಿಕಾಂತ್ ಚೆನ್ನೈನಲ್ಲಿ ಮೊದಲು ಭೇಟಿ ಆದರು. ಆಗ ಸ್ವಾಮೀಜಿ ಅವರಿಂದ ರಜನಿಕಾಂತ್ ಸಾಕಷ್ಟು ಪ್ರಭಾವಕ್ಕೆ ಒಳಗಾದರು. ‘ನನಗೂ ಹಿಮಾಲಯಕ್ಕೆ ಬರಬೇಕು. ಸುಮ್ಮನೆ ಅಲ್ಲಿ ಸುತ್ತಾಡಬೇಕು’ ಎಂದು ಸ್ವಾಮೀಜಿಗಳ ಬಳಿ ರಜನಿಕಾಂತ್ ಕೋರಿಕೊಂಡಿದ್ದರು. ‘ನೀನು ಅಂದುಕೊಂಡಷ್ಟು ಸುಲಭ ಇಲ್ಲ ಅಲ್ಲಿ ಓಡಾಡೋದು. ಸಾಕಷ್ಟು ನಕಲಿ ಸ್ವಾಮೀಗಳು ಇದ್ದಾರೆ. ಆ ಬಗ್ಗೆ ಎಚ್ಚರಿಕೆ ಬೇಕು. ಸದ್ಯ ಹೃಷಿಕೇಶದಲ್ಲಿರುವ ನಮ್ಮ ಆಶ್ರಮದಲ್ಲೇ ಇರು’ ಎಂದು ರಜನಿಗೆ ದಯಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದರು. ನಂತರ ಹಲವು ಸಂದರ್ಭಗಳಲ್ಲಿ ರಜನಿಕಾಂತ್ ಹೃಷಿಕೇಶಕ್ಕೆ ಭೇಟಿ ನೀಡಿದ್ದರು. ಹೀಗೆ ರಜನಿಕಾಂತ್​ಗೆ ಹೃಷಿಕೇಶದ ಜೊತೆ ನಂಟು ಬೆಳೆಯಿತು. ಈ ವಿಚಾರವನ್ನು ರಜನಿ ಹೇಳಿಕೊಂಡಿರುವುದಾಗಿ ಅಲ್ಲಿರುವ ಕನ್ನಡಿಗರೊಬ್ಬರು ವಿವರಿಸಿದ್ದಾರೆ.

‘ಸೆಲೆಬ್ರಿಟಿಗಳು ಎಲ್ಲೇ ಹೋದರು ಬೌನ್ಸರ್​ಗಳು ಮುತ್ತಿಕೊಳ್ಳುತ್ತಾರೆ. ಪೊಲೀಸರು ಇರುತ್ತಾರೆ. ಆದರೆ, ಹೃಷಿಕೇಶದಲ್ಲಿ ರಜನಿ ಒಬ್ಬರೇ ಬಂದಿದ್ದರು. ಯಾವುದೇ ಬೌನ್ಸರ್​ಗಳು ಇರಲಿಲ್ಲ. ಅಲ್ಲಿದ್ದು ನೋಡಿದವರಿಗೆ ಇವರು ರಜನೀನೇನಾ ಎಂಬ ಪ್ರಶ್ನೆ ಮೂಡುತ್ತದೆ. ರಜನಿ ಅಷ್ಟು ಸಿಂಪಲ್ ಆಗಿದ್ದರು’ ಎಂದು ವಿವರಿಸುತ್ತಾರೆ ಕನ್ನಡಿಗರು. ಬಹುಶಃ ಈ ರೀತಿ ಸರಳ ಜೀವನ ಅರಸಿಯೇ ಅಲ್ಲಿ ಹೋಗಿರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ‘ಜೈಲರ್​’ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಯೂ ಕೇಳದೇ ಮನಶಾಂತಿಗಾಗಿ ಹಿಮಾಲಯಕ್ಕೆ ತೆರಳಿದ ರಜನಿಕಾಂತ್​

ರಜನಿಕಾಂತ್ ಇಲ್ಲಿ ಕೆಲವು ದಿನ ಮಾತ್ರ ಇರುತ್ತಾರೆ. ನಂತರ ಬೇರೆ ಭಾಗಕ್ಕೆ ತೆರಳುತ್ತಾರೆ. ಹಿಮಾಲಯದಲ್ಲಿ ರಜನಿಕಾಂತ್​ಗೆ ಹಲವು ಆಧ್ಯಾತ್ಮ ಗುರುಗಳಿದ್ದಾರೆ. ಅವರನ್ನು ಭೇಟಿ ಮಾಡಿ ಅವರು ತಮಿಳುನಾಡಿಗೆ ಮರಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:54 pm, Sat, 12 August 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್