AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Arnold Schwarzenegger: ‘ಇನ್ಮುಂದೆ ಟರ್ಮಿನೇಟರ್​ ಪಾತ್ರ ಮಾಡಲ್ಲ’: ಫ್ಯಾನ್ಸ್​ಗೆ ಬೇಸರದ ಸುದ್ದಿ ನೀಡಿದ ಅರ್ನಾಲ್ಡ್​ ಶ್ವಾರ್ಚನೆಗರ್​

The Terminator: ‘ಟರ್ಮಿನೇಟರ್ ಫ್ರಾಂಚೈಸ್​ ಮುಗಿದಿಲ್ಲ. ಆದರೆ ನನಗೆ ಸಾಕಾಗಿದೆ. ಹೊಸ ಥೀಮ್​ನಲ್ಲಿ ಈ ಸಿನಿಮಾ ಬರಬೇಕು’ ಎಂದು ಅರ್ನಾಲ್ಡ್​ ಶ್ವಾರ್ಚನೆಗರ್​ ಹೇಳಿದ್ದಾರೆ.

Arnold Schwarzenegger: ‘ಇನ್ಮುಂದೆ ಟರ್ಮಿನೇಟರ್​ ಪಾತ್ರ ಮಾಡಲ್ಲ’: ಫ್ಯಾನ್ಸ್​ಗೆ ಬೇಸರದ ಸುದ್ದಿ ನೀಡಿದ ಅರ್ನಾಲ್ಡ್​ ಶ್ವಾರ್ಚನೆಗರ್​
ಅರ್ನಾಲ್ಡ್ ಶ್ವಾರ್ಚನೆಗರ್
ಮದನ್​ ಕುಮಾರ್​
|

Updated on: May 20, 2023 | 1:25 PM

Share

ಮುಖ್ಯಾಂಶಗಳು

  • ಟರ್ಮಿನೇಟರ್​ನ ಮೊದಲ ಎರಡು ಸೀರಿಸ್​ಗಳು ಸಖತ್​ ಜನಪ್ರಿಯತೆ ಪಡೆದುಕೊಂಡವು. ಬಾಕ್ಸ್​ ಆಫೀಸ್​ನಲ್ಲೂ ಉತ್ತಮ ಕಲೆಕ್ಷನ್​ ಮಾಡಿದವು.
  • ಆದರೆ ನಂತರದ ಸಿನಿಮಾಗಳಿಗೆ ಜನರಿಂದ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ. ಹಾಗಾಗಿ ಇನ್ಮುಂದೆ ತಾವು ಆ ಪಾತ್ರ ಮಾಡುವುದಿಲ್ಲ ಎಂದು ಅರ್ನಾಲ್ಡ್​ ಶ್ವಾರ್ಚನೆಗರ್​ ಅವರು ಹೇಳಿದ್ದಾರೆ.
  • ‘ಟರ್ಮಿನೇಟರ್ ಫ್ರಾಂಚೈಸ್​ ಮುಗಿದಿಲ್ಲ. ಆದರೆ ನನಗೆ ಸಾಕಾಗಿದೆ. ಹೊಸ ಥೀಮ್​ನಲ್ಲಿ ಈ ಸಿನಿಮಾ ಬರಬೇಕು’ ಎಂದು ಅರ್ನಾಲ್ಡ್​ ಶ್ವಾರ್ಚನೆಗರ್​ ಹೇಳಿದ್ದಾರೆ.

ಹಾಲಿವುಡ್​ ಸಿನಿಮಾ ಪ್ರೇಕ್ಷಕರಿಗೆ ಅರ್ನಾಲ್ಡ್​ ಶ್ವಾರ್ಚನೆಗರ್​ (Arnold Schwarzenegger) ಎಂದರೆ ಸಖತ್​ ಇಷ್ಟ. 1970ರಿಂದ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವ ಅವರು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರ ನಟನೆಗೆ ಫಿದಾ ಆಗದವರಿಲ್ಲ. ಅದರಲ್ಲೂ ಅವರು ನಟಿಸಿದ ‘ದಿ ಟರ್ಮಿನೇಟರ್​’ (The Terminator) ಸಿನಿಮಾವಂತೂ ಸಿಕ್ಕಾಪಟ್ಟೆ ಫೇಮಸ್​. ಆ ಚಿತ್ರದ ಸೀಕ್ವೆಲ್​ಗಳಲ್ಲೂ ನಟಿಸುವ ಮೂಲಕ ಅರ್ನಾಲ್ಡ್​ ಶ್ವಾರ್ಚನೆಗರ್​ ಅವರು ಅಭಿಮಾನಿಗಳನ್ನು ರಂಜಿಸಿದರು. ಆದರೆ ಈಗ ಅವರೊಂದು ಬೇಸರದ ಸುದ್ದಿ ನೀಡಿದ್ದಾರೆ. ಇನ್ಮುಂದೆ ತಾವು ಟರ್ಮಿನೇಟರ್​ ಪಾತ್ರದಲ್ಲಿ ನಟಿಸುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.

1984ರಲ್ಲಿ ‘ದಿ ಟರ್ಮಿನೇಟರ್​’ ಸಿನಿಮಾ ತೆರೆಕಂಡಿತು. ಆ ಸಿನಿಮಾದಲ್ಲಿ ಟರ್ಮಿನೇಟರ್ ಆಗಿ ಅರ್ನಾಲ್ಡ್​ ಶ್ವಾರ್ಚನೆಗರ್​ ನಟಿಸಿ ಅಚ್ಚರಿ ಮೂಡಿಸಿದರು. ಆ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಜೇಮ್ಸ್​ ಕ್ಯಾಮೆರಾನ್​. ಆ ಬಳಿಕ 5 ಸೀಕ್ವೆಲ್​ಗಳು ಮೂಡಿಬಂದವು. 2009ರಲ್ಲಿ ಬಂದ ‘ಟರ್ಮಿನೇಟರ್​ ಸಾಲ್ವೇಷನ್​’ ಸಿನಿಮಾದಲ್ಲಿ ಅರ್ನಾಲ್ಡ್​ ಅವರು ನಟಿಸಿರಲಿಲ್ಲ. ಇನ್ನುಳಿದ ಎಲ್ಲ ಚಿತ್ರಗಳಲ್ಲೂ ಅವರು ಅಭಿನಯಿಸಿದರು. ಆದರೆ ಈಗ ಅವರು ಟರ್ಮಿನೇಟರ್​ ಪಾತ್ರಕ್ಕೆ ವಿದಾಯ ಹೇಳಿದ್ದಾರೆ.

ಟರ್ಮಿನೇಟರ್​ನ ಮೊದಲ ಎರಡು ಸೀರಿಸ್​ಗಳು ಸಖತ್​ ಜನಪ್ರಿಯತೆ ಪಡೆದುಕೊಂಡವು. ಬಾಕ್ಸ್​ ಆಫೀಸ್​ನಲ್ಲೂ ಉತ್ತಮ ಕಲೆಕ್ಷನ್​ ಮಾಡಿದವು. ಆದರೆ ನಂತರದ ಸಿನಿಮಾಗಳಿಗೆ ಜನರಿಂದ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ. ಹಾಗಾಗಿ ಇನ್ಮುಂದೆ ತಾವು ಆ ಪಾತ್ರ ಮಾಡುವುದಿಲ್ಲ ಎಂದು ಅರ್ನಾಲ್ಡ್​ ಶ್ವಾರ್ಚನೆಗರ್​ ಅವರು ಹೇಳಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ: 7ನೇ ಮಗುವಿಗೆ ತಂದೆಯಾದ ಖುಷಿಯಲ್ಲಿ 79ನೇ ವಯಸ್ಸಿನ ಹಾಲಿವುಡ್​​ ನಟ

‘ಟರ್ಮಿನೇಟರ್ ಫ್ರಾಂಚೈಸ್​ ಮುಗಿದಿಲ್ಲ. ಆದರೆ ನನಗೆ ಸಾಕಾಗಿದೆ. ಹೊಸ ಥೀಮ್​ನಲ್ಲಿ ಈ ಸಿನಿಮಾ ಬರಬೇಕು ಎಂದು ಪ್ರೇಕ್ಷಕರು ಸ್ಪಷ್ಟವಾಗಿ ತಿಳಿಸಿದ್ದಾರೆ. ಹಾಗಾಗಿ ಉತ್ತಮವಾದ ಕಥೆಯೊಂದಿಗೆ ಈ ಫ್ರಾಂಚೈಸ್​ ಮುಂದುವರಿಯಲಿ’ ಎಂದು ‘ಹಾಲಿವುಡ್​ ರಿಪೋರ್ಟರ್​’ ನಡೆಸಿದ ಸಂದರ್ಶನದಲ್ಲಿ ಅರ್ನಾಲ್ಡ್​ ಶ್ವಾರ್ಚನೆಗರ್​ ಹೇಳಿದ್ದಾರೆ.

ಇದನ್ನೂ ಓದಿ: ಹಾಲಿವುಡ್ ಸಿನಿಮಾ ಪರ ಪ್ರಚಾರ ಶುರು ಮಾಡಿದ ಸಲ್ಮಾನ್ ಖಾನ್

ಈಗ ಅರ್ನಾಲ್ಡ್​ ಶ್ವಾರ್ಚನೆಗರ್​ ಅವರಿಗೆ 75 ವರ್ಷ ವಯಸ್ಸು. 22-23ನೇ ವಯಸ್ಸಿನಲ್ಲಿ ಅವರು ಕಟ್ಟುಮಸ್ತಾದ ದೇಹದ ಮೂಲಕ ಗಮನ ಸೆಳೆದಿದ್ದರು. ಅವರ ಬಾಡಿ ನೋಡಿ ವಿಶ್ವಾದ್ಯಂತ ಇರುವ ಪ್ರೇಕ್ಷಕರು ವಾವ್​ ಎಂದಿದ್ದರು. ಇಂದಿಗೂ ದೇಹದಾರ್ಢ್ಯ ಮಾಡುವ ಯುವಕರಿಗೆ ಅರ್ನಾಲ್ಡ್​ ಶ್ವಾರ್ಚನೆಗರ್​ ಸ್ಫೂರ್ತಿ. ಬಹುತೇಕ ಜಿಮ್​ಗಳಲ್ಲಿ ಅವರ ಫೋಟೋ ರಾರಾಜಿಸುತ್ತದೆ.

ಇದನ್ನೂ ಓದಿ:  ಹಾಲಿವುಡ್ ಎಂಟ್ರಿ ಬಗ್ಗೆ ಪರ-ವಿರೋಧ ಚರ್ಚೆ; ಶಾರುಖ್ ಹೇಳಿಕೆಗೆ ಉತ್ತರ ಕೊಟ್ಟ ಪ್ರಿಯಾಂಕಾ ಚೋಪ್ರಾ

ಮ್ಯೂಸಿಕ್​ ವಿಡಿಯೋ, ಕಿರುತೆರೆ ಸೀರಿಸ್​ಗಳಲ್ಲೂ ಕಾಣಿಸಿಕೊಂಡು ಅರ್ನಾಲ್ಡ್​ ಶ್ವಾರ್ಚನೆಗರ್​ ಫೇಮಸ್​ ಆಗಿದ್ದಾರೆ. ರಾಜಕೀಯದಲ್ಲೂ ಸೇವೆ ಸಲ್ಲಿಸಿದ್ದಾರೆ. ಕ್ಯಾಲಿಫೋರ್ನಿಯಾ ನಗರದ 30ನೇ ಗವರ್ನರ್​ ಆಗಿ ಅವರು ಆಯ್ಕೆ ಆಗಿದ್ದರು. ಗವರ್ನರ್​ ಆಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಅವರು ‘ಟರ್ಮಿನೇಟರ್​ ಸಾಲ್ವೇಶನ್​’ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಿರಲಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ