AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಟ್ಟ ಸೂಚನೆ ನಿರ್ಲಕ್ಷಿಸಿದ ಖ್ಯಾತ ನಿರ್ದೇಶಕ; ಇದುವೇ ಸಿನಿಮಾ ಸೋಲಿಗೆ ಕಾರಣ ಆಯ್ತು?

Leo Movie: ‘ಲಿಯೋ’ ಸಿನಿಮಾದಲ್ಲಿ ಸಾಕಷ್ಟು ತಪ್ಪುಗಳಿವೆ. ಮೊದಲಾರ್ಧ ಮೆಚ್ಚಿಕೊಂಡಿದ್ದ ಜನರು ದ್ವೀತೀಯಾರ್ಧದ ಬಗ್ಗೆ ಟೀಕೆ ಮಾಡಿದ್ದರು. ವಿಜಯ್ ಫ್ಯಾನ್ಸ್ ಲೋಕೇಶ್ ಬಗ್ಗೆ ಕಿಡಿಕಾರಿದ್ದರು.

ಕೊಟ್ಟ ಸೂಚನೆ ನಿರ್ಲಕ್ಷಿಸಿದ ಖ್ಯಾತ ನಿರ್ದೇಶಕ; ಇದುವೇ ಸಿನಿಮಾ ಸೋಲಿಗೆ ಕಾರಣ ಆಯ್ತು?
ವಿಜಯ್
ರಾಜೇಶ್ ದುಗ್ಗುಮನೆ
|

Updated on: Jan 30, 2024 | 7:09 AM

Share

ಕಳೆದ ವರ್ಷ ಅಕ್ಟೋಬರ್​ನಲ್ಲಿ ರಿಲೀಸ್ ಆದ ದಳಪತಿ ವಿಜಯ್ (Thalapathy Vijay) ನಟನೆಯ ‘ಲಿಯೋ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡಿದೆ ನಿಜ. ಆದರೆ, ಈ ಚಿತ್ರ ವಿಮರ್ಶೆಯಲ್ಲಿ ಸೋತಿದೆ. ಸಿನಿಮಾ ನೋಡಿದ ಯಾರೊಬ್ಬರಿಗೂ ಅದು ಲೋಕೇಶ್ ಕನಗರಾಜ್ ಸಿನಿಮಾ ಎನ್ನುವ ಫೀಲ್ ನೀಡಲೇ ಇಲ್ಲ. ಈಗ ಹಿರಿಯ ನಿರ್ದೇಶಕ ಹಾಗೂ ದಳಪತಿ ವಿಜಯ್ ತಂದೆ ಎಸ್​ಎ ಚಂದ್ರಶೇಖರ್ ಅವರು ಹೇಳಿಕೆ ಒಂದನ್ನು ನೀಡಿದ್ದಾರೆ. ಇದು ಲೋಕೇಶ್ ಬಗ್ಗೆಯೇ ಹೇಳಿದ ಮಾತು ಎಂದು ಎಲ್ಲರೂ ಊಹಿಸುತ್ತಿದ್ದಾರೆ.

‘ಲಿಯೋ’ ಸಿನಿಮಾದಲ್ಲಿ ಸಾಕಷ್ಟು ತಪ್ಪುಗಳಿದ್ದವು. ಮೊದಲಾರ್ಧ ಮೆಚ್ಚಿಕೊಂಡಿದ್ದ ಜನರು ದ್ವೀತೀಯಾರ್ಧದ ಬಗ್ಗೆ ಅಪಸ್ವರ ತೆಗೆದಿದ್ದರು. ವಿಜಯ್ ಫ್ಯಾನ್ಸ್ ಲೋಕೇಶ್ ಬಗ್ಗೆ ಕಿಡಿಕಾರಿದ್ದರು. ಈಗ ಚಂದ್ರಶೇಖರ್ ನೀಡಿರೋ ಹೇಳಿಕೆಯೂ ಚರ್ಚೆ ಹುಟ್ಟುಹಾಕಿದೆ. ಅವರು ಕಳೆದ ವರ್ಷ ಸಿನಿಮಾ ಒಂದನ್ನು ನೋಡಿ ನಿರ್ದೇಶಕರಿಗೆ ಫಿಡ್​ಬ್ಯಾಕ್ ನೀಡಿದ್ದರಂತೆ. ಆದರೆ, ಇದನ್ನು ನಿರ್ದೇಶಕರು ಸ್ವೀಕರಿಸಲೇ ಇಲ್ಲ.

‘ಕಳೆದ ವರ್ಷ ರಿಲೀಸ್​​ಗೂ ಮೊದಲೇ ಸಿನಿಮಾ ಒಂದನ್ನು ನೋಡಿದ್ದೆ. ಸಿನಿಮಾದ ಮೊದಲಾರ್ಧದ ಬಗ್ಗೆ ಮೆಚ್ಚುಗೆ ಸೂಚಿಸಿದಾಗ ನಿರ್ದೇಶಕರು ಖುಷಿ ಆದರು. ದ್ವೀತಿಯಾರ್ಧದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲು ಸೂಚಿಸಿದ್ದೆ. ಆದರೆ, ಆ ನಿರ್ದೇಶಕರು ಈಗ ಬ್ಯುಸಿ ಇದ್ದೇನೆ ಬಳಿಕ ಕರೆ ಮಾಡುತ್ತೇನೆ ಎಂದರು. ಆ ಬಳಿಕ ಅವರು ಕರೆ ಮಾಡಲೇ ಇಲ್ಲ’ ಎಂದಿದ್ದಾರೆ ಚಂದ್ರಶೇಖರ್. ಎಲ್ಲರೂ ಇದು ‘ಲಿಯೋ’ ಸಿನಿಮಾ ಬಗ್ಗೆ ಹೇಳಿದ ಮಾತು ಎಂದು ಊಹಿಸುತ್ತಿದ್ದಾರೆ.

ಇದನ್ನೂ ಓದಿ: ಮಾಜಿ ನೀಲಿಚಿತ್ರತಾರೆ ಸನ್ನಿ ಲಿಯೋನೆ ಹೊಸ ಬಿಸಿನೆಸ್; ಚಿಕಲೋಕ ಆರಂಭ

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ‘ಚಂದ್ರಶೇಖರ್ ಹೇಳಿದ ಮಾತು ಲಿಯೋ ಬಗ್ಗೆ ಎಂಬುದು ಸ್ಪಷ್ಟವಾಗಿದೆ’ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ‘ಲಿಯೋ’ ಸಿನಿಮಾದಲ್ಲಿ ದಳಪತಿ ವಿಜಯ್ ಪ್ರಮುಖ ಪಾತ್ರ ಮಾಡಿದ್ದಾರೆ. ಅವರ ಪತ್ನಿ ಪಾತ್ರದಲ್ಲಿ ತ್ರಿಷಾ ನಟಿಸಿದ್ದರು. ಈ ಸಿನಿಮಾ ‘ಲೋಕೇಶ್ ಕನಗರಾಜ್ ಯೂನಿವರ್ಸ್’ ಅಡಿಯಲ್ಲಿ ಮೂಡಿ ಬಂದಿದೆ. ಅವರ ಈ ಹಿಂದಿನ ಸಿನಿಮಾಗಳಿಗೆ ನೇರ ಕನೆಕ್ಷನ್ ಇಲ್ಲ. ಮುಂಬರುವ ಚಿತ್ರಗಳ ಜೊತೆ ಕನೆಕ್ಷನ್ ನೀಡೋ ಆಲೋಚನೆಯಲ್ಲಿ ಲೋಕೇಶ್ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ