AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿ ವಿವಾದ, ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ ಜೂ ಎನ್​ಟಿಆರ್

ತಮ್ಮದೇ ಕುಟುಂಬದ ಪಕ್ಷವಾದ ಟಿಡಿಪಿ ಪರವಾಗಿ ಪ್ರಚಾರಕ್ಕೂ ಸಹ ಹೋಗದೆ ತಾವಾಯಿತು, ತಮ್ಮ ಕೆಲಸವಾಯ್ತು ಎಂದು ಸುಮ್ಮನಿರುವ ಜೂ ಎನ್​ಟಿಆರ್ ಅವರನ್ನು ವಿವಾದವೊಂದು ಹುಡುಕಿಕೊಂಡು ಬಂದಿದೆ.

ಆಸ್ತಿ ವಿವಾದ, ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ ಜೂ ಎನ್​ಟಿಆರ್
ಮಂಜುನಾಥ ಸಿ.
|

Updated on: May 17, 2024 | 3:47 PM

Share

ಟಾಲಿವುಡ್ (Tollywood) ನಟ ಜೂ ಎನ್​ಟಿಆರ್ (Jr NTR), ತಾವಾಯ್ತು, ತಮ್ಮ ಸಿನಿಮಾ ಆಯ್ತೆಯಂದು ತಮ್ಮ ಪಾಡಿಗೆ ತಾವಿದ್ದಾರೆ. ಚುನಾವಣೆಗಳಲ್ಲಿ ತಮ್ಮ ಕುಟುಂಬದ ಟಿಡಿಪಿ ಪಕ್ಷದ ಪರವಾಗಿ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗುತ್ತಿದ್ದ ಜೂ ಎನ್​ಟಿಆರ್, ಈ ಬಾರಿ ಚುನಾವಣೆಯಿಂದ ಬಹು ದೂರ ಉಳಿದಿಬಿಟ್ಟಿದ್ದರು. ಆದರೆ ವಿವಾದ ಎಂಬುದು ಜೂ ಎನ್​ಟಿಆರ್ ಅವರನ್ನು ಹುಡುಕಿ ಬಂದಂತಿದೆ. 21 ವರ್ಷದ ಹಿಂದೆ ಖರೀದಿಸಿದ್ದ ಜಾಗದ ವಿಷಯವಾಗಿ ವಿವಾದವೊಂದು ಸೃಷ್ಟಿಯಾಗಿದ್ದು, ಪ್ರಕರಣ ಸಂಬಂಧವಾಗಿ ಜೂ ಎನ್​ಟಿಆರ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಜೂ ಎನ್​ಟಿಆರ್ ಅವರು 2003 ರಲ್ಲಿ ಹೈದರಾಬಾದ್​ನ ಜೂಬ್ಲಿ ಹಿಲ್ಸ್​ನಲ್ಲಿ 6165 ಚದರ ಅಡಿಯ ಜಾಗವನ್ನು 34 ಲಕ್ಷ ರೂಪಾಯಿ ನೀಡಿ ಸುಂಕು ಗೀತಾ ಲಕ್ಷ್ಮಿ ಎಂಬುವರಿಂದ ಖರೀದಿ ಮಾಡಿದ್ದರು. ಆ ಜಮೀನಿನ ಈಗಿನ ಮೌಲ್ಯ ಸುಮಾರು 24 ಕೋಟಿ ರೂಪಾಯಿಗಳು. ಖರೀದಿಸಿದ್ದ ಜಾಗದಲ್ಲಿ ಜೂನ ಎನ್​ಟಿಆರ್ ಅದ್ಧೂರಿಯಾಗಿ ಮನೆಯನ್ನು ಸಹ ನಿರ್ಮಿಸಿದ್ದಾರೆ. ಈಗ ಈ ಜಮೀನು ವಿವಾದಕ್ಕೆ ಕಾರಣಾಗಿದೆ.

1996 ರಲ್ಲಿ ಜಮೀನನ್ನು ಅಡಮಾನವಿಟ್ಟು ಸಾಲ ಪಡೆಯಲಾಗಿತ್ತು. ಸಾಲದ ಪ್ರತಿಯಾಗಿ ಒತ್ತೆಯಿಡಲಾಗಿರುವ ಜಮೀನನ್ನು ವಶಪಡಿಸಿಕೊಳ್ಳಲು ಅನುಮತಿಗಾಗಿ ನಾಲ್ಕು ಬ್ಯಾಂಕ್​ಗಳು ಡೆಟ್ ರಿಕವರಿ ಟ್ರಿಬ್ಯುನಲ್​ ಗೆ ಮನವಿ ಮಾಡಿತ್ತು. ವಿಚಾರಣೆ ಆಲಿಸಿದ ಟ್ರಿಬ್ಯೂನಲ್ ಈಗ ಬ್ಯಾಂಕ್​ಗಳ ಪರವಾಗಿ ಆದೇಶ ನೀಡಿದೆ. ಬಳಿಕ ಬ್ಯಾಂಕ್​ನವರು ಜೂ ಎನ್​ಟಿಆರ್ ಈಗ ವಾಸವಿರುವ ಜಮೀನನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ನೊಟೀಸ್ ನೀಡಿದ್ದಾರೆ. ತಮ್ಮ ಬಳಿ ಇರುವ ಜಮೀನಿನ ದಾಖಲೆಗಳನ್ನು ಸಹ ನೀಡಿದ್ದಾರೆ.

ಇದನ್ನೂ ಓದಿ:ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಇದೇ ಪ್ರಕರಣವಾಗಿ ತೆಲಂಗಾಣ ಹೈಕೋರ್ಟ್​ಗೆ ಮನವಿ ಸಲ್ಲಿಸಿರುವ ಜೂ ಎನ್​ಟಿಆರ್, ತಮ್ಮ ಬಳಿ ಇರುವ ಹಾಗೂ ಬ್ಯಾಂಕ್​ನವರು ಸಲ್ಲಿಸಿರುವ ದಾಖಲೆಗಳನ್ನು ಫೊರೆನ್ಸಿಕ್​ ಪರೀಕ್ಷೆಗೆ ಕಳಿಸಲಾಗಿದ್ದು, ನನ್ನ ಬಳಿ ಇರುವ ದಾಖಲೆಗಳು ಒರಿಜಿನಲ್ ಎಂದು ವರದಿ ಬಂದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಜೂ ಎನ್​ಟಿಆರ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ‘ಜೂ ಎನ್​ಟಿಆರ್ ಏಕೆ ಈ ವಿಷಯವನ್ನು ಹೈಕೋರ್ಟ್​ಗೆ ತಂದರು, ಡೆಟ್ ರಿಕವರಿ ಟ್ರಿಬ್ಯುನಲ್​ಗೆ ಏಕೆ ಮನವಿ ಸಲ್ಲಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಆದರೆ ಜೂ ಎನ್​ಟಿಆರ್ ಪರ ವಕೀಲರು ಡಿಆರ್​ಟಿಯ ಆದೇಶದಲ್ಲಿರುವ ಒಂದು ತಾಂತ್ರಿಕ ಸಮಸ್ಯೆ ಬಗ್ಗೆ ಗಮನ ಸೆಳೆದು ಈ ಕಾರಣಕ್ಕಾಗಿ ನಾವು ಹೈಕೋರ್ಟ್​ಗೆ ಮನವಿ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಪ್ರಕರಣವನ್ನು ಜೂನ್ 6 ಕ್ಕೆ ಮುಂದೂಡಲಾಗಿದೆ.

2003 ರಲ್ಲಿ ಜಮೀನು ಖರೀದಿಸಿದ ಜೂ ಎನ್​ಟಿಆರ್, 2007ರಲ್ಲಿ ಅದೇ ಜಮೀನಿನಲ್ಲಿ ಅದ್ಧೂರಿಯಾಗಿ ಮನೆ ಸಹ ನಿರ್ಮಿಸಿದರು. ಈಗಲೂ ಅವರು ಅದೇ ಮನೆಯಲ್ಲಿ ಕುಟುಂಬದೊಂದಿಗೆ ವಾಸವಿದ್ದಾರೆ. ಜೂ ಎನ್​ಟಿಆರ್ ಸಾಕಷ್ಟು ರಿಯಲ್ ಎಸ್ಟೇಟ್ ಹೂಡಿಕೆಗಳನ್ನು ಮಾಡಿದ್ದಾರೆ. ಆಂಧ್ರ, ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಜೂಎನ್​ಟಿಆರ್ ಜಮೀನು ಹೊಂದಿದ್ದಾರೆ. ಕೆಲವು ಕಮರ್ಶಿಯಲ್ ಬಿಲ್ಡಿಂಗ್​ಗಳನ್ನು ಸಹ ಅವರು ಹೊಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಡ್ರಗ್ಸ್​ ದಂಧೆಕೋರರಿಗೆ ಶಾಕ್​: 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​
ಡ್ರಗ್ಸ್​ ದಂಧೆಕೋರರಿಗೆ ಶಾಕ್​: 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​