AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​ಟಿಆರ್ ಪುಣ್ಯಭೂಮಿಗೆ ನಮಿಸಿದ ಜೂ ಎನ್​ಟಿಆರ್, ರಾಜಕೀಯದ ಸುಳಿವು ಕೊಟ್ಟ ಅಭಿಮಾನಿಗಳ ಘೋಷಣೆ

Jr NTR: ತೆಲುಗು ಚಿತ್ರರಂಗದ ದಂತಕತೆ ಎನ್​ಟಿಆರ್ ಜನ್ಮ ಶತಮಾನೋತ್ಸವ ಇಂದು (ಮೇ 28) ತಾತನ ಸಮಾಧಿಗೆ ಜೂ ಎನ್​ಟಿಆರ್ ಭೇಟಿ ನೀಡಿದಾಗ ಅವರ ಅಭಿಮಾನಿಗಳು ಹಾಕಿರುವ ಕೆಲವು ಘೋಷಣೆ ಇದೀಗ ರಾಜಕೀಯ ಚರ್ಚೆಯನ್ನು ಆರಂಭಿಸಿವೆ.

ಎನ್​ಟಿಆರ್ ಪುಣ್ಯಭೂಮಿಗೆ ನಮಿಸಿದ ಜೂ ಎನ್​ಟಿಆರ್, ರಾಜಕೀಯದ ಸುಳಿವು ಕೊಟ್ಟ ಅಭಿಮಾನಿಗಳ ಘೋಷಣೆ
ಜೂ ಎನ್​ಟಿಆರ್
ಮಂಜುನಾಥ ಸಿ.
|

Updated on: May 28, 2023 | 8:22 PM

Share

ಅವಿಭಜಿತ ಆಂಧ್ರ ಪ್ರದೇಶ (Andhra Pradesh) ಮಾಜಿ ಸಿಎಂ, ತೆಲುಗು ಚಿತ್ರರಂಗದ ದಂತಕತೆ ಎನ್​ಟಿಆರ್ (NTR) ಅವರ ನೂರನೇ ಜಯಂತಿ ಇಂದು (ಮೇ 28). ಎನ್​ಟಿಆರ್ ಜನ್ಮಶತಾಬ್ಧಿಯನ್ನು ನಂದಮೂರಿ ಕುಟುಂಬದವರು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಎನ್​ಟಿಆರ್ ಪುತ್ರ ಬಾಲಕೃಷ್ಣ ಹಾಗೂ ಅಳಿಯ ಚಂದ್ರಬಾಬು ನಾಯ್ಡು ಒಟ್ಟಾಗಿ ಸೇರಿ ಈಗಾಗಲೇ ಕೆಲವು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಆದರೆ ಈ ಕಾರ್ಯಕ್ರಮಗಳಿಗೆ ಜೂ ಎನ್​ಟಿಆರ್ (Jr NTR) ಅನ್ನು ಇವರು ಆಹ್ವಾನಿಸಿರಲಿಲ್ಲ. ಆದರೆ ಇಂದು ಎನ್​ಟಿಆರ್ ಹುಟ್ಟುಹಬ್ಬದಂದು ಅವರ ಪುಣ್ಯಭೂಮಿಗೆ ಏಕಾಂಗಿಯಾಗಿ ಭೇಟಿ ನೀಡಿದ್ದ ಜೂ ಎನ್​ಟಿಆರ್ ತಾತನಿಗೆ ನಮಿಸಿದರು. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಹಾಕಿದ ಘೋಷಣೆ ರಾಜಕೀಯದ ಸುಳಿವೊಂದನ್ನು ನೀಡಿವೆ.

ಹೈದರಾಬಾದ್​ನ ಖೈತರಾಬಾದ್​ನಲ್ಲಿನ ಎನ್​ಟಿಆರ್ ಸಮಾಧಿಗೆ ಜೂ ಎನ್​ಟಿಆರ್ ಇಂದು ಬೆಳಿಗ್ಗೆ ಭೇಟಿ ನೀಡಿದರು. ಈ ಸಮಯ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಅಲ್ಲಿ ನೆರೆದಿದ್ದರು. ನೂಕು ನುಗ್ಗಲಿನ ನಡುವೆ ಸಮಾಧಿ ಬಳಿ ಬಂದ ಜೂ ಎನ್​ಟಿಆರ ಪುಷ್ಪಗಳನ್ನು ಹಾಕಿ ತಲೆಬಾಗಿ ನಮಿಸಿದರು. ಈ ಸಮಯ ಜೂ ಎನ್​ಟಿಆರ್​ಗೆ ಕೆಲವರು ಹೂಗುಚ್ಛವನ್ನು ಕೊಡಲು ಬಂದರೆ ಅವನ್ನು ಸಿಟ್ಟಿಗೆ ಬದಿಗೆ ತಳ್ಳಿದರು ಜೂ ಎನ್​ಟಿಆರ್.

ಜೂ ಎನ್​ಟಿಆರ್, ಎನ್​ಟಿಆರ್ ಅವರ ಸಮಾಧಿ ಸ್ಥಳಕ್ಕೆ ಬಂದಾಗ ಅಭಿಮಾನಿಗಳು ಕೂಗಿದ ಘೋಷಣೆ ರಾಜಕೀಯ ಚರ್ಚೆಗೆ ನಾಂದಿ ಹಾಡಿವೆ. ಜೂ ಎನ್​ಟಿಆರ್ ಬಂದ ಸಮಯ ಸಿಎಂ ಎನ್​ಟಿಆರ್ ಎಂಬ ಘೋಷಣೆಗಳನ್ನು ಅಭಿಮಾನಿಗಳು ಕೂಗಿದರು. ಜೂ ಎನ್​ಟಿಆರ್, ಸಮಾಧಿ ಸ್ಥಳದಿಂದ ಹೋಗುವವರೆಗೆ ಸಿಎಂ ಎನ್​ಟಿಆರ್ ಘೋಷಣೆಗಳು ಮೊಳಗಿದವು. ಘೋಷಣೆ ಹಾಕುತ್ತಿದ್ದವರನ್ನು ಸುಮ್ಮನಿರುವಂತೆ ಸಹ ಜೂ ಎನ್​ಟಿಆರ್ ಹೇಳಲಿಲ್ಲ. ಈ ಘಟನೆ ಇದೀಗ ತೆಲುಗು ರಾಜ್ಯಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ನಂದಮೂರಿ ಕುಟುಂಬದಿಂದ ಟಿಡಿಪಿ ಪಕ್ಷದ ರಾಜಕೀಯದಿಂದ ಜೂ ಎನ್​ಟಿಆರ್ ಅನ್ನು ಚಂದ್ರಬಾಬು ನಾಯ್ಡು ಹಾಗೂ ಬಾಲಕೃಷ್ಣ ದೂರ ಇಟ್ಟಿದ್ದಾರೆ. ಟಿಡಿಪಿ ಪಕ್ಷದಲ್ಲಿ ಚಂದ್ರಬಾಬು ನಾಯ್ಡು ಪುತ್ರನನ್ನು ಬೆಳೆಸುವ ಸಲುವಾಗಿ ಜೂ ಎನ್​ಟಿಆರ್ ಅನ್ನು ದೂರ ಇಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:ಮತ್ತೆ ಜೂ ಎನ್​ಟಿಆರ್ ಅನ್ನು ದೂರವಿಟ್ಟ ನಂದಮೂರಿ ಬಾಲಕೃಷ್ಣ-ಚಂದ್ರಬಾಬು ನಾಯ್ಡು

ಟಿಡಿಪಿ ಪಕ್ಷದಿಂದ ತಮ್ಮನ್ನು ದೂರ ಇರಿಸಿರುವ ಬಗ್ಗೆ ಜೂ ಎನ್​ಟಿಆರ್ ಏನೂ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಅಭಿಮಾನಿಗಳು ಸಿಎಂ ಎನ್​ಟಿಆರ್ ಘೋಷಣೆಗಳಿಂದ ಜೂ ಎನ್​ಟಿಆರ್ ಹೊಸ ಪಕ್ಷ ಸ್ಥಾಪನೆ ಮಾಡುತ್ತಾರೆಯೇ ಎಂಬ ಅನುಮಾನ ಮೂಡಿದೆ. ಅವರ ತಾತ ಸೀನಿಯರ್ ಎನ್​ಟಿಆರ್ ಸಹ ಮೊದಲ ಬಾರಿಗೆ ಟಿಡಿಪಿ ಪಕ್ಷ ಸ್ಥಾಪನೆ ಮಾಡಿದಾಗ ಕಾಂಗ್ರೆಸ್ ವಿರುದ್ಧ ಸ್ವಾಭಿಮಾನ ಕೆರಳಿಸುವ ಕಾರ್ಯ ಮಾಡಿದ್ದರು. ಈಗ ಜೂ ಎನ್​ಟಿಆರ್ ಸಹ ಸ್ವಾಭಿಮಾನಕ್ಕೆ ಕಟ್ಟುಬಿದ್ದು ಹೊಸ ಪಕ್ಷ ಸ್ಥಾಪನೆ ಮಾಡುತ್ತಾರೆಯೇ ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಕನ್ನಡದಲ್ಲಿ ಬರುತ್ತಿದೆ ಎಐ ಸಿನಿಮಾ
ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಕನ್ನಡದಲ್ಲಿ ಬರುತ್ತಿದೆ ಎಐ ಸಿನಿಮಾ
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರ್ಧಾರ
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರ್ಧಾರ
ಇನ್ನೇನು ಟೇಕಾಫ್ ಆಗಬೇಕೆನ್ನುವಷ್ಟರಲ್ಲಿ ಇಂಡಿಗೋ ವಿಮಾನದಲ್ಲಿ ಹೊಗೆ
ಇನ್ನೇನು ಟೇಕಾಫ್ ಆಗಬೇಕೆನ್ನುವಷ್ಟರಲ್ಲಿ ಇಂಡಿಗೋ ವಿಮಾನದಲ್ಲಿ ಹೊಗೆ
ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ
ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ
ನಾಯಕತ್ವ ಬದಲಾವಣೆ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್
ನಾಯಕತ್ವ ಬದಲಾವಣೆ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್
ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು
ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು
ಮೇಕೆದಾಟು ಯೋಜನೆಗೆ ಕ್ಯಾತೆ: ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್
ಮೇಕೆದಾಟು ಯೋಜನೆಗೆ ಕ್ಯಾತೆ: ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್
ರಾಜ್ಯಸಭೆ ಆಫರ್​​ ಬಂದರೆ ಸಿದ್ದರಾಮಯ್ಯ ನಿಲುವೇನು? ಇಲ್ಲಿದೆ ಮಾಹಿತಿ
ರಾಜ್ಯಸಭೆ ಆಫರ್​​ ಬಂದರೆ ಸಿದ್ದರಾಮಯ್ಯ ನಿಲುವೇನು? ಇಲ್ಲಿದೆ ಮಾಹಿತಿ
ಚಾಮುಂಡಿ ಬೆಟ್ಟಕ್ಕೆ ರಣ್ವೀರ್ ಸಿಂಗ್: ಪೂಜಾರಿ ಹೇಳಿದ್ದು ಹೀಗೆ?
ಚಾಮುಂಡಿ ಬೆಟ್ಟಕ್ಕೆ ರಣ್ವೀರ್ ಸಿಂಗ್: ಪೂಜಾರಿ ಹೇಳಿದ್ದು ಹೀಗೆ?