AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​ಟಿಆರ್ ಪುಣ್ಯಭೂಮಿಗೆ ನಮಿಸಿದ ಜೂ ಎನ್​ಟಿಆರ್, ರಾಜಕೀಯದ ಸುಳಿವು ಕೊಟ್ಟ ಅಭಿಮಾನಿಗಳ ಘೋಷಣೆ

Jr NTR: ತೆಲುಗು ಚಿತ್ರರಂಗದ ದಂತಕತೆ ಎನ್​ಟಿಆರ್ ಜನ್ಮ ಶತಮಾನೋತ್ಸವ ಇಂದು (ಮೇ 28) ತಾತನ ಸಮಾಧಿಗೆ ಜೂ ಎನ್​ಟಿಆರ್ ಭೇಟಿ ನೀಡಿದಾಗ ಅವರ ಅಭಿಮಾನಿಗಳು ಹಾಕಿರುವ ಕೆಲವು ಘೋಷಣೆ ಇದೀಗ ರಾಜಕೀಯ ಚರ್ಚೆಯನ್ನು ಆರಂಭಿಸಿವೆ.

ಎನ್​ಟಿಆರ್ ಪುಣ್ಯಭೂಮಿಗೆ ನಮಿಸಿದ ಜೂ ಎನ್​ಟಿಆರ್, ರಾಜಕೀಯದ ಸುಳಿವು ಕೊಟ್ಟ ಅಭಿಮಾನಿಗಳ ಘೋಷಣೆ
ಜೂ ಎನ್​ಟಿಆರ್
ಮಂಜುನಾಥ ಸಿ.
|

Updated on: May 28, 2023 | 8:22 PM

Share

ಅವಿಭಜಿತ ಆಂಧ್ರ ಪ್ರದೇಶ (Andhra Pradesh) ಮಾಜಿ ಸಿಎಂ, ತೆಲುಗು ಚಿತ್ರರಂಗದ ದಂತಕತೆ ಎನ್​ಟಿಆರ್ (NTR) ಅವರ ನೂರನೇ ಜಯಂತಿ ಇಂದು (ಮೇ 28). ಎನ್​ಟಿಆರ್ ಜನ್ಮಶತಾಬ್ಧಿಯನ್ನು ನಂದಮೂರಿ ಕುಟುಂಬದವರು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಎನ್​ಟಿಆರ್ ಪುತ್ರ ಬಾಲಕೃಷ್ಣ ಹಾಗೂ ಅಳಿಯ ಚಂದ್ರಬಾಬು ನಾಯ್ಡು ಒಟ್ಟಾಗಿ ಸೇರಿ ಈಗಾಗಲೇ ಕೆಲವು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಆದರೆ ಈ ಕಾರ್ಯಕ್ರಮಗಳಿಗೆ ಜೂ ಎನ್​ಟಿಆರ್ (Jr NTR) ಅನ್ನು ಇವರು ಆಹ್ವಾನಿಸಿರಲಿಲ್ಲ. ಆದರೆ ಇಂದು ಎನ್​ಟಿಆರ್ ಹುಟ್ಟುಹಬ್ಬದಂದು ಅವರ ಪುಣ್ಯಭೂಮಿಗೆ ಏಕಾಂಗಿಯಾಗಿ ಭೇಟಿ ನೀಡಿದ್ದ ಜೂ ಎನ್​ಟಿಆರ್ ತಾತನಿಗೆ ನಮಿಸಿದರು. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಹಾಕಿದ ಘೋಷಣೆ ರಾಜಕೀಯದ ಸುಳಿವೊಂದನ್ನು ನೀಡಿವೆ.

ಹೈದರಾಬಾದ್​ನ ಖೈತರಾಬಾದ್​ನಲ್ಲಿನ ಎನ್​ಟಿಆರ್ ಸಮಾಧಿಗೆ ಜೂ ಎನ್​ಟಿಆರ್ ಇಂದು ಬೆಳಿಗ್ಗೆ ಭೇಟಿ ನೀಡಿದರು. ಈ ಸಮಯ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಅಲ್ಲಿ ನೆರೆದಿದ್ದರು. ನೂಕು ನುಗ್ಗಲಿನ ನಡುವೆ ಸಮಾಧಿ ಬಳಿ ಬಂದ ಜೂ ಎನ್​ಟಿಆರ ಪುಷ್ಪಗಳನ್ನು ಹಾಕಿ ತಲೆಬಾಗಿ ನಮಿಸಿದರು. ಈ ಸಮಯ ಜೂ ಎನ್​ಟಿಆರ್​ಗೆ ಕೆಲವರು ಹೂಗುಚ್ಛವನ್ನು ಕೊಡಲು ಬಂದರೆ ಅವನ್ನು ಸಿಟ್ಟಿಗೆ ಬದಿಗೆ ತಳ್ಳಿದರು ಜೂ ಎನ್​ಟಿಆರ್.

ಜೂ ಎನ್​ಟಿಆರ್, ಎನ್​ಟಿಆರ್ ಅವರ ಸಮಾಧಿ ಸ್ಥಳಕ್ಕೆ ಬಂದಾಗ ಅಭಿಮಾನಿಗಳು ಕೂಗಿದ ಘೋಷಣೆ ರಾಜಕೀಯ ಚರ್ಚೆಗೆ ನಾಂದಿ ಹಾಡಿವೆ. ಜೂ ಎನ್​ಟಿಆರ್ ಬಂದ ಸಮಯ ಸಿಎಂ ಎನ್​ಟಿಆರ್ ಎಂಬ ಘೋಷಣೆಗಳನ್ನು ಅಭಿಮಾನಿಗಳು ಕೂಗಿದರು. ಜೂ ಎನ್​ಟಿಆರ್, ಸಮಾಧಿ ಸ್ಥಳದಿಂದ ಹೋಗುವವರೆಗೆ ಸಿಎಂ ಎನ್​ಟಿಆರ್ ಘೋಷಣೆಗಳು ಮೊಳಗಿದವು. ಘೋಷಣೆ ಹಾಕುತ್ತಿದ್ದವರನ್ನು ಸುಮ್ಮನಿರುವಂತೆ ಸಹ ಜೂ ಎನ್​ಟಿಆರ್ ಹೇಳಲಿಲ್ಲ. ಈ ಘಟನೆ ಇದೀಗ ತೆಲುಗು ರಾಜ್ಯಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ನಂದಮೂರಿ ಕುಟುಂಬದಿಂದ ಟಿಡಿಪಿ ಪಕ್ಷದ ರಾಜಕೀಯದಿಂದ ಜೂ ಎನ್​ಟಿಆರ್ ಅನ್ನು ಚಂದ್ರಬಾಬು ನಾಯ್ಡು ಹಾಗೂ ಬಾಲಕೃಷ್ಣ ದೂರ ಇಟ್ಟಿದ್ದಾರೆ. ಟಿಡಿಪಿ ಪಕ್ಷದಲ್ಲಿ ಚಂದ್ರಬಾಬು ನಾಯ್ಡು ಪುತ್ರನನ್ನು ಬೆಳೆಸುವ ಸಲುವಾಗಿ ಜೂ ಎನ್​ಟಿಆರ್ ಅನ್ನು ದೂರ ಇಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:ಮತ್ತೆ ಜೂ ಎನ್​ಟಿಆರ್ ಅನ್ನು ದೂರವಿಟ್ಟ ನಂದಮೂರಿ ಬಾಲಕೃಷ್ಣ-ಚಂದ್ರಬಾಬು ನಾಯ್ಡು

ಟಿಡಿಪಿ ಪಕ್ಷದಿಂದ ತಮ್ಮನ್ನು ದೂರ ಇರಿಸಿರುವ ಬಗ್ಗೆ ಜೂ ಎನ್​ಟಿಆರ್ ಏನೂ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಅಭಿಮಾನಿಗಳು ಸಿಎಂ ಎನ್​ಟಿಆರ್ ಘೋಷಣೆಗಳಿಂದ ಜೂ ಎನ್​ಟಿಆರ್ ಹೊಸ ಪಕ್ಷ ಸ್ಥಾಪನೆ ಮಾಡುತ್ತಾರೆಯೇ ಎಂಬ ಅನುಮಾನ ಮೂಡಿದೆ. ಅವರ ತಾತ ಸೀನಿಯರ್ ಎನ್​ಟಿಆರ್ ಸಹ ಮೊದಲ ಬಾರಿಗೆ ಟಿಡಿಪಿ ಪಕ್ಷ ಸ್ಥಾಪನೆ ಮಾಡಿದಾಗ ಕಾಂಗ್ರೆಸ್ ವಿರುದ್ಧ ಸ್ವಾಭಿಮಾನ ಕೆರಳಿಸುವ ಕಾರ್ಯ ಮಾಡಿದ್ದರು. ಈಗ ಜೂ ಎನ್​ಟಿಆರ್ ಸಹ ಸ್ವಾಭಿಮಾನಕ್ಕೆ ಕಟ್ಟುಬಿದ್ದು ಹೊಸ ಪಕ್ಷ ಸ್ಥಾಪನೆ ಮಾಡುತ್ತಾರೆಯೇ ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ