AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಿಷ್ಮಾ ಮಾಜಿ ಪತಿ ನಿಧನ; ಹನಿಮೂನ್​ನಲ್ಲಿ ನಟಿಗೆ ಗೆಳೆಯರ ಜೊತೆ ಮಲಗಲು ಹೇಳಿದ್ದ ಸಂಜಯ್

Sunjay Kapur Death: ಕರಿಷ್ಮಾ ಕಪೂರ್ ಅವರು ತಮ್ಮ ಮಾಜಿ ಪತಿ ಸಂಜಯ್ ಕಪೂರ್ ಅವರೊಂದಿಗಿನ ಕಷ್ಟದ ವಿವಾಹ ಮತ್ತು ವಿಚ್ಛೇದನದ ಬಗ್ಗೆ ಮಾತನಾಡಿದ್ದರು. ಸಂಜಯ್ ಅವರ ನಿಧನದ ನಂತರ, ಕಿರುಕುಳ ಮತ್ತು ಅವರ ವಿಚ್ಛೇದನಕ್ಕೆ ಕಾರಣಗಳ ಬಗ್ಗೆ ಚರ್ಚೆಗಳು ಹೆಚ್ಚಾಗಿವೆ.

ಕರಿಷ್ಮಾ ಮಾಜಿ ಪತಿ ನಿಧನ; ಹನಿಮೂನ್​ನಲ್ಲಿ ನಟಿಗೆ ಗೆಳೆಯರ ಜೊತೆ ಮಲಗಲು ಹೇಳಿದ್ದ ಸಂಜಯ್
ಕರಿಷ್ಮಾ-ಸಂಜಯ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jun 13, 2025 | 8:30 AM

Share

ನಟಿ ಕರಿಷ್ಮಾ ಕಪೂರ್ (Karishma Kapoor) ಹಲವು ಸಿನಿಮಾಗಳಲ್ಲಿ ಪವರ್ ಫುಲ್ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಒಂದು ಸಮಯದಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಇತ್ತು ಮತ್ತು ಆ ಬೇಡಿಕೆ ಈಗ ಕಡಿಮೆ ಆಗಿದೆ. ಅವರು ಮೊದಲಿನಷ್ಟು ನಟನಾ ಜಗತ್ತಿನಲ್ಲಿ ಸಕ್ರಿಯವಾಗಿಲ್ಲ. ಈಗ ಅವರ ಮಾಜಿ ಪತಿ ಸಂಜಯ್ ಕಪೂರ್ ಅವರು ಕೇವಲ 53ನೇ ವಯಸ್ಸಿಗೆ ನಿಧನ ಹೊಂದಿದರು. ಆ ಬಳಿಕ ಇವರ ವಿಚ್ಛೇದನಕ್ಕೆ ಕಾರಣಗಳ ಬಗ್ಗೆ ಚರ್ಚೆಗಳು ನಡೆದಿವೆ.

ಕರಿಷ್ಮಾ ಕಪೂರ್ ಅವರು ಕರೀನಾ ಕಪೂರ್ ಸಹೋದರಿ. ಕರಿಷ್ಮಾ 2003ರಲ್ಲಿ ಮೊದಲ ಮದುವೆ ದೆಹಲಿಯ ಉದ್ಯಮಿ ಸಂಜಯ್ ಕಪೂರ್ ಅವರೊಂದಿಗೆ ನಡೆದಿತ್ತು. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. 2005ರಲ್ಲೇ ಇವರು ಬೇರೆ ಆಗುವ ನಿರ್ಧಾರ ತೆಗೆದುಕೊಂಡರು. ಆ ಬಳಿಕ 11 ವರ್ಷಗಳ ಕಾಲ ಇದನ್ನು ಮುಂದಕ್ಕೆ ಹಾಕಿದರು. ಸಂಜಯ್ ಕಪೂರ್ ಮತ್ತು ಕರಿಷ್ಮಾ ಕಪೂರ್ 2016ರಲ್ಲಿ ವಿಚ್ಛೇದನ ಪಡೆದರು. ಈಗ ಕರಿಷ್ಮಾ ಮಗಳು ಮತ್ತು ಮಗನೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ.

ಸಂಜಯ್ ಕಿರುಕುಳ

ಕರಿಷ್ಮಾ ಕಪೂರ್ ಅವರು ವಿಚ್ಛೇದನದ ಬಳಿಕ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿದ್ದರು. ಅತ್ತೆ ಮತ್ತು ಗಂಡನ ವಿರುದ್ಧ ಅವರು ಕಿರುಕುಳದ ಆರೋಪ ಮಾಡಿದ್ದರು. ಪತಿ ಕೂಡ ನಟಿಗೆ ಹಲವು ಬಾರಿ ಥಳಿಸಿದ್ದ ಎಂದು ದೂರಿದ್ದರು. ಕರಿಷ್ಮಾ ತನ್ನ ದೇಹದ ಮೇಲಿನ ಗಾಯದ ಗುರುತುಗಳನ್ನು ಮೇಕಪ್ ಮೂಲಕ ಮರೆಮಾಚುತ್ತಿದ್ದರು.

ಇದನ್ನೂ ಓದಿ
Image
ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ನನ್ನ ಸಂಬಂಧಿ ಅಲ್ಲ; ವಿಕ್ರಾಂತ್ ಮಾಸಿ
Image
ವಿಮಾನ ದುರಂತದ ಟ್ವೀಟ್ ಮಾಡಿದ ಬಳಿಕ ಹೃದಯಾಘಾತದಿಂದ ನಟಿಯ ಮಾಜಿ ಪತಿ ನಿಧನ
Image
ವಿಮಾನ ದುರಂತ: ‘12th ಫೇಲ್’ ನಟನ ಸಂಬಂಧಿ, ಕರ್ನಾಟಕದ ಕ್ಲೈವ್ ಕುಂದರ್ ಸಾವು
Image
ನಿಶಾ ರವಿಕೃಷ್ಣನ್​ಗೆ ತೆಲುಗು ಕಿರುತೆರೆಯಲ್ಲಿ ಎದುರಾದ ಕಷ್ಟಗಳು ಒಂದೆರಡಲ್ಲ

ಇದನ್ನೂ ಓದಿ: ಕರಿಷ್ಮಾ ಕಪೂರ್​ಗೆ ಎರಡನೇ ಮದುವೆ? ಉತ್ತರಿಸಿದ ನಟಿ

2017ರಲ್ಲಿ ಸಂಜಯ್ ಮೂರನೇ ಬಾರಿಗೆ ಮದುವೆಯಾದರು. ಅವರನ್ನು ವರಿಸಿದ್ದೇ ಪ್ರಿಯಾ ಸಚ್‌ದೇವ್. ಪ್ರಿಯಾ ಮತ್ತು ಸಂಜಯ್ 2010 ರಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಆದರೆ ಇಬ್ಬರೂ ಅದನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ. ಕರಿಷ್ಮಾ ಕಪೂರ್ ಅವರಿಂದ ವಿಚ್ಛೇದನ ಪಡೆದ ನಂತರ ಸಂಜಯ್ ಮತ್ತು ಪ್ರಿಯಾ ವಿವಾಹವಾದರು.

ವಿಚ್ಛೇದನ ಕೋರಿದ್ದರಲ್ಲಿ ಏನಿತ್ತು?

ಕರಿಷ್ಮಾ ಕಪೂರ್ ಅವರು ವಿಚ್ಛೇದನ ಪತ್ರದಲ್ಲಿ ಹಲವು ರೀತಿಯ ಆರೋಪ ಮಾಡಿದ್ದರು. ಹನಿಮೂನ್ ಸಂದರ್ಭದಲ್ಲಿ ಗೆಳೆಯರ ಜೊತೆ ಮಲಗುವಂತೆ ಆತ ಕೇಳುತ್ತಿದ್ದ ಎಂದಿದ್ದರು. ತಾಯಿಯಿಂದ ಹೊಡೆಸುತ್ತಿದ್ದ ಎಂದೆಲ್ಲ ಆರೋಪಿಸಿದ್ದರು. ಈಗ ಸಂಜಯ್ ಅವರು ಹೃದಯಘಾತದಿಂದ ಕೊನೆಯುಸಿರು ಎಳೆದಿದ್ದಾರೆ. ಏರ್ ಇಂಡಿಯಾ ಟ್ರ್ಯಾಜಿಡಿ ಬಗ್ಗೆ ಅವರು ಟ್ವೀಟ್ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ