AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೋನು ನಿಗಂ ಹಾಡಿಗೆ ಕತ್ತರಿ ಹಾಕಿಸಿದ್ದೆ’; ಹುಚ್ಚ ಸಿನಿಮಾದ ‘ಉಸಿರೆ ಉಸಿರೆ’ ಹಾಡಿನ ಬಗ್ಗೆ ಅಚ್ಚರಿ ಸಂಗತಿ ಬಿಚ್ಚಿಟ್ಟ ಸುದೀಪ್

ಹುಚ್ಚ ಸಿನಿಮಾದ ಸೂಪರ್ ಹಿಟ್ ಹಾಡು ಉಸಿರೆ ಉಸಿರೆ ಹಾಡಿದ್ದ ರಾಜೇಶ್ ಕೃಷ್ಣನ್ ಅವರಿಗೂ ಮೊದಲು ಆ ಹಾಡು ಹಾಡಿದ್ದು ಖ್ಯಾತ ಗಾಯಕ ಸೋನು ನಿಗಂ. ಆ ವೇಳೆ ನಡೆದಿದ್ದ ಅಚ್ಚರಿಯ ಘಟನೆಯನ್ನು ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಬಿಚ್ಚಿಟ್ಟಿದ್ದಾರೆ.

'ಸೋನು ನಿಗಂ ಹಾಡಿಗೆ ಕತ್ತರಿ ಹಾಕಿಸಿದ್ದೆ'; ಹುಚ್ಚ ಸಿನಿಮಾದ 'ಉಸಿರೆ ಉಸಿರೆ' ಹಾಡಿನ ಬಗ್ಗೆ ಅಚ್ಚರಿ ಸಂಗತಿ ಬಿಚ್ಚಿಟ್ಟ ಸುದೀಪ್
ಸುದೀಪ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 08, 2021 | 9:45 PM

ಬಿಗ್ ಬಾಸ್​ ಕನ್ನಡ ಸೀಸನ್ 8 ಫಿನಾಲೆ ಎಪಿಸೋಡ್ ಇಂದು ಪ್ರಸಾರವಾಗುತ್ತಿದೆ. ಬಿಗ್ ಬಾಸ್​ ವೇದಿಕೆಯಲ್ಲಿ ಸ್ಪರ್ಧಿಗಳ ಜರ್ನಿಯ ವಿಡಿಯೋಗಳನ್ನು ಹಾಕುವ ಮೂಲಕ ಸರ್​ಪ್ರೈಸ್ ನೀಡುತ್ತಿದ್ದ ನಟ ಕಿಚ್ಚ ಸುದೀಪ್ ಅವರಿಗೆ ಇಂದು ಇಬ್ಬರು ಖ್ಯಾತ ಗಾಯಕರು ಸರ್​ಪ್ರೈಸ್ ನೀಡಿದ್ದಾರೆ. ರಘು ದೀಕ್ಷಿತ್ ಮತ್ತು ರಾಜೇಶ್ ಕೃಷ್ಣನ್ ಕಿಚ್ಚ ಸುದೀಪ್ ನಟಿಸಿರುವ ಸಿನಿಮಾಗಳ ಹಾಡುಗಳನ್ನು ಹಾಡುವ ಮೂಲಕ ತಮ್ಮ ಗೆಳೆಯನಿಗೆ ಸರ್​ಪ್ರೈಸ್ ನೀಡಿದ್ದಾರೆ. ಅವರಿಬ್ಬರ ಜೊತೆ ಸೇರಿ ಕಿಚ್ಚ ಸುದೀಪ್ ಕೂಡ ಹಾಡು ಹಾಡಿದ್ದಾರೆ.

ಈ ವೇಳೆ ತಮ್ಮ ‘ಹುಚ್ಚ’ ಸಿನಿಮಾದ ಬಗ್ಗೆ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿರುವ ಕಿಚ್ಚ ಸುದೀಪ್, ಹುಚ್ಚ ಸಿನಿಮಾದ ವೇಳೆ ನಾನು ಏನೂ ಆಗಿರಲಿಲ್ಲ. ಅದರಲ್ಲಿನ ಉಸಿರೆ ಉಸಿರೆ ಹಾಡನ್ನು ಸೋನು ನಿಗಂ ಹಾಡಿದ್ದರು. ಆದರೆ, ನನಗೆ ಯಾಕೋ ಅವರು ಹಾಡಿದ್ದು ಇಷ್ಟವಾಗಲಿಲ್ಲ. ಅವರಿಗೆ ಕನ್ನಡ ಗೊತ್ತಿಲ್ಲದೇ ಇದ್ದಿದ್ದಕ್ಕೋ ಏನೋ ಆ ಹಾಡಿನಲ್ಲಿ ಫೀಲಿಂಗ್ ಇರಲಿಲ್ಲ. ನಾನು ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಬಳಿ ಇದೇ ವಿಷಯ ಹೇಳಿದೆ. ಆ ಕಾಲಕ್ಕೆ ಸೋನು ನಿಗಂ ದೊಡ್ಡ ಗಾಯಕ.  ಅವರು ಹಾಡಿದ ಹಾಡನ್ನು ತೆಗೆದುಹಾಕುವುದು ಸಣ್ಣ ವಿಷಯವೇನಾಗಿರಲಿಲ್ಲ. ಆದರೆ, ಆ ಹಾಡನ್ನು ನನ್ನ ಗೆಳೆಯ ರಾಜೇಶ್ ಕೃಷ್ಣನ್ ಬಳಿ ಹಾಡಿಸಿ ಎಂದು ರಾಜೇಶ್ ರಾಮನಾಥನ್ ಬಳಿ ಮನವಿ ಮಾಡಿದೆ. ರಾತ್ರಿ ಯಾರೂ ಇಲ್ಲದ ವೇಳೆ ಕರೆದುಕೊಂಡು ಬಂದು ಹಾಡಿಸುತ್ತೇನೆ ಎಂದು ಹೇಳಿದೆ.

ಆಗ ಇನ್ನೂ ಫ್ರೆಷರ್ ಆಗಿದ್ದ ನನ್ನ ಮಾತಿಗೆ ಯಾವ ಬೆಲೆಯೂ ಇರಲಿಲ್ಲ. ಆದರೂ ರಾಜೇಶ್ ರಾಮನಾಥನ್ ನನ್ನ ಮಾತಿಗೆ ಒಪ್ಪಿ ರಾಜೇಶ್ ಕೃಷ್ಣನ್ ಅವರ ಬಳಿ ಹಾಡಿಸಲು ಒಪ್ಪಿದರು. ನೀವು ಬಂದಲ್ಲ, ಆ ದಿನದ ನನ್ನ ಪರಿಸ್ಥಿತಿ ಹೇಗಿತ್ತೆಂದರೆ ರಾಜೇಶ್ ಕೃಷ್ಣನ್ ಹಾಡಿದ್ದಕ್ಕೆ ಅವರಿಗೆ ಪೇಮೆಂಟ್ ಕೂಡ ಕೊಟ್ಟಿರಲಿಲ್ಲ. ಕೊಡಲು ನನ್ನ ಬಳಿ ಹಣವೂ ಇರಲಿಲ್ಲ. ಆದರೂ ನನ್ನ ಮೇಲಿನ ಸ್ನೇಹದಿಂದ ರಾಜೇಶ್ ಬಂದು ಹಾಡಿದರು. ಈಗಲೂ ಸೂಪರ್ ಹಿಟ್ ಹಾಡುಗಳ ಪಟ್ಟಿಯಲ್ಲಿರುವ ಉಸಿರೆ ಉಸಿರೆ ಹಾಡು ನನ್ನ ಫೇವರೆಟ್ ಹಾಡು. ಹುಚ್ಚ ಸಿನಿಮಾದ ಹಾಡುಗಳ ಸಿಡಿ, ಕ್ಯಾಸೆಟ್​ಗಳ ಮೇಲೆ ಈ ಹಾಡನ್ನು ಹಾಡಿದವರ ಜಾಗದಲ್ಲಿ ಸೋನು ನಿಗಂ ಹೆಸರೇ ಇತ್ತು. ಇತ್ತೀಚೆಗೆ ಅಲ್ಲಿ ರಾಜೇಶ್ ಕೃಷ್ಣನ್ ಹೆಸರು ಬಂದಿತು. ಇದೆಲ್ಲ ಸಾಧ್ಯವಾಗಿದ್ದು ಸಂಗೀತ ನಿರ್ದೇಶಕ ರಾಜೇಶ್ ರಾಮನಾಥನ್ ಮನಸು ಮಾಡಿದ್ದಕ್ಕೆ ಎಂದು ಕಿಚ್ಚ ಸುದೀಪ್ ಉಸಿರೆ ಉಸಿರೆ ಹಾಡಿನ ಕುರಿತಾದ ಅಚ್ಚರಿಯ ಮಾಹಿತಿಯನ್ನು ಬಿಗ್ ಬಾಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಬಹಳ ಒಳ್ಳೆಯ ಗಾಯಕ ಎಂಬುದು ಅವರ ಅಭಿಮಾನಿಗಳೆಲ್ಲರಿಗೂ ಗೊತ್ತಿರುವ ವಿಚಾರ. ಜಸ್ಟ್​ ಮಾತ್ ಮಾತಲ್ಲಿ ಟೈಟಲ್ ಸಾಂಗ್ ಹಾಡುವ ಮೂಲಕ ರಘು ದೀಕ್ಷಿತ್ ಕಿಚ್ಚ ಸುದೀಪ್​ಗೆ ಸರ್​ಪ್ರೈಸ್ ಕೊಟ್ಟರೆ ರಾಜೇಶ್ ಕೃಷ್ಣನ್ ಚಂದು ಮತ್ತು ಪಾರ್ಥ ಸಿನಿಮಾದ ಈ ಪ್ರೀತಿ ಒಂಥರಾ ಕಚಗುಳಿ, ಅವಳ ಒಲವ ನಗೆ ಹಾಡುಗಳನ್ನು ಹಾಡಿದರು. ಇದು ಸುದೀಪ್​ಗೆ ಕೂಡ ಅನಿರೀಕ್ಷಿತವಾಗಿತ್ತು. ಇದಾದ ಬಳಿಕ ಬಿಗ್​ ಬಾಸ್​ ಕನ್ನಡ 8ನೇ ಸೀಸನ್​ ವೀಕೆಂಡ್ ಎಪಿಸೋಡ್​ಗಳನ್ನು ನಡೆಸಿಕೊಟ್ಟ ಕಿಚ್ಚ ಸುದೀಪ್ ಅವರ ಜರ್ನಿಯ ವಿಡಿಯೋವನ್ನು ಕೂಡ ವೇದಿಕೆಯಲ್ಲಿ ಹಾಕಲಾಯಿತು.

ಅಂದಹಾಗೆ, ರಾಜೇಶ್ ಕೃಷ್ಣನ್ ಮತ್ತು ರಘು ದೀಕ್ಷಿತ್ ಇದ್ದಕ್ಕಿದ್ದಂತೆ ಬಿಗ್ ಬಾಸ್ ಫಿನಾಲೆಯ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಏಕೆ? ಎಂದು ನೀವು ಯೋಚಿಸುತ್ತಿರಬಹುದು. ಸಂಗೀತ ಲೋಕದ ದಿಗ್ಗಜ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂ ನಡೆಸಿಕೊಡುತ್ತಿದ್ದ ಸೂಪರ್ ಹಿಟ್ ಕಾರ್ಯಕ್ರಮ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಹೊಸ ರೂಪದಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್, ವಿ. ಹರಿಕೃಷ್ಣನ್ ಹಾಗೂ ರಘು ದೀಕ್ಷಿತ್ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Bigg Boss Kannada Finale: ಬಿಗ್ ಬಾಸ್ ಫಿನಾಲೆ ಎಪಿಸೋಡ್​ನಲ್ಲಾದ ತಪ್ಪಿನ ಕಾರಣ ಬಿಚ್ಚಿಟ್ಟ ಕಿಚ್ಚ ಸುದೀಪ್

ಬಿಗ್ ಬಾಸ್ ಫಿನಾಲೆಯಲ್ಲಿ ಅರವಿಂದ್​ ಕೆಪಿ ಗೆಲುವಿಗೂ, ಸೋಲಿಗೂ ಕಾರಣವಾಗಬಹುದು ಈ ಅಂಶಗಳು

(Kiccha Sudeep Revealed Interesting Story Behind Huccha Movie Usire Song in Bigg Boss Kannada Finale Episode)

Published On - 9:44 pm, Sun, 8 August 21

Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ