Bigg Boss Kannada Finale: ಬಿಗ್ ಬಾಸ್ ಫಿನಾಲೆ ಎಪಿಸೋಡ್​ನಲ್ಲಾದ ತಪ್ಪಿನ ಕಾರಣ ಬಿಚ್ಚಿಟ್ಟ ಕಿಚ್ಚ ಸುದೀಪ್

| Updated By: ಸುಷ್ಮಾ ಚಕ್ರೆ

Updated on: Aug 08, 2021 | 8:20 PM

BBK 8 Finale Episode | ನಿನ್ನೆ ಬಿಗ್ ಬಾಸ್ ಫಿನಾಲೆ​ ಎಪಿಸೋಡ್​ನಲ್ಲಿ ವಿಪರೀತ ಜಾಹೀರಾತುಗಳು ಇದ್ದುದಕ್ಕೆ ಹಾಗೂ ಎಪಿಸೋಡ್ ಮುಗಿಯುವುದು ತಡರಾತ್ರಿಯಾಗಿದ್ದಕ್ಕೆ ಕಾರಣವೇನೆಂಬ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ಇಂದಿನ ಎಪಿಸೋಡ್​ನಲ್ಲಿ ತಿಳಿಸಿದ್ದಾರೆ.

Bigg Boss Kannada Finale: ಬಿಗ್ ಬಾಸ್ ಫಿನಾಲೆ ಎಪಿಸೋಡ್​ನಲ್ಲಾದ ತಪ್ಪಿನ ಕಾರಣ ಬಿಚ್ಚಿಟ್ಟ ಕಿಚ್ಚ ಸುದೀಪ್
ಕಿಚ್ಚ ಸುದೀಪ್
Follow us on

ಬಿಗ್ ಬಾಸ್​ ಕನ್ನಡ ಸೀಸನ್ 8 ಅಂತಿಮ ಹಂತಕ್ಕೆ ಬಂದು ನಿಂತಿದೆ. ಕೊರೊನಾದಿಂದಾಗಿ ಬಿಗ್ ಬಾಸ್​ ರಿಯಾಲಿಟಿ ಶೋ (Bigg Boss Kannada 8 Reality Show) ಇತಿಹಾಸದಲ್ಲೇ ಮೊದಲ ಬಾರಿಗೆ ಅರ್ಧದಲ್ಲೇ ಬಿಗ್ ಬಾಸ್ ಕನ್ನಡ ಸೀಸನ್ 8 ಅನ್ನು ನಿಲ್ಲಿಸಲಾಗಿತ್ತು. ಅದೇ ರೀತಿ ಇದೇ ಮೊದಲ ಬಾರಿಗೆ ಮತ್ತೆ ಬಿಗ್ ಬಾಸ್​ ಎಪಿಸೋಡ್​ಗಳನ್ನು ಮುಂದುವರೆಸಲಾಗಿತ್ತು. ಪ್ರತಿ ಬಾರಿ 100 ಎಪಿಸೋಡ್​ಗೆ ಮುಗಿಯುವ ಬಿಗ್ ಬಾಸ್ ಇದೇ ಮೊದಲ ಬಾರಿಗೆ 120 ಎಪಿಸೋಡ್​ಗಳನ್ನು ಕಂಡಿದೆ. ಇಂದು ಬಿಗ್ ಬಾಸ್ ಕನ್ನಡದ 8ನೇ ಸೀಸನ್​ನ ವಿನ್ನರ್ (BBK 8) ಯಾರಾಗಲಿದ್ದಾರೆ ಎಂಬುದು ಬಹಿರಂಗವಾಗಲಿದೆ.

ನಿನ್ನೆ ಅಂದರೆ ಶನಿವಾರದ ಬಿಗ್ ಬಾಸ್ ಫಿನಾಲೆ ಎಪಿಸೋಡ್ ನೋಡಿದ ಬಹುತೇಕ ಜನರು ಅದರ ಮಧ್ಯ ಬರುತ್ತಿದ್ದ ಜಾಹೀರಾತನ್ನು ನೋಡಿ ಅಸಮಾಧಾನಗೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇಸರವನ್ನೂ ಹೊರಹಾಕಿದ್ದರು. ನೀವೇನು ಬಿಗ್ ಬಾಸ್ ಫಿನಾಲೆ ಎಪಿಸೋಡ್ ಹಾಕುತ್ತಿದ್ದೀರೋ? ಅಥವಾ ಹೊಸ ಸೀರಿಯಲ್ ಪ್ರಮೋಷನ್ ಮಾಡುತ್ತಿದ್ದೀರೋ? ಎಂಬ ಆಕ್ರೋಶವೂ ವ್ಯಕ್ತವಾಗಿತ್ತು. ಆದರೆ, ನಿನ್ನೆ ಬಿಗ್ ಬಾಸ್​ ಎಪಿಸೋಡ್​ನಲ್ಲಿ ವಿಪರೀತ ಜಾಹೀರಾತುಗಳು ಇದ್ದುದಕ್ಕೆ ಹಾಗೂ ಎಪಿಸೋಡ್ ಮುಗಿಯುವುದು ತಡರಾತ್ರಿಯಾಗಿದ್ದಕ್ಕೆ ಕಾರಣವೇನೆಂಬ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ಇಂದಿನ ಎಪಿಸೋಡ್​ನಲ್ಲಿ ತಿಳಿಸಿದ್ದಾರೆ.

ಸಾಮಾನ್ಯವಾಗಿ ಬಿಗ್​ ಬಾಸ್​ ಫಿನಾಲೆ ಎಪಿಸೋಡ್​ಗಳನ್ನು ಪ್ರಸಾರವಾಗುವುದಕ್ಕಿಂತ ಮೂರ್ನಾಲ್ಕು ಗಂಟೆ ಮೊದಲೇ ಶೂಟಿಂಗ್ ಮಾಡಲಾಗುತ್ತದೆ. ಬಳಿಕ ಅದನ್ನು ಎಡಿಟ್ ಮಾಡಿ ಪ್ರಸಾರ ಮಾಡಲಾಗುತ್ತದೆ. ಶನಿವಾರ ಬಿಗ್ ಬಾಸ್ ಶೂಟಿಂಗ್ ಸೆಟ್​ನಲ್ಲಿ ಇಂಟರ್ನೆಟ್​ ಸಮಸ್ಯೆ ಇದ್ದುದರಿಂದ ಶೂಟ್ ಮಾಡಲಾದ ಎಪಿಸೋಡ್​ಗಳನ್ನು ಟೆಕ್ನಿಕಲ್ ಟೀಂನವರು ನೊಯ್ಡಾಗೆ ಕಳುಹಿಸಬೇಕು. ಅಲ್ಲಿಂದ ಬಂದಮೇಲೂ ಕೆಲವು ಕೆಲಸಗಳಿರುತ್ತವೆ. ಇದರಿಂದ ನಿನ್ನೆಯ ಎಪಿಸೋಡ್​ನಲ್ಲಿ ಸ್ವಲ್ಪ ಸಮಸ್ಯೆಯಾಯಿತು. ಇದು ನಾವು ಯಾರೂ ಊಹಿಸದ ಸಮಸ್ಯೆಯಾಗಿತ್ತು. ಇಂಟರ್ನೆಟ್​ ಸಮಸ್ಯೆಯಿಂದ ಎಪಿಸೋಡ್​ಗಳನ್ನು ಕಳುಹಿಸುವುದು ತಡವಾಗಿದ್ದರಿಂದ ಅನಿವಾರ್ಯವಾಗಿ ಜಾಹೀರಾತುಗಳನ್ನು ಹಾಕಿಕೊಂಡು ಮ್ಯಾನೇಜ್ ಮಾಡಬೇಕಾಯಿತು. ಅದಕ್ಕೆ ನೀವು ಯಾರೂ ಬೇಸರಿಸಿಕೊಳ್ಳದೆ ನಮ್ಮ ಶೋ ನೋಡಿ, ಸಹಕಾರ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಶನಿವಾರದ ಎಪಿಸೋಡ್​ನಲ್ಲಿ ಪ್ರಶಾಂತ್ ಸಂಬರಗಿ ಹಾಗೂ ವೈಷ್ಣವಿ ಗೌಡ ಬಿಗ್ ಬಾಸ್​ನಿಂದ ಎಲಿಮಿನೇಟ್ ಆಗಿದ್ದಾರೆ. ಸದ್ಯಕ್ಕೆ ಮಂಜು ಪಾವಗಡ, ಅರವಿಂದ್ ಕೆಪಿ, ದಿವ್ಯಾ ಉರುಡುಗ ಟಾಪ್ 3 ಸ್ಥಾನದಲ್ಲಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಇನ್ನೊಬ್ಬರು ಎಲಿಮಿನೇಟ್ ಆಗಲಿದ್ದಾರೆ.

ಇದನ್ನೂ ಓದಿ: Bigg Boss Kannada 8 Finale: ಬಿಗ್​ ಬಾಸ್​ ಸೀಸನ್​ 8 ವಿನ್ನರ್​​ ಇವರೇನಾ? ಇಲ್ಲಿದೆ ಲೆಕ್ಕಾಚಾರ

Bigg Boss Winner: ‘ನಾನು ಬಿಗ್​ ಬಾಸ್​ ವಿನ್ನರ್​’; ಎಲಿಮಿನೇಟ್​ ಆದ್ಮೇಲೂ ಸುದೀಪ್​ ಎದುರು ಪ್ರಶಾಂತ್​ ಸಂಬರಗಿ ಹೀಗೆ ಹೇಳಿದ್ದೇಕೆ?

(Kiccha Sudeep Revealed the Reason behind Saturday Bigg Boss Kannada Season 8 Finale Episode Mistake)

Published On - 7:26 pm, Sun, 8 August 21