AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Winner: ‘ನಾನು ಬಿಗ್​ ಬಾಸ್​ ವಿನ್ನರ್​’; ಎಲಿಮಿನೇಟ್​ ಆದ್ಮೇಲೂ ಸುದೀಪ್​ ಎದುರು ಪ್ರಶಾಂತ್​ ಸಂಬರಗಿ ಹೀಗೆ ಹೇಳಿದ್ದೇಕೆ?

Bigg Boss Winner: ‘ಬಿಗ್​ ಬಾಸ್​ ಟ್ರೋಫಿ ಗೆಲ್ಲುವಲ್ಲಿ ಇಷ್ಟು ಹತ್ತಿರ ಬಂದು, ಜಸ್ಟ್​ ಮಿಸ್​ ಆಗಿರುವ ಈ ಸಂದರ್ಭದಲ್ಲಿ ನಿಮ್ಮ ಭಾವನೆಗಳು ಹೇಗಿವೆ’ ಎಂದು ಸುದೀಪ್​ ಕೇಳಿದ ಪ್ರಶ್ನೆಗೆ ಪ್ರಶಾಂತ್​ ಈ ರೀತಿ ಉತ್ತರಿಸಿದರು. ಅದಕ್ಕೆ ಕಾರಣವನ್ನೂ ಅವರು ನೀಡಿದರು.

Bigg Boss Winner: ‘ನಾನು ಬಿಗ್​ ಬಾಸ್​ ವಿನ್ನರ್​’; ಎಲಿಮಿನೇಟ್​ ಆದ್ಮೇಲೂ ಸುದೀಪ್​ ಎದುರು ಪ್ರಶಾಂತ್​ ಸಂಬರಗಿ ಹೀಗೆ ಹೇಳಿದ್ದೇಕೆ?
ಪ್ರಶಾಂತ್​ ಸಂಬರಗಿ, ಕಿಚ್ಚ ಸುದೀಪ್​
TV9 Web
| Updated By: ಮದನ್​ ಕುಮಾರ್​|

Updated on:Aug 08, 2021 | 4:11 PM

Share

120 ದಿನಗಳ ಕಾಲ ನಡೆದ ಬಿಗ್​ ಬಾಸ್​ ಕನ್ನಡ (Bigg Boss Kannada) ಸೀಸನ್​ 8ರ ಜರ್ನಿಗೆ ಇಂದು (ಆ.8) ಕೊನೇ ದಿನ. ಶನಿವಾರವೇ (ಆ.7) ಅದ್ದೂರಿ ಫಿನಾಲೆ (, Bigg Boss Finale) ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಟಾಪ್​ 5 ಸ್ಪರ್ಧಿಗಳಲ್ಲಿ ಪ್ರಶಾಂತ್​ ಸಂಬರಗಿ (Prashanth Sambargi), ದಿವ್ಯಾ ಉರುಡುಗ, ಅರವಿಂದ್​ ಕೆ.ಪಿ., ಮಂಜು ಪಾವಗಡ ಹಾಗೂ ವೈಷ್ಣವಿ ಗೌಡ ಇದ್ದರು. ಈ ಐವರಲ್ಲಿ ಮೊದಲು ಎಲಿಮಿನೇಟ್​ ಆಗಿದ್ದೇ ಪ್ರಶಾಂತ್​ ಸಂಬರಗಿ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತು. ಆದರೂ ಜನರ ಆಯ್ಕೆಯನ್ನು ಒಪ್ಪಿಕೊಳ್ಳಲೇಬೇಕು. ಆದರೆ ಎಲಿಮಿನೇಟ್​ ಆಗಿ ಹೊರಬಂದು ಸುದೀಪ್​ (Kichcha Sudeep) ಎದುರಲ್ಲಿ ನಿಂತುಕೊಂಡ ಪ್ರಶಾಂತ್​ ಸಂಬರಗಿ, ‘ನಾನು ಬಿಗ್​ ಬಾಸ್​ ವಿನ್ನರ್​’ ಎಂದರು. ಅವರ ಈ ಮಾತಿನ ಅರ್ಥವೇನು? 

‘ಬಿಗ್​ ಬಾಸ್​ ಟ್ರೋಫಿ ಗೆಲ್ಲುವಲ್ಲಿ ಇಷ್ಟು ಹತ್ತಿರ ಬಂದು, ಜಸ್ಟ್​ ಮಿಸ್​ ಆಗಿರುವ ಈ ಸಂದರ್ಭದಲ್ಲಿ ನಿಮ್ಮ ಭಾವನೆಗಳು ಹೇಗಿವೆ’ ಎಂದು ಸುದೀಪ್​ ಕೇಳಿದ ಪ್ರಶ್ನೆಗೆ ಪ್ರಶಾಂತ್​ ಈ ರೀತಿ ಉತ್ತರಿಸಿದರು. ‘ಟ್ರೋಫಿ ಒಂದು ನನ್ನ ಕೈಯಲ್ಲಿ ಇಲ್ಲ ಸರ್. 53 ಲಕ್ಷ ರೂ. ಬಹುಮಾನ ಮೊತ್ತ ಕೂಡ ನನ್ನ ಕೈಯಲ್ಲಿ ಇಲ್ಲ. ಇವೆರಡನ್ನು ಹೊರತು ಪಡಿಸಿ ನಾನು ವಿನ್ನರ್​ ಆಗಿದ್ದೇನೆ’ ಎಂದು ಪ್ರಶಾಂತ್​ ಹೇಳಿದರು. ಅದಕ್ಕೆ ಕಾರಣವನ್ನೂ ಅವರು ನೀಡಿದರು.

‘ಟಾಪ್​ 5 ಸ್ಥಾನಕ್ಕೆ ಬಂದಿರುವ ನಾವೆಲ್ಲರೂ ವಿನ್ನರ್​. ಕರ್ನಾಟಕದ ಜನತೆ ಎದುರು ನಾನು ಗೆದ್ದಿದ್ದೇನೆ. ನಿಮ್ಮೆಲ್ಲರ ಹೃದಯದಲ್ಲಿ ಜಾಗ ಪಡೆದುಕೊಂಡಿದ್ದೇನೆ. ಕಲರ್ಸ್​ ಕನ್ನಡ ವಾಹಿನಿ ಮುಖಾಂತರ ಕರ್ನಾಟಕದ ಜನತೆಯ ಆಶೀರ್ವಾದ ಪಡೆದುಕೊಂಡಿದ್ದೇನೆ. ಈ ಮೊದಲೇ ನಾನು ಸಾಮಾಜಿಕ ಪಿಡುಗುಗಳ ಬಗ್ಗೆ ಮಾತನಾಡಿದ್ದನ್ನು ಸುದ್ದಿ ವಾಹಿನಿಗಳ ಮೂಲಕ ಜನರು ನೋಡಿದ್ದರು. ಅದನ್ನು ನೋಡಿ ನಾನೊಬ್ಬ ಭಯಪಡಿಸುವ ವ್ಯಕ್ತಿ ಅಂತ ಜನರು ಎಂದುಕೊಂಡಿರಬಹುದು. ಆದರೆ ನಾನು ಮಾಡುತ್ತಿದ್ದುದು ಸಮಾಜದ ಒಳಿತಿಗಾಗಿ. ನನ್ನ ನೇರ ನುಡಿ ಮತ್ತು ನಿಷ್ಠುರ ಗುಣ ಜನರಿಗೆ ಇಷ್ಟ ಆಗಿದೆ ಎನಿಸುತ್ತದೆ. ಆ ಕಾರಣಕ್ಕಾಗಿಯೇ ನಾನು ಟಾಪ್​ 5ರ ಸ್ಥಾನಕ್ಕೆ ಬಂದೆ’ ಎಂದು ಅವರು ಹೇಳಿದರು.

6.69 ಲಕ್ಷ ಮತಗಳು ಪ್ರಶಾಂತ್​ ಸಂಬರಗಿಗೆ ಬಂದಿದ್ದವು. ಇದು ದೊಡ್ಡ ಸಂಖ್ಯೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಟಾಪ್​ 5ರಲ್ಲಿ ಇದ್ದ ಇನ್ನುಳಿದ ಸ್ಪರ್ಧಿಗಳು ಪ್ರಶಾಂತ್​ಗಿಂತಲೂ ಹೆಚ್ಚು ವೋಟ್​ ಪಡೆದುಕೊಂಡಿದ್ದಾರೆ. 10,21,831 ವೋಟ್​ಗಳನ್ನು ಪಡೆದ ವೈಷ್ಣವಿ ಗೌಡ ಅವರು ಟಾಪ್​ ನಾಲ್ಕನೇ ಸ್ಪರ್ಧಿಯಾಗಿ ಎಲಿಮಿನೇಟ್​ ಆದರು.

ಇದನ್ನೂ ಓದಿ:

‘ಪ್ರಶಾಂತ್​ ಸಂಬರಗಿ ನೋಡಿದ್ರೆ ಮೇಟಿ ನೆನಪಾಗ್ತಾರೆ’; ಬಿಗ್​ ಬಾಸ್​ನಿಂದ ಹೊರಬಂದ ಚಂದ್ರಚೂಡ್​ ಹೋಲಿಕೆ

ನಿಧಿ ಸುಬ್ಬಯ್ಯಗೆ ಬಿಗ್​ ಬಾಸ್​ ವೇದಿಕೆ ಮೇಲೆ ಕ್ಷಮೆ ಕೇಳಿದ ಅರವಿಂದ್​

Published On - 3:17 pm, Sun, 8 August 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ