Bigg Boss Winner: ‘ನಾನು ಬಿಗ್​ ಬಾಸ್​ ವಿನ್ನರ್​’; ಎಲಿಮಿನೇಟ್​ ಆದ್ಮೇಲೂ ಸುದೀಪ್​ ಎದುರು ಪ್ರಶಾಂತ್​ ಸಂಬರಗಿ ಹೀಗೆ ಹೇಳಿದ್ದೇಕೆ?

Bigg Boss Winner: ‘ಬಿಗ್​ ಬಾಸ್​ ಟ್ರೋಫಿ ಗೆಲ್ಲುವಲ್ಲಿ ಇಷ್ಟು ಹತ್ತಿರ ಬಂದು, ಜಸ್ಟ್​ ಮಿಸ್​ ಆಗಿರುವ ಈ ಸಂದರ್ಭದಲ್ಲಿ ನಿಮ್ಮ ಭಾವನೆಗಳು ಹೇಗಿವೆ’ ಎಂದು ಸುದೀಪ್​ ಕೇಳಿದ ಪ್ರಶ್ನೆಗೆ ಪ್ರಶಾಂತ್​ ಈ ರೀತಿ ಉತ್ತರಿಸಿದರು. ಅದಕ್ಕೆ ಕಾರಣವನ್ನೂ ಅವರು ನೀಡಿದರು.

Bigg Boss Winner: ‘ನಾನು ಬಿಗ್​ ಬಾಸ್​ ವಿನ್ನರ್​’; ಎಲಿಮಿನೇಟ್​ ಆದ್ಮೇಲೂ ಸುದೀಪ್​ ಎದುರು ಪ್ರಶಾಂತ್​ ಸಂಬರಗಿ ಹೀಗೆ ಹೇಳಿದ್ದೇಕೆ?
ಪ್ರಶಾಂತ್​ ಸಂಬರಗಿ, ಕಿಚ್ಚ ಸುದೀಪ್​
Follow us
| Updated By: ಮದನ್​ ಕುಮಾರ್​

Updated on:Aug 08, 2021 | 4:11 PM

120 ದಿನಗಳ ಕಾಲ ನಡೆದ ಬಿಗ್​ ಬಾಸ್​ ಕನ್ನಡ (Bigg Boss Kannada) ಸೀಸನ್​ 8ರ ಜರ್ನಿಗೆ ಇಂದು (ಆ.8) ಕೊನೇ ದಿನ. ಶನಿವಾರವೇ (ಆ.7) ಅದ್ದೂರಿ ಫಿನಾಲೆ (, Bigg Boss Finale) ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಟಾಪ್​ 5 ಸ್ಪರ್ಧಿಗಳಲ್ಲಿ ಪ್ರಶಾಂತ್​ ಸಂಬರಗಿ (Prashanth Sambargi), ದಿವ್ಯಾ ಉರುಡುಗ, ಅರವಿಂದ್​ ಕೆ.ಪಿ., ಮಂಜು ಪಾವಗಡ ಹಾಗೂ ವೈಷ್ಣವಿ ಗೌಡ ಇದ್ದರು. ಈ ಐವರಲ್ಲಿ ಮೊದಲು ಎಲಿಮಿನೇಟ್​ ಆಗಿದ್ದೇ ಪ್ರಶಾಂತ್​ ಸಂಬರಗಿ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತು. ಆದರೂ ಜನರ ಆಯ್ಕೆಯನ್ನು ಒಪ್ಪಿಕೊಳ್ಳಲೇಬೇಕು. ಆದರೆ ಎಲಿಮಿನೇಟ್​ ಆಗಿ ಹೊರಬಂದು ಸುದೀಪ್​ (Kichcha Sudeep) ಎದುರಲ್ಲಿ ನಿಂತುಕೊಂಡ ಪ್ರಶಾಂತ್​ ಸಂಬರಗಿ, ‘ನಾನು ಬಿಗ್​ ಬಾಸ್​ ವಿನ್ನರ್​’ ಎಂದರು. ಅವರ ಈ ಮಾತಿನ ಅರ್ಥವೇನು? 

‘ಬಿಗ್​ ಬಾಸ್​ ಟ್ರೋಫಿ ಗೆಲ್ಲುವಲ್ಲಿ ಇಷ್ಟು ಹತ್ತಿರ ಬಂದು, ಜಸ್ಟ್​ ಮಿಸ್​ ಆಗಿರುವ ಈ ಸಂದರ್ಭದಲ್ಲಿ ನಿಮ್ಮ ಭಾವನೆಗಳು ಹೇಗಿವೆ’ ಎಂದು ಸುದೀಪ್​ ಕೇಳಿದ ಪ್ರಶ್ನೆಗೆ ಪ್ರಶಾಂತ್​ ಈ ರೀತಿ ಉತ್ತರಿಸಿದರು. ‘ಟ್ರೋಫಿ ಒಂದು ನನ್ನ ಕೈಯಲ್ಲಿ ಇಲ್ಲ ಸರ್. 53 ಲಕ್ಷ ರೂ. ಬಹುಮಾನ ಮೊತ್ತ ಕೂಡ ನನ್ನ ಕೈಯಲ್ಲಿ ಇಲ್ಲ. ಇವೆರಡನ್ನು ಹೊರತು ಪಡಿಸಿ ನಾನು ವಿನ್ನರ್​ ಆಗಿದ್ದೇನೆ’ ಎಂದು ಪ್ರಶಾಂತ್​ ಹೇಳಿದರು. ಅದಕ್ಕೆ ಕಾರಣವನ್ನೂ ಅವರು ನೀಡಿದರು.

‘ಟಾಪ್​ 5 ಸ್ಥಾನಕ್ಕೆ ಬಂದಿರುವ ನಾವೆಲ್ಲರೂ ವಿನ್ನರ್​. ಕರ್ನಾಟಕದ ಜನತೆ ಎದುರು ನಾನು ಗೆದ್ದಿದ್ದೇನೆ. ನಿಮ್ಮೆಲ್ಲರ ಹೃದಯದಲ್ಲಿ ಜಾಗ ಪಡೆದುಕೊಂಡಿದ್ದೇನೆ. ಕಲರ್ಸ್​ ಕನ್ನಡ ವಾಹಿನಿ ಮುಖಾಂತರ ಕರ್ನಾಟಕದ ಜನತೆಯ ಆಶೀರ್ವಾದ ಪಡೆದುಕೊಂಡಿದ್ದೇನೆ. ಈ ಮೊದಲೇ ನಾನು ಸಾಮಾಜಿಕ ಪಿಡುಗುಗಳ ಬಗ್ಗೆ ಮಾತನಾಡಿದ್ದನ್ನು ಸುದ್ದಿ ವಾಹಿನಿಗಳ ಮೂಲಕ ಜನರು ನೋಡಿದ್ದರು. ಅದನ್ನು ನೋಡಿ ನಾನೊಬ್ಬ ಭಯಪಡಿಸುವ ವ್ಯಕ್ತಿ ಅಂತ ಜನರು ಎಂದುಕೊಂಡಿರಬಹುದು. ಆದರೆ ನಾನು ಮಾಡುತ್ತಿದ್ದುದು ಸಮಾಜದ ಒಳಿತಿಗಾಗಿ. ನನ್ನ ನೇರ ನುಡಿ ಮತ್ತು ನಿಷ್ಠುರ ಗುಣ ಜನರಿಗೆ ಇಷ್ಟ ಆಗಿದೆ ಎನಿಸುತ್ತದೆ. ಆ ಕಾರಣಕ್ಕಾಗಿಯೇ ನಾನು ಟಾಪ್​ 5ರ ಸ್ಥಾನಕ್ಕೆ ಬಂದೆ’ ಎಂದು ಅವರು ಹೇಳಿದರು.

6.69 ಲಕ್ಷ ಮತಗಳು ಪ್ರಶಾಂತ್​ ಸಂಬರಗಿಗೆ ಬಂದಿದ್ದವು. ಇದು ದೊಡ್ಡ ಸಂಖ್ಯೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಟಾಪ್​ 5ರಲ್ಲಿ ಇದ್ದ ಇನ್ನುಳಿದ ಸ್ಪರ್ಧಿಗಳು ಪ್ರಶಾಂತ್​ಗಿಂತಲೂ ಹೆಚ್ಚು ವೋಟ್​ ಪಡೆದುಕೊಂಡಿದ್ದಾರೆ. 10,21,831 ವೋಟ್​ಗಳನ್ನು ಪಡೆದ ವೈಷ್ಣವಿ ಗೌಡ ಅವರು ಟಾಪ್​ ನಾಲ್ಕನೇ ಸ್ಪರ್ಧಿಯಾಗಿ ಎಲಿಮಿನೇಟ್​ ಆದರು.

ಇದನ್ನೂ ಓದಿ:

‘ಪ್ರಶಾಂತ್​ ಸಂಬರಗಿ ನೋಡಿದ್ರೆ ಮೇಟಿ ನೆನಪಾಗ್ತಾರೆ’; ಬಿಗ್​ ಬಾಸ್​ನಿಂದ ಹೊರಬಂದ ಚಂದ್ರಚೂಡ್​ ಹೋಲಿಕೆ

ನಿಧಿ ಸುಬ್ಬಯ್ಯಗೆ ಬಿಗ್​ ಬಾಸ್​ ವೇದಿಕೆ ಮೇಲೆ ಕ್ಷಮೆ ಕೇಳಿದ ಅರವಿಂದ್​

Published On - 3:17 pm, Sun, 8 August 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್
ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್