AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಬಾಬು ನಾಯ್ಡು ಏನೂ ಮಾಡಿಲ್ಲ, ಮಾಡಿದ್ದೆಲ್ಲ ಜೂ ಎನ್​ಟಿಆರ್: ಸಚಿವ ಕೊಡಲಿ ನಾನಿ

Jr NTR: ಸೀನಿಯರ್ ಎನ್​ಟಿಆರ್​ಗಾಗಿ ಚಂದ್ರಬಾಬು ನಾಯ್ಡು ಏನೂ ಮಾಡಿಲ್ಲ. ಜೂ ಎನ್​ಟಿಆರ್ ಸಾಕಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ ಎಂದು ಮಾಜಿ ಸಚಿವ ಕೊಡಲಿ ನಾನಿ ಹೇಳಿದ್ದಾರೆ.

ಚಂದ್ರಬಾಬು ನಾಯ್ಡು ಏನೂ ಮಾಡಿಲ್ಲ, ಮಾಡಿದ್ದೆಲ್ಲ ಜೂ ಎನ್​ಟಿಆರ್: ಸಚಿವ ಕೊಡಲಿ ನಾನಿ
ಜೂ ಎನ್​ಟಿಆರ್
ಮಂಜುನಾಥ ಸಿ.
|

Updated on:Apr 15, 2023 | 6:56 PM

Share

ಮಾಜಿ ಸಚಿವ, ಹಾಲಿ ಶಾಸಕ ಕೊಡಲಿ ನಾನಿ (Kodali Nani), ನಟ ಜೂ ಎನ್​ಟಿಆರ್ (Jr NTR) ಆಪ್ತರಲ್ಲಿ ಒಬ್ಬರು. ಈ ಹಿಂದೆ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ಟಿಡಿಪಿ ಪಕ್ಷದಲ್ಲಿದ್ದ ಕೊಡಲಿ ನಾನಿ ಆ ಬಳಿಕ ಭಿನ್ನಾಭಿಪ್ರಾಯಗಳು ತಲೆದೂರಿ ಜಗನ್ ಮೋಹನ್ ರೆಡ್ಡಿಯ ವೈಎಸ್​ಆರ್ ಕಾಂಗ್ರೆಸ್ ಪಕ್ಷ ಸೇರಿ ಸಚಿವರಾದರು. ಇದೀಗ ಹಾಲಿ ಶಾಸಕರೂ ಆಗಿದ್ದಾರೆ. ಪಕ್ಷ ತ್ಯಜಿಸಿದರೂ ಜೂ ಎನ್​ಟಿಆರ್ ಜೊತೆ ಉತ್ತಮ ಬಾಂಧವ್ಯವನ್ನೇ ಮುಂದುವರೆಸಿರುವ ಕೊಡಲಿ ನಾನಿ, ಚಂದ್ರಬಾಬು ನಾಯ್ಡು ವಿರುದ್ಧ ಅವಕಾಶ ಸಿಕ್ಕಾಗೆಲ್ಲ ವಾಗ್ದಾಳಿ ನಡೆಸುತ್ತಿರುತ್ತಾರೆ. ಇದೀಗ ಜೂ ಎನ್​ಟಿಆರ್ 2003 ರಲ್ಲಿ ಮಾಡಿದ್ದ ಕಾರ್ಯವನ್ನು ಕೊಡಲಿ ನಾನಿ ನೆನಪಿಸಿಕೊಂಡಿದ್ದಾರೆ.

ಆಂಧ್ರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಹತ್ತಿರಬಂದಿದ್ದು, ಆಡಳಿತ ಪಕ್ಷವನ್ನು ಮಣಿಸಿ ಮತ್ತೆ ಅಧಿಕಾರ ಹಿಡಿಯಲು ಚಂದ್ರಬಾಬು ನಾಯ್ಡು ಯತ್ನಿಸುತ್ತಿದ್ದು, ರಾಜ್ಯದಾದ್ಯಂತ ಸಂಚಾರ ಮಾಡುತ್ತಿದ್ದಾರೆ. ಇದರ ಭಾಗವಾಗಿಯೇ ಟಿಡಿಪಿ ಪಕ್ಷದ ಸಂಸ್ಥಾಪಕ ಹಿರಿಯ ನಟ, ದಿವಂಗತ ಎನ್​ಟಿಆರ್ ಅವರ ಹುಟ್ಟೂರಾದ ನಿಮ್ಮಕೂರಿಗೆ ತೆರಳಿ ಅಲ್ಲಿ ಬಸ್ ಒಂದರಲ್ಲಿ ರಾತ್ರಿ ಕಳೆದಿದ್ದಾರೆ.

ಚಂದ್ರಬಾಬು ನಾಯ್ಡು ಅವರ ಈ ನಡೆಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕೊಡಲಿ ನಾನಿ, ನಿಮ್ಮಕೂರು, ಎನ್​ಟಿಆರ್ ಅವರ ಹುಟ್ಟೂರು. ಚಂದ್ರಬಾಬು ನಾಯ್ಡು ಅವರಿಗೆ ಮಾವನೂರು. ಆದರೆ ಈ ವರೆಗೆ ಒಮ್ಮೆಯೂ ಸಹ ಅವರು ಆ ಊರಿಗೆ ಬಂದಿರಲಿಲ್ಲ. ಈಗ ನಾಟಕ ಮಾಡಲು ಬಂದಿದ್ದಾರೆ. ಸೀನಿಯರ್ ಎನ್​ಟಿಆರ್​ಗಾಗಿ ಚಂದ್ರಬಾಬು ನಾಯ್ಡು ಏನೊಂದೂ ಮಾಡಿಲ್ಲ. ನಿಮ್ಮಕೂರಿನಲ್ಲಿ ಚಂದ್ರಬಾಬು ಹಾರಹಾಕಿದ ಎನ್​ಟಿಆರ್ ಹಾಗೂ ಅವರ ಪತ್ನಿಯ ಮೂರ್ತಿಗಳನ್ನು ಜೂ ಎನ್​ಟಿಆರ್ ಹಾಗೂ ನಾನು ಮಾಡಿಸಿದ್ದೆ ವಿನಃ ಚಂದ್ರಬಾಬು ನಾಯ್ಡು ಮಾಡಿಸಿದ್ದಲ್ಲ” ಎಂದಿದ್ದಾರೆ.

2003 ರಲ್ಲಿ ಎನ್​ಟಿಆರ್ ಅವರ ಹುಟ್ಟೂರು ನಿಮ್ಮಕೂರಿನಲ್ಲಿ ಎನ್​ಟಿಆರ್ ಅವರ ನೆನಪು ಶಾಶ್ವತವಾಗಿ ಉಳಿಸಬೇಕೆಂದು ಜೂ ಎನ್​ಟಿಆರ್ 40 ಲಕ್ಷ ಖರ್ಚು ಮಾಡಿ ನಾನು 20 ಲಕ್ಷ ಖರ್ಚು ಮಾಡಿ ಎನ್​ಟಿಆರ್ ಹಾಗೂ ಅರ ಪತ್ನಿ ಬಸವಕಲ್ಯಾಣಂ ಅವರ ವಿಗ್ರಹಗಳನ್ನು ನಿರ್ಮಿಸಿದೆವು. ಅದೇ ಸಮಯದಲ್ಲಿ ಆಗಿನ ಕಾಲಕ್ಕೆ ಒಂದು ಕೋಟಿ ಹಣ ಖರ್ಚು ಮಾಡಿ ಆಂಧ್ರವಾಲ ಸಿನಿಮಾದ ಆಡಿಯೋ ಲಾಂಚ್ ಫಂಕ್ಷನ್ ಅನ್ನು ನಿಮ್ಮಕೂರಿನಲ್ಲಿಯೇ ಮಾಡಿ 10 ಲಕ್ಷ ಜನರನ್ನು ನಿಮ್ಮಕೂರಿನಲ್ಲಿ ಸೇರಿಸಿ ಈ ಊರಿನ ಹೆಸರು ದೇಶದಲ್ಲಿ ಕೇಳುವಂತೆ ಮಾಡಿದೆವು. ಎನ್​ಟಿಆರ್​ಗಾಗಿ ಜೂ ಎನ್​ಟಿಆರ್ ಮಾಡಿದಷ್ಟು ಕಾರ್ಯವನ್ನು ಚಂದ್ರಬಾಬು ನಾಯ್ಡು ಮಾಡಿಲ್ಲ ಎಂದಿದ್ದಾರೆ ಕೊಡಲಿ ನಾನಿ.

ಇದನ್ನೂ ಓದಿ: Vetrimaran: ಜೂ ಎನ್​ಟಿಆರ್ ಜೊತೆ ಸಿನಿಮಾ ಖಾತ್ರಿಗೊಳಿಸಿದ ವೆಟ್ರಿಮಾರನ್

2003 ರಲ್ಲಿ ಬಿಡುಗಡೆ ಆಗಿದ್ದ ಜೂ ಎನ್​ಟಿಆರ್ ನಟಿಸಿ ಪುರಿಜಗನ್ನಾಥ್ ನಿರ್ದೇಶನ ಮಾಡಿದ್ದ ಆಂಧ್ರವಾಲಾ ಸಿನಿಮಾದ ಆಡಿಯೋ ಲಾಂಚ್ ಆಗಿನ ಕಾಲಕ್ಕೆ ಬಹಳ ದೊಡ್ಡ ಸುದ್ದಿಯಾಗಿತ್ತು. ಸುಮಾರು 10 ಲಕ್ಷ ಜನ ನಿಮ್ಮಕೂರಿನಲ್ಲಿ ನಡೆದ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅದರ ಹೊರತಾಗಿ ಇನ್ನಾವ ಸಿನಿಮಾದ ಆಡಿಯೋ ಲಾಂಚ್​ಗೂ ಅಷ್ಟು ದೊಡ್ಡ ಸಂಖ್ಯೆಯ ಜನ ಸೇರಿಲ್ಲ. ಬಸ್ಸುಗಳು, ವಿಶೇಷ ರೈಲುಗಳನ್ನು ಆ ಕಾರ್ಯಕ್ರಮಕ್ಕಾಗಿ ನಿಯೋಜಿಸಲಾಗಿತ್ತು. ತೆಲುಗಿನಲ್ಲಿ ಆಂಧ್ರವಾಲಾ ಕನ್ನಡದಲ್ಲಿ ಪುನೀತ್ ರಾಜ್​ಕುಮಾರ್ ನಟಿಸಿದ ವೀರ ಕನ್ನಡಿಗ ಹೆಸರಿನಲ್ಲಿ ಒಟ್ಟಿಗೆ ನಿರ್ಮಾಣಗೊಂಡು ಒಟ್ಟಿಗೆ ಬಿಡುಗಡೆ ಆದವು. ಆಂಧ್ರವಾಲಾ ಫ್ಲಾಪ್ ಆದರೆ ವೀರ ಕನ್ನಡಿಗ ಹಿಟ್ ಎನಿಸಿಕೊಂಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:53 pm, Sat, 15 April 23

Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ