AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಬಾಬು ನಾಯ್ಡು ಏನೂ ಮಾಡಿಲ್ಲ, ಮಾಡಿದ್ದೆಲ್ಲ ಜೂ ಎನ್​ಟಿಆರ್: ಸಚಿವ ಕೊಡಲಿ ನಾನಿ

Jr NTR: ಸೀನಿಯರ್ ಎನ್​ಟಿಆರ್​ಗಾಗಿ ಚಂದ್ರಬಾಬು ನಾಯ್ಡು ಏನೂ ಮಾಡಿಲ್ಲ. ಜೂ ಎನ್​ಟಿಆರ್ ಸಾಕಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ ಎಂದು ಮಾಜಿ ಸಚಿವ ಕೊಡಲಿ ನಾನಿ ಹೇಳಿದ್ದಾರೆ.

ಚಂದ್ರಬಾಬು ನಾಯ್ಡು ಏನೂ ಮಾಡಿಲ್ಲ, ಮಾಡಿದ್ದೆಲ್ಲ ಜೂ ಎನ್​ಟಿಆರ್: ಸಚಿವ ಕೊಡಲಿ ನಾನಿ
ಜೂ ಎನ್​ಟಿಆರ್
Follow us
ಮಂಜುನಾಥ ಸಿ.
|

Updated on:Apr 15, 2023 | 6:56 PM

ಮಾಜಿ ಸಚಿವ, ಹಾಲಿ ಶಾಸಕ ಕೊಡಲಿ ನಾನಿ (Kodali Nani), ನಟ ಜೂ ಎನ್​ಟಿಆರ್ (Jr NTR) ಆಪ್ತರಲ್ಲಿ ಒಬ್ಬರು. ಈ ಹಿಂದೆ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ಟಿಡಿಪಿ ಪಕ್ಷದಲ್ಲಿದ್ದ ಕೊಡಲಿ ನಾನಿ ಆ ಬಳಿಕ ಭಿನ್ನಾಭಿಪ್ರಾಯಗಳು ತಲೆದೂರಿ ಜಗನ್ ಮೋಹನ್ ರೆಡ್ಡಿಯ ವೈಎಸ್​ಆರ್ ಕಾಂಗ್ರೆಸ್ ಪಕ್ಷ ಸೇರಿ ಸಚಿವರಾದರು. ಇದೀಗ ಹಾಲಿ ಶಾಸಕರೂ ಆಗಿದ್ದಾರೆ. ಪಕ್ಷ ತ್ಯಜಿಸಿದರೂ ಜೂ ಎನ್​ಟಿಆರ್ ಜೊತೆ ಉತ್ತಮ ಬಾಂಧವ್ಯವನ್ನೇ ಮುಂದುವರೆಸಿರುವ ಕೊಡಲಿ ನಾನಿ, ಚಂದ್ರಬಾಬು ನಾಯ್ಡು ವಿರುದ್ಧ ಅವಕಾಶ ಸಿಕ್ಕಾಗೆಲ್ಲ ವಾಗ್ದಾಳಿ ನಡೆಸುತ್ತಿರುತ್ತಾರೆ. ಇದೀಗ ಜೂ ಎನ್​ಟಿಆರ್ 2003 ರಲ್ಲಿ ಮಾಡಿದ್ದ ಕಾರ್ಯವನ್ನು ಕೊಡಲಿ ನಾನಿ ನೆನಪಿಸಿಕೊಂಡಿದ್ದಾರೆ.

ಆಂಧ್ರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಹತ್ತಿರಬಂದಿದ್ದು, ಆಡಳಿತ ಪಕ್ಷವನ್ನು ಮಣಿಸಿ ಮತ್ತೆ ಅಧಿಕಾರ ಹಿಡಿಯಲು ಚಂದ್ರಬಾಬು ನಾಯ್ಡು ಯತ್ನಿಸುತ್ತಿದ್ದು, ರಾಜ್ಯದಾದ್ಯಂತ ಸಂಚಾರ ಮಾಡುತ್ತಿದ್ದಾರೆ. ಇದರ ಭಾಗವಾಗಿಯೇ ಟಿಡಿಪಿ ಪಕ್ಷದ ಸಂಸ್ಥಾಪಕ ಹಿರಿಯ ನಟ, ದಿವಂಗತ ಎನ್​ಟಿಆರ್ ಅವರ ಹುಟ್ಟೂರಾದ ನಿಮ್ಮಕೂರಿಗೆ ತೆರಳಿ ಅಲ್ಲಿ ಬಸ್ ಒಂದರಲ್ಲಿ ರಾತ್ರಿ ಕಳೆದಿದ್ದಾರೆ.

ಚಂದ್ರಬಾಬು ನಾಯ್ಡು ಅವರ ಈ ನಡೆಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕೊಡಲಿ ನಾನಿ, ನಿಮ್ಮಕೂರು, ಎನ್​ಟಿಆರ್ ಅವರ ಹುಟ್ಟೂರು. ಚಂದ್ರಬಾಬು ನಾಯ್ಡು ಅವರಿಗೆ ಮಾವನೂರು. ಆದರೆ ಈ ವರೆಗೆ ಒಮ್ಮೆಯೂ ಸಹ ಅವರು ಆ ಊರಿಗೆ ಬಂದಿರಲಿಲ್ಲ. ಈಗ ನಾಟಕ ಮಾಡಲು ಬಂದಿದ್ದಾರೆ. ಸೀನಿಯರ್ ಎನ್​ಟಿಆರ್​ಗಾಗಿ ಚಂದ್ರಬಾಬು ನಾಯ್ಡು ಏನೊಂದೂ ಮಾಡಿಲ್ಲ. ನಿಮ್ಮಕೂರಿನಲ್ಲಿ ಚಂದ್ರಬಾಬು ಹಾರಹಾಕಿದ ಎನ್​ಟಿಆರ್ ಹಾಗೂ ಅವರ ಪತ್ನಿಯ ಮೂರ್ತಿಗಳನ್ನು ಜೂ ಎನ್​ಟಿಆರ್ ಹಾಗೂ ನಾನು ಮಾಡಿಸಿದ್ದೆ ವಿನಃ ಚಂದ್ರಬಾಬು ನಾಯ್ಡು ಮಾಡಿಸಿದ್ದಲ್ಲ” ಎಂದಿದ್ದಾರೆ.

2003 ರಲ್ಲಿ ಎನ್​ಟಿಆರ್ ಅವರ ಹುಟ್ಟೂರು ನಿಮ್ಮಕೂರಿನಲ್ಲಿ ಎನ್​ಟಿಆರ್ ಅವರ ನೆನಪು ಶಾಶ್ವತವಾಗಿ ಉಳಿಸಬೇಕೆಂದು ಜೂ ಎನ್​ಟಿಆರ್ 40 ಲಕ್ಷ ಖರ್ಚು ಮಾಡಿ ನಾನು 20 ಲಕ್ಷ ಖರ್ಚು ಮಾಡಿ ಎನ್​ಟಿಆರ್ ಹಾಗೂ ಅರ ಪತ್ನಿ ಬಸವಕಲ್ಯಾಣಂ ಅವರ ವಿಗ್ರಹಗಳನ್ನು ನಿರ್ಮಿಸಿದೆವು. ಅದೇ ಸಮಯದಲ್ಲಿ ಆಗಿನ ಕಾಲಕ್ಕೆ ಒಂದು ಕೋಟಿ ಹಣ ಖರ್ಚು ಮಾಡಿ ಆಂಧ್ರವಾಲ ಸಿನಿಮಾದ ಆಡಿಯೋ ಲಾಂಚ್ ಫಂಕ್ಷನ್ ಅನ್ನು ನಿಮ್ಮಕೂರಿನಲ್ಲಿಯೇ ಮಾಡಿ 10 ಲಕ್ಷ ಜನರನ್ನು ನಿಮ್ಮಕೂರಿನಲ್ಲಿ ಸೇರಿಸಿ ಈ ಊರಿನ ಹೆಸರು ದೇಶದಲ್ಲಿ ಕೇಳುವಂತೆ ಮಾಡಿದೆವು. ಎನ್​ಟಿಆರ್​ಗಾಗಿ ಜೂ ಎನ್​ಟಿಆರ್ ಮಾಡಿದಷ್ಟು ಕಾರ್ಯವನ್ನು ಚಂದ್ರಬಾಬು ನಾಯ್ಡು ಮಾಡಿಲ್ಲ ಎಂದಿದ್ದಾರೆ ಕೊಡಲಿ ನಾನಿ.

ಇದನ್ನೂ ಓದಿ: Vetrimaran: ಜೂ ಎನ್​ಟಿಆರ್ ಜೊತೆ ಸಿನಿಮಾ ಖಾತ್ರಿಗೊಳಿಸಿದ ವೆಟ್ರಿಮಾರನ್

2003 ರಲ್ಲಿ ಬಿಡುಗಡೆ ಆಗಿದ್ದ ಜೂ ಎನ್​ಟಿಆರ್ ನಟಿಸಿ ಪುರಿಜಗನ್ನಾಥ್ ನಿರ್ದೇಶನ ಮಾಡಿದ್ದ ಆಂಧ್ರವಾಲಾ ಸಿನಿಮಾದ ಆಡಿಯೋ ಲಾಂಚ್ ಆಗಿನ ಕಾಲಕ್ಕೆ ಬಹಳ ದೊಡ್ಡ ಸುದ್ದಿಯಾಗಿತ್ತು. ಸುಮಾರು 10 ಲಕ್ಷ ಜನ ನಿಮ್ಮಕೂರಿನಲ್ಲಿ ನಡೆದ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅದರ ಹೊರತಾಗಿ ಇನ್ನಾವ ಸಿನಿಮಾದ ಆಡಿಯೋ ಲಾಂಚ್​ಗೂ ಅಷ್ಟು ದೊಡ್ಡ ಸಂಖ್ಯೆಯ ಜನ ಸೇರಿಲ್ಲ. ಬಸ್ಸುಗಳು, ವಿಶೇಷ ರೈಲುಗಳನ್ನು ಆ ಕಾರ್ಯಕ್ರಮಕ್ಕಾಗಿ ನಿಯೋಜಿಸಲಾಗಿತ್ತು. ತೆಲುಗಿನಲ್ಲಿ ಆಂಧ್ರವಾಲಾ ಕನ್ನಡದಲ್ಲಿ ಪುನೀತ್ ರಾಜ್​ಕುಮಾರ್ ನಟಿಸಿದ ವೀರ ಕನ್ನಡಿಗ ಹೆಸರಿನಲ್ಲಿ ಒಟ್ಟಿಗೆ ನಿರ್ಮಾಣಗೊಂಡು ಒಟ್ಟಿಗೆ ಬಿಡುಗಡೆ ಆದವು. ಆಂಧ್ರವಾಲಾ ಫ್ಲಾಪ್ ಆದರೆ ವೀರ ಕನ್ನಡಿಗ ಹಿಟ್ ಎನಿಸಿಕೊಂಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:53 pm, Sat, 15 April 23

ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಸರ್ಕಾರದ ಭಾಗವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವೆ:ಸಚಿವೆ
ಸರ್ಕಾರದ ಭಾಗವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವೆ:ಸಚಿವೆ
ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾದ್ರು
ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾದ್ರು
ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ
ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ
ಪಂದ್ಯದ ಬಳಿಕ ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಶ್ರೇಯಸ್ ಅಯ್ಯರ್
ಪಂದ್ಯದ ಬಳಿಕ ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಶ್ರೇಯಸ್ ಅಯ್ಯರ್
ಆರ್​ಸಿಬಿಗೆ 18 ವರ್ಷಗಳಿಂದ ಕಪ್ ಮರೀಚಿಕೆಯಾಗಿದೆ, ಈ ಸಲ ನೀಗುವುದೇ ಬರ?
ಆರ್​ಸಿಬಿಗೆ 18 ವರ್ಷಗಳಿಂದ ಕಪ್ ಮರೀಚಿಕೆಯಾಗಿದೆ, ಈ ಸಲ ನೀಗುವುದೇ ಬರ?
ಅದ್ಭುತ ಡೈವಿಂಗ್ ಕ್ಯಾಚ್... ಟೀಕಾಕಾರರ ಬಾಯಿ ಮುಚ್ಚಿಸಿದ ಸರ್ಫರಾಝ್ ಖಾನ್
ಅದ್ಭುತ ಡೈವಿಂಗ್ ಕ್ಯಾಚ್... ಟೀಕಾಕಾರರ ಬಾಯಿ ಮುಚ್ಚಿಸಿದ ಸರ್ಫರಾಝ್ ಖಾನ್
ಹಾಲು ತರಕಾರಿ ಮಾರಲು ಬಿಡೋದಿಲ್ಲ ಅಂತ ಬಾಲಕೃಷ್ಣ ಯಾಕೆ ಹೇಳಿದ್ದಾರೋ? ಸಚಿವ
ಹಾಲು ತರಕಾರಿ ಮಾರಲು ಬಿಡೋದಿಲ್ಲ ಅಂತ ಬಾಲಕೃಷ್ಣ ಯಾಕೆ ಹೇಳಿದ್ದಾರೋ? ಸಚಿವ
ಬಾಯ್ ಡೆಲಿವರಿ ಮಾಡಲು ಹೋದಾಗ ಸ್ಕೂಟರ್​​ನಲ್ಲಿದ್ದ ಸಾಮಾನು ಲಪಟಾಯಿಸಿ ಪರಾರಿ
ಬಾಯ್ ಡೆಲಿವರಿ ಮಾಡಲು ಹೋದಾಗ ಸ್ಕೂಟರ್​​ನಲ್ಲಿದ್ದ ಸಾಮಾನು ಲಪಟಾಯಿಸಿ ಪರಾರಿ