AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀರೋಗಳಿಗೆ ಭಯ ಹುಟ್ಟಿಸುತ್ತಾಳೆ ಈ ಹುಡುಗಿ: ಶ್ರೀಲೀಲಾ ಬಗ್ಗೆ ಹೀಗೇಕೆಂದರು ಮಹೇಶ್ ಬಾಬು

Sreeleela: ನಟಿ ಶ್ರೀಲೀಲಾ ತೆಲುಗಿನಲ್ಲಿ ಟಾಪ್ ನಟಿಯಾಗಿದ್ದಾರೆ. ಹಲವು ದೊಡ್ಡ ನಟರೊಟ್ಟಿಗೆ ನಟಿಸುತ್ತಿದ್ದಾರೆ. ಇದೀಗ ನಟ ಮಹೇಶ್ ಬಾಬು, ಕನ್ನಡದ ನಟಿ ಶ್ರೀಲೀಲಾರನ್ನು ಕೊಂಡಾಡಿ ಮಾತನಾಡಿದ್ದಾರೆ.

ಹೀರೋಗಳಿಗೆ ಭಯ ಹುಟ್ಟಿಸುತ್ತಾಳೆ ಈ ಹುಡುಗಿ: ಶ್ರೀಲೀಲಾ ಬಗ್ಗೆ ಹೀಗೇಕೆಂದರು ಮಹೇಶ್ ಬಾಬು
ಮಂಜುನಾಥ ಸಿ.
|

Updated on: Jan 10, 2024 | 7:26 PM

Share

ಕನ್ನಡದ ನಟಿ ಶ್ರೀಲೀಲಾ (Sreeleela) ತೆಲುಗು ಚಿತ್ರರಂಗದಲ್ಲಿ ಬಹು ವೇಗವಾಗಿ ವೃತ್ತಿಯಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ತೆಲುಗು ಚಿತ್ರರಂಗದ ಹಾಲಿ ಟಾಪ್ ನಟಿಯಾಗಿ ಶ್ರೀಲೀಲಾ ಗುರುತು ಪಡೆದುಕೊಂಡಿದ್ದಾರೆ. ತೆಲುಗಿನ ದೊಡ್ಡ ದೊಡ್ಡ ಸ್ಟಾರ್ ನಟರು ಶ್ರೀಲೀಲಾ ತಮ್ಮ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕೆಂದು ಬಯಸುತ್ತಿದ್ದಾರೆ. ಸ್ಟಾರ್ ನಟರುಗಳು ಶ್ರೀಲೀಲಾರ ಪ್ರತಿಭೆ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಶ್ರೀಲೀಲಾ ನಟಿಸಿರುವ ‘ಗುಂಟೂರು ಖಾರಂ’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗಷ್ಟೆ ಗುಂಟೂರಿನಲ್ಲಿ ನಡೆಯಿತು ಈ ವೇಳೆ ನಟ ಮಹೇಶ್ ಬಾಬು, ಶ್ರೀಲೀಲಾರನ್ನು ಹೊಗಳಿ ಕೊಂಡಾಡಿದರು.

‘ಬಹಳ ವರ್ಷಗಳ ನಂತರ ನಮ್ಮ ತೆಲುಗು ಯುವತಿ ದೊಡ್ಡ ನಾಯಕಿಯಾಗುತ್ತಿರುವುದು ಬಹಳ ಖುಷಿ ನೀಡುತ್ತಿದೆ. ನಾನು ಈ ವರೆಗೆ ಕೆಲಸ ಮಾಡಿರುವ ನಟಿಯರಲ್ಲಿಯೇ ಅತ್ಯಂತ ಶ್ರಮಪಟ್ಟು, ಸಮರ್ಪಣಾ ಭಾವದೊಟ್ಟಿಗೆ ಕೆಲಸ ಮಾಡುವ ನಟಿ ಶ್ರೀಲೀಲಾ. ಅವರ ಶಾಟ್ ಇರಲಿ ಇಲ್ಲದೇ ಇರಲಿ ಕ್ಯಾರಾವ್ಯಾನ್​ಗೆ ಹೋಗದೆ ಅಲ್ಲಿಯೇ ಮಾನಿಟರ್ ಮುಂದೆ ಕುಳಿತುಕೊಂಡಿರುತ್ತಾರೆ. ನನಗೂ ಹಾಗೂ ನಮ್ಮ ತಂಡಕ್ಕೂ ಶ್ರೀಲೀಲಾ ಎಂದರೆ ಅಚ್ಚು ಮೆಚ್ಚು’ ಎಂದಿದ್ದಾರೆ ಮಹೇಶ್ ಬಾಬು.

‘‘ಈ ಹುಡುಗಿ ಜೊತೆ ಡ್ಯಾನ್ಸ್ ಮಾಡುವುದು ಅಬ್ಬ ಅಸಾಧ್ಯ. ಅದೆಂಥಹಾ ಡ್ಯಾನ್ಸ್ ಮಾಡುತ್ತೆ ಈ ಹುಡುಗಿ. ಹೀರೋಗಳಿಗೆ ಸುಸ್ತಾಗಿ ಕಾಲು ಬಿದ್ದು ಹೋಗುತ್ತೆ. ಈ ಹುಡುಗಿಯೊಟ್ಟಿಗೆ ಡ್ಯಾನ್ಸ್ ಮಾಡುವುದೆಂದರೆ ಭಯವಾಗುತ್ತೆ. ತಮ್ಮ ಕೆಲಸವನ್ನು ತಾನು ಎಂಜಾಯ್ ಮಾಡುತ್ತಾಳೆ ಈ ಹುಡುಗಿ. ಹೀಗೆಯೇ ವೃತ್ತಿಯನ್ನು ಎಂಜಾಯ್ ಮಾಡುತ್ತಾ ಮುಂದೆ ಸಾಗಿ, ಭವಿಷ್ಯದಲ್ಲಿ ಬಹಳ ಒಳ್ಳೆಯ ವೃತ್ತಿ ಜೀವನ ನಿಮ್ಮದಾಗುತ್ತದೆ’ ಎಂದು ಹಾರೈಸಿದ್ದಾರೆ ನಟ ಮಹೇಶ್ ಬಾಬು.

ಇದನ್ನೂ ಓದಿ:ಖಾಸಗಿ ವಿಮಾನದಲ್ಲಿ ಎಂಟ್ರಿ ಕೊಟ್ಟ ‘ಗುಂಟೂರು ಖಾರಂ’ ತಂಡ; ಹೈಲೈಟ್ ಆದ ಶ್ರೀಲೀಲಾ

ಅದೇ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ಬಗ್ಗೆ ನಟಿ ಶ್ರೀಲೀಲಾ ಸಹ ಬಹಳ ಕೊಂಡಾಡಿದ್ದಾರೆ. ‘ಮಹೇಶ್ ಬಾಬು ಚಿನ್ನದ ಬೊಂಬೆಗೆ ಜೀವ ಬಂದಂತೆ ಇದ್ದಾರೆ’ ಎಂದೆಲ್ಲ ಹೇಳಿದರು. ಶ್ರೀಲೀಲಾ ಮಹೇಶ್ ಬಾಬು ಅವರನ್ನು ಅತಿಯಾಗಿ ಕೊಂಡಾಡಿ ಮಾಡಿದ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹೇಶ್ ಬಾಬು ಹಾಗೂ ಶ್ರೀಲೀಲಾ ನಟಿಸಿರುವ ‘ಗುಂಟೂರು ಖಾರಂ’ ಸಿನಿಮಾ ಜನವರಿ 12ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ತ್ರಿವಿಕ್ರಮ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವು ಆಕ್ಷನ್ ಹಾಗೂ ಭಾವುಕ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಮಹೇಶ್ ಬಾಬು, ಶ್ರೀಲೀಲಾ ಜೊತೆಗೆ ರಮ್ಯಾ ಕೃಷ್ಣ, ಪ್ರಕಾಶ್ ರೈ, ಜಗಪತಿ ಬಾಬು, ಜಯರಾಂ, ರಾವ್ ರಮೇಶ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಎಸ್ ತಮನ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ