Major Teaser: ಜೀವ ಲೆಕ್ಕಿಸದೇ ಜನರ ರಕ್ಷಿಸಿದ: ಮುಂಬೈ ದಾಳಿಯಲ್ಲಿ ಸಂದೀಪ್ ಉನ್ನಿಕೃಷ್ಣನ್ ಮಾಡಿದ ತ್ಯಾಗ ನೆನಪಿಸುವ ‘ಮೇಜರ್’ ಟೀಸರ್

ಮುಂಬೈ ದಾಳಿ ವೇಳೆ ವೀರ ಮರಣ ಹೊಂದಿದ್ದ ಮೇಜರ್​​ ಸಂದೀಪ್​ ಉನ್ನಿಕೃಷ್ಣನ್ ಅವರ ಜೀವನಾಧಾರಿತ ಸಿನಿಮಾ ‘ಮೇಜರ್’ ಟೀಸರ್​ ರಿಲೀಸ್​ ಆಗಿದೆ. ಅವರು ಬಾಲ್ಯದಲ್ಲಿ ಕಂಡ ಕನಸನ್ನು ಹೇಗೆ ನನಸು ಮಾಡಿಕೊಂಡರು, ಮುಂಬೈ ದಾಳಿ ವೇಳೆ ಹೇಗೆ ಹೋರಾಡಿದರು ಎಂಬಿತ್ಯಾದಿ ವಿಚಾರಗಳನ್ನು ಟೀಸರ್​ನಲ್ಲಿ ಕಟ್ಟಿಕೊಡಲಾಗಿದೆ. ಸಂದೀಪ್​ ಉನ್ನಿಕೃಷ್ಣನ್​ ಜೀವನ ಆಧರಿಸಿ ಮೇಜರ್​ ಸಿನಿಮಾ ಮಾಡಲಾಗುತ್ತಿದೆ. ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಈಗ ಚಿತ್ರದ ಟೀಸರ್​ ಅನ್ನು ಹಿಂದಿಯಲ್ಲಿ ಸಲ್ಮಾನ್​ ಖಾನ್, ತೆಲುಗಿನಲ್ಲಿ ಮಹೇಶ್​​ […]

Major Teaser: ಜೀವ ಲೆಕ್ಕಿಸದೇ ಜನರ ರಕ್ಷಿಸಿದ: ಮುಂಬೈ ದಾಳಿಯಲ್ಲಿ ಸಂದೀಪ್ ಉನ್ನಿಕೃಷ್ಣನ್ ಮಾಡಿದ ತ್ಯಾಗ ನೆನಪಿಸುವ ‘ಮೇಜರ್’ ಟೀಸರ್
ಮೇಜರ್​ ಸಂದೀಪ್​ ಪಾತ್ರದಲ್ಲಿ ಅದಿವಿ ಶೇಷ್
Follow us
|

Updated on: Apr 12, 2021 | 7:13 PM

ಮುಂಬೈ ದಾಳಿ ವೇಳೆ ವೀರ ಮರಣ ಹೊಂದಿದ್ದ ಮೇಜರ್​​ ಸಂದೀಪ್​ ಉನ್ನಿಕೃಷ್ಣನ್ ಅವರ ಜೀವನಾಧಾರಿತ ಸಿನಿಮಾ ‘ಮೇಜರ್’ ಟೀಸರ್​ ರಿಲೀಸ್​ ಆಗಿದೆ. ಅವರು ಬಾಲ್ಯದಲ್ಲಿ ಕಂಡ ಕನಸನ್ನು ಹೇಗೆ ನನಸು ಮಾಡಿಕೊಂಡರು, ಮುಂಬೈ ದಾಳಿ ವೇಳೆ ಹೇಗೆ ಹೋರಾಡಿದರು ಎಂಬಿತ್ಯಾದಿ ವಿಚಾರಗಳನ್ನು ಟೀಸರ್​ನಲ್ಲಿ ಕಟ್ಟಿಕೊಡಲಾಗಿದೆ.

ಸಂದೀಪ್​ ಉನ್ನಿಕೃಷ್ಣನ್​ ಜೀವನ ಆಧರಿಸಿ ಮೇಜರ್​ ಸಿನಿಮಾ ಮಾಡಲಾಗುತ್ತಿದೆ. ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಈಗ ಚಿತ್ರದ ಟೀಸರ್​ ಅನ್ನು ಹಿಂದಿಯಲ್ಲಿ ಸಲ್ಮಾನ್​ ಖಾನ್, ತೆಲುಗಿನಲ್ಲಿ ಮಹೇಶ್​​ ಬಾಬು ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್​ ಟೀಸರ್​ ಲಾಂಚ್ ಮಾಡಿದ್ದಾರೆ.

ಸಂದೀಪ್​ ಅವರ ಬಾಲ್ಯ ಹೇಗಿತ್ತು, ಗಡಿಯಲ್ಲಿರುವಾಗ ಅವರ ಜೀವನ ಯಾವ ರೀತಿ ಇತ್ತು, ಅವರ ವೈವಾಹಿಕ ಜೀವನ, ಮುಂಬೈ ದಾಳಿಯನ್ನು ಅವರು ಅದನ್ನು ಹೇಗೆ ಎದುರಿಸಿದರು ಎನ್ನುವುದನ್ನು ಟೀಸರ್​ನಲ್ಲಿ ತೋರಿಸಲಾಗಿದೆ.

ಸಂದೀಪ್​ ಅವರ ಪಾತ್ರದಲ್ಲಿ ಅದಿವಿ ಶೇಷ್​​ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆ ಆಗಿತ್ತು. ಇದನ್ನು ನೋಡಿ ಅಭಿಮಾನಿಗಳು ತುಂಬಾನೇ ಖುಷಿಯಾಗಿದ್ದರು. 2008ರಲ್ಲಿ ಮುಂಬೈ ದಾಳಿ ನಡೆದಿತ್ತು. ಈ ದಾಳೆ ವೇಳೆ ಮೇಜರ್​ ಸಂದೀಪ್​ ಹುತಾತ್ಮರಾಗಿದ್ದರು. ಹಿಂದಿ, ತೆಲುಗು ಹಾಗೂ ಮಲಯಾಳಂನಲ್ಲಿ ಸಿನಿಮಾ ರಿಲೀಸ್​ ಆಗುತ್ತಿದೆ. ಶಶಿ ಕಿರಣ್​ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇತ್ತೀಚೆಗೆ ಪ್ಯಾನ್​ ಇಂಡಿಯಾ ಸಿನಿಮಾಗಳು ಸಾಕಷ್ಟು ತೆರೆಗೆ ಬರುತ್ತಿವೆ. ಬೇರೆ ಬೇರೆ ಭಾಷೆಯ ಪ್ರೇಕ್ಷಕರನ್ನು ಸೆಳೆಯಲು ಪ್ಯಾನ್​ ಇಂಡಿಯಾ ಸಿನಿಮಾ ಸಹಕಾರಿ. ಸಂದೀಪ್​ ಖ್ಯಾತಿ ಇಡೀ ದೇಶಾದ್ಯಂತ ಹಬ್ಬಿದೆ. ಹೀಗಾಗಿ, ಮೂರು ಭಾಷೆಗಳಲ್ಲಿ ಸಿನಿಮಾ ರಿಲೀಸ್​ ಮಾಡುವ ಮೂಲಕ ಹೆಚ್ಚು ಪ್ರೇಕ್ಷಕರನ್ನು ತಲುಪುವ ಆಲೋಚನೆ ನಿರ್ದೇಶಕರದ್ದು.

ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್​ ನ್ಯೂಸ್​; ಸಿನಿಮಾಕ್ಕಾಗಿ ಒಂದಾದ ಸಲ್ಮಾನ್​ ಖಾನ್​, ಮಹೇಶ್​ ಬಾಬು, ಪೃಥ್ವಿರಾಜ್!