AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾತಲ್​ ದಿ ಕೋರ್’ ಚಿತ್ರದ ಫಸ್ಟ್ ಲುಕ್​ ಹಂಚಿಕೊಂಡ ಮಮ್ಮುಟ್ಟಿ

ಮಮ್ಮುಟ್ಟಿ ಹಾಗೂ ಜ್ಯೋತಿಕಾ ಮುಖ್ಯಪಾತ್ರದಲ್ಲಿ ನಟಿಸಿರುವ ‘ಕಾತಲ್​ ದಿ ಕೋರ್'​ ಸಿನಿಮಾದ ಫಸ್ಟ್​ ಲುಕ್​ನ್ನು ಚಿತ್ರದ ನಾಯಕ ಮಮ್ಮುಟ್ಟಿ ಹಂಚಿಕೊಂಡಿದ್ದಾರೆ.

‘ಕಾತಲ್​ ದಿ ಕೋರ್' ಚಿತ್ರದ ಫಸ್ಟ್ ಲುಕ್​ ಹಂಚಿಕೊಂಡ ಮಮ್ಮುಟ್ಟಿ
ಮಮ್ಮುಟ್ಟಿ, ಜ್ಯೋತಿಕಾ
TV9 Web
| Edited By: ಕಿರಣ್ ಹನುಮಂತ್​ ಮಾದಾರ್|

Updated on: Nov 13, 2022 | 2:10 PM

Share

ಮಮ್ಮುಟ್ಟಿ(mammootty) ಶನಿವಾರ(ನವೆಂಬರ್​ 12) ತಮ್ಮ ಟ್ವಿಟರ್​ ಖಾತೆಯಲ್ಲಿ ‘ಕಾತಲ್​ ದಿ ಕೋರ್​'(kathal the core)ಚಿತ್ರದ ಫಸ್ಟ್​ ಲುಕ್​ ಪೋಸ್ಟ್​ ಬಿಡುಗಡೆ ಮಾಡಿದ್ದಾರೆ. ಪೋಸ್ಟ್​ರ್​ನಲ್ಲಿ ಮಮ್ಮುಟ್ಟಿ ಹಾಗೂ ಚಿತ್ರದ ನಾಯಕಿ ಜ್ಯೋತಿಕಾ ಅವರು ಮನೆಯ ಎದುರುಗಡೆ ಕುಳಿತು ನಗುತ್ತಿದ್ದಾರೆ. ಮೇಲ್ನೋಟಕ್ಕೆ ಪೋಸ್ಟರ್​ ನೋಡಿದರೆ ಕಾತಲ್​ ಸಿನಿಮಾವು ಮಧ್ಯವಯಸ್ಕ ದಂಪತಿಗಳ ರೊಮ್ಯಾಂಟಿಕ್​ ಕಾಮಿಡಿಯಿಂದ ಕೂಡಿದ ಸಿನಿಮಾ ಆಗಿರಬಹುದು ಎನಿಸುತ್ತದೆ.

ಜ್ಯೋತಿಕಾ ಅವರ ಮೂರನೇ ಮಲಯಾಳಂ ಸಿನಿಮಾ ಇದಾಗಿದ್ದು, (2007)ರಲ್ಲಿ ‘ರಕ್ಕಿಲಿಪಟ್ಟು’, (2009) ರಲ್ಲಿ ‘ಸೀತಾ ಕಲ್ಯಾಣಂ’ ನಲ್ಲಿ ನಟಿಸಿದ್ದಾರೆ. ಇದೀಗ ಅವರು ‘ಕಾತಲ್​ ದಿ ಕೋರ್’ ಸಿನಿಮಾದಲ್ಲಿ ಮಮ್ಮುಟ್ಟಿ ಜೊತೆ ಜೋಡಿಯಾಗಿ ನಟಿಸುತ್ತಿದ್ದು, ಇದು ಮಮ್ಮುಟ್ಟಿ ಅವರೊಟ್ಟಿಗೆ ಮೊದಲ ಸಿನಿಮಾ ಆಗಿದೆ. ಚಿತ್ರದ ಮೊದಲ ಪೋಸ್ಟರ್​ನಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಮಮ್ಮುಟ್ಟಿ ಅವರು ಈಗಾಗಲೇ ತಮ್ಮ ಹಿಂದಿನ ಚಿತ್ರ ‘ರೋರ್​ಸ್ಚಾಚ್​’ನ ಯಶಸ್ಸಿನಲ್ಲಿದ್ದಾರೆ.

ಇದನ್ನೂ ಓದಿ:Mammootty Birthday: 70ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮಾಲಿವುಡ್ ಸ್ಟಾರ್ ಮಮ್ಮುಟ್ಟಿ; ಕನ್ನಡದಲ್ಲೂ ಮಿಂಚಿದ್ದರು ಈ ನಟ!

ಇನ್ನು ಈ ಸಿನಿಮಾ ಮಲಯಾಳಂ ಅಭಿಮಾನಿಗಳಲ್ಲಿ ಭಾರಿ ಹೈಫ್​ ಕ್ರಿಯೇಟ್​ ಮಾಡಿದೆ. ಈ ಸಿನಿಮಾವನ್ನು ಜಿಯೋ ಬೇಬಿ ನಿರ್ದೇಶನ ಮಾಡಿದ್ದು ‘ದಿ ಗ್ರೇಟ್​ ಇಂಡಿಯನ್​ ಕಿಚನ್​’ ಮತ್ತು ‘ಕಿಲೋಮೀಟರ್ಸ್​ ಕಿಲೋಮೀಟರ್ಸ್’ ಚಿತ್ರಗಳ ಮೂಲಕ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿದ ನಿರ್ದೇಶಕ ಜಿಯೋ ಬೇಬಿ ಈ ಬಾರಿ ಪ್ರೇಕ್ಷಕರಿಗೆ ಯಾವ ರೀತಿಯ ಕಥೆಯ ಮೂಲಕ ಬರಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಸಾಲು.ಕೆ. ಥಾಮಸ್​ ಕ್ಯಾಮರಾ ವರ್ಕ್​ ಮಾಡಿದ್ದು, ಚಿತ್ರಕ್ಕೆ ಮ್ಯಾಥ್ಯೂಸ್​ ಪುಲಿಕನ್​ ಸಂಗೀತ ಸಂಯೋಜಿಸಿದ್ದಾರೆ, ಮಮ್ಮುಟ್ಟಿ ಮತ್ತು ದುಲ್ಕರ್​ ಸಲ್ಮಾನ್​ ಅವರ ಬ್ಯಾನರ್​ಗಳಾದ ಮಮ್ಮುಟ್ಟಿ ಕಂಪನಿ ಹಾಗೂ ವೇಫೇರರ್​ ಫಿಲ್ಮ್ಸ್ ಸಹ-ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ