AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​ ಮೇಲೆ ಕಣ್ಣು ಹಾಕಿದ ಬಾಲಿವುಡ್, ಹಾಲಿವುಡ್: ಕಾರಣ?

Bollywood celebrities: ಭಾರತದ ಇತರೆ ಚಿತ್ರರಂಗ ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗಗಳು ಬಾಲಿವುಡ್ ಅನ್ನು ಮೀರಿ ಬೆಳೆದಿವೆ ಮತ್ತು ವಿಶ್ವದಾದ್ಯಂತ ಮಾರುಕಟ್ಟೆ ಸೃಷ್ಟಿ ಮಾಡಿಕೊಂಡಿವೆ. ತೆಲುಗು ಚಿತ್ರರಂಗವಂತೂ ಭಾರತದ ಅತ್ಯಂತ ಯಶಸ್ವಿ ಚಿತ್ರರಂಗ ಎನಿಸಿಕೊಂಡಿದೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದೆ. ಯಾವ ಮಟ್ಟಿಗೆಂದರೆ ಇದೀಗ ಬಾಲಿವುಡ್​​ನವರು ಸಹ ಹೈದರಾಬಾದ್​​ ಕಡೆ ಮುಖ ಮಾಡಿದ್ದಾರೆ. ಹಾಲಿವುಡ್ ಸಹ ಅದೇ ದಾರಿ ಹಿಡಿದಿವೆ.

ಹೈದರಾಬಾದ್​ ಮೇಲೆ ಕಣ್ಣು ಹಾಕಿದ ಬಾಲಿವುಡ್, ಹಾಲಿವುಡ್: ಕಾರಣ?
Movie
ಮಂಜುನಾಥ ಸಿ.
|

Updated on: Mar 25, 2026 | 11:09 AM

Share

ಭಾರತೀಯ ಚಿತ್ರರಂಗ ಎಂದರೆ ಅದು ಬಾಲಿವುಡ್ (Bollywood) ಎಂಬ ಕಾಲವೊಂದಿತ್ತು. ಆದರೆ ಈಗ ಅದು ಬದಲಾಗಿದೆ. ಭಾರತದ ಇತರೆ ಚಿತ್ರರಂಗ ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗಗಳು ಬಾಲಿವುಡ್ ಅನ್ನು ಮೀರಿ ಬೆಳೆದಿವೆ ಮತ್ತು ವಿಶ್ವದಾದ್ಯಂತ ಮಾರುಕಟ್ಟೆ ಸೃಷ್ಟಿ ಮಾಡಿಕೊಂಡಿವೆ. ತೆಲುಗು ಚಿತ್ರರಂಗವಂತೂ ಭಾರತದ ಅತ್ಯಂತ ಯಶಸ್ವಿ ಚಿತ್ರರಂಗ ಎನಿಸಿಕೊಂಡಿದೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದೆ. ಯಾವ ಮಟ್ಟಿಗೆಂದರೆ ಇದೀಗ ಬಾಲಿವುಡ್​​ನವರು ಸಹ ಹೈದರಾಬಾದ್​​ ಕಡೆ ಮುಖ ಮಾಡಿದ್ದಾರೆ. ಹಾಲಿವುಡ್ ಸಹ ಅದೇ ದಾರಿ ಹಿಡಿದಿವೆ.

‘ಬಾಹುಬಲಿ’, ‘ಪುಷ್ಪ’, ‘RRR’, ‘ಪುಷ್ಪ 2’ ಮತ್ತು ಕಲ್ಕಿಯಂತಹ ಸಿನಿಮಾಗಳ ಮೂಲಕ ತೆಲುಗು ಚಿತ್ರರಂಗ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಸಹ ಭಾರಿ ಜನಪ್ರಿಯತೆ ಗಳಿಸಿಕೊಂಡಿದೆ. ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ತೆಲುಗು ಚಿತ್ರರಂಗಕ್ಕೆ ತಮ್ಮ ರಾಜ್ಯಗಳಲ್ಲಿ ವಿಶೇಷವಾಗಿ ಹೈದರಾಬಾದ್ ನಲ್ಲಿ ಲಭ್ಯವಿರುವ ಸಂಪನ್ಮೂಲದ ಸದುಪಯೋಗ ಪಡೆದುಕೊಂಡು ಇಷ್ಟು ಬೃಹತ್ ಆಗಿ ಬೆಳೆಯಲು ಸಾಧ್ಯವಾಗಿದೆ. ತೆಲುಗು ಚಿತ್ರರಂಗದ ಸೃಜನಶೀಲ ಕೇಂದ್ರವಾಗಿ ಹೈದರಾಬಾದ್ ಕಾರ್ಯನಿರ್ವಹಿಸುತ್ತಿದೆ.

ಈಗ ತೆಲುಗು ಚಿತ್ರರಂಗದ ಕ್ರಾಂತಿ ಇಡೀ ಭಾರತವನ್ನು ಆವರಿಸಿಕೊಂಡಿದ್ದು, ಮನೋರಂಜನಾ ಕ್ಷೇತ್ರದ ಎಲ್ಲಾ ಪ್ರಮುಖ ವಿಭಾಗಗಳು ತೆಲುಗು ರಾಜ್ಯಗಳತ್ತ ಗಮನ ಹರಿಸುತ್ತಿವೆ. ಹೈದರಾಬಾದ್​​ನ ಸಿಎಂ ರೇವಂತ್ ರೆಡ್ಡಿ ಸಹ ಸಿನಿಮಾಕ್ಕೆ ಭರಪೂರ ಬೆಂಬಲ ನೀಡುವುದಾಗಿ ಘೋಷಿಸಿದ್ದು, ಹೈದರಾಬಾದ್ನಲ್ಲಿ ವಿಶ್ವದರ್ಜೆಯ ಸಿನಿಮಾ ತಂತ್ರಜ್ಞಾನ ಸಿಗುವಂತಾಗಬೇಕು, ಹೈದರಾಬಾದ್ ಅನ್ನು ಟೆಕ್ ಹಬ್ ಜೊತೆಗೆ ಸಿನಿಮಾ ಹಬ್ ಆಗಿ ಮಾಡುವ ಕುರಿತು ಇತ್ತೀಚೆಗಿನ ಕೆಲ ಕಾರ್ಯಕ್ರಮಗಳಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ:ಗದ್ದರ್ ಪ್ರಶಸ್ತಿ: ರಶ್ಮಿಕಾ ಬೌನ್ಸರ್ ಕಿರಿಕ್, ರಾಜಮೌಳಿ ತಂದೆಗೆ ಅವಮಾನ

ಇದರ ಭಾಗವಾಗಿ, ಸಂಜಯ್ ದತ್ ಮತ್ತು ಅಜಯ್ ದೇವಗನ್ ಅವರಂತಹ ಬಾಲಿವುಡ್ ತಾರೆಯರು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಹೊಸ ಅವಕಾಶಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಇತ್ತೀಚೆಗಷ್ಟೆ ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿ ಆಗಿದ್ದ ಅಜಯ್ ದೇವಗನ್, ತಮ್ಮ ಒಡೆತನದ ಸಿನಿಮಾ ವಿಎಫ್​​ಎಕ್ಸ್ ಸಂಸ್ಥೆಯನ್ನು ಹೈದರಾಬಾದ್​​ನಲ್ಲಿ ಪ್ರಾರಂಭಿಸುತ್ತಿರುವುದಾಗಿ ಘೋಷಿಸಿದ್ದರು. ಸಂಜಯ್ ದತ್ ಸಹ ಸಿನಿಮಾ ಸಂಬಂಧ ಉದ್ಯಮವನ್ನು ಹೈದರಾಬಾದ್​​ನಲ್ಲಿ ಪ್ರಾರಂಭಿಸಲಿದ್ದು, ಇದಕ್ಕಾಗಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದರು. ಸಲ್ಮಾನ್ ಖಾನ್ ಸಹ ಮಾಲೀಕತ್ವ ಹೊಂದಿರುವ ನಿರ್ಮಾಣ ಸಂಸ್ಥೆಯೊಂದು ಬೃಹತ್ ಫಿಲಂ ಸಿಟಿ ಮತ್ತು ಅಪಾರ್ಟ್​​ಮೆಂಟ್ ಅನ್ನು ಹೈದರಾಬಾದ್​​ನಲ್ಲಿ ನಿರ್ಮಿಸಲು ಮುಂದಾಗಿದೆ.

ಇನ್ನು ಹಾಲಿವುಡ್ ಸಹ ಹೈದರಾಬಾದ್​​ ಮೇಲೆ ಕಣ್ಣಿಟ್ಟಿದೆ. ಕೆಲ ವಾರಗಳ ಹಿಂದಷ್ಟೆ ನೆಟ್​​ಫ್ಲಿಕ್ಸ್​ ತನ್ನ ಕಚೇರಿಯನ್ನು ಹೈದರಾಬಾದ್​​ನಲ್ಲಿ ತೆರಿದೆ, ಇದು ಕೇವಲ ಕಚೇರಿ ಮಾತ್ರವೇ ಆಗಿರದೆ ಸ್ಟುಡಿಯೋ ಸಹ ಆಗಿದ್ದು, ನೆಟ್​​ಫ್ಲಿಕ್ಸ್ ಈ ರೀತಿಯ ಕೇವಲ ನಾಲ್ಕು ಸ್ಟುಡಿಯೋಗಳನ್ನು ಮಾತ್ರವೇ ಹೊಂದಿದ್ದು ಅದರಲ್ಲಿ ಒಂದು ಹೈದರಾಬಾದ್​​ನಲ್ಲಿದೆ. ಒಟ್ಟಾರೆಯಾಗಿ, ಬಾಲಿವುಡ್ ಮತ್ತು ಹಾಲಿವುಡ್ ಹೈದರಾಬಾದ್​​ನಲ್ಲಿ ಸಿನಿಮಾ ಉದ್ಯಮದ ಅವಕಾಶಗಳನ್ನು ಹುಡುಕಿ ಹೂಡಿಕೆ ಮಾಡುತ್ತಿದೆ. ಇದು ತೆಲುಗು ಚಿತ್ರರಂಗಕ್ಕೆ ಮತ್ತಷ್ಟು ಬೆಂಬಲ ನೀಡುವುದು ಖಾತ್ರಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಡೆಲಿವರಿ ಬಾಯ್ಸ್ ಕೆಲಸ ಗೌರವಿಸಿ; ಸ್ವಂತ ಅನುಭವ ಹಂಚಿಕೊಂಡ ಧರ್ಮ ಕೀರ್ತಿರಾಜ್
ಡೆಲಿವರಿ ಬಾಯ್ಸ್ ಕೆಲಸ ಗೌರವಿಸಿ; ಸ್ವಂತ ಅನುಭವ ಹಂಚಿಕೊಂಡ ಧರ್ಮ ಕೀರ್ತಿರಾಜ್
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ