AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮನ್ನು ಅವಮಾನಿಸಲಾಗುತ್ತಿದೆ: ಚಿರಂಜೀವಿ ಅಭಿಮಾನಿಗಳಲ್ಲಿ ಒಡಕು, ಹೈದರಾಬಾದ್ ಚಲೋ ಕರೆ

ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು, ಅಭಿಮಾನಿ ಸಂಘಗಳನ್ನು ಹೊಂದಿರುವ ಅಗ್ರಗಣ್ಯ ನಟರಲ್ಲಿ ಮೆಗಾಸ್ಟಾರ್ ಚಿರಂಜೀವಿ ಒಬ್ಬರು. ಆದರೆ ಅವರ ಅಭಿಮಾನಿಗಳ ನಡುವೆ ವೈಮನಸ್ಯ ಉಂಟಾಗಿದೆ.

ನಮ್ಮನ್ನು ಅವಮಾನಿಸಲಾಗುತ್ತಿದೆ: ಚಿರಂಜೀವಿ ಅಭಿಮಾನಿಗಳಲ್ಲಿ ಒಡಕು, ಹೈದರಾಬಾದ್ ಚಲೋ ಕರೆ
ಚಿರಂಜೀವಿ
Follow us
ಮಂಜುನಾಥ ಸಿ.
|

Updated on:Mar 24, 2023 | 5:57 PM

ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು, ಅಭಿಮಾನಿ ಸಂಘಗಳನ್ನು ಹೊಂದಿರುವ ಸೂಪರ್ ಸ್ಟಾರ್​ಗಳಲ್ಲಿ (Super Star) ಒಬ್ಬರು ತೆಲುಗಿನ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi). ಒಂದು ಕಾಲದಲ್ಲಿ ಅಭಿಮಾನಿ ಸಂಘಗಳನ್ನು (Fans Association) ಸಿನಿಮಾಕ್ಕೆ ಹಾಗೂ ಸಾಮಾಜಿಕ ಕಾರ್ಯಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಂಡ ನಟ ಚಿರಂಜೀವಿ ಎಂದು ಸಿನಿ ಪಂಡಿತರು ವಿಶ್ಲೇಷಿಸುತ್ತಾರೆ. ಭಾರಿ ದೊಡ್ಡ ಅಭಿಮಾನಿ ಪಡೆಯೇ ಚಿರಂಜೀವಿ ಅವರಿಗೆ ಇದೆ. ಆದರೆ ಈಗ ಈ ಅಭಿಮಾನಿ ಪಡೆಯಲ್ಲಿ ಭಿನ್ನಾಭಿಪ್ರಾಯ ತಲೆದೂರಿದೆ. ಹಳೆಯ ಚಿರಂಜೀವಿ ಅಭಿಮಾನಿ ಸಂಘಗಳು ತಮಗೆ ಅವಮಾನ ಆಗಿದೆಯೆಂದು ಆರೋಪಿಸಿದ್ದು, ಚಿರಂಜೀವಿ ಹಾಗೂ ರಾಮ್ ಚರಣ್ ಅವರನ್ನು ಭೇಟಿಯಾಗಿ ದೂರು ನೀಡಲು ಹೈದರಾಬಾದ್ ಚಲೋ ಯಾತ್ರೆಗೆ ಕರೆ ನೀಡಿದ್ದಾರೆ.

ಆಗಿದ್ದಿಷ್ಟು ನಟ ಚಿರಂಜೀವಿಯವರ ಕೆಲವು ಹಿರಿಯ ಅಭಿಮಾನಿಗಳು ಸೇರಿಕೊಂಡು 2016 ರಲ್ಲಿ ಪ್ರತ್ಯೇಕವಾಗಿ ಇಂಟರ್​ನ್ಯಾಷನಲ್ ಚಿರಂಜೀವಿ ಫೆಡರೇಷನ್ ಎಂಬ ಸಂಘ ಕಟ್ಟಿದರು. ಆ ಸಂಘಕ್ಕೆ ಹಲವು ಹಿರಿಯ ಚಿರಂಜೀವಿ ಅಭಿಮಾನಿಗಳನ್ನು ಸೇರಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಒಂದು ಪ್ರಕಟಣೆ ಹೊಡೆಸಿದ ರಾಷ್ಟ್ರೀಯ ಚಿರಂಜೀವಿ ಯುವ ಅಭಿಮಾನಿ ಸಂಘ, ಹಾಗೂ ರಾಜ್ಯ ಚಿರಂಜೀವಿ ಯುವ ಅಭಿಮಾನಿ ಸಂಘವು ನಮಗೆ ಇಂಟರ್​ನ್ಯಾಷನಲ್ ಚಿರಂಜೀವಿ ಫೆಡರೇಷನ್ ಜೊತೆಗೆ ಯಾವುದೇ ಸಂಬಂಧವಿಲ್ಲ ಎಂದಿತ್ತು. ಅವರೊಟ್ಟಿಗೆ ನಾವು ಗುರುತಿಸಿಕೊಳ್ಳುವುದಿಲ್ಲ ಎಂದು ಹೇಳಿತ್ತು. ಇದು ಇಂಟರ್​ನ್ಯಾಷನಲ್ ಚಿರಂಜೀವಿ ಫೆಡರೇಷನ್ ಕೆಂಗಣ್ಣಿಗೆ ಕಾರಣವಾಗಿತ್ತು. ಅದಷ್ಟೆ ಅಲ್ಲದೆ, ಇತ್ತೀಚೆಗೆ ಅಭಿಮಾನಿಗಳೊಟ್ಟಿಗೆ ರಾಮ್ ಚರಣ್​ರ ಫೋಟೊಶೂಟ್​ ಬಗ್ಗೆ ಸಹ ತಮ್ಮ ಫೆಡರೇಷನ್​ಗೆ ಮಾಹಿತಿ ನೀಡಲಾಗಿಲ್ಲ. ಹಾಗೂ ಫೆಡರೇಶನ್​ನವರು ಚಿರಂಜೀವಿ ಹಾಗೂ ರಾಮ್ ಚರಣ್ ಅವರನ್ನು ಭೇಟಿಯಾಗದಂತೆ ಕೆಲವು ಅಭಿಮಾನಿ ಸಂಘದವರು ತಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಫೆಡರೇಶನ್​ ಸದಸ್ಯರು.

ಇತ್ತೀಚೆಗಷ್ಟೆ ಒಂಗೊಲ್​ನಲ್ಲಿ ಸಮಾವೇಶ ಮಾಡಿದ ಇಂಟರ್​ನ್ಯಾಷನಲ್ ಚಿರಂಜೀವಿ ಫೆಡರೇಷನ್ ಸದಸ್ಯರು, ಯುವ ಅಭಿಮಾನಿಗಳು ಮಾಡಿರುವ ಕಾರ್ಯ, ಮಾಡುತ್ತಿರುವ ಕಾರ್ಯ ಮೆಗಾ ಸಹೋದರರು ತಲೆತಗ್ಗಿಸುವಂಥಹದ್ದಾಗಿದೆ. ಅಲ್ಲದೆ ಇಂಟರ್​ನ್ಯಾಷನಲ್ ಚಿರಂಜೀವಿ ಫೆಡರೇಷನ್ ಅಭಿಮಾನಿ ಸಂಘದವರಿಗೆ, ಹಿರಿಯ ಚಿರಂಜೀವಿ ಅಭಿಮಾನಿಗಳಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಲ್ಲದೆ, ಸೇವ್ ರಿಯಲ್ ಫ್ಯಾನ್ಸ್, ರೆಸ್ಪೆಕ್ಟ್ ಸೀನಿಯರ್ ಫ್ಯಾನ್ಸ್ (ನಿಜವಾದ ಅಭಿಮಾನಿಗಳನ್ನು ರಕ್ಷಿಸಿ, ಹಿರಿಯ ಅಭಿಮಾನಿಗಳನ್ನು ಗೌರವಿಸಿ) ಎಂಬ ಘೋಷಣೆಗಳನ್ನು ಕೂಗಿದರು. ಇದೇ ಘೋಷ ವಾಕ್ಯದಡಿ ಹೈದರಾಬಾದ್ ಚಲೋ ಯಾತ್ರೆಗೆ ಕರೆ ನೀಡಿದ್ದು, ಒಂಗೂಲ್​ನಿಂದ ಹೈದರಾಬಾದ್​ಗೆ ಪಾದಯಾತ್ರೆ ಮಾಡಿ ಚಿರಂಜೀವಿ-ರಾಮ್ ಚರಣ್ ಅವರನ್ನು ಭೇಟಿಯಾಗಿ ತಮ್ಮ ನೋವು ಹೇಳಿಕೊಳ್ಳುವುದಾಗಿ ಘೋಷಿಸಿದ್ದಾರೆ.

ನಟ ಚಿರಂಜೀವಿ ತಮ್ಮ ಅಭಿಮಾನಿಗಳ ಬಗ್ಗೆ ವಿಶೇಷ ಕಾಳಜಿಯುವಳ್ಳ ನಟರಾಗಿದ್ದಾರೆ. ಸಂಕಷ್ಟದಲ್ಲಿರುವ ತಮ್ಮ ಹಲವು ಅಭಿಮಾನಿಗಳಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಈಗ ತಮ್ಮದೇ ಅಭಿಮಾನಿ ಸಂಘದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದು ಇದನ್ನು ಚಿರಂಜೀವಿ ಹೇಗೆ ನಿಭಾಯಿಸುತ್ತಾರೆ ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:54 pm, Fri, 24 March 23