AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daredevil Musthafa Review: ಭರಪೂರ ನಗಿಸುತ್ತಾ ಮತಗಳ ಜಗಳ ಬಿಡಿಸುವ ‘ಡೇರ್​ಡೆವಿಲ್​ ಮುಸ್ತಫಾ’

Daredevil Musthafa: ‘ಡೇರ್​ಡೆವಿಲ್​ ಮುಸ್ತಫಾ’ ಚಿತ್ರದ ಕಥೆ ಸಾಗುವುದು ರೆಟ್ರೋ ಕಾಲದಲ್ಲಿ. ಮೊಬೈಲ್​, ಇಂಟರ್​ನೆಟ್​ ಇತ್ಯಾದಿಗಳಿಲ್ಲದ ಆ ಕಾಲಘಟ್ಟವನ್ನು ನಿರ್ದೇಶಕ ಶಶಾಂಕ್​ ಸೋಗಾಲ್​ ಅವರು ಕಟ್ಟಿಕೊಟ್ಟಿದ್ದಾರೆ.

Daredevil Musthafa Review: ಭರಪೂರ ನಗಿಸುತ್ತಾ ಮತಗಳ ಜಗಳ ಬಿಡಿಸುವ ‘ಡೇರ್​ಡೆವಿಲ್​ ಮುಸ್ತಫಾ’
ಡೇರ್ಡೆವಿಲ್ ಮುಸ್ತಫಾ ಪೋಸ್ಟರ್​
ಮದನ್​ ಕುಮಾರ್​
|

Updated on:May 18, 2023 | 2:18 PM

Share

ಚಿತ್ರ: ಡೇರ್​ಡೆವಿಲ್​ ಮುಸ್ತಫಾ

ನಿರ್ಮಾಣ: ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳು

ನಿರ್ದೇಶನ: ಶಶಾಂಕ್​ ಸೋಗಾಲ್​

ಇದನ್ನೂ ಓದಿ
Image
Triple Riding Movie Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು
Image
Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ
Image
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Image
Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ

ಪಾತ್ರವರ್ಗ: ಶಿಶಿರ್​ ಬೈಕಾಡಿ, ಆದಿತ್ಯ ಆಶ್ರೀ, ಸುಪ್ರೀತ್​ ಭಾರದ್ವಾಜ್​, ಆಶಿತ್​ ಶ್ರೀವತ್ಸಾ, ಅಭಯ್​, ಮಂಡ್ಯ ರಮೇಶ್​, ಉಮೇಶ್​, ಪ್ರೇರಣಾ ಮುಂತಾದವರು.

ಸ್ಟಾರ್​: 3.5/5

ಒಂದು ಕಾಲದಲ್ಲಿ ಸಾಹಿತ್ಯ ಕೃತಿಗಳನ್ನು ಆಧರಿಸಿದ ಸಿನಿಮಾಗಳನ್ನು ಕನ್ನಡದಲ್ಲಿ ಹೆಚ್ಚಾಗಿ ಬರುತ್ತಿದ್ದವು. ಇತ್ತೀಚೆಗೆ ಆ ಟ್ರೆಂಡ್​ ಕಡಿಮೆ ಆಗಿದೆ. ಅಪರೂಪ ಎಂಬಂತೆ ‘ಡೇರ್​ಡೆವಿಲ್​ ಮುಸ್ತಫಾ’ ಸಿನಿಮಾ ಮೂಡಿಬಂದಿದೆ. ಕರುನಾಡು ಕಂಡ ವಿಶೇಷ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಬರೆದ ‘ಡೇರ್​ಡೆವಿಲ್​ ಮುಸ್ತಫಾ’ ಕಥೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ನಿರ್ದೇಶಕ ಶಶಾಂಕ್​ ಸೋಗಾಲ್​ ಅವರು ಅಬಚೂರಿನ ಪರಿಸರವನ್ನು ತೆರೆಗೆ ತಂದಿದ್ದಾರೆ. ಜೊತೆಗೆ ಉತ್ತಮವಾದ ಸಂದೇಶವನ್ನೂ ರವಾನಿಸಿದ್ದಾರೆ. ಹೊಸ ಕಲಾವಿದರ ಅಭಿನಯ ಗಮನ ಸೆಳೆಯುತ್ತಿದೆ. ಒಟ್ಟಾರೆ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

ಪೂರ್ಣಚಂದ್ರ ತೇಜಸ್ವಿ ಅವರ ಕಥೆಗಳು ಎಲ್ಲ ಕಾಲಕ್ಕೂ ಪ್ರಸ್ತುತ ಆಗುವಂತಿವೆ. ‘ಡೇರ್​ಡೆವಿಲ್​ ಮುಸ್ತಫಾ’ ಕಥೆಯಲ್ಲೂ ಆ ಗುಣವಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೋಮುದ್ವೇಷ ರಾರಾಜಿಸುತ್ತಿದೆ. ಅನಗತ್ಯವಾಗಿ ಧರ್ಮಗಳ ನಡುವೆ ಜಗಳ ಸೃಷ್ಟಿ ಆಗುತ್ತಲೇ ಇದೆ. ಅದೆಲ್ಲ ಎಷ್ಟು ಕ್ಷುಲ್ಲಕ ಎಂಬುದನ್ನು ತಿಳಿಸುವ ರೀತಿಯಲ್ಲಿ ‘ಡೇರ್​ಡೆವಿಲ್​ ಮುಸ್ತಫಾ’ ಸಿನಿಮಾ ಮೂಡಿಬಂದಿದೆ.

ಇದನ್ನೂ ಓದಿ: Raghavendra Stores Review: ‘ರಾಘವೇಂದ್ರ ಸ್ಟೋರ್ಸ್​’ನಲ್ಲಿ ಸಂದೇಶಗಳ ರೀಸೈಕಲ್​; ಜಗ್ಗೇಶ್ ಅಭಿಮಾನಿಗಳಿಗೆ ನಗುವಿನ ರಸದೌತಣ

ಕಣ್ಣೆದುರಿಗೆ ಬರುವ ರೆಟ್ರೋ ಕಾಲ:

ಈ ಕಥೆ ಸಾಗುವುದು ರೆಟ್ರೋ ಕಾಲದಲ್ಲಿ. ಮೊಬೈಲ್​, ಇಂಟರ್​ನೆಟ್​ ಇತ್ಯಾದಿ ಹಾವಳಿ ಇಲ್ಲದ ಕಾಲಘಟ್ಟವನ್ನು ಇಂದಿನ ಸಿನಿಮಾಗಳಲ್ಲಿ ತೋರಿಸುವುದು ಅಷ್ಟು ಸುಲಭವಲ್ಲ. ಆ ಸವಾಲನ್ನು ನಿರ್ದೇಶಕ ಶಶಾಂಕ್​ ಸೋಗಾಲ್​ ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಪ್ರೇಕ್ಷಕರನ್ನು ಅವರು ರೆಟ್ರೋ ಕಾಲಕ್ಕೆ ಕರೆದುಕೊಂಡು ಹೋಗುತ್ತಾರೆ.

ವಿವಿಧತೆಯಲ್ಲಿ ಏಕತೆ ಮಂತ್ರ:

ಒಂದೇ ಊರಿನಲ್ಲಿ ಎರಡು ಬೇರೆ ಬೇರೆ ಧರ್ಮದ ಜನರು ಇದ್ದಾಗ ಸಾಮಾನ್ಯವಾಗಿ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಅದರಿಂದಾಗಿ ಜಗಳಗಳು ಉಂಟಾಗುವುದು ಕೂಡ ಸಹಜ. ಆದರೆ ಹೊಂದಿಕೊಂಡು ಬಾಳಿದರೆ ಒಗ್ಗಟ್ಟಿನಿಂದ ಉತ್ತಮ ಸಮಾಜವನ್ನು ಕಟ್ಟಬಹುದು ಎಂಬ ಸಂದೇಶ ಈ ಸಿನಿಮಾದಲ್ಲಿದೆ. ಆದರೆ ಅದನ್ನು ಒಂದು ಪಾಠದ ರೀತಿ ಹೇಳಿಲ್ಲ. ನಕ್ಕು ನಗಿಸುವಂತಹ ಲವಲವಿಕೆಯ ದೃಶ್ಯಗಳ ಮೂಲಕ ಎಲ್ಲವನ್ನೂ ಪ್ರೇಕ್ಷಕರ ಎದೆಗೆ ದಾಟಿಸಲಾಗಿದೆ.

ಇದನ್ನೂ ಓದಿ: Raghu Movie Review: ‘ರಾಘು’ ಚಿತ್ರದಲ್ಲಿ ಚಿನ್ನಾರಿ ಮುತ್ತನ ಏಕಪಾತ್ರಾಭಿನಯ; ಕನ್ನಡದಲ್ಲೊಂದು ಭಿನ್ನ ಪ್ರಯೋಗ

ಕಾಳಜಿಯುಳ್ಳ ನಿರೂಪಣೆ:

ಬರೀ ಹಿಂದೂಗಳೇ ತುಂಬಿರುವ ಕಾಲೇಜಿಗೆ ಒಬ್ಬನೇ ಒಬ್ಬ ಮುಸ್ಲಿಂ ಹುಡುಗ ಸೇರಿಕೊಂಡರೆ ಏನಾಗುತ್ತದೆ? ಅದರಲ್ಲೂ ಮುಸ್ಲಿಂ ಸಮುದಾಯದ ಬಗ್ಗೆ ಹಿಂದೂ ಹುಡುಗರಿಗೆ ಪೂರ್ವಾಗ್ರಗಳು ತುಂಬಿಕೊಂಡಿದ್ದರೆ ಏನಾಗಬಹುದು? ಇಂಥ ಬಿಗುವಿನ ವಾತಾವರಣದಲ್ಲಿ ಒಂದು ಚಿಕ್ಕ ಲವ್​ ಸ್ಟೋರಿಯೂ ಹುಟ್ಟಿಕೊಂಡರೆ ಏನಾದೀತಿ? ಅದೂ ಸಾಲದೆಂಬಂತೆ ಕಾಲೇಜಿನ ಹಿಂದೂ ಹುಡುಗರ ವಿರುದ್ಧ ಅದೇ ಊರಿನ ಮುಸ್ಲಿಂ ಕೇರಿಯ ಯುವಕರು ಬಾಜಿ ಕಟ್ಟಿ ಕ್ರಿಕೆಟ್​ ಆಡಲು ಬಂದರೆ ಏನೆಲ್ಲ ನಡೆಯಬಹುದು? ಈ ಎಲ್ಲ ಸೂಕ್ಷ್ಮವಾದ ವಿಚಾರಗಳು ‘ಡೇರ್​ಡೆವಿಲ್​ ಮುಸ್ತಫಾ’ ಸಿನಿಮಾದಲ್ಲಿದೆ. ಈ ಎಲ್ಲವನ್ನೂ ಕೂಡ ನಿರ್ದೇಶಕರು ಎಂಬ ಕಾಳಜಿ, ಎಚ್ಚರಿಕೆಯಿಂದ ಕಟ್ಟಿಕೊಟ್ಟಿದ್ದಾರೆ.

ಇದನ್ನೂ ಓದಿ: The Kerala Story Review: ಐಸಿಸ್ ಸಂಚಿನ ಕುರಿತು ಎಚ್ಚರಿಕೆ ಸಂದೇಶ ಸಾರುವ ‘ದಿ ಕೇರಳ ಸ್ಟೋರಿ’

ಈ ಚಿತ್ರದ ಅವಧಿ 2 ಗಂಟೆ 40 ನಿಮಿಷ. ಆದರೂ ಕೂಡ ಎಲ್ಲಿಯೂ ಬೋರು ಹೊಡೆಸದ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಹುಡುಗರ ತರಲೆ-ತಮಾಷೆಯ ಜೊತೆ ಸಾಗುವ ನಿರೂಪಣೆ ಇಷ್ಟ ಆಗುತ್ತದೆ. ರಾಮಾನುಜ ಅಯ್ಯಂಗಾರಿ ಪಾತ್ರದಲ್ಲಿ ನಟಿಸಿದ ಆದಿತ್ಯ ಆಶ್ರೀ ಮತ್ತು ಮುಸ್ತಫಾ ಪಾತ್ರದಲ್ಲಿ ಅಭಿನಯಿಸಿದ ಶಿಶಿರಾ ಬೈಕಾಡಿ ನಡುವಿನ ಜಿದ್ದಾ ಜಿದ್ದಿ ದೃಶ್ಯಗಳು ಮಸ್ತ್​ ಮನರಂಜನೆ ನೀಡುತ್ತವೆ. ಮಂಡ್ಯ ರಮೇಶ್​, ಉಮೇಶ್​, ನಾಗಭೂಷಣ್​ ಮುಂತಾದವರು ಕೂಡ ನಗುವಿನ ಕಚಗುಳಿ ಇಡುತ್ತಾರೆ. ರಮಾಮಣಿ ಪಾತ್ರ ಮಾಡಿದ ಪ್ರೇರಣಾ ಕೂಡ ಗಮನ ಸೆಳೆಯುತ್ತಾರೆ. ಅಯ್ಯಂಗಾರಿ ಪಟಾಲಂ ಕೂಡ ಚಪ್ಪಾಳೆ ಗಿಟ್ಟಿಸುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:15 pm, Thu, 18 May 23

'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ