‘ಲವ್​ 360’ ವಿಮರ್ಶೆ: ಮೊದಲು ಮುಗ್ಧ​ ಪ್ರೇಮದ ಅಚ್ಚರಿ,​ ನಂತರ ಮರ್ಡರ್​ ಮಿಸ್ಟರಿ

Love 360 Movie Review: ಚೊಚ್ಚಲ ಸಿನಿಮಾದಲ್ಲೇ ನಟ ಪ್ರವೀಣ್​ ಗಮನ ಸೆಳೆಯುವಂತೆ ಅಭಿನಯಿಸಿದ್ದಾರೆ. ನಟಿ ರಚನಾ ಇಂದರ್​ ಪಾತ್ರ ಸ್ಪೆಷಲ್​ ಆಗಿದೆ.

‘ಲವ್​ 360’ ವಿಮರ್ಶೆ: ಮೊದಲು ಮುಗ್ಧ​ ಪ್ರೇಮದ ಅಚ್ಚರಿ,​ ನಂತರ ಮರ್ಡರ್​ ಮಿಸ್ಟರಿ
ರಚನಾ ಇಂದರ್, ಪ್ರವೀಣ್
Follow us
| Updated By: ಮದನ್​ ಕುಮಾರ್​

Updated on: Aug 19, 2022 | 3:30 PM

ಚಿತ್ರ: ಲವ್​ 360

ನಿರ್ಮಾಣ: ಶಶಾಂಕ್​, ಮಂಜುಳಾ ಮೂರ್ತಿ

ನಿರ್ದೇಶನ: ಶಶಾಂಕ್​

ಇದನ್ನೂ ಓದಿ
Image
Ravi Bopanna Review: ರವಿ ಬೋಪಣ್ಣ ಭೇದಿಸುವ ಕೊಲೆ ರಹಸ್ಯದ ಕಥೆಗೆ ಶೃಂಗಾರವೇ ಅತಿ ಭಾರ
Image
Gaalipata 2 Review: ಇದು ಬಗೆಹರಿಯದ ಭಾವನೆಗಳ ‘ಹಾಡು’-ಪಾಡು ಆಗಿರಬಹುದು ಪ್ರಾಯಶಃ
Image
Laal Singh Chaddha Twitter review: ಲಾಲ್​ ಸಿಂಗ್ ಚಡ್ಡಾ ಟ್ವಿಟರ್​ ವಿಮರ್ಶೆ: ಅಮೀರ್ ಅಭಿನಯಕ್ಕೆ ಸಿನಿಪ್ರಿಯರು ಫಿದಾ
Image
Vikrant Rona Review: ವಿದೇಶಿ ಸೆನ್ಸಾರ್​ ಸದಸ್ಯರಿಂದ ‘ವಿಕ್ರಾಂತ್​ ರೋಣ’ ವಿಮರ್ಶೆ; ಕ್ಲೈಮ್ಯಾಕ್ಸ್​ ಬಗ್ಗೆ ವಿಶೇಷ ಮೆಚ್ಚುಗೆ

ಪಾತ್ರವರ್ಗ: ಪ್ರವೀಣ್​, ರಚನಾ ಇಂದರ್​, ಗೋಪಾಲ ದೇಶಪಾಂಡೆ, ಮಹಂತೇಶ್​, ಸುಜಿತ್​, ಡ್ಯಾನಿ ಕುಟ್ಟಪ್ಪ, ಕಾವ್ಯಾ ಶಾಸ್ತ್ರಿ, ಸುಕನ್ಯಾ ಗಿರೀಶ್​ ಮುಂತಾದವರು.

ಸ್ಟಾರ್​: 3/5

‘ಜಗವೇ ನೀನು ಗೆಳತಿಯೇ..’ ಹಾಡಿನ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ ಸಿನಿಮಾ ‘ಲವ್​ 360’. ಹೊಸಬರ ಸಿನಿಮಾದ ಈ ಹಾಡು ಕೋಟಿಗಟ್ಟಲೆ ವೀಕ್ಷಣೆ ಕಂಡಿರುವುದು ವಿಶೇಷ. ಆ ಕಾರಣದಿಂದ ಹೈಪ್​ ಹೆಚ್ಚಾಯಿತು. ಈಗ ಈ ಸಿನಿಮಾ ಬಿಡುಗಡೆ ಆಗಿದೆ. ‘ಮೊಗ್ಗಿನ ಮನಸು’, ‘ಕೃಷ್ಣನ್​ ಲವ್​ ಸ್ಟೋರಿ’, ‘ಕೃಷ್ಣ ಲೀಲಾ’ ರೀತಿಯ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ನಿರ್ದೇಶಕ ಶಶಾಂಕ್​ ಅವರು ಈ ಬಾರಿ ಹೊಸ ಪ್ರತಿಭೆಗಳ ಜೊತೆ ಸೇರಿ ‘ಲವ್​ 360’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ಮಿಡಲ್​ ಕ್ಲಾಸ್​ ಬದುಕಿನ ಕಥೆಗಳನ್ನು ನಿರೂಪಿಸುವಲ್ಲಿ ನಿರ್ದೇಶಕ ಶಶಾಂಕ್​ ಫೇಮಸ್​. ಈ ಬಾರಿಯೂ ಅವರು ಅಂಥ ಒಂದು ಕಹಾನಿಯನ್ನು ತೆರೆಗೆ ತಂದಿದ್ದಾರೆ. ಇಲ್ಲಿನ ಕಥಾನಾಯಕ ರಾಮ್​ (ಪ್ರವೀಣ್​) ಹಾಗೂ ಕಥಾನಾಯಕಿ ಜಾನಕಿ (ರಚನಾ) ಅನಾಥರು. ಜಾನಕಿಗೆ ಬುದ್ಧಿ ಚುರುಕಿಲ್ಲ. ನೆನಪು ಆಗಾಗ ಕೈ ಕೊಡುತ್ತದೆ. ಅವಳನ್ನು ಹೇಗಾದರೂ ಮಾಡಿ ಗುಣಪಡಿಸಬೇಕು ಎಂದು ರಾಮ್​ ಪ್ರಯತ್ನಿಸುತ್ತಿರುವಾಗಲೇ ಖಳರ ಎಂಟ್ರಿ ಆಗುತ್ತದೆ. ಆರಂಭದಲ್ಲಿ ತುಂಬ ಸಿಂಪಲ್​ ಎನಿಸುವ ಈ ಕಥೆ ಮಧ್ಯಂತರದ ಬಳಿಕ ಬೇರೆಯದೇ ರೂಪ ಪಡೆದುಕೊಳ್ಳುತ್ತದೆ. ಒಂದು ಮರ್ಡರ್​ ಮಿಸ್ಟರಿ ಕಹಾನಿ ತೆರೆದುಕೊಳ್ಳುತ್ತದೆ.

ರಾಮ್​-ಜಾನಕಿ ಮುಗ್ಧ ಪ್ರೇಮಿಗಳು. ಅವರಿಗೆ ಎದುರಾಗುವ ವಿಲನ್​ಗಳೆಲ್ಲ ಕ್ರೂರ ಮನಸ್ಥಿತಿಯವರು. ಹೀಗೆ ಮುಗ್ಧತೆ ಮತ್ತು ಕ್ರೌರ್ಯದ ನಡುವಿನ ಸಮರದ ರೀತಿಯಲ್ಲಿ ಇಡೀ ಸಿನಿಮಾ ಮೂಡಿಬಂದಿದೆ. ಕೇವಲ ಲವ್​ ಸ್ಟೋರಿ ಹೇಳಲು ನಿರ್ದೇಶಕರು ಇಡೀ ಸಿನಿಮಾವನ್ನು ಸೀಮಿತವಾಗಿಸಿಲ್ಲ. ಸಸ್ಪೆನ್ಸ್​ ಮತ್ತು ಥ್ರಿಲ್ಲರ್​ ಅಂಶಗಳನ್ನೂ ಸೇರಿಸಿ ಇದನ್ನೊಂದು ಪತ್ತೇದಾರಿ ಸಿನಿಮಾವಾಗಿಸಿದ್ದಾರೆ. ಹಾಗಾಗಿ ಇದು ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

ಮೊದಲಾರ್ಧದಲ್ಲಿ ರಾಮ್​ ಮತ್ತು ಜಾನಕಿಯ ಕ್ಯೂಟ್​ ಪ್ರೇಮಕಥೆಯೇ ಹೆಚ್ಚು ಸ್ಪೇಸ್​ ಪಡೆದುಕೊಂಡಿದೆ. ಇದರಿಂದ ಪ್ರೇಕ್ಷಕರಿಗೆ ಸ್ವಲ್ಪ ಎಳೆದಾಡಿದಂತೆ ಅನಿಸಬಹುದು. ಆದರೆ ದ್ವಿತೀಯಾರ್ಧದಲ್ಲಿ ಚಿತ್ರಕ್ಕೆ ಹೊಸ ವೇಗ ಸಿಕ್ಕಿದೆ. ಇಲ್ಲಿ ಪ್ರತಿ ಪಾತ್ರಗಳೂ ಮಹತ್ವದ ತಿರುವುಗಳನ್ನು ನೀಡುತ್ತ ಪ್ರೇಕ್ಷಕರನ್ನು ರಂಜಿಸುತ್ತವೆ. ಮಹಾಂತೇಶ್​, ಸುಜಿತ್​, ಸುಕನ್ಯಾ ಗಿರೀಶ್​ ಮಾಡಿರುವ ಪಾತ್ರಗಳು ಸರ್ಪ್ರೈಸ್​ ನೀಡುತ್ತವೆ. ಅಷ್ಟರಮಟ್ಟಿಗೆ ಟ್ವಿಸ್ಟ್​ಗಳನ್ನು ಇಟ್ಟಿದ್ದಾರೆ ನಿರ್ದೇಶಕರು.

ನಟ ಪ್ರವೀಣ್​ ಅವರಿಗೆ ಇದು ಮೊದಲ ಸಿನಿಮಾ. ಆದರೆ ಓರ್ವ ಅನುಭವಿ ನಟನ ರೀತಿಯಲ್ಲಿ ಅವರು ಅಭಿನಯಿಸಿದ್ದಾರೆ. ಈ ಹಿಂದೆ ‘ಹೆಂಗೆ ನಾವು..​’ ಎಂದು ಫೇಮಸ್​ ಆಗಿದ್ದ ರಚನಾ ಇಂದರ್​ ಅವರು ‘ಲವ್​ 360’ ಸಿನಿಮಾದಲ್ಲಿ ಹಳೇ ಇಮೇಜ್​ ಬದಲಾಗುವ ರೀತಿಯಲ್ಲಿ ನಟಿಸಿದ್ದಾರೆ. ಗೋಪಾಲ್​ ದೇಶಪಾಂಡೆ ಅವರ ನಟನೆ ಕೂಡ ಗಮನ ಸೆಳೆಯುವಂತಿದೆ. ಡ್ಯಾನಿ ಕುಟ್ಟಪ್ಪ ಅವರು ಎಂದಿನಂತೆ ನೋಡುಗರ ಎದೆಯಲ್ಲಿ ನಡುಕ ಹುಟ್ಟಿಸುವ ಖಳನಾಗಿ ಮಿಂಚಿದ್ದಾರೆ.

ಫ್ಯಾಮಿಲಿ ಸಮೇತ ಕುಳಿತು ನೋಡಬಹುದಾದ ಚಿತ್ರದಲ್ಲಿ ಇರಬೇಕಾದ ಎಲ್ಲ ಅಂಶಗಳು ಈ ‘ಲವ್​ 360’ ಸಿನಿಮಾದಲ್ಲಿದೆ. ನಗುವಿನ ಕಚಗುಳಿ ಇರಿಸುವ ಕಾಮಿಡಿ ದೃಶ್ಯಗಳಿವೆ. ಆ್ಯಕ್ಷನ್​ ಇಷ್ಟಪಡುವವರಿಗಾಗಿ ಫೈಟಿಂಗ್​ ಸೀನ್​ಗಳಿವೆ. ಬುದ್ಧಿಗೆ ಕೆಲಸ ಕೊಡುವ ಪ್ರೇಕ್ಷಕರಿಗಾಗಿ ಮರ್ಡರ್​ ಮಿಸ್ಟರಿ ಇದೆ. ಎಲ್ಲವೂ ಸೇರಿ ಒಂದೊಳ್ಳೆಯ ಮನರಂಜನೆ ಸಿಗುತ್ತದೆ. ಯಾವುದೂ ಕೂಡ ಸಿನಿಮಾದ ಆಶಯವನ್ನು ಮೀರದ ಹಾಗೆ ನಿರ್ದೇಶಕರು ನೋಡಿಕೊಂಡಿದ್ದಾರೆ.

ತಾಂತ್ರಿಕವಾಗಿಯೂ ಈ ಚಿತ್ರ ಅಚ್ಚುಕಟ್ಟಾಗಿದೆ. ಅರ್ಜುನ್​ ಜನ್ಯ ಸಂಗೀತ ಈ ಚಿತ್ರದ ಪ್ಲಸ್​ ಪಾಯಿಂಟ್​. ಅಭಿಲಾಷ್​ ಕಲಾಥಿ ಅವರ ಛಾಯಾಗ್ರಹಣ ಸಹ ಗಮನ ಸೆಳೆಯುವಂತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
T20 World Cup: ದ್ರಾವಿಡ್ ಭಾವನಾತ್ಮಕ ಸಂಭ್ರಮಾಚರಣೆ ಹೇಗಿದೆ ನೋಡಿ
T20 World Cup: ದ್ರಾವಿಡ್ ಭಾವನಾತ್ಮಕ ಸಂಭ್ರಮಾಚರಣೆ ಹೇಗಿದೆ ನೋಡಿ