ದುನಿಯಾ ವಿಜಯ್​ ಎದುರು ಕಾದಾಡಲು ‘ಬೇಟೆ ಶುರು..’ ಎಂದು ಮಾಸ್​ ಅವತಾರ ತಾಳಿದ ನಂದಮೂರಿ ಬಾಲಕೃಷ್ಣ

| Updated By: ಮದನ್​ ಕುಮಾರ್​

Updated on: May 28, 2022 | 12:03 PM

ನಂದಮೂರಿ ತಾರಕ ರಾಮಾ ರಾವ್​ ಅವರ ಜನ್ಮದಿನದ ಪ್ರಯುಕ್ತ ‘ಎನ್​ಬಿಕೆ 107’ ಸಿನಿಮಾದಿಂದ ಹೊಸ ಪೋಸ್ಟರ್​ ರಿಲೀಸ್​ ಆಗಿದೆ. ಅದರಲ್ಲಿ ನಂದಮೂರಿ ಬಾಲಕೃಷ್ಣ ಲುಕ್​ ಸಖತ್​ ಮಾಸ್​ ಆಗಿದೆ.

ದುನಿಯಾ ವಿಜಯ್​ ಎದುರು ಕಾದಾಡಲು ‘ಬೇಟೆ ಶುರು..’ ಎಂದು ಮಾಸ್​ ಅವತಾರ ತಾಳಿದ ನಂದಮೂರಿ ಬಾಲಕೃಷ್ಣ
ನಂದಮೂರಿ ಬಾಲಕೃಷ್ಣ
Follow us on

ಟಾಲಿವುಡ್​ನ ಖ್ಯಾತ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅಭಿನಯಿಸುತ್ತಿರುವ ಹೊಸ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದೆ. ಇತ್ತೀಚೆಗೆ ಅವರು ‘ಅಖಂಡ’ ಸಿನಿಮಾದಿಂದ ದೊಡ್ಡ ಯಶಸ್ಸು ಕಂಡರು. ಅದರಿಂದ ಅವರ ಮುಂದಿನ ಚಿತ್ರದ ಮೇಲೆ ಹೆಚ್ಚು ಹೈಪ್ ಸೃಷ್ಟಿ ಆಗಿದೆ. ಆ ಸಿನಿಮಾಗೆ ತಾತ್ಕಾಲಿಕವಾಗಿ ‘ಎನ್​ಬಿಕೆ 107’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾವನ್ನು ಗೋಪಿಚಂದ್​ ಮಲಿನೇನಿ ನಿರ್ದೇಶಿಸುತ್ತಿದ್ದಾರೆ. ಇಂದು (ಮೇ 28) ನಂದಮೂರಿ ತಾರಕ ರಾಮಾರಾವ್​ (Nandamuri Taraka Rama Rao) ಅವರ ಜನ್ಮದಿನ. ಆ ಪ್ರಯುಕ್ತ ಎಲ್ಲರೂ ಅವರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನದಂದು ನಂದಮೂರಿ ಬಾಲಕೃಷ್ಣ ನಟನೆಯ ‘ಎನ್​ಬಿಕೆ 107’ ಸಿನಿಮಾದಿಂದ ಹೊಸ ಪೋಸ್ಟರ್​ ರಿಲೀಸ್​ ಮಾಡಲಾಗಿದೆ. ಜೊತೆಗೆ ನಂದಮೂರಿ ತಾರಕ ರಾಮಾರಾವ್​ ಅವರಿಗೆ ಗೌರವ ಸಲ್ಲಿಸಲಾಗಿದೆ. ಸದ್ಯ ಈ ಪೋಸ್ಟರ್​ ವೈರಲ್​ ಆಗುತ್ತಿದೆ. ‘ಎನ್​ಬಿಕೆ 107’ ಸಿನಿಮಾದಲ್ಲಿ ಕನ್ನಡದ ನಟ ದುನಿಯಾ ವಿಜಯ್​ (Duniya Vijay) ಅವರು ವಿಲನ್​ ಆಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ದೊಡ್ಡ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರಕ್ಕೆ ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆ ಬಂಡವಾಳ ಹೂಡುತ್ತಿದೆ.

ಮಾಸ್​ ಸಿನಿಮಾಗಳನ್ನೇ ಮಾಡಿ ಫೇಮಸ್​ ಆದವರು ನಿರ್ದೇಶಕ ಗೋಪಿಚಂದ್​ ಮಲಿನೇನಿ. ಭರ್ಜರಿ ಸಾಹಸ ಪ್ರಧಾನ ಸಿನಿಮಾಗಳಿಂದ ಮನರಂಜನೆ ನೀಡುವ ನಂದಮೂರಿ ಬಾಲಕೃಷ್ಣ ಜೊತೆ ಅವರು ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಮನೆ ಮಾಡಿದೆ. ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸುವ ರೀತಿಯಲ್ಲಿ ಈ ಹೊಸ ಪೋಸ್ಟರ್​ ಮೂಡಿಬಂದಿದೆ. ಬಾಲಯ್ಯ ಅವರು ಕೈಯಲ್ಲಿ ಹರಿತವಾದ ಆಯುಧ ಹಿಡಿದಿದ್ದಾರೆ. ಅದರಿಂದ ರಕ್ತ ಸುರಿಯುತ್ತಿದೆ. ಆಕ್ರೋಶ ಭರಿತವಾಗಿ ಅವರು ಲುಕ್​ ನೀಡಿದ್ದಾರೆ. ‘ಹಂಟ್​ ಬಿಗಿನ್ಸ್​..’ (ಬೇಟೆ ಶುರು) ಎಂದು ಈ ಪೋಸ್ಟರ್​ ಮೇಲೆ ಬರೆದಿರುವುದು ಗಮನ ಸೆಳೆಯುತ್ತಿದೆ.

ಇದನ್ನೂ ಓದಿ
ಟಾಲಿವುಡ್​ ದುನಿಯಾದಿಂದ ವಿಜಯ್​ ಲುಕ್​ ರಿವೀಲ್​; NBK107 ಚಿತ್ರದಲ್ಲಿ ಹೇಗಿದೆ ನೋಡಿ ಸಲಗನ ಗೆಟಪ್​
ಟಾಲಿವುಡ್​ಗೆ ಎಂಟ್ರಿ ನೀಡಿದ ದುನಿಯಾ ವಿಜಯ್​; ನಂದಮೂರಿ ಬಾಲಕೃಷ್ಣ ಚಿತ್ರದಲ್ಲಿ ಬಂಪರ್​ ಚಾನ್ಸ್​
Akhanda: ಅಪರೂಪದ ದಾಖಲೆ ಬರೆದ ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ’; ಏನದು?
Puneeth Rajkumar: ನಾವು ಒಂದೇ ತಾಯಿ ಮಕ್ಕಳಲ್ಲದಿದ್ದರೂ ಸೋದರರಂತಿದ್ದೆವು; ನಂದಮೂರಿ ಬಾಲಕೃಷ್ಣ ಕಂಬನಿ

ಟಾಲಿವುಡ್​ ಮಂದಿ ಮಾತ್ರವಲ್ಲದೇ ಕನ್ನಡದ ಸಿನಿಪ್ರಿಯರು ಕೂಡ ‘ಎನ್​ಬಿಕೆ 107’ ಸಿನಿಮಾ ನೋಡಲು ಕಾದಿದ್ದಾರೆ. ‘ದುನಿಯಾ’ ವಿಜಯ್​ ಅವರು ಈ ಚಿತ್ರದಲ್ಲಿ ನಟಿಸುತ್ತಿರುವುದೇ ಈ ಕಾತರಕ್ಕೆ ಕಾರಣ. ಕೆಲವು ದಿನಗಳ ಹಿಂದೆ ವಿಜಿ ಅವರ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಲಾಗಿತ್ತು. ಮುಸಲಿ ಮಡುಗು ಪ್ರತಾಪ್​ ರೆಡ್ಡಿ ಎಂಬ ಪತ್ರವನ್ನು ದುನಿಯಾ ವಿಜಯ್​ ಮಾಡುತ್ತಿದ್ದು, ಅವರ ಲುಕ್​ ಕೂಡ ಸಖತ್​ ರಾ ಆಗಿದೆ.

ಇದನ್ನೂ ಓದಿ: ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ಶ್ರೀಲೀಲಾ ನಟನೆ; ಯಾವ ಪಾತ್ರ? ಇಲ್ಲಿದೆ ಟ್ವಿಸ್ಟ್..​

ದುನಿಯಾ ವಿಜಯ್​ ಹಾಗೂ ನಂದಮೂರಿ ಬಾಲಕೃಷ್ಣ ನಡುವಿನ ಮುಖಾಮುಖಿ ಹೇಗಿರಲಿದೆ ಎಂದು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. ಚಿತ್ರಕ್ಕೆ ಅಂತಿಮವಾಗಿ ಯಾವ ಶೀರ್ಷಿಕೆ ಇಡಲಾಗುವುದು ಎಂಬ ಕೌತುಕ ಕೂಡ ಮನೆ ಮಾಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.