AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​ಟಿಆರ್ ಶತಮಾನೋತ್ಸವದಲ್ಲಿ ಶಿವರಾಜ್​ಕುಮಾರ್, ಬಾಲ್ಯದಲ್ಲಿ ಕಂಡ ದೃಶ್ಯ ವೈಭವ ವಿವರಿಸಿದ ಶಿವಣ್ಣ

Shiva Rajkumar: ತೆಲುಗು ಚಿತ್ರರಂಗದ ದಂತಕತೆ ಎನ್​ಟಿಆರ್ 100ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎನ್​ಟಿಆರ್ ಬಗೆಗಿನ ನೆನಪುಗಳನ್ನು ಸ್ಮರಿಸಿದರು.

ಎನ್​ಟಿಆರ್ ಶತಮಾನೋತ್ಸವದಲ್ಲಿ ಶಿವರಾಜ್​ಕುಮಾರ್, ಬಾಲ್ಯದಲ್ಲಿ ಕಂಡ ದೃಶ್ಯ ವೈಭವ ವಿವರಿಸಿದ ಶಿವಣ್ಣ
ಎನ್​ಟಿಆರ್-ಶಿವರಾಜ್ ಕುಮಾರ್
ಮಂಜುನಾಥ ಸಿ.
|

Updated on: May 21, 2023 | 4:12 PM

Share

ತೆಲುಗು ಚಿತ್ರರಂಗದ (Tollywood) ದಂತಕತೆ ಎನ್​ಟಿಆರ್ (NTR). ಕನ್ನಡಕ್ಕೆ ರಾಜ್​ಕುಮಾರ್ (Dr Rajkumar) ಎಂತೋ ಅಂತೆಯೇ ತೆಲುಗು ಚಿತ್ರರಂಗಕ್ಕೆ ಎನ್​ಟಿಆರ್. ಚಿತ್ರರಂಗದಲ್ಲಿ ಅನಭಿಷಿಕ್ತ ದೊರೆಯಾಗಿ ಮೆರೆದ ಎನ್​ಟಿಆರ್, ತೆಲುಗು ಜನರ ಸ್ವಾಭಿಮಾನ ಕೆರಳಿಸಿ ಬಲಿಷ್ಠ ಕಾಂಗ್ರೆಸ್ ಪಕ್ಷವನ್ನು ಎದುರು ಹಾಕಿಕೊಂಡು ಪಕ್ಷ ಕಟ್ಟಿ ವರ್ಷವಾಗುವ ಮುನ್ನವೇ ಸಿಎಂ ಸಹ ಆದವರು. ಎನ್​ಟಿಆರ್​ ಜನಿಸಿ ನೂರು ವರ್ಷಗಳಾಗಿರುವ ಕಾರಣ ಅವರ ಕುಟುಂಬದವರು ಎನ್​ಟಿಆರ್ 100 ಕಾರ್ಯಕ್ರಮವನ್ನು ನಿನ್ನೆ ಅದ್ಧೂರಿಯಾಗಿ ಆಯೋಜನೆ ಮಾಡಿದ್ದರು. ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಸಹ ಭಾಗಿಯಾಗಿದ್ದರು.

ನಮಸ್ಕಾರ ಎನ್ನುವ ಮೂಲಕ ಮಾತು ಆರಂಭಿಸಿದ ಶಿವಣ್ಣ ತೆಲುಗು ಸರಿಯಾಗಿ ಬರುವುದಿಲ್ಲ ಕ್ಷಮಿಸಿ ಎಂದು ಇಂಗ್ಲೀಷ್​ನಲ್ಲಿ ಮಾತು ಮುಂದುವರೆಸಿ ”ಎನ್​ಟಿಆರ್ ಅವರಂಥಹಾ ಮೇರು ವ್ಯಕ್ತಿಯ ನೂರನೇ ಜನ್ಮ ಶತಾಬ್ಧಿಯಲ್ಲಿ ಭಾಗಿಯಾಗಿರುವುದು ನನ್ನ ಪುಣ್ಯವೆಂದು ಭಾವಿಸುತ್ತೇನೆ. ಅವರ ಬಗ್ಗೆ ಹೇಳಲಿಕ್ಕೆ ಬಹಳ ವಿಷಯಗಳಿವೆ. ನನಗೆ ಎನ್​ಟಿಆರ್ ಬಗೆಗೆ ಮೊದಲ ನೆನಪೆಂದರೆ, ನಾನು ಶಾಲೆಯಲ್ಲಿ ಕಲಿಯುತ್ತಿರಬೇಕಾದರೆ ನಮ್ಮ ಕಾರು ಕೋಣಂಬಾಕಂನಿಂದ ಟಿ ನಗರಕ್ಕೆ ಹೋಗುತ್ತಿತ್ತು, ಮಧ್ಯದಲ್ಲಿ ಹಬೀಬುಲ್ಲಾ ರಸ್ತೆ ಆ ರಸ್ತೆಯ ಬಲಭಾಗದಲ್ಲಿ ಎನ್​ಟಿಆರ್ ಅವರ ಮನೆ ಇತ್ತು. ಅಲ್ಲಿ ದೊಡ್ಡ ಸಂಖ್ಯೆಯ ಜನ ಸೇರಿರುತ್ತಿದ್ದರು. ಆಗಾಗ ಎನ್​ಟಿಆರ್ ಅವರು ಹೊರಗೆ ಬಂದು ಎಲ್ಲರತ್ತಲೂ ಕೈ ಬೀಸುತ್ತಿದ್ದರು. ನಾವು ಸ್ವಲ್ಪ ಹೊತ್ತು ಅಲ್ಲಿ ನಿಂತು ನೋಡಿ ಬಳಿಕ ಮುಂದೆ ಹೋಗುತ್ತಿದ್ದೆವು” ಎಂದರು.

”ಆ ನಂತರ ಜನ ನಮ್ಮ ಮನೆಗೆ ಅಪ್ಪಾಜಿಯವರನ್ನು ನೋಡಲು ಬರುತ್ತಿದ್ದರು. ಆ ಸಮಯದಲ್ಲಿ ನಮಗೆ ಕೆಲವು ನಟರಷ್ಟೆ ಗೊತ್ತಿದ್ದರು. ಎನ್​ಟಿಆರ್ ಹಾಗೂ ಅಪ್ಪಾಜಿ ಅವರನ್ನು ಕಾಣಲು ಆಂಧ್ರ, ಕರ್ನಾಟಕದಿಂದ ಬಸ್ಸುಗಳಲ್ಲಿ ಜನರು ಬರುತ್ತಿದ್ದರು. ಎಷ್ಟು ಪುಣ್ಯವಂತರು ಇವರು ಎಂದು ನಮಗೆ ಅನ್ನಿಸುತ್ತಿತ್ತು. ಎನ್​ಟಿಆರ್ ಅವರಿಗೆ ನಮ್ಮ ತಂದೆ ತಮ್ಮನಂತೆ ಇದ್ದರು. ಆ ಗೆಳೆತನ ಹಾಗೆಯೇ ಇತ್ತು. ಇವರಿಬ್ಬರನ್ನು ಹೊರತುಪಡಿಸಿದರೆ ಎಂಜಿಆರ್, ಶಿವಾಜಿ ಗಣೇಶನ್, ಪ್ರೇಮ್ ನಜೀರ್, ನಾಗೇಶ್ವರ ರಾವ್ ಅವರುಗಳ ಪರಿಚಯವೂ ಆಗಿತ್ತು. ಬಸ್ಸುಗಟ್ಟಲೆ ಜನರು ಇವರನ್ನು ಕಾಣಲು ಬರುತ್ತಿದ್ದುದೆ ನಮಗೆ ಆಶ್ಚರ್ಯ ತರುತ್ತಿತ್ತು” ಎಂದರು ಶಿವಣ್ಣ.

ಇದನ್ನೂ ಓದಿ:NTR 31: ಪ್ರಶಾಂತ್ ನೀಲ್-ಜೂನಿಯರ್ ಎನ್​ಟಿಆರ್ ಚಿತ್ರದ ಶೂಟಿಂಗ್ ಆರಂಭ ಯಾವಾಗ? ಕೊನೆಗೂ ಸಿಕ್ತು ಮಾಹಿತಿ

”ಎನ್​ಟಿಆರ್ ಅವರ ಬಗೆಗಿನ ಮತ್ತೊಂದು ನೆನಪೆಂದರೆ, 1984 ರಲ್ಲಿ ಹೈದರಾಬಾದ್​ನಲ್ಲಿ ಫಿಲಂಫೆಸ್ಟ್ ನಡೆದಾಗ ಎನ್​ಟಿಆರ್ ಅವರು ಆಂಧ್ರ ಪ್ರದೇಶದ ಸಿಎಂ ಆಗಿದ್ದರು. ಹಲವು ರಾಜ್ಯಗಳಿಂದ ನಟ-ನಟಿಯರು ಹೈದರಾಬಾದ್​ಗೆ ಬಂದಿದ್ದರು. ಎಲ್ಲರನ್ನೂ ವಿಮಾನನಿಲ್ದಾಣದಲ್ಲಿಯೇ ಸ್ವತಃ ಎನ್​ಟಿಆರ್ ಅವರೇ ಸ್ವಾಗತ ಮಾಡಿದ್ದರು. ಆಗ ನಾನೂ ಸಹ ಹೈದರಾಬಾದ್​ಗೆ ಬಂದಿದ್ದೆ. ಒಬ್ಬ ಸಿಎಂ ಆಗಿ ಅವರು ವಿಮಾನನಿಲ್ದಾಣದಲ್ಲಿಯೇ ನಟರನ್ನು ಸ್ವಾಗತಿಸುವ ಅವಶ್ಯಕತೆ ಇರಲಿಲ್ಲ ಆದರೆ ಅವರು ಮಾಡಿದರು. ಅಂದು ಅವರು ಸಿಎಂ ರೀತಿಯಲ್ಲ ಬದಲಿಗೆ ಸಾಮಾನ್ಯ ವ್ಯಕ್ತಿಯ ರೀತಿ ನಡೆದುಕೊಂಡಿದ್ದರು” ಎಂದು ಶಿವರಾಜ್ ಕುಮಾರ್ ನೆನಪು ಮಾಡಿಕೊಂಡರು.

ಎನ್​ಟಿಆರ್ ಅವರಿಗೆ ಆಶೀರ್ವಾದವನ್ನು ನೀವು ಮಾಡಿದ್ದೀರಿ, ಅದೇ ರೀತಿ ಈಗಾಗಲೇ ಬಾಲಕೃಷ್ಣ ಹಾಗೂ ಚಂದ್ರಬಾಬು ನಾಯ್ಡುಗೆ ಸಹ ನೀಡಿದ್ದೀರಿ. ಈ ಆಶೀರ್ವಾದವನ್ನು ಅವರಿಗೆ ನೀಡುತ್ತಲೇ ಇರಬೇಕು, ಈ ತಲೆಮಾರು, ಈ ಕುಟುಂಬ ಹೀಗೆ ಮುಂದುವರೆಯುತ್ತಿರಬೇಕು ಎಂದರು ಶಿವರಾಜ್ ಕುಮಾರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು