AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರು ಯಾಕೆ ಹೀಗೆ ಮಾಡ್ತಿದ್ದಾನೋ ಗೊತ್ತಿಲ್ಲ; ಬಿಗ್ ಬಾಸ್- 8 ನಿಂತಿದ್ದಕ್ಕೆ ಪ್ರಥಮ್ ಬೇಸರ

ನನಗೆ ಐಂಡೆಂಟಿಟಿ ಕೊಟ್ಟ ಬಿಗ್​ ಬಾಸ್​ ಹಾಗೂ ಹರಸಿದ ವಿಧೇಯತೆಯಿಂದ ಬಹಿರಂಗ ಪತ್ರ ಎಂದು ತಮ್ಮ ಪೋಸ್ಟ್​ ಆರಂಭಿಸಿದ್ದಾರೆ ಪ್ರಥಮ್​ .

ದೇವರು ಯಾಕೆ ಹೀಗೆ ಮಾಡ್ತಿದ್ದಾನೋ ಗೊತ್ತಿಲ್ಲ; ಬಿಗ್ ಬಾಸ್- 8 ನಿಂತಿದ್ದಕ್ಕೆ ಪ್ರಥಮ್ ಬೇಸರ
ಪ್ರಥಮ್​ ಜತೆ ಸುದೀಪ್​
ರಾಜೇಶ್ ದುಗ್ಗುಮನೆ
|

Updated on: May 09, 2021 | 4:56 PM

Share

ಬಿಗ್​ ಬಾಸ್​ ಸೀಸನ್​ 8 ಅರ್ಧಕ್ಕೆ ನಿಲ್ಲುತ್ತಿರುವ ವಿಚಾರ ಪ್ರೇಕ್ಷಕರಿಗೆ ಬೇಸರ ತರಿಸಿದೆ. ಇನ್ನೂ 30 ದಿನ ಬಾಕಿ ಇರುವಾಗಲೇ ಈ ಸೀಸನ್ ನಿಲ್ಲುತ್ತಿದೆ. ಈ ಬಗ್ಗೆ ಸಾಕಷ್ಟು ಜನರು ಬೇಸರ ಹೊರ ಹಾಕಿದ್ದಾರೆ. ಈಗ ಬಿಗ್​ ಬಾಸ್​ ಕನ್ನಡ ಸೀಸನ್​ 4ರ ವಿನ್ನರ್​ ಒಳ್ಳೆ ಹುಡುಗ ಪ್ರಥಮ್​ ಈ ಬಗ್ಗೆ ಮಾತನಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಈ ಬಗ್ಗೆ ಪೋಸ್ಟ್​ ಹಾಕಿದ್ದಾರೆ.

ನನಗೆ ಐಡೆಂಟಿಟಿ ಕೊಟ್ಟ ಬಿಗ್​ ಬಾಸ್​ ಹಾಗೂ ಹರಸಿದ ವಿಧೇಯತೆಯಿಂದ ಬಹಿರಂಗ ಪತ್ರ ಎಂದು ತಮ್ಮ ಪೋಸ್ಟ್​ ಆರಂಭಿಸಿದ್ದಾರೆ ಪ್ರಥಮ್​. ಖುಷಿ ಇರಲಿ, ನೋವಿರಲಿ ಪ್ರತಿ ಶನಿವಾರ ಸುದೀಪ್​ ಸರ್ ಎಲ್ಲವನ್ನು ಮರೆತು ನಮ್ಮ ಮುಂದೆ ಬಂದು ನಿಲ್ಲುತ್ತಿದ್ದರು. ನಾನಿದ್ದ ಬಿಗ್​ ಬಾಸ್​ ಸೀಸನ್​ ಸಮಸ್ಯೆಯೇ ಇಲ್ಲದಂತೆ ನಡೆಯಿತು. ಸೀಸನ್ 5 ಮುಗಿಯುತ್ತಿದ್ದಂತೆ ಬಿಗ್​ ಬಾಸ್​ ಮನೆಗೆ ಬೆಂಕಿ ಬಿತ್ತು. ಸೀಸನ್​ 6 ಮುಗಿಯುತ್ತಿದ್ದಂತೆ ಕಲರ್ಸ್​ ಕನ್ನಡ ಎರಡನೇ ಸ್ಥಾನಕ್ಕೆ ಬಂತು (ಸ್ಪರ್ಧಾತ್ಮಕ ಪ್ರಪಂಚದಲ್ಲಿ ಇದೆಲ್ಲವೂ ಸಾಮಾನ್ಯ) ಎಂದು ಬರೆದುಕೊಂಡಿದ್ದಾರೆ ಪ್ರಥಮ್​.

ಸೀಸನ್​ 7 ಮುಗಿಯುತ್ತಿದ್ದಂತೆ ಕರೋನಾ ಶುರುವಾಯ್ತು. ಸೀಸನ್​ 8 ಬಹಳ ತಡವಾಗಿ ಶುರುವಾಯ್ತು. ಸತತ ಮೂರು ವಾರ ಬಿಗ್​ ಬಾಸ್​ ವೇದಿಕೆಯಲ್ಲಿ ಸುದೀಪ್ ಸರ್ ಇಲ್ಲದಿರುವ ವಿಚಾರ ನಿಜಕ್ಕೂ ಬೇಸರವಾಯ್ತು. ಈಗ ನೋಡಿದ್ರೆ ಬಿಗ್​ ಬಾಸ್​ ನಿಲ್ಲುತ್ತಿದೆ. ಈ ಸುದ್ದಿ ನಿಜಕ್ಕೂ ನೋವಾಯ್ತು ಎಂದು ಪ್ರಥಮ್​ ಬೇಸರ ಹೊರ ಹಾಕಿದ್ದಾರೆ.

ದೇವರು ಯಾಕೆ ಹೀಗೆ ಮಾಡ್ತಿದ್ದಾನೋ ಗೊತ್ತಿಲ್ಲ. ಸುದೀಪ್ ಸರ್ ಮೊದಲು ಚೇತರಿಸಿಕೊಳ್ಳಲಿ. ನನಗೆ ಐಡೆಂಟಿಟಿ ತಂದುಕೊಟ್ಟ ಬಿಗ್​ ಬಾಸ್​ ಮುಂದಿನ ಸೀಸನ್​ಗಳಲ್ಲಿ ಮತ್ತಷ್ಟು ಜನಮನ ಗೆಲ್ಲಲಿ. ಯಾವಾಗಲೂ ನಾನು ಊಟ ಮಾಡುವಾಗ ನೆನೆಸಿಕೊಳ್ಳೋದು ಒಂದೇ, ಏನು ಅಲ್ಲದ ನನ್ನನ್ನು ಈ ಬಿಗ್​ ಬಾಸ್​ ನನಗೆ ಎಲ್ಲವನ್ನೂ ನೀಡಿದೆ. ನಾನಿದ್ದ ಸೀಸನ್​ ಬೆಸ್ಟ್ ಎಂದಿದ್ದಾರೆ ಪ್ರಥಮ್​.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಈಡೇರಿತು ರಘು ಗೌಡ ಆಸೆ

Bigg Boss Kannada: ಬಿಗ್​ ಬಾಸ್​ ಕನ್ನಡ ಸೀಸನ್​​ 8ರಲ್ಲಿ ನಡೆಯಿತು ಯಾರೂ ಊಹಿಸಿರದ 3 ವಿಚಿತ್ರ ಘಟನೆಗಳು

Follow Us
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ