AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಂದಿರ ದಿನದಂದು ಮಗುವಿನ ಫೋಟೋ ಹಂಚಿಕೊಂಡು ಸಂಭ್ರಮಿಸಿದ ಕಾಜಲ್ ಅಗರ್​ವಾಲ್

ಇತ್ತೀಚೆಗೆ ಕಾಜಲ್​ಗೆ ಗಂಡು ಮಗು ಜನಿಸಿತ್ತು. ಕಾಜಲ್​ಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದುಬಂದಿದ್ದವು. ಈಗ ಮಗುವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.

ತಾಯಂದಿರ ದಿನದಂದು ಮಗುವಿನ ಫೋಟೋ ಹಂಚಿಕೊಂಡು ಸಂಭ್ರಮಿಸಿದ ಕಾಜಲ್ ಅಗರ್​ವಾಲ್
ಕಾಜಲ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: May 08, 2022 | 1:38 PM

Share

ನಟಿ ಕಾಜಲ್ಅಗರ್​ವಾಲ್ ಅವರ (Kajal Aggarwal) ಕುಟುಂಬದಲ್ಲಿ ಕೆಲ ದಿನಗಳಿಂದ ಸಂಭ್ರಮ ಮನೆ ಮಾಡಿದೆ. ಕಾಜಲ್​ ಅವರಿಗೆ ಗಂಡು ಮಗು ಜನಿಸಿದೆ. ಇದಾದ ಬೆನ್ನಲ್ಲೇ ಅವರ ಕುಟುಂಬದವರು ಮಗುವಿನ ಹೆಸರು ಬಹಿರಂಗ ಮಾಡಿದ್ದರು. ಕಾಜಲ್​ ತಮ್ಮ ಮಗುವಿಗೆ ನೀಲ್ ಎಂದು ಹೆಸರಿಟ್ಟಿದ್ದಾರೆ. ಈಗ ಅವರು ಮಗುವಿನ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ವಿಶ್ವ ತಾಯಂದಿರ ದಿನದಂದೇ (Mother’s Day) ಕಾಜಲ್ ಈ ಫೋಟೋ ಹಂಚಿಕೊಂಡಿದ್ದು ವಿಶೇಷ.

ನಟಿ ಕಾಜಲ್​ ಅಗರ್​ವಾಲ್ 2020ರ ಅಕ್ಟೋಬರ್​ ತಿಂಗಳಲ್ಲಿ ಮದುವೆ ಆದರು. ತಮ್ಮ ಬಾಯ್​ಫ್ರೆಂಡ್​ ಗೌತಮ್ ಕಿಚ್ಲು ಅವರನ್ನು ವಿವಾಹ ಆಗುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದರು. ತಾವು ​ಪ್ರೆಗ್ನೆಂಟ್​ ಎನ್ನುವ ವಿಚಾರವನ್ನು ಕಾಜಲ್ ಕಳೆದ ವರ್ಷವೇ ಘೋಷಣೆ ಮಾಡಿದ್ದರು. ಇತ್ತೀಚೆಗೆ ಕಾಜಲ್​ಗೆ ಗಂಡು ಮಗು ಜನಿಸಿತ್ತು. ಕಾಜಲ್​ಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದುಬಂದಿದ್ದವು. ಈಗ ಮಗುವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.

ಕಾಜಲ್​ ಮಲಗಿದ್ದಾರೆ. ಅವರ ಎದೆಯ ಮೇಲೆ ಮಗು ಹಾಯಾಗಿ ನಿದ್ರಿಸಿದೆ. ಈ ಫೋಟೋಗೆ ಉದ್ದನೆಯ ಕ್ಯಾಪ್ಶನ್ ನೀಡಿದ್ದಾರೆ. ಈ ಚಿತ್ರಕ್ಕೆ ಸಮಂತಾ, ನಿಶಾ ಅಗರ್​ವಾಲ್​ ಸೇರಿ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ತಾಯಿ-ಮಗುವಿನ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಕಡೆಯಿಂದ ಪ್ರೀತಿ ಹರಿದು ಬಂದಿದೆ.

ಇದನ್ನೂ ಓದಿ
Image
Kajal Aggarwal: ‘ಆಚಾರ್ಯ’ ಚಿತ್ರದಲ್ಲಿ ಕಾಜಲ್‌ ಪಾತ್ರ ಏಕಿಲ್ಲ? ಕಾರಣ ಬಹಿರಂಗಪಡಿಸಿದ ನಿರ್ದೇಶಕ
Image
‘ಆಚಾರ್ಯ’ ತಂಡದಿಂದ ನಟಿ ಕಾಜಲ್​ಗೆ ಅವಮಾನ; ಫ್ಯಾನ್ಸ್​ ಮನದಲ್ಲಿ ಮೂಡಿದೆ ದೊಡ್ಡ ಅನುಮಾನ
Image
Kajal Aggarwal: ಕಾಜಲ್ ಅಗರ್ವಾಲ್ ಪುತ್ರನ ಹೆಸರು ಬಹಿರಂಗ; ಮಗುವಿನ ಹೆಸರು ತಿಳಿಸಿದ ಪತಿ ಗೌತಮ್
Image
ಕಾಜಲ್ ಅಗರ್​ವಾಲ್​ ಕಡೆಯಿಂದ ಸಿಹಿ ಸುದ್ದಿ; ಮನೆಗೆ ಹೊಸ ಸದಸ್ಯನ ಆಗಮನ

‘ನೀನು ಎಷ್ಟು ಅಮೂಲ್ಯ. ನಾನು ನಿನ್ನನ್ನು ನನ್ನ ತೋಳುಗಳಲ್ಲಿ ಹಿಡಿದಿಟ್ಟುಕೊಂಡೆ. ನಿನ್ನ ಬೆಚ್ಚಗಿನ ಉಸಿರನ್ನು ಅನುಭವಿಸಿದೆ. ನಿನ್ನ ಸುಂದರವಾದ ಕಣ್ಣುಗಳನ್ನು ನೋಡಿದ ಕ್ಷಣ, ನಾನು ಶಾಶ್ವತವಾಗಿ ಪ್ರೀತಿಸುತ್ತಿದ್ದೇನೆ ಎಂದು ನನಗೆ ಅನಿಸಿತು. ನೀನು ನನ್ನ ಮೊದಲ ಮಗು. ನನ್ನ ಮೊದಲ ಮಗ. ನನ್ನ ಎಲ್ಲ ಮೊದಲಿಗ. ತಾಯಿಯಾಗುವುದು ಏನು ಎಂಬುದನ್ನು ನೀನು ನನಗೆ ಕಲಿಸಿದ್ದೀಯಾ. ನೀನು ನನಗೆ ನಿಸ್ವಾರ್ಥವಾಗಿರಲು ಕಲಿಸಿದ್ದೀಯ. ಶುದ್ಧ ಪ್ರೀತಿ ನಿನ್ನದು’ ಎಂದು ಕಾಜಲ್ ಬರೆದುಕೊಂಡಿದ್ದಾರೆ.

ಕಾಜಲ್​ ಅಗರ್​ವಾಲ್​ಗೆ ಇದೆ ಅಸ್ತಮಾ ಸಮಸ್ಯೆ

‘ನಾನು 5ನೇ ವಯಸ್ಸಿನಲ್ಲಿ ಇದ್ದಾಗ ನನ್ನಲ್ಲಿ ಶ್ವಾಸನಾಳದ ಅಸ್ತಮಾ ಇರುವುದು ಪತ್ತೆಯಾಯಿತು. ಆಗ ನನಗೆ ಆಹಾರದಲ್ಲೂ ಕಟ್ಟುನಿಟ್ಟಾದ ನಿರ್ಬಂಧ ಹೇರಲಾಯಿತು. ಅದರಲ್ಲೂ ಹಾಲಿನ ಉತ್ಪನ್ನಗಳನ್ನು ತಿನ್ನಲು ಬಿಡುತ್ತಿರಲಿಲ್ಲ. ಆಗ ನಾನಿನ್ನೂ ಮಗು. ಎಲ್ಲ ಮಕ್ಕಳಂತೆ ನನಗೂ ಚಾಕಲೇಟ್​, ಐಸ್​ಕ್ರೀಂನಂಥ ತಿಂಡಿಗಳೆಲ್ಲ ಇಷ್ಟವೇ ಇದ್ದರೂ ಅದನ್ನೆಲ್ಲ ಬಿಡಲೇಬೇಕಿತ್ತು. ನಾನು ಬೆಳೆಯುತ್ತ ಹೋದಂತೆ ಅಸ್ತಮಾವನ್ನು ಎದುರಿಸುತ್ತ ಸಾಗುವುದು ಅಷ್ಟು ಸುಲಭವಾಗಿರಲಿಲ್ಲ. ಪ್ರತಿ ಬಾರಿ ಎಲ್ಲಿಗಾದರೂ ಪ್ರಯಾಣ ಮಾಡಿದಾಗ, ಚಳಿಗಾಲದಲ್ಲಿ ಅಥವಾ ಧೂಳು, ಹೊಗೆಗೆ ನನ್ನನ್ನು ನಾನು ಒಡ್ಡಿಕೊಂಡಾಗ ನನ್ನಲ್ಲಿರುವ ಅಸ್ತಮಾ ಹೆಚ್ಚಾಗುತ್ತಿತ್ತು. ಆಮೇಲೆ ಬೇರೆ ದಾರಿ ಕಾಣದೆ ಈ ಕಷ್ಟದಿಂದ ಪಾರಾಗಲು ಇನ್​ ಹೇಲರ್​ ಬಳಸಲು ಪ್ರಾರಂಭಿಸಿದೆ. ಹಾಗೇ, ಇನ್​ ಹೇಲರ್​ ತೆಗೆದುಕೊಳ್ಳುವುದರಿಂದ ಕೂಡಲೇ ನನಗೆ ಪರಿಹಾರವೂ ಸಿಗುತ್ತಿತ್ತು.

ಈಗಲೂ ಸಹ ನಾನು ಎಲ್ಲಿಗೇ ಹೋದರೂ ನನ್ನೊಂದಿಗೆ ಇನ್​ ಹೇಲರ್​​ನ್ನು ಕೊಂಡೊಯ್ಯುತ್ತೇನೆ. ನನ್ನ ಕೈಯ್ಯಲಿ ಇನ್​ಹೇಲರ್​ ನೋಡಿ ಅದೆಷ್ಟೋ ಬಾರಿ ಹಲವರು ನನಗೆ ವಿಚಿತ್ರ, ವ್ಯಂಗ್ಯಭರಿತ ಪ್ರಶ್ನೆ ಕೇಳಿದ್ದಾರೆ. ಹಾಗೇ, ಅವರೇ ಒಂದು ನಿರ್ಣಯಕ್ಕೆ ಬಂದಂತೆ ನೋಟದಲ್ಲೇ ಚುಚ್ಚಿದವರೂ ಇದ್ದಾರೆ. ಆದರೆ ನಾನು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಮ್ಮ ದೇಶದಲ್ಲಿ ಲಕ್ಷಾಂತರ ಜನರಿಗೆ ಈ ಇನ್​ ಹೇಲರ್​ ಅಗತ್ಯವಿದೆ. ಆದರೆ ಇದೇ ಕಾರಣಕ್ಕೆ, ಅಂದರೆ ಮುಜುಗರವಾಗುತ್ತದೆ, ಸಮಾಜ ಬೇರೆ ತರ ನೋಡುತ್ತದೆ ಎಂಬ ಕಾರಣಕ್ಕೆ ಇನ್​ ಹೇಲರ್​ ಇಟ್ಟುಕೊಳ್ಳದೆ ಕಷ್ಟಪಡುತ್ತಾರೆ’ ಎಂದು ಅವರು ಹೇಳಿದ್ದರು.

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ