Aryavardhan Guruji: ಬಿಗ್​ ಬಾಸ್​ ಕನ್ನಡ 9ನೇ ಸೀಸನ್​ಗೆ ಎಂಟ್ರಿ ಪಡೆದ ಮೊದಲ ಸ್ಪರ್ಧಿ ಆರ್ಯವರ್ಧನ್​ ಗುರೂಜಿ

| Updated By: ಮದನ್​ ಕುಮಾರ್​

Updated on: Sep 16, 2022 | 9:14 PM

Bigg Boss Kannada season 9: ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಫಿನಾಲೆಯಲ್ಲಿ ಆರ್ಯವರ್ಧನ್​ ಗುರೂಜಿ ಎಮೋಷನಲ್​ ಆಗಿ ಮಾತನಾಡಿದರು. ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ಕ್ಕೆ ಆಯ್ಕೆ ಆಗಿರುವ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

Aryavardhan Guruji: ಬಿಗ್​ ಬಾಸ್​ ಕನ್ನಡ 9ನೇ ಸೀಸನ್​ಗೆ ಎಂಟ್ರಿ ಪಡೆದ ಮೊದಲ ಸ್ಪರ್ಧಿ ಆರ್ಯವರ್ಧನ್​ ಗುರೂಜಿ
ಆರ್ಯವರ್ಧನ್ ಗುರೂಜಿ
Follow us on

‘ನಾನು ಅಂದ್ರೆ ನಂಬರ್​, ನಂಬರ್​ ಅಂದ್ರೆ ನಾನು’ ಎಂದು ಹೇಳುತ್ತಲೇ ಫೇಮಸ್​ ಆದ ಆರ್ಯವರ್ಧನ್​ ಗುರೂಜಿ ಅವರು ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋಗೆ ಬಂದು ಎಲ್ಲರನ್ನೂ ರಂಜಿಸಿದ್ದಾರೆ. ಈಗ ಅವರು ಟಿವಿ ಸೀಸನ್​ಗೆ ಎಂಟ್ರಿ ನೀಡುವ ಮೊದಲ ಸ್ಪರ್ಧಿಯಾಗಿ ಆಯ್ಕೆ ಆಗಿದ್ದಾರೆ. ಶುಕ್ರವಾರ (ಸೆ.16) ಸಂಜೆ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಫಿನಾಲೆ ನಡೆದಿದೆ. ಅದರಲ್ಲಿ ಕಿಚ್ಚ ಸುದೀಪ್​ ಅವರು ಈ ವಿಷಯ ಘೋಷಿಸಿದ್ದಾರೆ. ಟಿವಿಯಲ್ಲಿ ನಡೆಯಲಿರುವ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ (Bigg Boss Kannada season 9) ಸ್ಪರ್ಧಿಸಲು ಆರ್ಯವರ್ಧನ್​ ಗುರೂಜಿ (Aryavardhan Guruji) ಅವರು ಚಾನ್ಸ್​ ಪಡೆದಿದ್ದಾರೆ. ಈ ವಿಷಯ ಕೇಳುತ್ತಿದ್ದಂತೆಯೇ ಅವರ ಸಖತ್​ ಎಮೋಷನಲ್​ ಆದರು. ಅವರನ್ನು ಇಷ್ಟಪಡುವ ಎಲ್ಲ ವೀಕ್ಷಕರಿಗೂ ಖುಷಿ ಆಗಿದೆ.

ಸೆಪ್ಟೆಂಬರ್​ 24ರ ಸಂಜೆ 6 ಗಂಟೆಗೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರ ಗ್ರ್ಯಾಂಡ್​ ಪ್ರೀಮಿಯರ್​ ಆಗಲಿದೆ. ನಂತರ ಪ್ರತಿ ದಿನ 9 ಗಂಟೆಗೆ ಸಂಚಿಕೆಗಳು ಪ್ರಸಾರ ಆಗಲಿವೆ. ‘ಬಿಗ್​ ಬಾಸ್ ಕನ್ನಡ​ ಒಟಿಟಿ’ ಶೋನಲ್ಲಿ ಆಯ್ಕೆ ಆದ ಸ್ಪರ್ಧಿಗಳ ಜೊತೆಗೆ ಹಳೇ ಸೀಸನ್​ನ ವ್ಯಕ್ತಿಗಳು ಕೂಡ ಇರಲಿದ್ದಾರೆ. ಅಲ್ಲದೇ, 9 ಮಂದಿ ಹೊಸ ಸ್ಪರ್ಧಿಗಳು ಎಂಟ್ರಿ ನೀಡಲಿದ್ದಾರೆ.

ಆರ್ಯವರ್ಧನ್​ ಅವರ ವ್ಯಕ್ತಿತ್ವ ಅನೇಕರಿಗೆ ಇಷ್ಟ ಆಗಿದೆ. ಅವರು ಮಾತನಾಡುವ ರೀತಿ ಎಲ್ಲರಿಗೂ ನಗು ತರಿಸುತ್ತದೆ. ಹೆಚ್ಚೇನೂ ಫಿಲ್ಟರ್​ ಇಲ್ಲದೇ ಮಾತನಾಡುವ ಶೈಲಿ ಗಮನ ಸೆಳೆಯುತ್ತಿದೆ. ಸುದೀಪ್​ ಹೇಳುವುದೇ ಒಂದು, ಆರ್ಯವರ್ಧನ್​ ಅರ್ಥ ಮಾಡಿಕೊಳ್ಳುವುದೇ ಮತ್ತೊಂದು. ಆ ಕಾರಣದಿಂದಲೂ ಪ್ರತಿ ವಾರದ ಪಂಚಾಯಿತಿಯಲ್ಲಿ ಅವರ ಮಾತುಗಳು ಕಾಮಿಡಿ ಕಿಕ್​ ನೀಡುತ್ತವೆ. ಅದು ಟಿವಿ ಸೀಸನ್​ನಲ್ಲೂ ಮುಂದುವರಿಯುವ ನಿರೀಕ್ಷೆ ಇದೆ.

ಇದನ್ನೂ ಓದಿ
BBK: ‘ನೀನು ಹಾಲು ಇದ್ದಂಗೆ, ಒಮ್ಮೆಲೆ ಉಕ್ಕುತ್ತೀಯ’: ಸೋನು ಗೌಡ ವ್ಯಕ್ತಿತ್ವವನ್ನು ಈ ರೀತಿ ಬಣ್ಣಿಸಿದ ಗುರೂಜಿ
Aryavardhan Guruji: ಬದಲಾಯ್ತು ಗುರೂಜಿ ಗೆಟಪ್​; ಬಿಗ್​ ಬಾಸ್​ ಮನೆಯಲ್ಲಿ ಈ ಪರಿ ಚೇಂಜ್​ ಆದ ಆರ್ಯವರ್ಧನ್​
ಆರ್ಯವರ್ಧನ್​ ಗುರೂಜಿ ಕುಟುಂಬದ ಆಸ್ತಿ 5 ಸಾವಿರ ಕೋಟಿ ರೂಪಾಯಿ; ಶಾಕ್​ ಆದ ಸ್ಪರ್ಧಿಗಳು
Aryavardhan Guruji: ಈ ಬಾರಿ ‘ಬಿಗ್ ಬಾಸ್​’ ಗೆಲ್ಲೋರು ಯಾರು? ಮೊದಲ ದಿನವೇ ಭವಿಷ್ಯ ನುಡಿದ ಆರ್ಯವರ್ಧನ್​ ಗುರೂಜಿ

‘ಬಿಗ್​ ಬಾಸ್​ ಕನ್ನಡ ಒಟಿಟಿ’ ಫಿನಾಲೆ ದಿನ ಆರ್ಯವರ್ಧನ್​ ಗುರೂಜಿ ಅವರ ಮಗಳು ಕೂಡ ವೇದಿಕೆಗೆ ಬಂದಿಳು. ಆಕೆಯನ್ನು ನೋಡಿ ಗುರೂಜಿ ಸಖತ್​ ಎಮೋಷನಲ್​ ಆದರು. ವೇದಿಕೆ ಮೇಲೆ ಸುದೀಪ್​ ಜತೆ ನಿಂತುಕೊಂಡ ಮಗಳನ್ನು ನೋಡಿ ಅವರು ತುಂಬ ಹೆಮ್ಮೆಪಟ್ಟುಕೊಂಡರು. ‘ನನ್ನ ಮಾತುಗಳನ್ನು ಅರ್ಥ ಮಾಡಿಕೊಂಡ ಸುದೀಪ್​ ಸರ್​ಗೆ ನಾನು ಧನ್ಯವಾದ ಹೇಳುತ್ತೇನೆ. ವೋಟ್​ ಹಾಕಿದವರಿಗೆ ಜೀವನ ಪೂರ್ತಿ ಚಿರಋಣಿ ಆಗಿರುತ್ತೇನೆ’ ಎಂದು ಆರ್ಯವರ್ಧನ್​ ಗುರೂಜಿ ಅವರು ಎಮೋಷನಲ್​ ಆಗಿ ಮಾತನಾಡಿದರು. ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ಕ್ಕೆ ಆಯ್ಕೆ ಆಗಿರುವ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:14 pm, Fri, 16 September 22